<p>ಕೆಜಿಎಫ್: ಮನೆಯ ಚಾವಣಿ ಕುಸಿದು ಇಬ್ಬರು ಮೃತಪಟ್ಟು, ಇನ್ನಿಬ್ಬರು ಗಾಯಗೊಂಡ ದುರ್ಘಟನೆ ಬುಧವಾರ ಮುಂಜಾನೆ ನಗರದ ರಾಬರ್ಟ್ಸನ್ಪೇಟೆ ಆರನೇ ಕ್ರಾಸ್ನಲ್ಲಿ ಸಂಭವಿಸಿದೆ. <br /> <br /> ಗುತ್ತಿಗೆದಾರರಾದ ನಾರಾಯಣಮೂರ್ತಿ ಅವರಿಗೆ ಈ ಮನೆ ಸೇರಿದೆ. ಘಟನೆ ವೇಳೆ ನಾರಾಯಣಮೂರ್ತಿ ಮನೆಯಲ್ಲಿ ಇರಲಿಲ್ಲ. <br /> <br /> ಮನೆಯ ಮೇಲ್ಚಾವಣಿ ಕುಸಿದು ಕೆಳಗೆ ಸಿಲುಕಿ ನಾರಾಯಣಮೂರ್ತಿ ಅವರ ಅಕ್ಕನ ಮಗ ಅಶೋಕ ಲೇಲ್ಯಾಂಡ್ ಕಂಪೆನಿಯ ಎಂಜಿನಿಯರ್ ಹರೀಶ್ (24) ಹಾಗೂ ನಾರಾಯಣಮೂರ್ತಿ ತಮ್ಮನ ಪತ್ನಿ ಸುಮ ಆಲಿಯಾಸ್ ಸುಜಾತಾ (34) ಮತ್ತು ಸ್ಥಳದಲ್ಲೇ ಮೃತಪಟ್ಟವರು. ಸಂಬಂಧಿಕರಾದ ಅವಿನಾಶ್, ಪುಷ್ಪಲತಾ ಗಾಯಗೊಂಡಿದ್ದಾರೆ.<br /> <br /> ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಮತ್ತು ರಾಬರ್ಟ್ಸನ್ಪೇಟೆ ಪೊಲೀಸರು ಧಾವಿಸಿ, ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಅವಿನಾಶ್ ಮತ್ತು ಪುಷ್ಪಲತಾ ಅವರನ್ನು ಹೊರತೆಗೆದು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದರು. ಈ ಇಬ್ಬರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಅಡುಗೆ ಅನಿಲ ಸಿಲಿಂಡರ್ ಸೋರಿಕೆ ಕಾರಣ ಎಂದು ಹೇಳಲಾಗಿದೆ. <br /> <br /> ಇದೊಂದು ಅವಿಭಕ್ತ ಕುಟುಂಬವಾಗಿದ್ದು ಒಟ್ಟು ಹನ್ನೊಂದು ಮಂದಿ ಈ ಮನೆಯಲ್ಲಿ ವಾಸವಿದ್ದರು. ಹೆಂಚಿನ ಮನೆ ಹಾಗೂ ಆರ್ಸಿಸಿ ಮನೆಗಳು ಹಂಚಿಕೊಂಡಂತೆ ಇದ್ದು, ಹೆಂಚಿನ ಮನೆಯಲ್ಲಿ ಮಲಗಿದ್ದವರು ಸುರಕ್ಷಿತರಾಗಿದ್ದಾರೆ.<br /> <br /> ಶಾಸಕ ವೈ.ಸಂಪಂಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮನಿವಾಸ್ ಸಪೆಟ್, ಮಾಜಿ ಶಾಸಕರಾದ ಎಂ.ಭಕ್ತವತ್ಸಲಂ, ಎಸ್.ರಾಜೇಂದ್ರನ್, ಡಿವೈಎಸ್ಪಿ ರಾಜಣ್ಣ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ರಾಬರ್ಟ್ಸನ್ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. <br /> <br /> ದೇವಾನಾಗಹಳ್ಳಿಯಲ್ಲಿ ದುರ್ಘಟನೆ: ಇದೇ ವೇಳೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಎಸ್.ದೇವಾನಾಗಹಳ್ಳಿಯಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಮನೆಯೊಂದರ ಗೋಡೆ ಕುಸಿದು ಒಬ್ಬ ಸಾವಿಗೀಡಾಗಿ, ಮತ್ತೊಬ್ಬ ಗಾಯಗೊಂಡ ಘಟನೆ ನಡೆದಿದೆ. ನಾಟಕ ಕಲಾವಿದ ನರಸಿಂಹಪ್ಪ (35) ಮೃತಪಟ್ಟವರು. <br /> <br /> ಗಾಯಗೊಂಡ ವ್ಯಕ್ತಿಯನ್ನು ಕೂಲಿಕಾರ್ಮಿಕ ಮಂಜುನಾಥ್ (38) ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೆಜಿಎಫ್: