<p><strong>ಬೆಂಗಳೂರು: </strong>`ಚುನಾವಣೆಯಲ್ಲಿ ಗೆದ್ದ ಮೇಲೆ ಶಾಸಕರ ಪ್ರತಿಜ್ಞಾವಿಧಿ ಸ್ವೀಕಾರ, ಒಂದೆಡೆರಡು ನಿಮಿಷಗಳ ವ್ಯವಹಾರ. ಆದರೆ, ಮುಂದಿನ ಐದು ವರ್ಷಗಳಲ್ಲಿ ನಾಡು ನುಡಿ ರಕ್ಷಣೆಯಲ್ಲಿ ಬದ್ಧತೆಯಿಂದ ನಡೆದುಕೊಳ್ಳುವುದೇ ಅಗ್ನಿಪರೀಕ್ಷೆ' ಎಂದು ಚಿಂತಕ ಪ್ರೊ.ರವೀಂದ್ರ ರೇಷ್ಮೆ ತಿಳಿಸಿದರು.<br /> <br /> ಕರ್ನಾಟಕ ಸಾಹಿತ್ಯ ಪರಿಷತ್ತು ನಗರದಲ್ಲಿ ಭಾನುವಾರ ಆಯೋಜಿಸಿದ್ದ `ಶಾಸಕರ ಪ್ರಮಾಣವಚನದ ಭಾಷೆ' ಕುರಿತು ಕಾಡುಹರಟೆ- ಕಾಲಕ್ಷೇಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು `ಸಂವಿಧಾನ ಅಂಗೀಕರಿಸಿರುವ ಯಾವುದೇ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಲು ಮರಾಠಿ ಶಾಸಕರಿಗೆ ಹಕ್ಕಿರುವುದು ನಿಜ. ಆದರೆ ಕನ್ನಡ ನಾಡಿನ ಜನತೆಯ ಜತೆ ಸಾಮರಸ್ಯ ಗಟ್ಟಿಮಾಡಿಕೊಳ್ಳಲು ಕನ್ನಡದಲ್ಲೇ ವ್ಯವಹರಿಸುವ ಕನಿಷ್ಠ ತಿಳವಳಿಕೆ ಇರಬೇಕು' ಎಂದು ಹೇಳಿದರು.<br /> <br /> ಸಾಹಿತಿ ಡಾ.ಪಿ.ವಿ.ನಾರಾಯಣ, `ಪ್ರಮಾಣ ವಚನ ಅನ್ನುವುದು ಕೇವಲ ಶಾಸ್ತ್ರ. ರಾಜ್ಯದ ಬಿಜೆಪಿ ಸದಸ್ಯರು ಸಂಸತ್ತಿನಲ್ಲಿ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದರೂ, ಮುಂದಿನ ಚರ್ಚೆಗಳಲ್ಲಿ ಕನ್ನಡವನ್ನು ಯಾರು ಮೆರಸಲಿಲ್ಲ' ಎಂದು ವಿಷಾದಿಸಿದರು.<br /> <br /> ಲೇಖಕ ಡಾ.ಎಚ್.ಚಂದ್ರಶೇಖರ ಮಾತನಾಡಿ, `ದೇವರ ಹೆಸರಿನಲ್ಲಿ ಇಲ್ಲವೇ ವಿಧಿಪೂರ್ವಕವಾಗಿ ಪ್ರಮಾಣ ವಚನ ಸ್ವೀಕರಿಸಬೇಕು ಎಂದು ಸಂವಿಧಾನ ಹೇಳಿರುವುದನ್ನು ಸ್ಪಷ್ಟಗೊಳಿಸುವ ಮತ್ತು ನಿರ್ದಿಷ್ಟಗೊಳಿಸುವ ಅಗತ್ಯವಿದೆ'ಎಂದರು.<br /> <br /> ಲೇಖಕ ಡಾ.ಕಾ.