<p><strong>ಹನುಮಸಾಗರ:</strong> ಸಮೀಪದ ಮದ್ನಾಳ ಗ್ರಾಮದಲ್ಲಿ ಹಲವಾರು ತಿಂಗಳುಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು ,ಗ್ರಾಮಸ್ಥರು ಕುಡಿಯಲು ಹಾಗೂ ಬಳಕೆಗೆ ನೀರಿಲ್ಲದೆ ತೊಂದರೆ ಎದುರಿಸುತ್ತಿರುವುದು ಕಂಡು ಬಂದಿದೆ.<br /> <br /> ಗ್ರಾಮದಲ್ಲಿ ನಾಲ್ಕಾರು ಕೊಳವೆ ಬಾವಿಗಳಿದ್ದರೂ ಅಂತರ್ಜಲ ಬತ್ತಿರುವುದು ಹಾಗೂ ಇದ್ದ ನೀರನ್ನು ಗ್ರಾಮ ಪಂಚಾಯಿತಿ ಸಮರ್ಪಕವಾಗಿ ಪೂರೈಕೆ ಮಾಡದಿರುವ ಕಾರಣವಾಗಿ ನೀರಿನ ಸಮಸ್ಯೆ ಎದುರಾಗಲು ಕಾರಣವಾಗಿದೆ.<br /> <br /> ಟ್ಯಾಂಕ್ಗಳಿಗೆ ನಳಗಳಿಲ್ಲ, ನೀರಿನ ಕೊಳವೆಗಳು ಅವೈಜ್ಞಾನಿಕವಾಗಿ ಚರಂಡಿಗಳ ಮೂಲಕವೂ ಹಾಯ್ದು ಹೋಗಿವೆ, ಅಲ್ಲಲ್ಲಿ ಕೊಳವೆಗಳು ಒಡೆದು ನೀರು ಪೋಲಾಗುತ್ತಿದ್ದರೂ ಹಲವಾರು ದಿನಗಳಿಂದ ಯಾವುದೆ ದುರಸ್ಥಿ ಕಾರ್ಯ ನಡೆದಿಲ್ಲ ಎಂದು ಎಂದು ಗ್ರಾಮಸ್ಥರು ದೂರುತ್ತಾರೆ.<br /> <br /> ಗ್ರಾಮ ಪಂಚಾಯಿತಿಯಿಂದ ಈಚೆಗೆ ನಮ್ಮೂರಲ್ಲಿ ವಾರ್ಡುಗಳ ಸಭೆ ನಡೆದವು.<br /> ನೀವು ಏನೂ ಮಾಡೋದು ಬ್ಯಾಡ ನೀರ ಕೊಡ್ರಿ ಸಾಕು ಎಂದು ಆ ಸಭೆಯಲ್ಲಿ ಹೇಳಿದ್ದೆವು ಆದರೆ ಅದೂ ಕೂಡ ಈಡೇರಲಿಲ್ಲ ಎಂದು ಗ್ರಾಮದ ಯುವಕ ಹನುಮೇಶ ದೂರುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹನುಮಸಾಗರ:</strong> ಸಮೀಪದ ಮದ್ನಾಳ ಗ್ರಾಮದಲ್ಲಿ ಹಲವಾರು ತಿಂಗಳುಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು ,ಗ್ರಾಮಸ್ಥರು ಕುಡಿಯಲು ಹಾಗೂ ಬಳಕೆಗೆ ನೀರಿಲ್ಲದೆ ತೊಂದರೆ ಎದುರಿಸುತ್ತಿರುವುದು ಕಂಡು ಬಂದಿದೆ.<br /> <br /> ಗ್ರಾಮದಲ್ಲಿ ನಾಲ್ಕಾರು ಕೊಳವೆ ಬಾವಿಗಳಿದ್ದರೂ ಅಂತರ್ಜಲ ಬತ್ತಿರುವುದು ಹಾಗೂ ಇದ್ದ ನೀರನ್ನು ಗ್ರಾಮ ಪಂಚಾಯಿತಿ ಸಮರ್ಪಕವಾಗಿ ಪೂರೈಕೆ ಮಾಡದಿರುವ ಕಾರಣವಾಗಿ ನೀರಿನ ಸಮಸ್ಯೆ ಎದುರಾಗಲು ಕಾರಣವಾಗಿದೆ.<br /> <br /> ಟ್ಯಾಂಕ್ಗಳಿಗೆ ನಳಗಳಿಲ್ಲ, ನೀರಿನ ಕೊಳವೆಗಳು ಅವೈಜ್ಞಾನಿಕವಾಗಿ ಚರಂಡಿಗಳ ಮೂಲಕವೂ ಹಾಯ್ದು ಹೋಗಿವೆ, ಅಲ್ಲಲ್ಲಿ ಕೊಳವೆಗಳು ಒಡೆದು ನೀರು ಪೋಲಾಗುತ್ತಿದ್ದರೂ ಹಲವಾರು ದಿನಗಳಿಂದ ಯಾವುದೆ ದುರಸ್ಥಿ ಕಾರ್ಯ ನಡೆದಿಲ್ಲ ಎಂದು ಎಂದು ಗ್ರಾಮಸ್ಥರು ದೂರುತ್ತಾರೆ.<br /> <br /> ಗ್ರಾಮ ಪಂಚಾಯಿತಿಯಿಂದ ಈಚೆಗೆ ನಮ್ಮೂರಲ್ಲಿ ವಾರ್ಡುಗಳ ಸಭೆ ನಡೆದವು.<br /> ನೀವು ಏನೂ ಮಾಡೋದು ಬ್ಯಾಡ ನೀರ ಕೊಡ್ರಿ ಸಾಕು ಎಂದು ಆ ಸಭೆಯಲ್ಲಿ ಹೇಳಿದ್ದೆವು ಆದರೆ ಅದೂ ಕೂಡ ಈಡೇರಲಿಲ್ಲ ಎಂದು ಗ್ರಾಮದ ಯುವಕ ಹನುಮೇಶ ದೂರುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>