<p>ಮುನ್ನಾಭಾಯಿ ಮತ್ತೆ ಬರಲಿದ್ದಾನೆ. ಮುನ್ನಾಭಾಯಿ ಎಂಬಿಬಿಎಸ್ ಚಿತ್ರದಲ್ಲಿ ಜಾದೂಕಿ ಛಪ್ಪಿ ನೀಡಿ ಜಾದೂ ಮಾಡಿದ್ದರು ಸಂಜೂಬಾಬಾ. ಇದರ ಮುಂದುವರಿದ ಭಾಗದಲ್ಲಿ `ಗಾಂಧಿಗಿರಿ~ ಮೂಲಕ `ಗೆಟ್ ವೆಲ್ ಸೂನ್~ ಹೆಸರಾಗಿತ್ತು. ಈಗ `ಮುನ್ನಾಭಾಯಿ ಕಿ ಆತ್ಮಕಥಾ~ ಚಿತ್ರದ ಮೂಲಕ ಮತ್ತೆ ತೆರೆಗೆ ಬರಲಿದ್ದಾರೆ.<br /> <br /> ರಾಜ್ಕುಮಾರ್ ಹಿರಾನಿ, ವಿಧು ವಿನೋದ್ ಚೋಪ್ರಾ ಜೊತೆಗೆ ಮುನ್ನಾಭಾಯ್ ಪಾತ್ರ ನಿರ್ವಹಿಸಿದ್ದ ಸಂಜೂಬಾಬಾ ಸಹ ಖುಷಿಯಾಗಿದ್ದಾರೆ.<br /> <br /> ಮೊದಲು ವಿಧು ವಿನೋದ್ ಚೋಪ್ರಾ ಮುನ್ನಾಭಾಯ್ ಚಿತ್ರ ನಿರ್ಮಿಸಬೇಕೆಂದಾಗ ಶಾರುಖ್ ಖಾನ್ ಅವರು ಪಾತ್ರ ನಿರ್ವಹಿಸಬೇಕು ಎಂದು ಬಯಸಿದ್ದರು. ಜಿಮ್ಮಿ ಶೇರ್ಗಿಲ್ ನಿರ್ವಹಿಸಿದ `ಜಹೀರ್~ ಎಂಬ ಪುಟ್ಟ ಪಾತ್ರ ಸಂಜೂಬಾಬಾಗೆ ನೀಡಬೇಕೆಂದು ಆಲೋಚಿಸಿದ್ದರು. <br /> <br /> ಆದರೆ ಆಗ ಶಾರುಖ್ ಖಾನ್ ಬೆನ್ನುನೋವಿನಿಂದ ಬಳಲುತ್ತಿದ್ದರು. ಈ ಅವಕಾಶ ಸಂಜೂಬಾಬಾಗೆ ದೊರೆಯಿತು. ಸಂಜೂಬಾಬಾಗೆ ಅದು ಪಾತ್ರವೇ ಆಗಿರಲಿಲ್ಲ, ಅವರೇ ಆಗಿದ್ದರಿಂದ ನಿರ್ವಹಿಸುವುದು ಕಷ್ಟವಾಗಲಿಲ್ಲ ಎಂದು ವಿಧು ಅಭಿಪ್ರಾಯ ಪಟ್ಟಿದ್ದಾರೆ. ಯಾವತ್ತಿದ್ದರೂ ಶಾರುಖ್ಖಾನ್ ನನ್ನ ಮೊದಲ ಆಯ್ಕೆ.<br /> <br /> ಆದರೆ ಮುನ್ನಾಭಾಯ್ ಸಮಯದಲ್ಲಿ ಅವರ ಆರೋಗ್ಯ ಕೈ ಕೊಟ್ಟಿತು. `3 ಈಡಿಯಟ್ಸ್~ ಸಮಯದಲ್ಲಿ ಡೇಟ್ಸ್ ಹೊಂದಾಣಿಕೆಯಾಗಲಿಲ್ಲ. `ಫೆರಾರಿ ಕಿ ಸವಾರಿ~ ಚಿತ್ರೀಕರಣದ ಸಂದರ್ಭದಲ್ಲಿಯೂ ಶಾರುಖ್ನೊಂದಿಗೆ ಕೆಲಸ ಮಾಡಲು ಆಗಲಿಲ್ಲ. ಆದರೆ ಆ ಬಗ್ಗೆ ಖೇದವೇನೂ ಇಲ್ಲ ಎಂದೂ ವಿಧು ಹೇಳಿದ್ದಾರೆ.