<p><strong>ರಾಮನಗರ:</strong> ರೇಷ್ಮೆ ಧಾರಣೆಯಲ್ಲಿ ಮತ್ತೆ ಕುಸಿತ ಉಂಟಾದ್ದರಿಂದ ಆಕ್ರೋಶಗೊಂಡ ರೈತರು ರಾಮನಗರದಲ್ಲಿ ಬೆಂಗಳೂರು– ಮೈಸೂರು ಹೆದ್ದಾರಿ ತಡೆ ನಡೆಸಿ ಮಂಗಳವಾರ ಪ್ರತಿಭಟಿಸಿದರು.<br /> <br /> ಇಲ್ಲಿನ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯ ಮೂರನೇ ಘಟಕದಲ್ಲಿ ನೂಲು ಬಿಚ್ಚಾಣಿಕೆದಾರರು (ರೀಲರ್ ಗಳು) ಕೆ.ಜಿ ರೇಷ್ಮೆ ಗೂಡಿಗೆ ಕೇವಲ ₨ 120, ₨ 130ಕ್ಕೆ ಹರಾಜು ಕೂಗಿದರು. ಇದರಿಂದ ಬೇಸತ್ತ ರೈತರು ಹರಾಜು ಪ್ರಕ್ರಿಯೆ ಬಹಿಷ್ಕರಿಸಿ, ರೀಲರ್ಗಳ ವಿರುದ್ಧ ಧಿಕ್ಕಾರ ಕೂಗಿದರು.<br /> <br /> ರೈತರು ಬೆಂಗಳೂರು– ಮೈಸೂರು ಹೆದ್ದಾರಿಯನ್ನು ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ತಡೆ ನಡೆಸಿದ್ದರಿಂದ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಯಿತು. ಕೂಡಲೇ ಪೊಲೀಸರು ಪರ್ಯಾಯ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.<br /> <br /> ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ, ಡಿಎಸ್ಪಿ ಲಕ್ಷ್ಮೀ ಗಣೇಶ್ ಅವರು ಪ್ರತಿಭಟನಾನಿರತ ರೈತರ ಬಳಿ ಬಂದು ರಸ್ತೆ<br /> ತಡೆ ಹಿಂಪಡೆಯುವಂತೆ ಮನವಿ ಮಾಡಿದರು. ಮತ ಚಲಾಯಿಸಲು ಸಾರ್ವಜನಿಕರು ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿರುತ್ತಾರೆ. ಇದರಿಂದ ಮತದಾನಕ್ಕೆ ತೊಂದರೆ ಎಂದು ಪೊಲೀಸರು ಮನವಿ ಮಾಡಿದರು.<br /> <br /> ರೀಲರ್ಗಳ ಜತೆಯೂ ಮಾತನಾಡಿದ ಪೊಲೀಸರು ಉತ್ತಮ ಬೆಲೆಗೆ ಹರಾಜು ಕೂಗುವಂತೆ ಕೋರಿದರು. ಬಳಿಕ ರೈತರು ಪ್ರತಿಭಟನೆ ಹಿಂಪಡೆದರು.<br /> ******<br /> <span style="color:#008000;">ಮೊದಲ ಬಾರಿಗೆ ರೇಷ್ಮೆ ಗೂಡು ಬೆಳೆಸಿ ಮಾರಾಟ ಮಾಡಲು ರಾಮನಗರ ಮಾರುಕಟ್ಟೆಗೆ ತೆಗೆದುಕೊಂಡು ಬಂದೆ. ಆದರೆ ಕೆ.ಜಿಗೆ ಕೇವಲ ₨ 150ರಿಂದ 160ಕ್ಕೆ ದೊರೆತಿದೆ</span><br /> <strong>-ಶಿವಕುಮಾರ್, </strong><em>ಚನ್ನಪಟ್ಟಣದ ರೇಷ್ಮೆ ಬೆಳೆಗಾರ</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ:</strong> ರೇಷ್ಮೆ ಧಾರಣೆಯಲ್ಲಿ ಮತ್ತೆ ಕುಸಿತ ಉಂಟಾದ್ದರಿಂದ ಆಕ್ರೋಶಗೊಂಡ ರೈತರು ರಾಮನಗರದಲ್ಲಿ ಬೆಂಗಳೂರು– ಮೈಸೂರು ಹೆದ್ದಾರಿ ತಡೆ ನಡೆಸಿ ಮಂಗಳವಾರ ಪ್ರತಿಭಟಿಸಿದರು.