<p>ಹೂವಿನಹಡಗಲಿ: ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ತಾಲ್ಲೂಕಿನ ರೈತರು ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದ್ದು ಮುನಿದ ಮಳೆರಾಯನ ಒಲುಮೆಗಾಗಿ ಅನೇಕ ಧಾರ್ಮಿಕ ಆಚರಣೆಗಳನ್ನು ಮಾಡುತ್ತಾ ದೈವದ ಮೊರೆ ಹೋಗಿದ್ದಾರೆ.<br /> <br /> ತಾಲ್ಲೂಕಿನ ಹೊಳಗುಂದಿ ಗ್ರಾಮ ದಲ್ಲಿ ಕಪ್ಪೆಗಳಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಿ ಪ್ರಾರ್ಥನೆ ಮಾಡಿ ಮಳೆಗಾಗಿ ಕಾಯುತ್ತಿದ್ದಾರೆ.<br /> <br /> ಮಂಡೂಕ ಮದುವೆ ಸಮಾರಂಭ ದಲ್ಲಿ ಹೊಳಗುಂದಿ ಗ್ರಾಮದ ಸಿದ್ದೆೀಶ್ವರ ದೇವಸ್ಥಾನದಲ್ಲಿ ಗ್ರಾಮದ ಜನರು ಸೇರಿ ವಿವಾಹ ಮಹೋತ್ಸವ ಆಚರಿಸಿದರು.<br /> <br /> ದೇವಸ್ಥಾನ ಮುಂಭಾಗದಲ್ಲಿ ಹಂದರ ಹಾಕಿ, ರಂಗವಲ್ಲಿ ಬಿಡಿಸಿ ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. <br /> ಗಂಡು-ಹೆಣ್ಣು ಕಪ್ಪೆಗಳನ್ನು ತಂದು ಮಳೆರಾಯ ಮತ್ತು ವಟುಗುಟ್ಟಮ್ಮ ಎಂದು ವಧು-ವರರಿಗೆ ಹೆಸರಿಡ ಲಾಯಿತು. ಶಾಸ್ತ್ರೋಕ್ತ ಮದುವೆ ಕಾರ್ಯದಲ್ಲಿ ಮಹಿಳೆಯರು ಪೂರ್ಣ ಕುಂಭ ಕಳಸದೊಂದಿಗೆ ತೆರಳಿ ಪವಿತ್ರ ಗಂಗಾಪೂಜೆ ನೆರವೇರಿಸಿ ಕಪ್ಪೆಗಳ ಮದುವೆ ಮಾಡಲಾಯಿತು.<br /> <br /> ಮುಹೂರ್ತಕ್ಕೂ ಮುನ್ನ ಅಗಸೆ ಬಾಗಿಲುವರೆಗೂ ವಾದ್ಯಗಳೊಂದಿಗೆ ಮೆರವಣಿಗೆ ಜರುಗಿತು. ಪರಸ್ಪರರಿಗೆ ಅರಿಷಿಣ ಹಚ್ಚಿ, ಕಪ್ಪೆಗಳಿಗೆ ಸುರಿಗಿ ನೀರೆರೆಯಲಾಯಿತು.<br /> <br /> ಹೊಸಬಟ್ಟೆ ಮತ್ತು ಬಾಸಿಂಗ ತೊಡಿಸಿ ಎಚ್.ಎಂ. ಮಲ್ಲಿಕಾರ್ಜು ನಯ್ಯ, ಯು. ಎಂ.ಮಹಾಸ್ವಾಮಿ ಪೌರೋಹಿತ್ಯದಲ್ಲಿ ಕಪ್ಪೆಗಳಿಗೆ ಮಾಂಗಲ್ಯಧಾರಣೆ ಮಾಡಲಾಯಿತು.<br /> <br /> ಅಲಂಕೃತ ಕಪ್ಪೆಗಳನ್ನು ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸ ಲಾಯಿತು. ವಿಘ್ನೇಶ್ವರ ಯುವಕ ಸಂಘದ ಅಧ್ಯಕ್ಷ ಕೊಟ್ರೇಶ, ಕಾರ್ಯದರ್ಶಿ ಎಚ್. ಕರಿಬಸಪ್ಪ, ಬಿ.