ವೆಂ. ಶ್ರೀನಿವಾಸಮೂರ್ತಿ, `ಭಾಷೆಯನ್ನು ರಾಜಕೀಯಕ್ಕೆ ಬಳಸಿಕೊಂಡಾಗ ಮಾತ್ರ ದುರಾಭಿಮಾನದ ಸನ್ನಿವೇಶ ನಿರ್ಮಾಣವಾಗುತ್ತದೆ' ಎಂದರು.<br /> <br /> ಕವಿ ಪ್ರೊ.ಎಲ್.ಎನ್.ಮುಕುಂದರಾಜ್, `ಕೆಳಸ್ತರದ ಮನುಷ್ಯನು ಅಧಿಕಾರಕ್ಕೆ ಬರಬಹುದಾದ ಪ್ರಜಾಪ್ರಭುತ್ವದಲ್ಲಿ ಭಾಷೆ ಕೇವಲ ಸಂವಹನದ ಸಾಧನವಾಗಿ ಇರಬೇಕು' ಎಂದು ಹೇಳಿದರು.<br /> <br /> ಪ್ರಮಾಣ ವಚನದ ಭಾಷೆ ಕನ್ನಡ ಹಿತಾಸಕ್ತಿಯ ಪ್ರಶ್ನೆಯೂ ಆಗಿರುವುದರಿಂದ ಸಾರ್ವಜನಿಕ ಚರ್ಚೆ ಅಗತ್ಯ ಎಂದು ಪರಿಷತ್ತಿನ ಅಧ್ಯಕ್ಷ ಡಾ.ಸಿ.ವೀರಣ್ಣ ಹೇಳಿದರು. ಕಾರ್ಯದರ್ಶಿ ಟಿ.ಗೋವಿಂದರಾಜು, ಪ್ರೊ. ಸಂಪಿಗೆ ತೋಂಟದಾರ್ಯ, ಗುಬ್ಬಿ ರೇವಣಾರಾಧ್ಯ ನರಸಿಂಹಮೂರ್ತಿ, ಡಾ. ಟಿ.ಜಿ.ಪ್ರಭಾಶಂಕರ ವಿಚಾರಗಳನ್ನು ಮಂಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>`ಚುನಾವಣೆಯಲ್ಲಿ ಗೆದ್ದ ಮೇಲೆ ಶಾಸಕರ ಪ್ರತಿಜ್ಞಾವಿಧಿ ಸ್ವೀಕಾರ, ಒಂದೆಡೆರಡು ನಿಮಿಷಗಳ ವ್ಯವಹಾರ. ಆದರೆ, ಮುಂದಿನ ಐದು ವರ್ಷಗಳಲ್ಲಿ ನಾಡು ನುಡಿ ರಕ್ಷಣೆಯಲ್ಲಿ ಬದ್ಧತೆಯಿಂದ ನಡೆದುಕೊಳ್ಳುವುದೇ ಅಗ್ನಿಪರೀಕ್ಷೆ' ಎಂದು ಚಿಂತಕ ಪ್ರೊ.ರವೀಂದ್ರ ರೇಷ್ಮೆ ತಿಳಿಸಿದರು.<br /> <br /> ಕರ್ನಾಟಕ ಸಾಹಿತ್ಯ ಪರಿಷತ್ತು ನಗರದಲ್ಲಿ ಭಾನುವಾರ ಆಯೋಜಿಸಿದ್ದ `ಶಾಸಕರ ಪ್ರಮಾಣವಚನದ ಭಾಷೆ' ಕುರಿತು ಕಾಡುಹರಟೆ- ಕಾಲಕ್ಷೇಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು `ಸಂವಿಧಾನ ಅಂಗೀಕರಿಸಿರುವ ಯಾವುದೇ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಲು ಮರಾಠಿ ಶಾಸಕರಿಗೆ ಹಕ್ಕಿರುವುದು ನಿಜ. ಆದರೆ ಕನ್ನಡ ನಾಡಿನ ಜನತೆಯ ಜತೆ ಸಾಮರಸ್ಯ ಗಟ್ಟಿಮಾಡಿಕೊಳ್ಳಲು ಕನ್ನಡದಲ್ಲೇ ವ್ಯವಹರಿಸುವ ಕನಿಷ್ಠ ತಿಳವಳಿಕೆ ಇರಬೇಕು' ಎಂದು ಹೇಳಿದರು.