<p><strong>ಧಾರವಾಡ:</strong>ಪದ್ಮಭೂಷಣ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಕೃಷಿ ವಿ.ವಿ. ವಿಶ್ರಾಂತ ಕುಲಪತಿ ಡಾ.ಎಂ.ಮಹದೇವಪ್ಪ ಅವರನ್ನು ಕೃಷಿ ವಿ.ವಿ. ಆವರಣದಲ್ಲಿ ಬುಧವಾರ ಸನ್ಮಾನಿಸಲಾಯಿತು.<br /> <br /> ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗಳನ್ನು ಪಡೆದ ಏಕೈಕ ಕೃಷಿ ವಿಜ್ಞಾನಿ ಹಾಗೂ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದ ಡಾ.ಮಹದೇವಪ್ಪನವರನ್ನು ಕೃಷಿ ವಿಶ್ವವಿದ್ಯಾಲಯದ ಶಿಕ್ಷಕ, ಶಿಕ್ಷಕೇತರ, ವಿದ್ಯಾರ್ಥಿ ಹಾಗೂ ಕಾರ್ಮಿಕ ಸಂಘಟನೆಗಳ ಪರವಾಗಿ ಕಪ್ಪತಗುಡ್ಡದ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗೌರವಿಸಲಾಯಿತು.<br /> <br /> ಸನ್ಮಾನ ಸ್ವೀಕರಿಸಿದ ಡಾ.ಮಹದೇವಪ್ಪ, ‘ಧಾರವಾಡ ಕೃಷಿ ವಿ.ವಿ. ನನಗೆ ತಾಯಿ ಮನೆ ಇದ್ದ ಹಾಗೆ. ಇಲ್ಲಿ ಕುಲಪತಿಯಾಗಿ ಮಾಡಿದ ಸಾಧನೆ ಸಿಬ್ಬಂದಿ ಮತ್ತು ಜನತೆಯ ಪ್ರೀತಿ ನನ್ನನ್ನು ವಿನಮ್ರನನ್ನಾಗಿಸಿದೆ. ಈ ಪ್ರಶಸ್ತಿಯ ಗೌರವ ನನ್ನನ್ನು ರಾಷ್ಟ್ರಮಟ್ಟಕ್ಕೇರಲು ಸಹಾಯ ಮಾಡಿದ ಒಂದು ಕಟುಂಬದಂತಿರುವ ಕೃಷಿ ವಿ.ವಿ. ಎಲ್ಲರಿಗೂ ಸೇರಬೇಕಾದದ್ದು’ ಎಂದರು.<br /> <br /> ಕುಲಪತಿ ಡಾ.ಡಿ.ಪಿ.ಬಿರಾದಾರ ಮಾತನಾಡಿ, ‘ಡಾ.ಮಹದೇವಪ್ಪನವರು ತಮ್ಮ ಆಡಳಿತಾವಧಿಯಲ್ಲಿ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟು, ರಾಷ್ಟ್ರಮಟ್ಟದಲ್ಲಿ ವಿಶ್ವವಿದ್ಯಾಲಯದ ಹೆಸರು ಎದ್ದು ಕಾಣುವಂತೆ ಮಾಡಿದ್ದಾರೆ. ಅವರ ಮುಂದಾಲೋಚನೆ ಮತ್ತು ದಕ್ಷ ಆಡಳಿತದಿಂದಾಗಿ ಅವರು ಎರಡು ಅವಧಿಗಳಿಗೆ ಕುಲಪತಿಗಳಾಗಲು ಸಾಧ್ಯವಾಯಿತು’ ಎಂದರು.<br /> <br /> ವಿ.ವಿ. ಕುಲಸಚಿವ ಡಾ.ಎಚ್.ಎಸ್.ವಿಜಯಕುಮಾರ ಸ್ವಾಗತಿಸಿದರು. ಶಿಕ್ಷಕ ಸಂಘದ ಅಧ್ಯಕ್ಷ ಡಾ.ಎನ್.ಆರ್.ಮಾಮಲೆ ದೇಸಾಯಿ ಅಭಿನಂದನಾ ನುಡಿಗಳನ್ನು ವಾಚಿಸಿದರು. ಶಿಕ್ಷಕೇತರ ಸಂಘದ ಪ್ರತಿನಿಧಿ ಸವರ್ಣಾ ಪಾಟೀಲ ವಂದಿಸಿದರು. ಡಾ.