ಮನೆಯ ಚಾವಣಿ ಕುಸಿದು ಇಬ್ಬರು ಮೃತಪಟ್ಟು, ಇನ್ನಿಬ್ಬರು ಗಾಯಗೊಂಡ ದುರ್ಘಟನೆ ಬುಧವಾರ ಮುಂಜಾನೆ ನಗರದ ರಾಬರ್ಟ್ಸನ್ಪೇಟೆ ಆರನೇ ಕ್ರಾಸ್ನಲ್ಲಿ ಸಂಭವಿಸಿದೆ. <br /> <br /> ಗುತ್ತಿಗೆದಾರರಾದ ನಾರಾಯಣಮೂರ್ತಿ ಅವರಿಗೆ ಈ ಮನೆ ಸೇರಿದೆ. ಘಟನೆ ವೇಳೆ ನಾರಾಯಣಮೂರ್ತಿ ಮನೆಯಲ್ಲಿ ಇರಲಿಲ್ಲ. <br /> <br /> ಮನೆಯ ಮೇಲ್ಚಾವಣಿ ಕುಸಿದು ಕೆಳಗೆ ಸಿಲುಕಿ ನಾರಾಯಣಮೂರ್ತಿ ಅವರ ಅಕ್ಕನ ಮಗ ಅಶೋಕ ಲೇಲ್ಯಾಂಡ್ ಕಂಪೆನಿಯ ಎಂಜಿನಿಯರ್ ಹರೀಶ್ (24) ಹಾಗೂ ನಾರಾಯಣಮೂರ್ತಿ ತಮ್ಮನ ಪತ್ನಿ ಸುಮ ಆಲಿಯಾಸ್ ಸುಜಾತಾ (34) ಮತ್ತು ಸ್ಥಳದಲ್ಲೇ ಮೃತಪಟ್ಟವರು. ಸಂಬಂಧಿಕರಾದ ಅವಿನಾಶ್, ಪುಷ್ಪಲತಾ ಗಾಯಗೊಂಡಿದ್ದಾರೆ.<br /> <br /> ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಮತ್ತು ರಾಬರ್ಟ್ಸನ್ಪೇಟೆ ಪೊಲೀಸರು ಧಾವಿಸಿ, ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಅವಿನಾಶ್ ಮತ್ತು ಪುಷ್ಪಲತಾ ಅವರನ್ನು ಹೊರತೆಗೆದು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದರು. ಈ ಇಬ್ಬರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಅಡುಗೆ ಅನಿಲ ಸಿಲಿಂಡರ್ ಸೋರಿಕೆ ಕಾರಣ ಎಂದು ಹೇಳಲಾಗಿದೆ. <br /> <br /> ಇದೊಂದು ಅವಿಭಕ್ತ ಕುಟುಂಬವಾಗಿದ್ದು ಒಟ್ಟು ಹನ್ನೊಂದು ಮಂದಿ ಈ ಮನೆಯಲ್ಲಿ ವಾಸವಿದ್ದರು. ಹೆಂಚಿನ ಮನೆ ಹಾಗೂ ಆರ್ಸಿಸಿ ಮನೆಗಳು ಹಂಚಿಕೊಂಡಂತೆ ಇದ್ದು, ಹೆಂಚಿನ ಮನೆಯಲ್ಲಿ ಮಲಗಿದ್ದವರು ಸುರಕ್ಷಿತರಾಗಿದ್ದಾರೆ.<br /> <br /> ಶಾಸಕ ವೈ.ಸಂಪಂಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮನಿವಾಸ್ ಸಪೆಟ್, ಮಾಜಿ ಶಾಸಕರಾದ ಎಂ.ಭಕ್ತವತ್ಸಲಂ, ಎಸ್.ರಾಜೇಂದ್ರನ್, ಡಿವೈಎಸ್ಪಿ ರಾಜಣ್ಣ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ರಾಬರ್ಟ್ಸನ್ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. <br /> <br /> ದೇವಾನಾಗಹಳ್ಳಿಯಲ್ಲಿ ದುರ್ಘಟನೆ: ಇದೇ ವೇಳೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಎಸ್.ದೇವಾನಾಗಹಳ್ಳಿಯಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಮನೆಯೊಂದರ ಗೋಡೆ ಕುಸಿದು ಒಬ್ಬ ಸಾವಿಗೀಡಾಗಿ, ಮತ್ತೊಬ್ಬ ಗಾಯಗೊಂಡ ಘಟನೆ ನಡೆದಿದೆ. ನಾಟಕ ಕಲಾವಿದ ನರಸಿಂಹಪ್ಪ (35) ಮೃತಪಟ್ಟವರು. <br /> <br /> ಗಾಯಗೊಂಡ ವ್ಯಕ್ತಿಯನ್ನು ಕೂಲಿಕಾರ್ಮಿಕ ಮಂಜುನಾಥ್ (38) ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>