<p>`ಚಿತ್ರರಂಗ ಉಳಿಯಬೇಕೆಂದರೆ ನಿರ್ಮಾಪಕರು ಚೆನ್ನಾಗಿರಬೇಕು. ನಿರ್ಮಾಪಕರು ಗೆದ್ದರೆ ಕಾರ್ಮಿಕರು ಉಳಿಯುತ್ತಾರೆ~. ಇದು ನಿರ್ಮಾಪಕ ಕೆ.ಮಂಜು ಹೇಳುವ ಮಾತು. <br /> <br /> ಸಾಲು ಸಾಲು ಚಿತ್ರಗಳನ್ನು ನಿರ್ಮಿಸುತ್ತಿರುವ ಕೆ.ಮಂಜು ಮೊದಲ ಬಾರಿಗೆ ಬೇರೆ ನಿರ್ಮಾಪಕರ ಚಿತ್ರವನ್ನು ತಮ್ಮ ಸಂಸ್ಥೆ ಮೂಲಕ ಬಿಡುಗಡೆ ಮಾಡಲು ಹೊರಟಿದ್ದಾರೆ. <br /> <br /> ಗಣೇಶ್ ಅಭಿನಯದ `ಮದುವೆಮನೆ~ ಬಿಡುಗಡೆಗೆ ಸಿದ್ಧವಾಗಿದೆ. ಆದರೆ ಚಿತ್ರಕ್ಕೆ ಐದು ಕೋಟಿಯಷ್ಟು ಬಂಡವಾಳ ಹೂಡಿರುವ ರೆಹಮಾನ್ ಅವರಿಗೆ ಚಿತ್ರವನ್ನು ಮಾರುಕಟ್ಟೆಗೆ ತರುವುದು ಕಷ್ಟವಾಗಿದೆ.<br /> <br /> ಹಾಗಾಗಿ ಅವರು ಕೆ.ಮಂಜು ಮೊರೆ ಹೋಗಿದ್ದರು. ರೆಹಮಾನ್ `ಯಜಮಾನ~ದಂತಹ ಯಶಸ್ವಿ ಚಿತ್ರಗಳನ್ನು ನಿರ್ಮಿಸಿದವರು. ಜೊತೆಗೆ ಸ್ನೇಹಿತ ಬೇರೆ. ಹಾಗಾಗಿ ಮಂಜು ಕಷ್ಟದಲ್ಲಿರುವ ಗೆಳೆಯನ ಕೈ ಹಿಡಿದಿದ್ದಾರೆ.<br /> <br /> ಮದುವೆ ಮನೆ ಚಿತ್ರ ಗಣೇಶ್ ಅವರನ್ನು ಭಾವನೆಯ ಕಡಲಲ್ಲಿ ತೋಯಿಸಿದೆ. `ಸನ್ನಿವೇಶಗಳು ಸಾಕಷ್ಟು ಗಾಢ ಮತ್ತು ಆಪ್ತವಾಗಿವೆ. <br /> <br /> ದೃಶ್ಯವೊಂದರ ಡಬ್ಬಿಂಗ್ ಮಾಡುವಾಗಂತೂ ಕಣ್ಣಲ್ಲಿ ನೀರು ಜಿನುಗಿತು. ಅಷ್ಟು ಹೃದಯಸ್ಪರ್ಶಿಯಾಗಿ ಚಿತ್ರ ಮೂಡಿಬಂದಿದೆ~ ಎಂದು ಗಣೇಶ್ ಸಂತಸ ವ್ಯಕ್ತಪಡಿಸಿದರು.