<br /> <br /> ಇಲ್ಲಿನ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯ ಮೂರನೇ ಘಟಕದಲ್ಲಿ ನೂಲು ಬಿಚ್ಚಾಣಿಕೆದಾರರು (ರೀಲರ್ ಗಳು) ಕೆ.ಜಿ ರೇಷ್ಮೆ ಗೂಡಿಗೆ ಕೇವಲ ₨ 120, ₨ 130ಕ್ಕೆ ಹರಾಜು ಕೂಗಿದರು. ಇದರಿಂದ ಬೇಸತ್ತ ರೈತರು ಹರಾಜು ಪ್ರಕ್ರಿಯೆ ಬಹಿಷ್ಕರಿಸಿ, ರೀಲರ್ಗಳ ವಿರುದ್ಧ ಧಿಕ್ಕಾರ ಕೂಗಿದರು.<br /> <br /> ರೈತರು ಬೆಂಗಳೂರು– ಮೈಸೂರು ಹೆದ್ದಾರಿಯನ್ನು ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ತಡೆ ನಡೆಸಿದ್ದರಿಂದ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಯಿತು. ಕೂಡಲೇ ಪೊಲೀಸರು ಪರ್ಯಾಯ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.<br /> <br /> ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ, ಡಿಎಸ್ಪಿ ಲಕ್ಷ್ಮೀ ಗಣೇಶ್ ಅವರು ಪ್ರತಿಭಟನಾನಿರತ ರೈತರ ಬಳಿ ಬಂದು ರಸ್ತೆ<br /> ತಡೆ ಹಿಂಪಡೆಯುವಂತೆ ಮನವಿ ಮಾಡಿದರು. ಮತ ಚಲಾಯಿಸಲು ಸಾರ್ವಜನಿಕರು ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿರುತ್ತಾರೆ. ಇದರಿಂದ ಮತದಾನಕ್ಕೆ ತೊಂದರೆ ಎಂದು ಪೊಲೀಸರು ಮನವಿ ಮಾಡಿದರು.<br /> <br /> ರೀಲರ್ಗಳ ಜತೆಯೂ ಮಾತನಾಡಿದ ಪೊಲೀಸರು ಉತ್ತಮ ಬೆಲೆಗೆ ಹರಾಜು ಕೂಗುವಂತೆ ಕೋರಿದರು. ಬಳಿಕ ರೈತರು ಪ್ರತಿಭಟನೆ ಹಿಂಪಡೆದರು.<br /> ******<br /> <span style="color:#008000;">ಮೊದಲ ಬಾರಿಗೆ ರೇಷ್ಮೆ ಗೂಡು ಬೆಳೆಸಿ ಮಾರಾಟ ಮಾಡಲು ರಾಮನಗರ ಮಾರುಕಟ್ಟೆಗೆ ತೆಗೆದುಕೊಂಡು ಬಂದೆ. ಆದರೆ ಕೆ.ಜಿಗೆ ಕೇವಲ ₨ 150ರಿಂದ 160ಕ್ಕೆ ದೊರೆತಿದೆ</span><br /> <strong>-ಶಿವಕುಮಾರ್, </strong><em>ಚನ್ನಪಟ್ಟಣದ ರೇಷ್ಮೆ ಬೆಳೆಗಾರ</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>