ಹಲಗಲಿಮಠ ಕಾರ್ಯಕ್ರಮ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ:</strong>ಪದ್ಮಭೂಷಣ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಕೃಷಿ ವಿ.ವಿ. ವಿಶ್ರಾಂತ ಕುಲಪತಿ ಡಾ.ಎಂ.ಮಹದೇವಪ್ಪ ಅವರನ್ನು ಕೃಷಿ ವಿ.ವಿ. ಆವರಣದಲ್ಲಿ ಬುಧವಾರ ಸನ್ಮಾನಿಸಲಾಯಿತು.<br /> <br /> ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗಳನ್ನು ಪಡೆದ ಏಕೈಕ ಕೃಷಿ ವಿಜ್ಞಾನಿ ಹಾಗೂ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದ ಡಾ.ಮಹದೇವಪ್ಪನವರನ್ನು ಕೃಷಿ ವಿಶ್ವವಿದ್ಯಾಲಯದ ಶಿಕ್ಷಕ, ಶಿಕ್ಷಕೇತರ, ವಿದ್ಯಾರ್ಥಿ ಹಾಗೂ ಕಾರ್ಮಿಕ ಸಂಘಟನೆಗಳ ಪರವಾಗಿ ಕಪ್ಪತಗುಡ್ಡದ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗೌರವಿಸಲಾಯಿತು.<br /> <br /> ಸನ್ಮಾನ ಸ್ವೀಕರಿಸಿದ ಡಾ.ಮಹದೇವಪ್ಪ, ‘ಧಾರವಾಡ ಕೃಷಿ ವಿ.ವಿ. ನನಗೆ ತಾಯಿ ಮನೆ ಇದ್ದ ಹಾಗೆ. ಇಲ್ಲಿ ಕುಲಪತಿಯಾಗಿ ಮಾಡಿದ ಸಾಧನೆ ಸಿಬ್ಬಂದಿ ಮತ್ತು ಜನತೆಯ ಪ್ರೀತಿ ನನ್ನನ್ನು ವಿನಮ್ರನನ್ನಾಗಿಸಿದೆ. ಈ ಪ್ರಶಸ್ತಿಯ ಗೌರವ ನನ್ನನ್ನು ರಾಷ್ಟ್ರಮಟ್ಟಕ್ಕೇರಲು ಸಹಾಯ ಮಾಡಿದ ಒಂದು ಕಟುಂಬದಂತಿರುವ ಕೃಷಿ ವಿ.ವಿ. ಎಲ್ಲರಿಗೂ ಸೇರಬೇಕಾದದ್ದು’ ಎಂದರು.<br /> <br /> ಕುಲಪತಿ ಡಾ.ಡಿ.ಪಿ.ಬಿರಾದಾರ ಮಾತನಾಡಿ, ‘ಡಾ.ಮಹದೇವಪ್ಪನವರು ತಮ್ಮ ಆಡಳಿತಾವಧಿಯಲ್ಲಿ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟು, ರಾಷ್ಟ್ರಮಟ್ಟದಲ್ಲಿ ವಿಶ್ವವಿದ್ಯಾಲಯದ ಹೆಸರು ಎದ್ದು ಕಾಣುವಂತೆ ಮಾಡಿದ್ದಾರೆ. ಅವರ ಮುಂದಾಲೋಚನೆ ಮತ್ತು ದಕ್ಷ ಆಡಳಿತದಿಂದಾಗಿ ಅವರು ಎರಡು ಅವಧಿಗಳಿಗೆ ಕುಲಪತಿಗಳಾಗಲು ಸಾಧ್ಯವಾಯಿತು’ ಎಂದರು.<br /> <br /> ವಿ.ವಿ. ಕುಲಸಚಿವ ಡಾ.ಎಚ್.ಎಸ್.ವಿಜಯಕುಮಾರ ಸ್ವಾಗತಿಸಿದರು. ಶಿಕ್ಷಕ ಸಂಘದ ಅಧ್ಯಕ್ಷ ಡಾ.ಎನ್.ಆರ್.ಮಾಮಲೆ ದೇಸಾಯಿ ಅಭಿನಂದನಾ ನುಡಿಗಳನ್ನು ವಾಚಿಸಿದರು. ಶಿಕ್ಷಕೇತರ ಸಂಘದ ಪ್ರತಿನಿಧಿ ಸವರ್ಣಾ ಪಾಟೀಲ ವಂದಿಸಿದರು. ಡಾ.ಹಲಗಲಿಮಠ ಕಾರ್ಯಕ್ರಮ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>