<br /> <br /> ನಿರ್ದೇಶಕ ಸುನೀಲ್ ಕುಮಾರ್ ಸಿಂಗ್ ಚಿತ್ರ ನಿರೀಕ್ಷೆಗಿಂತ ಚೆನ್ನಾಗಿ ಮೂಡಿಬಂದಿದೆ ಎಂದರು. ಚಿತ್ರದಲ್ಲಿ ಗಣೇಶ್ ಪಾತ್ರವೇ ಹೈಲೈಟ್. ಅವರ ನಟನೆ ಮತ್ತು ಮಾತುಗಳು ಜನರಿಗೆ ಖಂಡಿತ ಇಷ್ಟವಾಗುತ್ತದೆ ಎಂದು ಆಶಾಭಾವ ವ್ಯಕ್ತಪಡಿಸಿದರು. <br /> <br /> ಚಿತ್ರೀಕರಣ 65 ದಿನ ನಡೆದಿದ್ದು, ಇದರಲ್ಲಿ ರೈಲಿನಲ್ಲಿ ನಡೆಯುವ ಘಟನೆಗಳ ಚಿತ್ರೀಕರಣಕ್ಕೆ 17 ದಿನ ಬೇಕಾಯಿತಂತೆ. ಚಿತ್ರ ಸಂಪೂರ್ಣ ಸ್ವಮೇಕ್. ಹಿಂದಿಯ `ದಿಲ್ವಾಲೆ ದುನಿಯಾ ಲೇ ಜಾಯೆಂಗೇ~ಯ ರಿಮೇಕ್ ಎನ್ನುವ ಸುದ್ದಿ ಸುಳ್ಳು ಎಂದು ಅವರು ಸ್ಪಷ್ಟಪಡಿಸಿದರು.<br /> <br /> ಎಂದಿನಂತೆ ನಾಯಕಿ ಶ್ರದ್ಧಾ ಆರ್ಯ ಸುದ್ದಿಗೋಷ್ಠಿಗೆ ಗೈರುಹಾಜರಾಗಿದ್ದರು. ಶೀಘ್ರದಲ್ಲೇ ಮದುವೆ ಮನೆ ಊಟದ ಸವಿರುಚಿಯನ್ನು ಬಡಿಸಲು ಚಿತ್ರತಂಡ ಸಿದ್ಧವಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಚಿತ್ರರಂಗ ಉಳಿಯಬೇಕೆಂದರೆ ನಿರ್ಮಾಪಕರು ಚೆನ್ನಾಗಿರಬೇಕು. ನಿರ್ಮಾಪಕರು ಗೆದ್ದರೆ ಕಾರ್ಮಿಕರು ಉಳಿಯುತ್ತಾರೆ~. ಇದು ನಿರ್ಮಾಪಕ ಕೆ.ಮಂಜು ಹೇಳುವ ಮಾತು. <br /> <br /> ಸಾಲು ಸಾಲು ಚಿತ್ರಗಳನ್ನು ನಿರ್ಮಿಸುತ್ತಿರುವ ಕೆ.ಮಂಜು ಮೊದಲ ಬಾರಿಗೆ ಬೇರೆ ನಿರ್ಮಾಪಕರ ಚಿತ್ರವನ್ನು ತಮ್ಮ ಸಂಸ್ಥೆ ಮೂಲಕ ಬಿಡುಗಡೆ ಮಾಡಲು ಹೊರಟಿದ್ದಾರೆ. <br /> <br /> ಗಣೇಶ್ ಅಭಿನಯದ `ಮದುವೆಮನೆ~ ಬಿಡುಗಡೆಗೆ ಸಿದ್ಧವಾಗಿದೆ. ಆದರೆ ಚಿತ್ರಕ್ಕೆ ಐದು ಕೋಟಿಯಷ್ಟು ಬಂಡವಾಳ ಹೂಡಿರುವ ರೆಹಮಾನ್ ಅವರಿಗೆ ಚಿತ್ರವನ್ನು ಮಾರುಕಟ್ಟೆಗೆ ತರುವುದು ಕಷ್ಟವಾಗಿದೆ.<br /> <br /> ಹಾಗಾಗಿ ಅವರು ಕೆ.