<p><strong>ಬೆಂಗಳೂರು:</strong> ‘ಸರ್ಕಾರವು ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡಬೇಕು. ಮಕ್ಕಳಿಗೆ ಪ್ರೋತ್ಸಾಹದಾಯಕವಾದ ಕಾರ್ಯಕ್ರಮಗಳನ್ನು ಆಯೋಜಿಸಬೇಕು’ ಎಂದು ಲಂಡನ್ ಪ್ಯಾರಾಲಿಂಪಿಕ್ ಬೆಳ್ಳಿ ಪದಕ ವಿಜೇತ ಎಚ್.ಎನ್.ಗಿರೀಶ್ ಹೇಳಿದರು.<br /> <br /> ‘ಚೈಲ್ಡ್ ರೈಟ್ಸ್ ಅಂಡ್ ಯು’ (ಕ್ರೈ) ಸಂಸ್ಥೆಯು ಕಬ್ಬನ್ ಉದ್ಯಾನದಲ್ಲಿ ಶನಿವಾರ ಆಯೋಜಿಸಿದ್ದ ‘ಮಕ್ಕಳ ಹಕ್ಕುಗಳಿಗಾಗಿ ಸೈಕಲ್ ರ್್ಯಾಲಿ’ಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.<br /> <br /> ‘ಮಕ್ಕಳಿಗೂ ಅವರದೇ ಆದ ಹಕ್ಕುಗಳಿವೆ. ಅವುಗಳನ್ನು ರಕ್ಷಿಸುವಲ್ಲಿ ಸರ್ಕಾರ ಪ್ರಧಾನ ಪಾತ್ರವಹಿಸಬೇಕಾಗಿದೆ. ಅದರಲ್ಲೂ, ಅಂಗವಿಕಲ ಮಕ್ಕಳಿಗೆ ಎಲ್ಲಿಯೂ ಮನ್ನಣೆ ಇರದಂತಾಗಿದೆ. ಈ ತಾರತಮ್ಯ ನೀತಿಯನ್ನು ಬಿಡಬೇಕು. ಪ್ರತಿ ಮಗುವಿಗೂ ಆರೋಗ್ಯಕರವಾದ ಬಾಲ್ಯವನ್ನು ನೀಡುವ ಜವಾಬ್ದಾರಿ ಸಮಾಜದ ಮೇಲಿದೆ’ ಎಂದರು.<br /> <br /> ‘ಚೈಲ್ಡ್ ರೈಟ್ಸ್ ಅಂಡ್ ಯು’ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕಿ ಸುಮಾ ರವಿ ಮಾತನಾಡಿ, ‘ಎಲ್ಲಾ ಪಕ್ಷಗಳು ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ತಮ್ಮ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಬೇಕು ಹಾಗೂ ಆಡಳಿತಕ್ಕೆ ಬರುವ ಯಾವುದೇ ಸರ್ಕಾರ ಮಕ್ಕಳ ಏಳಿಗೆಗಾಗಿ ಬಜೆಟ್ನಲ್ಲಿ ಶೇ 10 ರಷ್ಟು ಮೀಸಲಿಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ’ ಎಂದರು.<br /> <br /> ‘ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ 23 ರಾಜ್ಯಗಳಲ್ಲಿ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಅಭಿಯಾನದಲ್ಲಿ 14 ಲಕ್ಷ ಸಹಿ ಸಂಗ್ರಹವಾಗಿದೆ. ಬೆಂಗಳೂರು ಸೈಕಲ್ ರ್್ಯಾಲಿ ಮೂಲಕ ಕ್ರೈ ಸಂಸ್ಥೆಯ ಆಂದೋಲನ ಇಲ್ಲಿಗೆ ಅಂತ್ಯಗೊಂಡಿದೆ’ ಎಂದರು.<br /> <br /> ಚಿತ್ರನಟ ಮುರಳಿ, ‘ದೇಶದ ಪ್ರತಿ ಮಗುವೂ ಮುಖ್ಯ. ಇದರಿಂದ, ಮಕ್ಕಳ ಹಕ್ಕುಗಳ ಬಗೆಗೆ ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ. ಕ್ರೈ ಸಂಸ್ಥೆಯು ಈ ಕುರಿತು ಅಭಿಯಾನ ಆಯೋಜಿಸಿ, ಜಾಗೃತಿ ಮೂಡಿಸಿ ಒಳ್ಳೆ ಕಾರ್ಯ ಮಾಡುತ್ತಿದೆ’ ಎಂದರು.<br /> <br /> ಯುವ ನಟ, ನಿರ್ದೇಶಕ ಕಿಶನ್, ‘ಪ್ರತಿಯೊಬ್ಬ ಮಗುವಿಗೂ ಕನಸುಗಳಿವೆ. ಕೊಳೆಗೇರಿ ಮಕ್ಕಳಿಗೂ ಭವಿಷ್ಯ ರೂಪಿಸಬೇಕಿದೆ. ಸಮಾಜ ಅವರನ್ನು ನೋಡುವ ದೃಷ್ಟಿ ಬದಲಾಗಬೇಕಿದೆ’ ಎಂದು ಹೇಳಿದರು.<br /> <br /> ವಿವಿಧ ಕಾಲೇಜಿನ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೈಕಲ್ ರ್್ಯಾಲಿಯಲ್ಲಿ ಭಾಗವಹಿಸಿದ್ದರು. ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಸರ್ಕಾರವು ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡಬೇಕು. ಮಕ್ಕಳಿಗೆ ಪ್ರೋತ್ಸಾಹದಾಯಕವಾದ ಕಾರ್ಯಕ್ರಮಗಳನ್ನು ಆಯೋಜಿಸಬೇಕು’ ಎಂದು ಲಂಡನ್ ಪ್ಯಾರಾಲಿಂಪಿಕ್ ಬೆಳ್ಳಿ ಪದಕ ವಿಜೇತ ಎಚ್.ಎನ್.ಗಿರೀಶ್ ಹೇಳಿದರು.<br /> <br /> ‘ಚೈಲ್ಡ್ ರೈಟ್ಸ್ ಅಂಡ್ ಯು’ (ಕ್ರೈ) ಸಂಸ್ಥೆಯು ಕಬ್ಬನ್ ಉದ್ಯಾನದಲ್ಲಿ ಶನಿವಾರ ಆಯೋಜಿಸಿದ್ದ ‘ಮಕ್ಕಳ ಹಕ್ಕುಗಳಿಗಾಗಿ ಸೈಕಲ್ ರ್್ಯಾಲಿ’ಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.<br /> <br /> ‘ಮಕ್ಕಳಿಗೂ ಅವರದೇ ಆದ ಹಕ್ಕುಗಳಿವೆ. ಅವುಗಳನ್ನು ರಕ್ಷಿಸುವಲ್ಲಿ ಸರ್ಕಾರ ಪ್ರಧಾನ ಪಾತ್ರವಹಿಸಬೇಕಾಗಿದೆ. ಅದರಲ್ಲೂ, ಅಂಗವಿಕಲ ಮಕ್ಕಳಿಗೆ ಎಲ್ಲಿಯೂ ಮನ್ನಣೆ ಇರದಂತಾಗಿದೆ. ಈ ತಾರತಮ್ಯ ನೀತಿಯನ್ನು ಬಿಡಬೇಕು. ಪ್ರತಿ ಮಗುವಿಗೂ ಆರೋಗ್ಯಕರವಾದ ಬಾಲ್ಯವನ್ನು ನೀಡುವ ಜವಾಬ್ದಾರಿ ಸಮಾಜದ ಮೇಲಿದೆ’ ಎಂದರು.<br /> <br /> ‘ಚೈಲ್ಡ್ ರೈಟ್ಸ್ ಅಂಡ್ ಯು’ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕಿ ಸುಮಾ ರವಿ ಮಾತನಾಡಿ, ‘ಎಲ್ಲಾ ಪಕ್ಷಗಳು ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ತಮ್ಮ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಬೇಕು ಹಾಗೂ ಆಡಳಿತಕ್ಕೆ ಬರುವ ಯಾವುದೇ ಸರ್ಕಾರ ಮಕ್ಕಳ ಏಳಿಗೆಗಾಗಿ ಬಜೆಟ್ನಲ್ಲಿ ಶೇ 10 ರಷ್ಟು ಮೀಸಲಿಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ’ ಎಂದರು.<br /> <br /> ‘ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ 23 ರಾಜ್ಯಗಳಲ್ಲಿ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಅಭಿಯಾನದಲ್ಲಿ 14 ಲಕ್ಷ ಸಹಿ ಸಂಗ್ರಹವಾಗಿದೆ. ಬೆಂಗಳೂರು ಸೈಕಲ್ ರ್್ಯಾಲಿ ಮೂಲಕ ಕ್ರೈ ಸಂಸ್ಥೆಯ ಆಂದೋಲನ ಇಲ್ಲಿಗೆ ಅಂತ್ಯಗೊಂಡಿದೆ’ ಎಂದರು.<br /> <br /> ಚಿತ್ರನಟ ಮುರಳಿ, ‘ದೇಶದ ಪ್ರತಿ ಮಗುವೂ ಮುಖ್ಯ. ಇದರಿಂದ, ಮಕ್ಕಳ ಹಕ್ಕುಗಳ ಬಗೆಗೆ ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ. ಕ್ರೈ ಸಂಸ್ಥೆಯು ಈ ಕುರಿತು ಅಭಿಯಾನ ಆಯೋಜಿಸಿ, ಜಾಗೃತಿ ಮೂಡಿಸಿ ಒಳ್ಳೆ ಕಾರ್ಯ ಮಾಡುತ್ತಿದೆ’ ಎಂದರು.<br /> <br /> ಯುವ ನಟ, ನಿರ್ದೇಶಕ ಕಿಶನ್, ‘ಪ್ರತಿಯೊಬ್ಬ ಮಗುವಿಗೂ ಕನಸುಗಳಿವೆ. ಕೊಳೆಗೇರಿ ಮಕ್ಕಳಿಗೂ ಭವಿಷ್ಯ ರೂಪಿಸಬೇಕಿದೆ. ಸಮಾಜ ಅವರನ್ನು ನೋಡುವ ದೃಷ್ಟಿ ಬದಲಾಗಬೇಕಿದೆ’ ಎಂದು ಹೇಳಿದರು.<br /> <br /> ವಿವಿಧ ಕಾಲೇಜಿನ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೈಕಲ್ ರ್್ಯಾಲಿಯಲ್ಲಿ ಭಾಗವಹಿಸಿದ್ದರು. ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>