<br /> <br /> ಆದರೆ ಬದಲಿಯಾಗಿ ತೆಗೆದುಕೊಂಡ ಎಲ್ಲ ನಟರೂ ಆ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಅವರೇ ಆ ಪಾತ್ರಗಳಿಗೆ ಹೇಳಿ ಮಾಡಿಸಿದಂತೆ ನಟಿಸಿದ್ದಾರೆ. ಈ ನಿಟ್ಟಿನಲ್ಲಿ ಬದಲಿ ಆಯ್ಕೆಯನ್ನು ಸುಲಭಗೊಳಿಸಿದ ರಾಜ್ಕುಮಾರ್ ಹಿರಾನಿಯನ್ನು ಅಭಿನಂದಿಸಲೇ ಬೇಕು ಎಂದು ವಿಧು ಹಾಡಿ ಹೊಗಳಿದ್ದಾರೆ.<br /> <br /> ಮೊದಲು ಮೂರನೆಯ ಭಾಗದಲ್ಲಿ ಅಮೀರ್ ಖಾನ್ ಹಾಗೂ ಶರ್ಮನ್ ಜೋಷಿ ಮುನ್ನಾ ಮತ್ತು ಸರ್ಕೀಟ್ ಪಾತ್ರಗಳನ್ನು ನಿರ್ವಹಿಸಲಿದ್ದಾರೆ ಎಂಬ ಗಾಳಿ ಸುದ್ದಿ ಹರಡಿತ್ತು. ನಂತರ ಮೂರನೆಯ ಭಾಗದ ಪ್ರೊಜೆಕ್ಟನ್ನು ಕೈ ಬಿಡಲಾಗಿದೆ ಎಂದೂ ಹೇಳಲಾಗಿತ್ತು. ಇವೆರಡೂ ಮಾತುಗಳೂ ಸುಳ್ಳು. <br /> <br /> ನಾವು ಕಳೆದ ನಾಲ್ಕು ವರ್ಷಗಳಿಂದ ಒಂದು ಉತ್ತಮ ಸ್ಕ್ರಿಪ್ಟ್ ರೂಪಿಸಲು ಪ್ರಯತ್ನ ಪಡುತ್ತಿದ್ದೇವೆ. ಸ್ಕ್ರಿಪ್ಟ್ ರೂಪಿಸುವುದು ಸುಲಭವಾಗಿರಬಹುದು. ಆದರೆ ಅದನ್ನು ಉತ್ತಮಗೊಳಿಸುವುದು ಪ್ರಯಾಸದ ಕೆಲಸ.<br /> <br /> ಇನ್ನೊಂದೆರಡು ತಿಂಗಳುಗಳಲ್ಲಿ ಈ ಕೆಲಸ ಪೂರ್ಣಗೊಳ್ಳಲಿದೆ. ಈಗ ಮುನ್ನಾ ಹಾಗೂ ಸರ್ಕೀಟ್ ಪಾತ್ರಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಅವನ್ನು ಮತ್ತೆ ಸಂಜು ಹಾಗೂ ಅರ್ಷದ್ ವಾರ್ಸಿಯೇ ನಿಭಾಯಿಸಲಿದ್ದಾರೆ ಎಂದೂ ಹಿರಾನಿ ಸ್ಪಷ್ಟಪಡಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುನ್ನಾಭಾಯಿ ಮತ್ತೆ ಬರಲಿದ್ದಾನೆ. ಮುನ್ನಾಭಾಯಿ ಎಂಬಿಬಿಎಸ್ ಚಿತ್ರದಲ್ಲಿ ಜಾದೂಕಿ ಛಪ್ಪಿ ನೀಡಿ ಜಾದೂ ಮಾಡಿದ್ದರು ಸಂಜೂಬಾಬಾ. ಇದರ ಮುಂದುವರಿದ ಭಾಗದಲ್ಲಿ `ಗಾಂಧಿಗಿರಿ~ ಮೂಲಕ `ಗೆಟ್ ವೆಲ್ ಸೂನ್~ ಹೆಸರಾಗಿತ್ತು. ಈಗ `ಮುನ್ನಾಭಾಯಿ ಕಿ ಆತ್ಮಕಥಾ~ ಚಿತ್ರದ ಮೂಲಕ ಮತ್ತೆ ತೆರೆಗೆ ಬರಲಿದ್ದಾರೆ.<br /> <br /> ರಾಜ್ಕುಮಾರ್ ಹಿರಾನಿ, ವಿಧು ವಿನೋದ್ ಚೋಪ್ರಾ ಜೊತೆಗೆ ಮುನ್ನಾಭಾಯ್ ಪಾತ್ರ ನಿರ್ವಹಿಸಿದ್ದ ಸಂಜೂಬಾಬಾ ಸಹ ಖುಷಿಯಾಗಿದ್ದಾರೆ.<br /> <br /> ಮೊದಲು ವಿಧು ವಿನೋದ್ ಚೋಪ್ರಾ ಮುನ್ನಾಭಾಯ್ ಚಿತ್ರ ನಿರ್ಮಿಸಬೇಕೆಂದಾಗ ಶಾರುಖ್ ಖಾನ್ ಅವರು ಪಾತ್ರ ನಿರ್ವಹಿಸಬೇಕು ಎಂದು ಬಯಸಿದ್ದರು. ಜಿಮ್ಮಿ ಶೇರ್ಗಿಲ್ ನಿರ್ವಹಿಸಿದ `ಜಹೀರ್~ ಎಂಬ ಪುಟ್ಟ ಪಾತ್ರ ಸಂಜೂಬಾಬಾಗೆ ನೀಡಬೇಕೆಂದು ಆಲೋಚಿಸಿದ್ದರು. <br /> <br /> ಆದರೆ ಆಗ ಶಾರುಖ್ ಖಾನ್ ಬೆನ್ನುನೋವಿನಿಂದ ಬಳಲುತ್ತಿದ್ದರು. ಈ ಅವಕಾಶ ಸಂಜೂಬಾಬಾಗೆ ದೊರೆಯಿತು. ಸಂಜೂಬಾಬಾಗೆ ಅದು ಪಾತ್ರವೇ ಆಗಿರಲಿಲ್ಲ, ಅವರೇ ಆಗಿದ್ದರಿಂದ ನಿರ್ವಹಿಸುವುದು ಕಷ್ಟವಾಗಲಿಲ್ಲ ಎಂದು ವಿಧು ಅಭಿಪ್ರಾಯ ಪಟ್ಟಿದ್ದಾರೆ. ಯಾವತ್ತಿದ್ದರೂ ಶಾರುಖ್ಖಾನ್ ನನ್ನ ಮೊದಲ ಆಯ್ಕೆ.<br /> <br /> ಆದರೆ ಮುನ್ನಾಭಾಯ್ ಸಮಯದಲ್ಲಿ ಅವರ ಆರೋಗ್ಯ ಕೈ ಕೊಟ್ಟಿತು. `3 ಈಡಿಯಟ್ಸ್~ ಸಮಯದಲ್ಲಿ ಡೇಟ್ಸ್ ಹೊಂದಾಣಿಕೆಯಾಗಲಿಲ್ಲ. `ಫೆರಾರಿ ಕಿ ಸವಾರಿ~ ಚಿತ್ರೀಕರಣದ ಸಂದರ್ಭದಲ್ಲಿಯೂ ಶಾರುಖ್ನೊಂದಿಗೆ ಕೆಲಸ ಮಾಡಲು ಆಗಲಿಲ್ಲ. ಆದರೆ ಆ ಬಗ್ಗೆ ಖೇದವೇನೂ ಇಲ್ಲ ಎಂದೂ ವಿಧು ಹೇಳಿದ್ದಾರೆ.