<p><strong>ಬೆಂಗಳೂರು: </strong> `ಮಂಗಳ ಗ್ರಹದ ಸಮಗ್ರ ಅಧ್ಯಯನಕ್ಕೆ ಅಕ್ಟೋಬರ್ ಕೊನೆಯ ವಾರದಲ್ಲಿ ಗಗನ ನೌಕೆ ಕಳುಹಿಸಲಾಗುವುದು' ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಧ್ಯಕ್ಷ ಡಾ.ಕೆ.ರಾಧಾಕೃಷ್ಣನ್ ಪ್ರಕಟಿಸಿದರು.<br /> <br /> ನಗರದ ಜವಾಹರಲಾಲ್ ನೆಹರೂ ತಾರಾಲಯದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ `ನಮ್ಮ ಸೌರವ್ಯೆಹ' ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ಗಗನನೌಕೆಯನ್ನು ಶ್ರೀಹರಿಕೋಟಾದಿಂದ ಉಡಾವಣೆ ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಮಂಗಳನ ಅಂಗಳದಲ್ಲಿ ಮಿಥೆನ್ ರೂಪುಗೊಂಡ ಬಗೆಗೆ ನೌಕೆ ವಿಶೇಷ ಅಧ್ಯಯನ ನಡೆಸಲಿದೆ' ಎಂದು ತಿಳಿಸಿದರು.<br /> <br /> ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿಜ್ಞಾನಿ ಪ್ರೊ. ಯು.ಆರ್. ರಾವ್, `ನೂರಾರು ವರ್ಷಗಳಿಂದ ಸಂಶೋಧನೆಗಳು ನಡೆದಿದ್ದರೂ ಭೂಮಿಯ ಕುರಿತು ನಾವು ತಿಳಿದುಕೊಂಡಿದ್ದು ಅತ್ಯಲ್ಪವಾದುದು' ಎಂದು ಹೇಳಿದರು.<br /> <br /> `ಭೂಮಿಯಲ್ಲಿ ನೀರಿನ ಲಭ್ಯತೆ ಇದೆ. ಆಮ್ಲಜನಕ ಹೇರಳವಾಗಿದೆ. ಆದರೆ, ಪಕ್ಕದ ಗ್ರಹಗಳಾದ ಮಂಗಳ, ಶುಕ್ರನಲ್ಲಿ ಏಕಿಲ್ಲ, ಸೌರ ಮಂಡಲ ಅಷ್ಟೊಂದು ಬಿಸಿಯಾಗಿರುವುದು ಏಕೆ ಎಂಬಂತಹ ಸಾವಿರಾರು ಪ್ರಶ್ನೆಗಳಿಗೆ ನಮಗೆ ಉತ್ತರ ಕಂಡುಕೊಳ್ಳಲು ಆಗಿಲ್ಲ' ಎಂದರು.<br /> <br /> `ನಮ್ಮದು ಮುಂದುವರಿದ ನಾಗರಿಕತೆ ಎಂದು ಹೇಳಲಾಗುತ್ತಿದೆ. ವಿಜ್ಞಾನದ ವಿಷಯ ಬಂದಾಗ ನಾವಿನ್ನೂ ನಾಗರಿಕತೆ ಮೊದಲ ಮೆಟ್ಟಿಲಲ್ಲಿದ್ದೇವೆ ಎನಿಸುತ್ತದೆ. ತಿಳಿದಿರುವುದು ಅಲ್ಪವಾಗಿದ್ದು, ತಿಳಿಯಲಾರದ್ದು ಬ್ರಹ್ಮಾಂಡದಷ್ಟಿದೆ' ಎಂದು ಹೇಳಿದರು.</p>.<p>`ಮಕ್ಕಳಲ್ಲಿ ಕುತೂಹಲ ಕೆರಳಿಸುವಂತಹ ಇಂತಹ ಪ್ರದರ್ಶನಗಳು ಪ್ರತಿ ಜಿಲ್ಲೆಯಲ್ಲೂ ನಡೆಯಬೇಕು. ಧಾರವಾಡ ಮತ್ತು ಉಡುಪಿಗಳಲ್ಲಿ ಈ ನಿಟ್ಟಿನಲ್ಲಿ ಸಣ್ಣ ಪ್ರಯತ್ನ ನಡೆದಿದೆ' ಎಂದು ತಿಳಿಸಿದರು. ತಾರಾಲಯದ ನಿರ್ದೇಶಕಿ ಡಾ. ಬಿ.