<p>ಮೈಸೂರು: ಶಿವನ ಪೂಜೆ ಮಾಡು ಮನವೇ.. ಶಿವ ಶಿವ ಎನ್ನಿರೋ.. ಎನಗೆ ಭೋಗ ಭಾಗ್ಯ ಬೇಡ, ನೀವು ಕಾಣಿರಾ- ನೀವು ಕಾಣಿರಾ ಸೇರಿದಂತೆ ಇತ್ಯಾದಿ ಗೀತೆಗಳು ಭಾನುವಾರ ಮಹಾರಾಣಿ ವಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ ರಿಂಗಣಿಸಿದವು.<br /> <br /> ವಿದುಷಿ ಸುಕನ್ಯಾ ಪ್ರಭಾಕರ್ ಅವರ ಕಂಠಸಿರಿಗೆ ನೆರೆದಿದ್ದ 100ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ದನಿಗೂಡಿಸಿದರು. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ವಿದ್ಯಾರ್ಥಿನಿಯರ ಹಾಗೂ ಸಂಗೀತ ವಿದುಷಿ ಅವರ ಜುಗಲ್ಬಂದಿ ನೆರೆದವರನ್ನು ಮೂಕ ವಿಸ್ಮಿತರನ್ನಾಗಿಸಿತು.<br /> <br /> ಮಹಾರಾಣಿ ಕಾಲೇಜಿನ ಲಲಿತ ಕಲಾ ಸಂಘ ಆಯೋಜಿಸಿದ್ದ ಎರಡು ದಿನಗಳ ಕಲಾ ರಸಗ್ರಹಣ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮವದು. ಭಾನುವಾರ ಬೆಳಿಗ್ಗೆ 10 ಗಂಟೆಯಿಂದಲೇ ವಿದುಷಿ ಸುಕನ್ಯಾ ಪ್ರಭಾಕರ್ ಅವರ ಶಿಷ್ಯ ವೃಂದದವರು ನಿರಂತರ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ವಾದ್ಯ ರಹಿತ ಈ ಕಾರ್ಯಕ್ರಮ ಸಂಜೆ ನಡೆಯುವ ಸಂಗೀತ ಕಾರ್ಯಕ್ರಮಕ್ಕೆ ಪೂರ್ವಭಾವಿ ತಯಾರಿಯಂತೆ ನಡೆಯಿತು. ಮಧ್ಯಾಹ್ನ 3.30ಕ್ಕೆ ಆರಂಭವಾದ ಕಲಾರಸಗ್ರಹಣ ಸಂಗೀತದಲ್ಲಿ ತಾಳ-ವಾದ್ಯ ಬಳಗ ಜೊತೆ ನೀಡಿತು.<br /> <br /> ದಾಸರ ಪದ, ವಚನಗಳನ್ನು ಒಂದು ಗಂಟೆ ಕಾಲ ಹಾಡಲಾಯಿತು. ಪ್ರತಿ ಹಾಡಿಗೂ ಮುನ್ನ ವಿದುಷಿ ಸುಕನ್ಯಾ ಪ್ರಭಾಕರ್ ಸಾಹಿತ್ಯ, ಸಂಗೀತದ ಕಿರು ಪರಿಚಯ ಮಾಡಿಕೊಟ್ಟರು. ವಿದ್ಯಾರ್ಥಿನಿಯರು ತಾಳ್ಮೆಯಿಂದ ಅವರ ಆಲಿಸಿದರು. ಹಾಡಿ ಧಾಟಿಯ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಸಂವಾದದ ರೀತಿಯಲ್ಲಿ ನಡೆದ ಈ ಸಂಗೀತ ಕಾರ್ಯಕ್ರಮ ವಿದ್ಯಾರ್ಥಿನಿಯರಿಗೆ ಸಂಗೀತದ ಹಲವು ಆಯಾಮಗಳನ್ನು ಪರಿಚಯ ಮಾಡಿಕೊಟ್ಟಿತು.<br /> <br /> ಎರಡು ದಿನಗಳ ಕಾರ್ಯಾಗಾರದಲ್ಲಿ ನಂಜನಗೂಡು, ತಿ.ನರಸೀಪುರ, ಮೈಸೂರು ಸೇರಿದಂತೆ ವಿವಿಧ ಕಾಲೇಜುಗಳ 100 ವಿದ್ಯಾರ್ಥಿನಿಯರು, ಶಿಕ್ಷಕರು ಹಾಗೂ ಸಂಗೀತ ಆಸಕ್ತರು ಪಾಲ್ಗೊಂಡರು. ವಿದ್ವಾನ್ ಜಿ.ಎಸ್.ರಾಮಾನುಜನ್, ವಿ.ರಾಥೇಶ್, ವಿ.ರಮೇಶ್, ವಿ.ಅರ್ಜುನ್ ಅವರ ಸಹಕಾರದಲ್ಲಿ ಸಂಗೀತ ಸಂಜೆ ಸಮಾರೋಪಗೊಂಡಿತು.<br /> <br /> ಪ್ರಾಂಶುಪಾಲ ಎಚ್.ಬಿ.ಮಲ್ಲಿಕಾರ್ಜುನ, ಡಾ.ಡಿ. ಶೀಲಾಕುಮಾರಿ, ಟಿ.ಎಸ್.