<br /> <br /> ಆದರೆ ಬದಲಿಯಾಗಿ ತೆಗೆದುಕೊಂಡ ಎಲ್ಲ ನಟರೂ ಆ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಅವರೇ ಆ ಪಾತ್ರಗಳಿಗೆ ಹೇಳಿ ಮಾಡಿಸಿದಂತೆ ನಟಿಸಿದ್ದಾರೆ. ಈ ನಿಟ್ಟಿನಲ್ಲಿ ಬದಲಿ ಆಯ್ಕೆಯನ್ನು ಸುಲಭಗೊಳಿಸಿದ ರಾಜ್ಕುಮಾರ್ ಹಿರಾನಿಯನ್ನು ಅಭಿನಂದಿಸಲೇ ಬೇಕು ಎಂದು ವಿಧು ಹಾಡಿ ಹೊಗಳಿದ್ದಾರೆ.<br /> <br /> ಮೊದಲು ಮೂರನೆಯ ಭಾಗದಲ್ಲಿ ಅಮೀರ್ ಖಾನ್ ಹಾಗೂ ಶರ್ಮನ್ ಜೋಷಿ ಮುನ್ನಾ ಮತ್ತು ಸರ್ಕೀಟ್ ಪಾತ್ರಗಳನ್ನು ನಿರ್ವಹಿಸಲಿದ್ದಾರೆ ಎಂಬ ಗಾಳಿ ಸುದ್ದಿ ಹರಡಿತ್ತು. ನಂತರ ಮೂರನೆಯ ಭಾಗದ ಪ್ರೊಜೆಕ್ಟನ್ನು ಕೈ ಬಿಡಲಾಗಿದೆ ಎಂದೂ ಹೇಳಲಾಗಿತ್ತು. ಇವೆರಡೂ ಮಾತುಗಳೂ ಸುಳ್ಳು. <br /> <br /> ನಾವು ಕಳೆದ ನಾಲ್ಕು ವರ್ಷಗಳಿಂದ ಒಂದು ಉತ್ತಮ ಸ್ಕ್ರಿಪ್ಟ್ ರೂಪಿಸಲು ಪ್ರಯತ್ನ ಪಡುತ್ತಿದ್ದೇವೆ. ಸ್ಕ್ರಿಪ್ಟ್ ರೂಪಿಸುವುದು ಸುಲಭವಾಗಿರಬಹುದು. ಆದರೆ ಅದನ್ನು ಉತ್ತಮಗೊಳಿಸುವುದು ಪ್ರಯಾಸದ ಕೆಲಸ.<br /> <br /> ಇನ್ನೊಂದೆರಡು ತಿಂಗಳುಗಳಲ್ಲಿ ಈ ಕೆಲಸ ಪೂರ್ಣಗೊಳ್ಳಲಿದೆ. ಈಗ ಮುನ್ನಾ ಹಾಗೂ ಸರ್ಕೀಟ್ ಪಾತ್ರಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಅವನ್ನು ಮತ್ತೆ ಸಂಜು ಹಾಗೂ ಅರ್ಷದ್ ವಾರ್ಸಿಯೇ ನಿಭಾಯಿಸಲಿದ್ದಾರೆ ಎಂದೂ ಹಿರಾನಿ ಸ್ಪಷ್ಟಪಡಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>