ವೀರಪ್ಪ ಹಾಗೂ ಸಂಘದ ಸದಸ್ಯರು, ಗ್ರಾಮಸ್ಥರು, ಮಹಿಳೆಯರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೂವಿನಹಡಗಲಿ: ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ತಾಲ್ಲೂಕಿನ ರೈತರು ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದ್ದು ಮುನಿದ ಮಳೆರಾಯನ ಒಲುಮೆಗಾಗಿ ಅನೇಕ ಧಾರ್ಮಿಕ ಆಚರಣೆಗಳನ್ನು ಮಾಡುತ್ತಾ ದೈವದ ಮೊರೆ ಹೋಗಿದ್ದಾರೆ.<br /> <br /> ತಾಲ್ಲೂಕಿನ ಹೊಳಗುಂದಿ ಗ್ರಾಮ ದಲ್ಲಿ ಕಪ್ಪೆಗಳಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಿ ಪ್ರಾರ್ಥನೆ ಮಾಡಿ ಮಳೆಗಾಗಿ ಕಾಯುತ್ತಿದ್ದಾರೆ.<br /> <br /> ಮಂಡೂಕ ಮದುವೆ ಸಮಾರಂಭ ದಲ್ಲಿ ಹೊಳಗುಂದಿ ಗ್ರಾಮದ ಸಿದ್ದೆೀಶ್ವರ ದೇವಸ್ಥಾನದಲ್ಲಿ ಗ್ರಾಮದ ಜನರು ಸೇರಿ ವಿವಾಹ ಮಹೋತ್ಸವ ಆಚರಿಸಿದರು.<br /> <br /> ದೇವಸ್ಥಾನ ಮುಂಭಾಗದಲ್ಲಿ ಹಂದರ ಹಾಕಿ, ರಂಗವಲ್ಲಿ ಬಿಡಿಸಿ ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. <br /> ಗಂಡು-ಹೆಣ್ಣು ಕಪ್ಪೆಗಳನ್ನು ತಂದು ಮಳೆರಾಯ ಮತ್ತು ವಟುಗುಟ್ಟಮ್ಮ ಎಂದು ವಧು-ವರರಿಗೆ ಹೆಸರಿಡ ಲಾಯಿತು. ಶಾಸ್ತ್ರೋಕ್ತ ಮದುವೆ ಕಾರ್ಯದಲ್ಲಿ ಮಹಿಳೆಯರು ಪೂರ್ಣ ಕುಂಭ ಕಳಸದೊಂದಿಗೆ ತೆರಳಿ ಪವಿತ್ರ ಗಂಗಾಪೂಜೆ ನೆರವೇರಿಸಿ ಕಪ್ಪೆಗಳ ಮದುವೆ ಮಾಡಲಾಯಿತು.<br /> <br /> ಮುಹೂರ್ತಕ್ಕೂ ಮುನ್ನ ಅಗಸೆ ಬಾಗಿಲುವರೆಗೂ ವಾದ್ಯಗಳೊಂದಿಗೆ ಮೆರವಣಿಗೆ ಜರುಗಿತು. ಪರಸ್ಪರರಿಗೆ ಅರಿಷಿಣ ಹಚ್ಚಿ, ಕಪ್ಪೆಗಳಿಗೆ ಸುರಿಗಿ ನೀರೆರೆಯಲಾಯಿತು.<br /> <br /> ಹೊಸಬಟ್ಟೆ ಮತ್ತು ಬಾಸಿಂಗ ತೊಡಿಸಿ ಎಚ್.ಎಂ. ಮಲ್ಲಿಕಾರ್ಜು ನಯ್ಯ, ಯು. ಎಂ.ಮಹಾಸ್ವಾಮಿ ಪೌರೋಹಿತ್ಯದಲ್ಲಿ ಕಪ್ಪೆಗಳಿಗೆ ಮಾಂಗಲ್ಯಧಾರಣೆ ಮಾಡಲಾಯಿತು.<br /> <br /> ಅಲಂಕೃತ ಕಪ್ಪೆಗಳನ್ನು ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸ ಲಾಯಿತು. ವಿಘ್ನೇಶ್ವರ ಯುವಕ ಸಂಘದ ಅಧ್ಯಕ್ಷ ಕೊಟ್ರೇಶ, ಕಾರ್ಯದರ್ಶಿ ಎಚ್. ಕರಿಬಸಪ್ಪ, ಬಿ.ವೀರಪ್ಪ ಹಾಗೂ ಸಂಘದ ಸದಸ್ಯರು, ಗ್ರಾಮಸ್ಥರು, ಮಹಿಳೆಯರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>