ವೇಣು ಗೋಪಾಲ್ ಮತ್ತಿತರರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ಶಿವನ ಪೂಜೆ ಮಾಡು ಮನವೇ.. ಶಿವ ಶಿವ ಎನ್ನಿರೋ.. ಎನಗೆ ಭೋಗ ಭಾಗ್ಯ ಬೇಡ, ನೀವು ಕಾಣಿರಾ- ನೀವು ಕಾಣಿರಾ ಸೇರಿದಂತೆ ಇತ್ಯಾದಿ ಗೀತೆಗಳು ಭಾನುವಾರ ಮಹಾರಾಣಿ ವಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ ರಿಂಗಣಿಸಿದವು.<br /> <br /> ವಿದುಷಿ ಸುಕನ್ಯಾ ಪ್ರಭಾಕರ್ ಅವರ ಕಂಠಸಿರಿಗೆ ನೆರೆದಿದ್ದ 100ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ದನಿಗೂಡಿಸಿದರು. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ವಿದ್ಯಾರ್ಥಿನಿಯರ ಹಾಗೂ ಸಂಗೀತ ವಿದುಷಿ ಅವರ ಜುಗಲ್ಬಂದಿ ನೆರೆದವರನ್ನು ಮೂಕ ವಿಸ್ಮಿತರನ್ನಾಗಿಸಿತು.<br /> <br /> ಮಹಾರಾಣಿ ಕಾಲೇಜಿನ ಲಲಿತ ಕಲಾ ಸಂಘ ಆಯೋಜಿಸಿದ್ದ ಎರಡು ದಿನಗಳ ಕಲಾ ರಸಗ್ರಹಣ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮವದು. ಭಾನುವಾರ ಬೆಳಿಗ್ಗೆ 10 ಗಂಟೆಯಿಂದಲೇ ವಿದುಷಿ ಸುಕನ್ಯಾ ಪ್ರಭಾಕರ್ ಅವರ ಶಿಷ್ಯ ವೃಂದದವರು ನಿರಂತರ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ವಾದ್ಯ ರಹಿತ ಈ ಕಾರ್ಯಕ್ರಮ ಸಂಜೆ ನಡೆಯುವ ಸಂಗೀತ ಕಾರ್ಯಕ್ರಮಕ್ಕೆ ಪೂರ್ವಭಾವಿ ತಯಾರಿಯಂತೆ ನಡೆಯಿತು. ಮಧ್ಯಾಹ್ನ 3.30ಕ್ಕೆ ಆರಂಭವಾದ ಕಲಾರಸಗ್ರಹಣ ಸಂಗೀತದಲ್ಲಿ ತಾಳ-ವಾದ್ಯ ಬಳಗ ಜೊತೆ ನೀಡಿತು.<br /> <br /> ದಾಸರ ಪದ, ವಚನಗಳನ್ನು ಒಂದು ಗಂಟೆ ಕಾಲ ಹಾಡಲಾಯಿತು. ಪ್ರತಿ ಹಾಡಿಗೂ ಮುನ್ನ ವಿದುಷಿ ಸುಕನ್ಯಾ ಪ್ರಭಾಕರ್ ಸಾಹಿತ್ಯ, ಸಂಗೀತದ ಕಿರು ಪರಿಚಯ ಮಾಡಿಕೊಟ್ಟರು. ವಿದ್ಯಾರ್ಥಿನಿಯರು ತಾಳ್ಮೆಯಿಂದ ಅವರ ಆಲಿಸಿದರು. ಹಾಡಿ ಧಾಟಿಯ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಸಂವಾದದ ರೀತಿಯಲ್ಲಿ ನಡೆದ ಈ ಸಂಗೀತ ಕಾರ್ಯಕ್ರಮ ವಿದ್ಯಾರ್ಥಿನಿಯರಿಗೆ ಸಂಗೀತದ ಹಲವು ಆಯಾಮಗಳನ್ನು ಪರಿಚಯ ಮಾಡಿಕೊಟ್ಟಿತು.<br /> <br /> ಎರಡು ದಿನಗಳ ಕಾರ್ಯಾಗಾರದಲ್ಲಿ ನಂಜನಗೂಡು, ತಿ.ನರಸೀಪುರ, ಮೈಸೂರು ಸೇರಿದಂತೆ ವಿವಿಧ ಕಾಲೇಜುಗಳ 100 ವಿದ್ಯಾರ್ಥಿನಿಯರು, ಶಿಕ್ಷಕರು ಹಾಗೂ ಸಂಗೀತ ಆಸಕ್ತರು ಪಾಲ್ಗೊಂಡರು. ವಿದ್ವಾನ್ ಜಿ.ಎಸ್.ರಾಮಾನುಜನ್, ವಿ.ರಾಥೇಶ್, ವಿ.ರಮೇಶ್, ವಿ.ಅರ್ಜುನ್ ಅವರ ಸಹಕಾರದಲ್ಲಿ ಸಂಗೀತ ಸಂಜೆ ಸಮಾರೋಪಗೊಂಡಿತು.<br /> <br /> ಪ್ರಾಂಶುಪಾಲ ಎಚ್.ಬಿ.ಮಲ್ಲಿಕಾರ್ಜುನ, ಡಾ.ಡಿ. ಶೀಲಾಕುಮಾರಿ, ಟಿ.ಎಸ್.ವೇಣು ಗೋಪಾಲ್ ಮತ್ತಿತರರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>