ಮಂಜು ಮೊರೆ ಹೋಗಿದ್ದರು. ರೆಹಮಾನ್ `ಯಜಮಾನ~ದಂತಹ ಯಶಸ್ವಿ ಚಿತ್ರಗಳನ್ನು ನಿರ್ಮಿಸಿದವರು. ಜೊತೆಗೆ ಸ್ನೇಹಿತ ಬೇರೆ. ಹಾಗಾಗಿ ಮಂಜು ಕಷ್ಟದಲ್ಲಿರುವ ಗೆಳೆಯನ ಕೈ ಹಿಡಿದಿದ್ದಾರೆ.<br /> <br /> ಮದುವೆ ಮನೆ ಚಿತ್ರ ಗಣೇಶ್ ಅವರನ್ನು ಭಾವನೆಯ ಕಡಲಲ್ಲಿ ತೋಯಿಸಿದೆ. `ಸನ್ನಿವೇಶಗಳು ಸಾಕಷ್ಟು ಗಾಢ ಮತ್ತು ಆಪ್ತವಾಗಿವೆ. <br /> <br /> ದೃಶ್ಯವೊಂದರ ಡಬ್ಬಿಂಗ್ ಮಾಡುವಾಗಂತೂ ಕಣ್ಣಲ್ಲಿ ನೀರು ಜಿನುಗಿತು. ಅಷ್ಟು ಹೃದಯಸ್ಪರ್ಶಿಯಾಗಿ ಚಿತ್ರ ಮೂಡಿಬಂದಿದೆ~ ಎಂದು ಗಣೇಶ್ ಸಂತಸ ವ್ಯಕ್ತಪಡಿಸಿದರು.<br /> <br /> ನಿರ್ದೇಶಕ ಸುನೀಲ್ ಕುಮಾರ್ ಸಿಂಗ್ ಚಿತ್ರ ನಿರೀಕ್ಷೆಗಿಂತ ಚೆನ್ನಾಗಿ ಮೂಡಿಬಂದಿದೆ ಎಂದರು. ಚಿತ್ರದಲ್ಲಿ ಗಣೇಶ್ ಪಾತ್ರವೇ ಹೈಲೈಟ್. ಅವರ ನಟನೆ ಮತ್ತು ಮಾತುಗಳು ಜನರಿಗೆ ಖಂಡಿತ ಇಷ್ಟವಾಗುತ್ತದೆ ಎಂದು ಆಶಾಭಾವ ವ್ಯಕ್ತಪಡಿಸಿದರು. <br /> <br /> ಚಿತ್ರೀಕರಣ 65 ದಿನ ನಡೆದಿದ್ದು, ಇದರಲ್ಲಿ ರೈಲಿನಲ್ಲಿ ನಡೆಯುವ ಘಟನೆಗಳ ಚಿತ್ರೀಕರಣಕ್ಕೆ 17 ದಿನ ಬೇಕಾಯಿತಂತೆ. ಚಿತ್ರ ಸಂಪೂರ್ಣ ಸ್ವಮೇಕ್. ಹಿಂದಿಯ `ದಿಲ್ವಾಲೆ ದುನಿಯಾ ಲೇ ಜಾಯೆಂಗೇ~ಯ ರಿಮೇಕ್ ಎನ್ನುವ ಸುದ್ದಿ ಸುಳ್ಳು ಎಂದು ಅವರು ಸ್ಪಷ್ಟಪಡಿಸಿದರು.<br /> <br /> ಎಂದಿನಂತೆ ನಾಯಕಿ ಶ್ರದ್ಧಾ ಆರ್ಯ ಸುದ್ದಿಗೋಷ್ಠಿಗೆ ಗೈರುಹಾಜರಾಗಿದ್ದರು. ಶೀಘ್ರದಲ್ಲೇ ಮದುವೆ ಮನೆ ಊಟದ ಸವಿರುಚಿಯನ್ನು ಬಡಿಸಲು ಚಿತ್ರತಂಡ ಸಿದ್ಧವಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>