<p>ಸಂಕಲನ ನಡೆಯುವ ಮೇಜಿನ ಮುಂದೆ ಕುಳಿತು ದೃಶ್ಯಗಳನ್ನು ನೋಡಿದವರಿಂದ ಬಂದ ಪ್ರತಿಕ್ರಿಯೆ ಕಂಡು ದೀಪಕ್ ನಂಬಿಕೆಯ ದೀಪ ಜೋರಾಗಿ ಉರಿಯತೊಡಗಿದೆ. `ಮಾಗಡಿ~ ಅವರ ಪಾಲಿಗೆ ಸದ್ಯಕ್ಕೆ ಕಾಣುತ್ತಿರುವ ಭರವಸೆಯ ಬೆಳಕು. <br /> <br /> ಈ ಸಿನಿಮಾ ತಮ್ಮ ಕನಸಿನ ಪ್ರಾಜೆಕ್ಟ್ ಎನ್ನುತ್ತಾ ಅವರು ನಿರ್ದೇಶಕ ಸುರೇಶ್ ಗೋಸ್ವಾಮಿ ಕಡೆಗೆ ನೋಟ ಬೀರಿದರು. ಗೋಸ್ವಾಮಿ ಅಹುದೆಂಬಂತೆ ತಲೆಯಾಡಿಸಿದರು. <br /> ಅಂದುಕೊಂಡದ್ದು 45 ದಿನ. ಆದರೆ, ಚಿತ್ರೀಕರಣ ಮುಗಿಸಲು ಸಾಧ್ಯವಾಗಿದ್ದು 59 ದಿನಗಳಲ್ಲಿ. ನಿರ್ಮಾಪಕ ಭಾ.ಮಾ.ಹರೀಶ್ ಮೊದಮೊದಲು ಈ ವಿಷಯವಾಗಿ ಸಹಜವಾಗಿಯೇ ಕೊಸರಾಡಿದರಂತೆ.<br /> <br /> ಆದರೆ, ಸಿನಿಮಾ `ರಷಸ್~ ನೋಡಿದ ಮೇಲೆ ಅವರ ಬೇಸರ ಮರೆಯಾಗಿದ್ದು ನಿರ್ದೇಶಕ ಗೋಸ್ವಾಮಿಯವರಿಗೆ ಸಮಾಧಾನ ತಂದಿದೆ. ಅಂದುಕೊಂಡಿದ್ದಕ್ಕಿಂತ ಸಿನಿಮಾ ಚೆನ್ನಾಗಿ ಬಂದಿದೆ ಎಂಬುದು ಅವರ ಒಂದು ಸಾಲಿನ ಪ್ರತಿಕ್ರಿಯೆ. <br /> <br /> ಚಿತ್ರದ ಕುರಿತು ಹೆಚ್ಚು ಮಾತನಾಡಿದ್ದು ನಾಯಕ ದೀಪಕ್. ರಾಜೇಶ್ ರಾಮನಾಥ್ ಸಂಗೀತ ಚೆನ್ನ, ವಿಶ್ವ ಎಡಿಟಿಂಗ್ ಸೂಪರ್, ಡಾನ್ಸ್ ಮಾಸ್ಟರ್ ರಘು ಕೊರಿಯಾಗ್ರಫಿ ಫೈನ್, ಕ್ಯಾಮೆರಾಮನ್ ರಮೇಶ್ ಕೆಲಸ ಫೆಂಟಾಸ್ಟಿಕ್- ಹೀಗೆ ತಮ್ಮ ತಂಡದ ಎಲ್ಲರ ಬೆನ್ನುತಟ್ಟಲು ಅವರು ಹೊಗಳಿಗೆಯ ಸುರಿಮಳೆಗರೆದರು. <br /> <br /> ಕೇರಳ ಮೂಲದ ನಾಯಕಿ ರಕ್ಷಿತಾ ಚಿತ್ರೀಕರಣಕ್ಕೆ ಒಂದು ತಾಸು ಮುಂಚೆಯೇ ಸಂಭಾಷಣೆ ಹೇಳಿಸಿಕೊಂಡು ಸಿದ್ಧಗೊಳ್ಳುತ್ತಿದ್ದ ರೀತಿಯನ್ನೂ ಮೆಚ್ಚಿಕೊಂಡರು. ಆದರೆ, ರಕ್ಷಿತಾ ಔತಣಕೂಟದಲ್ಲಿ ಹಾಜರಿರಲಿಲ್ಲ. <br /> <br /> ಚಿತ್ರದಲ್ಲಿ ದುಷ್ಟ ಕಾರ್ಪೊರೇಟರ್ ಪಾತ್ರ ನಿರ್ವಹಿಸಿರುವ ಸುರೇಶ್ ಚಂದ್ರ ಚಿತ್ರೀಕರಣ ನಡೆದ ನಿರ್ಮಾಪಕರ ಸಹೋದರನ ಮನೆಯಲ್ಲಿದ್ದ `ಪಗ್~ ನಾಯಿಗೆ ತಿಮ್ಮೇಗೌಡ ಎಂದು ಹೆಸರಿಟ್ಟಿರುವುದನ್ನು ನೆನಪಿಸಿಕೊಂಡು ನಕ್ಕರು. ನಿರ್ದೇಶಕರ ಶ್ರದ್ಧೆಯ ಕುರಿತು ಅವರ ಮಾತಿನಲ್ಲಿ ಹೊಗಳಿಕೆ ಇತ್ತು. ದೀಪಕ್ಗೆ ಈ ಚಿತ್ರ ಬ್ರೇಕ್ ನೀಡಲಿ ಎಂಬುದು ಅವರ ಹಾರೈಕೆ. <br /> <br /> ಸುದ್ದಿಗೋಷ್ಠಿಗೆ ಸುಮಾರು ಒಂದು ತಾಸು ತಡವಾಗಿ ಬಂದ ಅತಿಥಿ ಎನ್.ಕುಮಾರ್, ನಿರ್ಮಾಪಕರಿಗೆ ಒಳ್ಳೆಯದಾಗಲಿ ಎಂದು ಹಾರೈಸುವುದಕ್ಕಷ್ಟೇ ಮಾತನ್ನು ಸೀಮಿತಗೊಳಿಸಿದರು. <br /> <br /> `ಮೆಜೆಸ್ಟಿಕ್~ ಚಿತ್ರ ಮಾಡಿದಾಗ ಇದ್ದ ಪಾಸಿಟಿವ್ ಎನರ್ಜಿ ಈ ಚಿತ್ರದಲ್ಲೂ ಕಾಣುತ್ತಿದೆ. ಚಿತ್ರೀಕರಣ ಮುಗಿದಿದ್ದು, ಇನ್ನೇನು ರೀರೆಕಾರ್ಡಿಂಗ್ ಕೆಲಸ ಶುರುವಾಗುತ್ತದೆ. ಎಲ್ಲಾ ಒಳ್ಳೆಯದಾಗುತ್ತದೆ ಎಂದು ನಿರೀಕ್ಷಿಸುತ್ತಿದ್ದೇವೆ ಎಂದು ಭಾ.ಮಾ.ಹರೀಶ್ ಮಾತನ್ನು ಚುಟುಕಾಗಿಸಿದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಂಕಲನ ನಡೆಯುವ ಮೇಜಿನ ಮುಂದೆ ಕುಳಿತು ದೃಶ್ಯಗಳನ್ನು ನೋಡಿದವರಿಂದ ಬಂದ ಪ್ರತಿಕ್ರಿಯೆ ಕಂಡು ದೀಪಕ್ ನಂಬಿಕೆಯ ದೀಪ ಜೋರಾಗಿ ಉರಿಯತೊಡಗಿದೆ. `ಮಾಗಡಿ~ ಅವರ ಪಾಲಿಗೆ ಸದ್ಯಕ್ಕೆ ಕಾಣುತ್ತಿರುವ ಭರವಸೆಯ ಬೆಳಕು. <br /> <br /> ಈ ಸಿನಿಮಾ ತಮ್ಮ ಕನಸಿನ ಪ್ರಾಜೆಕ್ಟ್ ಎನ್ನುತ್ತಾ ಅವರು ನಿರ್ದೇಶಕ ಸುರೇಶ್ ಗೋಸ್ವಾಮಿ ಕಡೆಗೆ ನೋಟ ಬೀರಿದರು. ಗೋಸ್ವಾಮಿ ಅಹುದೆಂಬಂತೆ ತಲೆಯಾಡಿಸಿದರು. <br /> ಅಂದುಕೊಂಡದ್ದು 45 ದಿನ. ಆದರೆ, ಚಿತ್ರೀಕರಣ ಮುಗಿಸಲು ಸಾಧ್ಯವಾಗಿದ್ದು 59 ದಿನಗಳಲ್ಲಿ. ನಿರ್ಮಾಪಕ ಭಾ.ಮಾ.ಹರೀಶ್ ಮೊದಮೊದಲು ಈ ವಿಷಯವಾಗಿ ಸಹಜವಾಗಿಯೇ ಕೊಸರಾಡಿದರಂತೆ.