<br /> <br /> ಸಾಹಿತಿ ಡಾ.ಪಿ.ವಿ.ನಾರಾಯಣ, `ಪ್ರಮಾಣ ವಚನ ಅನ್ನುವುದು ಕೇವಲ ಶಾಸ್ತ್ರ. ರಾಜ್ಯದ ಬಿಜೆಪಿ ಸದಸ್ಯರು ಸಂಸತ್ತಿನಲ್ಲಿ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದರೂ, ಮುಂದಿನ ಚರ್ಚೆಗಳಲ್ಲಿ ಕನ್ನಡವನ್ನು ಯಾರು ಮೆರಸಲಿಲ್ಲ' ಎಂದು ವಿಷಾದಿಸಿದರು.<br /> <br /> ಲೇಖಕ ಡಾ.ಎಚ್.ಚಂದ್ರಶೇಖರ ಮಾತನಾಡಿ, `ದೇವರ ಹೆಸರಿನಲ್ಲಿ ಇಲ್ಲವೇ ವಿಧಿಪೂರ್ವಕವಾಗಿ ಪ್ರಮಾಣ ವಚನ ಸ್ವೀಕರಿಸಬೇಕು ಎಂದು ಸಂವಿಧಾನ ಹೇಳಿರುವುದನ್ನು ಸ್ಪಷ್ಟಗೊಳಿಸುವ ಮತ್ತು ನಿರ್ದಿಷ್ಟಗೊಳಿಸುವ ಅಗತ್ಯವಿದೆ'ಎಂದರು.<br /> <br /> ಲೇಖಕ ಡಾ.ಕಾ.ವೆಂ. ಶ್ರೀನಿವಾಸಮೂರ್ತಿ, `ಭಾಷೆಯನ್ನು ರಾಜಕೀಯಕ್ಕೆ ಬಳಸಿಕೊಂಡಾಗ ಮಾತ್ರ ದುರಾಭಿಮಾನದ ಸನ್ನಿವೇಶ ನಿರ್ಮಾಣವಾಗುತ್ತದೆ' ಎಂದರು.<br /> <br /> ಕವಿ ಪ್ರೊ.ಎಲ್.ಎನ್.ಮುಕುಂದರಾಜ್, `ಕೆಳಸ್ತರದ ಮನುಷ್ಯನು ಅಧಿಕಾರಕ್ಕೆ ಬರಬಹುದಾದ ಪ್ರಜಾಪ್ರಭುತ್ವದಲ್ಲಿ ಭಾಷೆ ಕೇವಲ ಸಂವಹನದ ಸಾಧನವಾಗಿ ಇರಬೇಕು' ಎಂದು ಹೇಳಿದರು.<br /> <br /> ಪ್ರಮಾಣ ವಚನದ ಭಾಷೆ ಕನ್ನಡ ಹಿತಾಸಕ್ತಿಯ ಪ್ರಶ್ನೆಯೂ ಆಗಿರುವುದರಿಂದ ಸಾರ್ವಜನಿಕ ಚರ್ಚೆ ಅಗತ್ಯ ಎಂದು ಪರಿಷತ್ತಿನ ಅಧ್ಯಕ್ಷ ಡಾ.ಸಿ.ವೀರಣ್ಣ ಹೇಳಿದರು. ಕಾರ್ಯದರ್ಶಿ ಟಿ.ಗೋವಿಂದರಾಜು, ಪ್ರೊ. ಸಂಪಿಗೆ ತೋಂಟದಾರ್ಯ, ಗುಬ್ಬಿ ರೇವಣಾರಾಧ್ಯ ನರಸಿಂಹಮೂರ್ತಿ, ಡಾ. ಟಿ.ಜಿ.ಪ್ರಭಾಶಂಕರ ವಿಚಾರಗಳನ್ನು ಮಂಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>