<p><span style="font-size: 26px;"><strong>ಬೀದರ್:</strong> ಸತತ ನಾಲ್ಕು-ಐದು ದಿನ ಬಿದ್ದ ಮಳೆ ಜನ ಜೀವನವನ್ನು ಹೈರಾಣಾಗಿಸಿದೆ. ಮೋಡಗಳು ಚದುರಿ ಮಳೆ ಸ್ವಲ್ಪಮಟ್ಟಿಗೆ ಬಿಡುವು ನೀಡುವ ಮೂಲಕ ನಾಗರಿಕರಲ್ಲಿ ನಿರಾಳ ಭಾವನೆ ಮೂಡಿದರೂ ಇನ್ನೊಂದೆಡೆ ಮಳೆಯ ಪರಿಣಾಮ ಜನರನ್ನು ಬಾಧಿಸಲಿದೆ.</span><br /> <br /> ಅದು ನಗರದ ಅವ್ಯವಸ್ಥೆ. ನಿರಂತರ ಮಳೆ, ಗುಣಮಟ್ಟವಲ್ಲದ ಕಾಮಗಾರಿಯಿಂದಾಗಿ ನಗರದ ರಸ್ತೆಗಳಲ್ಲಿ ಗುಂಡಿಗಳು ಮೂಡಿವೆ. ಈ ಮೊದಲು ಸಣ್ಣ ಪ್ರಮಾಣದಲ್ಲಿ ಇದ್ದ ಗುಂಡಿಗಳು, ಮಳೆ ಮತ್ತು ವಾಹನಗಳ ಸಂಚಾರದ ಒತ್ತಡ ಪರಿಣಾಮ ವಿಸ್ತಾರವಾಗಿವೆ. ಪರಿಣಾಮ, ಈ ರಸ್ತೆಗಳು ಬರುವ ದಿನಗಳಲ್ಲಿ ಇನ್ನಷ್ಟು ಅವ್ಯವಸ್ಥಿತವಾಗುವ ಪರಿಸ್ಥಿತಿಯಲ್ಲಿದೆ.<br /> <br /> ನಗರದ ಮುಖ್ಯ ಸಂಪರ್ಕ ರಸ್ತೆಯಾಗಿರುವ ಉದಗೀರ್ ರಸ್ತೆ, ರೋಟರಿ ವೃತ್ತದ ಬಳಿಯ ಬ್ಯಾಕ್ವರ್ಡ್ ಹಾಸ್ಟೆಲ್ ಸಮೀಪ, ಗುಂಪಾ ರಸ್ತೆ, ಅಂಬೇಡ್ಕರ ವೃತ್ತ, ಜನವಾಡಾ ರಸ್ತೆ ಹೀಗೆ ಎಲ್ಲ ರಸ್ತೆಗಳಲ್ಲಿ ಕಂಡುಬರುವ ಸಾಮಾನ್ಯ ಚಿತ್ರಣ.<br /> <br /> ಸತತ ನಾಲ್ಕೈದು ದಿನಗಳ ಮಳೆಯಿಂದಾಗಿ, ಈ ಹಿಂದೆಯೇ ಒಳ ಚರಂಡಿ ಮತ್ತು ಕುಡಿಯುವ ನೀರು ಸೌಲಭ್ಯ ಕಲ್ಪಿಸುವ ಕಾಮಗಾರಿ ಸಲುವಾಗಿ ಅಗೆಯಲಾಗಿದ್ದ ರಸ್ತೆಗಳ ಕಾಮಗಾರಿ ಕೂಡಾ ವಿಳಂಬವಾಗಿರುವ ಕಾರಣ ವಾಹನಗಳ ಸಂಚಾರ ವ್ಯವಸ್ಥೆ ಇನ್ನಷ್ಟು ಹದಗೆಟ್ಟಿದೆ.<br /> <br /> ಈ ಎಲ್ಲ ರಸ್ತೆಗಳು ಕೇವಲ ಮೂರು ವರ್ಷಗಳ ವಿಸ್ತರಣೆ ಪ್ರಕ್ರಿಯೆ ನಡೆದಾಗನಿರ್ಮಾಣವಾದ ರಸ್ತೆಗಳು. ಅಲ್ಪಾವಧಿಯಲ್ಲೇ ಈ ಸ್ಥಿತಿಗೆ ಬಂದಿವೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಜಿ.ಶೆಟಗಾರ್ ಅವರು ಟೀಕಿಸುತ್ತಾರೆ.