<br /> <br /> ಆದರೆ, ಸಿನಿಮಾ `ರಷಸ್~ ನೋಡಿದ ಮೇಲೆ ಅವರ ಬೇಸರ ಮರೆಯಾಗಿದ್ದು ನಿರ್ದೇಶಕ ಗೋಸ್ವಾಮಿಯವರಿಗೆ ಸಮಾಧಾನ ತಂದಿದೆ. ಅಂದುಕೊಂಡಿದ್ದಕ್ಕಿಂತ ಸಿನಿಮಾ ಚೆನ್ನಾಗಿ ಬಂದಿದೆ ಎಂಬುದು ಅವರ ಒಂದು ಸಾಲಿನ ಪ್ರತಿಕ್ರಿಯೆ. <br /> <br /> ಚಿತ್ರದ ಕುರಿತು ಹೆಚ್ಚು ಮಾತನಾಡಿದ್ದು ನಾಯಕ ದೀಪಕ್. ರಾಜೇಶ್ ರಾಮನಾಥ್ ಸಂಗೀತ ಚೆನ್ನ, ವಿಶ್ವ ಎಡಿಟಿಂಗ್ ಸೂಪರ್, ಡಾನ್ಸ್ ಮಾಸ್ಟರ್ ರಘು ಕೊರಿಯಾಗ್ರಫಿ ಫೈನ್, ಕ್ಯಾಮೆರಾಮನ್ ರಮೇಶ್ ಕೆಲಸ ಫೆಂಟಾಸ್ಟಿಕ್- ಹೀಗೆ ತಮ್ಮ ತಂಡದ ಎಲ್ಲರ ಬೆನ್ನುತಟ್ಟಲು ಅವರು ಹೊಗಳಿಗೆಯ ಸುರಿಮಳೆಗರೆದರು. <br /> <br /> ಕೇರಳ ಮೂಲದ ನಾಯಕಿ ರಕ್ಷಿತಾ ಚಿತ್ರೀಕರಣಕ್ಕೆ ಒಂದು ತಾಸು ಮುಂಚೆಯೇ ಸಂಭಾಷಣೆ ಹೇಳಿಸಿಕೊಂಡು ಸಿದ್ಧಗೊಳ್ಳುತ್ತಿದ್ದ ರೀತಿಯನ್ನೂ ಮೆಚ್ಚಿಕೊಂಡರು. ಆದರೆ, ರಕ್ಷಿತಾ ಔತಣಕೂಟದಲ್ಲಿ ಹಾಜರಿರಲಿಲ್ಲ. <br /> <br /> ಚಿತ್ರದಲ್ಲಿ ದುಷ್ಟ ಕಾರ್ಪೊರೇಟರ್ ಪಾತ್ರ ನಿರ್ವಹಿಸಿರುವ ಸುರೇಶ್ ಚಂದ್ರ ಚಿತ್ರೀಕರಣ ನಡೆದ ನಿರ್ಮಾಪಕರ ಸಹೋದರನ ಮನೆಯಲ್ಲಿದ್ದ `ಪಗ್~ ನಾಯಿಗೆ ತಿಮ್ಮೇಗೌಡ ಎಂದು ಹೆಸರಿಟ್ಟಿರುವುದನ್ನು ನೆನಪಿಸಿಕೊಂಡು ನಕ್ಕರು. ನಿರ್ದೇಶಕರ ಶ್ರದ್ಧೆಯ ಕುರಿತು ಅವರ ಮಾತಿನಲ್ಲಿ ಹೊಗಳಿಕೆ ಇತ್ತು. ದೀಪಕ್ಗೆ ಈ ಚಿತ್ರ ಬ್ರೇಕ್ ನೀಡಲಿ ಎಂಬುದು ಅವರ ಹಾರೈಕೆ. <br /> <br /> ಸುದ್ದಿಗೋಷ್ಠಿಗೆ ಸುಮಾರು ಒಂದು ತಾಸು ತಡವಾಗಿ ಬಂದ ಅತಿಥಿ ಎನ್.ಕುಮಾರ್, ನಿರ್ಮಾಪಕರಿಗೆ ಒಳ್ಳೆಯದಾಗಲಿ ಎಂದು ಹಾರೈಸುವುದಕ್ಕಷ್ಟೇ ಮಾತನ್ನು ಸೀಮಿತಗೊಳಿಸಿದರು. <br /> <br /> `ಮೆಜೆಸ್ಟಿಕ್~ ಚಿತ್ರ ಮಾಡಿದಾಗ ಇದ್ದ ಪಾಸಿಟಿವ್ ಎನರ್ಜಿ ಈ ಚಿತ್ರದಲ್ಲೂ ಕಾಣುತ್ತಿದೆ. ಚಿತ್ರೀಕರಣ ಮುಗಿದಿದ್ದು, ಇನ್ನೇನು ರೀರೆಕಾರ್ಡಿಂಗ್ ಕೆಲಸ ಶುರುವಾಗುತ್ತದೆ. ಎಲ್ಲಾ ಒಳ್ಳೆಯದಾಗುತ್ತದೆ ಎಂದು ನಿರೀಕ್ಷಿಸುತ್ತಿದ್ದೇವೆ ಎಂದು ಭಾ.ಮಾ.ಹರೀಶ್ ಮಾತನ್ನು ಚುಟುಕಾಗಿಸಿದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>