ಎಸ್. ಶೈಲಜಾ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong> `ಮಂಗಳ ಗ್ರಹದ ಸಮಗ್ರ ಅಧ್ಯಯನಕ್ಕೆ ಅಕ್ಟೋಬರ್ ಕೊನೆಯ ವಾರದಲ್ಲಿ ಗಗನ ನೌಕೆ ಕಳುಹಿಸಲಾಗುವುದು' ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಧ್ಯಕ್ಷ ಡಾ.ಕೆ.ರಾಧಾಕೃಷ್ಣನ್ ಪ್ರಕಟಿಸಿದರು.<br /> <br /> ನಗರದ ಜವಾಹರಲಾಲ್ ನೆಹರೂ ತಾರಾಲಯದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ `ನಮ್ಮ ಸೌರವ್ಯೆಹ' ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ಗಗನನೌಕೆಯನ್ನು ಶ್ರೀಹರಿಕೋಟಾದಿಂದ ಉಡಾವಣೆ ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಮಂಗಳನ ಅಂಗಳದಲ್ಲಿ ಮಿಥೆನ್ ರೂಪುಗೊಂಡ ಬಗೆಗೆ ನೌಕೆ ವಿಶೇಷ ಅಧ್ಯಯನ ನಡೆಸಲಿದೆ' ಎಂದು ತಿಳಿಸಿದರು.<br /> <br /> ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿಜ್ಞಾನಿ ಪ್ರೊ. ಯು.ಆರ್. ರಾವ್, `ನೂರಾರು ವರ್ಷಗಳಿಂದ ಸಂಶೋಧನೆಗಳು ನಡೆದಿದ್ದರೂ ಭೂಮಿಯ ಕುರಿತು ನಾವು ತಿಳಿದುಕೊಂಡಿದ್ದು ಅತ್ಯಲ್ಪವಾದುದು' ಎಂದು ಹೇಳಿದರು.<br /> <br /> `ಭೂಮಿಯಲ್ಲಿ ನೀರಿನ ಲಭ್ಯತೆ ಇದೆ. ಆಮ್ಲಜನಕ ಹೇರಳವಾಗಿದೆ. ಆದರೆ, ಪಕ್ಕದ ಗ್ರಹಗಳಾದ ಮಂಗಳ, ಶುಕ್ರನಲ್ಲಿ ಏಕಿಲ್ಲ, ಸೌರ ಮಂಡಲ ಅಷ್ಟೊಂದು ಬಿಸಿಯಾಗಿರುವುದು ಏಕೆ ಎಂಬಂತಹ ಸಾವಿರಾರು ಪ್ರಶ್ನೆಗಳಿಗೆ ನಮಗೆ ಉತ್ತರ ಕಂಡುಕೊಳ್ಳಲು ಆಗಿಲ್ಲ' ಎಂದರು.<br /> <br /> `ನಮ್ಮದು ಮುಂದುವರಿದ ನಾಗರಿಕತೆ ಎಂದು ಹೇಳಲಾಗುತ್ತಿದೆ. ವಿಜ್ಞಾನದ ವಿಷಯ ಬಂದಾಗ ನಾವಿನ್ನೂ ನಾಗರಿಕತೆ ಮೊದಲ ಮೆಟ್ಟಿಲಲ್ಲಿದ್ದೇವೆ ಎನಿಸುತ್ತದೆ. ತಿಳಿದಿರುವುದು ಅಲ್ಪವಾಗಿದ್ದು, ತಿಳಿಯಲಾರದ್ದು ಬ್ರಹ್ಮಾಂಡದಷ್ಟಿದೆ' ಎಂದು ಹೇಳಿದರು.</p>.<p>`ಮಕ್ಕಳಲ್ಲಿ ಕುತೂಹಲ ಕೆರಳಿಸುವಂತಹ ಇಂತಹ ಪ್ರದರ್ಶನಗಳು ಪ್ರತಿ ಜಿಲ್ಲೆಯಲ್ಲೂ ನಡೆಯಬೇಕು. ಧಾರವಾಡ ಮತ್ತು ಉಡುಪಿಗಳಲ್ಲಿ ಈ ನಿಟ್ಟಿನಲ್ಲಿ ಸಣ್ಣ ಪ್ರಯತ್ನ ನಡೆದಿದೆ' ಎಂದು ತಿಳಿಸಿದರು. ತಾರಾಲಯದ ನಿರ್ದೇಶಕಿ ಡಾ. ಬಿ.ಎಸ್. ಶೈಲಜಾ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>