<br /> <br /> ಈ ಗುಂಡಿಗಳನ್ನು ಈಗಲೇ ಸರಿಪಡಿಸಲು ಒತ್ತು ನೀಡದಿದ್ದರೆ ವಾಹನಗಳು ದುಃಸ್ಥಿತಿಗೆ ಬರುತ್ತವೆ. <br /> ಈ ಬಗೆಗೆ ಈಗಾಗಲೇ ಜಿಲ್ಲಾಧಿಕಾರಿಗಳು, ನಗರಸಭೆ ಆಯುಕ್ತರ ಗಮನಕ್ಕೂ ತರಲಾಗಿದೆ. ಆದಷ್ಟು ಶೀಘ್ರ ತಾತ್ಕಾಲಿಕ ದುರಸ್ತಿಯನ್ನಾದರೂ ಮಾಡಬೇಕು<br /> ಎಂಬುದು ನಮ್ಮ ಆಗ್ರಹ.<br /> <br /> ಇಂಥ ಸಮಸ್ಯೆಗಳು ಪ್ರತಿಭಟನೆ ಮಾಡದೇ ಬಗೆಹರಿಯುವುದು ಸಾಧ್ಯವಿಲ್ಲ. ಜನಪ್ರತಿನಿಧಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರಕ್ಕೆ ಮುಂದಾಗಬೇಕು. ಆದರೆ, ಅವರು ಗಮನಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.<br /> <br /> ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ, ವ್ಯಾಪಾರಿ ಸಮುದಾಯದ ಪರವಾಗಿ ಈಗಾಗಲೇ ಮನವಿ ಸಲ್ಲಿಸಲಾಗಿದೆ. ವಾರದಲ್ಲಿ ಕ್ರಮ ಕೈಗೊಳ್ಳದೇ ಇದ್ದರೆ ಪ್ರತಿಭಟನೆಯ ಸಾಧ್ಯತೆಗಳ ಬಗೆಗೂ ಚಿಂತನೆ ನಡೆಸಲಾಗುವುದು ಎಂದು ಪ್ರತಿಕ್ರಿಯಿಸಿದರು. ನಗರಸಭೆ ಆಯುಕ್ತ ರಾಮದಾಸ್ ಈ ಕುರಿತ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ಬೀದರ್:</strong> ಸತತ ನಾಲ್ಕು-ಐದು ದಿನ ಬಿದ್ದ ಮಳೆ ಜನ ಜೀವನವನ್ನು ಹೈರಾಣಾಗಿಸಿದೆ. ಮೋಡಗಳು ಚದುರಿ ಮಳೆ ಸ್ವಲ್ಪಮಟ್ಟಿಗೆ ಬಿಡುವು ನೀಡುವ ಮೂಲಕ ನಾಗರಿಕರಲ್ಲಿ ನಿರಾಳ ಭಾವನೆ ಮೂಡಿದರೂ ಇನ್ನೊಂದೆಡೆ ಮಳೆಯ ಪರಿಣಾಮ ಜನರನ್ನು ಬಾಧಿಸಲಿದೆ.</span><br /> <br /> ಅದು ನಗರದ ಅವ್ಯವಸ್ಥೆ. ನಿರಂತರ ಮಳೆ, ಗುಣಮಟ್ಟವಲ್ಲದ ಕಾಮಗಾರಿಯಿಂದಾಗಿ ನಗರದ ರಸ್ತೆಗಳಲ್ಲಿ ಗುಂಡಿಗಳು ಮೂಡಿವೆ. ಈ ಮೊದಲು ಸಣ್ಣ ಪ್ರಮಾಣದಲ್ಲಿ ಇದ್ದ ಗುಂಡಿಗಳು, ಮಳೆ ಮತ್ತು ವಾಹನಗಳ ಸಂಚಾರದ ಒತ್ತಡ ಪರಿಣಾಮ ವಿಸ್ತಾರವಾಗಿವೆ. ಪರಿಣಾಮ, ಈ ರಸ್ತೆಗಳು ಬರುವ ದಿನಗಳಲ್ಲಿ ಇನ್ನಷ್ಟು ಅವ್ಯವಸ್ಥಿತವಾಗುವ ಪರಿಸ್ಥಿತಿಯಲ್ಲಿದೆ.<br /> <br /> ನಗರದ ಮುಖ್ಯ ಸಂಪರ್ಕ ರಸ್ತೆಯಾಗಿರುವ ಉದಗೀರ್ ರಸ್ತೆ, ರೋಟರಿ ವೃತ್ತದ ಬಳಿಯ ಬ್ಯಾಕ್ವರ್ಡ್ ಹಾಸ್ಟೆಲ್ ಸಮೀಪ, ಗುಂಪಾ ರಸ್ತೆ, ಅಂಬೇಡ್ಕರ ವೃತ್ತ, ಜನವಾಡಾ ರಸ್ತೆ ಹೀಗೆ ಎಲ್ಲ ರಸ್ತೆಗಳಲ್ಲಿ ಕಂಡುಬರುವ ಸಾಮಾನ್ಯ ಚಿತ್ರಣ.<br /> <br /> ಸತತ ನಾಲ್ಕೈದು ದಿನಗಳ ಮಳೆಯಿಂದಾಗಿ, ಈ ಹಿಂದೆಯೇ ಒಳ ಚರಂಡಿ ಮತ್ತು ಕುಡಿಯುವ ನೀರು ಸೌಲಭ್ಯ ಕಲ್ಪಿಸುವ ಕಾಮಗಾರಿ ಸಲುವಾಗಿ ಅಗೆಯಲಾಗಿದ್ದ ರಸ್ತೆಗಳ ಕಾಮಗಾರಿ ಕೂಡಾ ವಿಳಂಬವಾಗಿರುವ ಕಾರಣ ವಾಹನಗಳ ಸಂಚಾರ ವ್ಯವಸ್ಥೆ ಇನ್ನಷ್ಟು ಹದಗೆಟ್ಟಿದೆ.<br /> <br /> ಈ ಎಲ್ಲ ರಸ್ತೆಗಳು ಕೇವಲ ಮೂರು ವರ್ಷಗಳ ವಿಸ್ತರಣೆ ಪ್ರಕ್ರಿಯೆ ನಡೆದಾಗನಿರ್ಮಾಣವಾದ ರಸ್ತೆಗಳು. ಅಲ್ಪಾವಧಿಯಲ್ಲೇ ಈ ಸ್ಥಿತಿಗೆ ಬಂದಿವೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಜಿ.ಶೆಟಗಾರ್ ಅವರು ಟೀಕಿಸುತ್ತಾರೆ.<br /> <br /> ಈ ಗುಂಡಿಗಳನ್ನು ಈಗಲೇ ಸರಿಪಡಿಸಲು ಒತ್ತು ನೀಡದಿದ್ದರೆ ವಾಹನಗಳು ದುಃಸ್ಥಿತಿಗೆ ಬರುತ್ತವೆ. <br /> ಈ ಬಗೆಗೆ ಈಗಾಗಲೇ ಜಿಲ್ಲಾಧಿಕಾರಿಗಳು, ನಗರಸಭೆ ಆಯುಕ್ತರ ಗಮನಕ್ಕೂ ತರಲಾಗಿದೆ. ಆದಷ್ಟು ಶೀಘ್ರ ತಾತ್ಕಾಲಿಕ ದುರಸ್ತಿಯನ್ನಾದರೂ ಮಾಡಬೇಕು<br /> ಎಂಬುದು ನಮ್ಮ ಆಗ್ರಹ.<br /> <br /> ಇಂಥ ಸಮಸ್ಯೆಗಳು ಪ್ರತಿಭಟನೆ ಮಾಡದೇ ಬಗೆಹರಿಯುವುದು ಸಾಧ್ಯವಿಲ್ಲ. ಜನಪ್ರತಿನಿಧಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರಕ್ಕೆ ಮುಂದಾಗಬೇಕು. ಆದರೆ, ಅವರು ಗಮನಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.<br /> <br /> ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ, ವ್ಯಾಪಾರಿ ಸಮುದಾಯದ ಪರವಾಗಿ ಈಗಾಗಲೇ ಮನವಿ ಸಲ್ಲಿಸಲಾಗಿದೆ. ವಾರದಲ್ಲಿ ಕ್ರಮ ಕೈಗೊಳ್ಳದೇ ಇದ್ದರೆ ಪ್ರತಿಭಟನೆಯ ಸಾಧ್ಯತೆಗಳ ಬಗೆಗೂ ಚಿಂತನೆ ನಡೆಸಲಾಗುವುದು ಎಂದು ಪ್ರತಿಕ್ರಿಯಿಸಿದರು. ನಗರಸಭೆ ಆಯುಕ್ತ ರಾಮದಾಸ್ ಈ ಕುರಿತ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>