<p>ಅಲ್ಲಿ ಸೇರಿದ್ದವರಲ್ಲಿ ಕಾತರವಿತ್ತು. `ಮಾಗಡಿ~ ಬಿಡುಗಡೆಯ ಹೊಸ್ತಿಲಿನಲ್ಲಿತ್ತು. ಚಿತ್ರದ ನಿರ್ದೇಶಕ ಸುರೇಶ್ ಗೋಸ್ವಾಮಿ ದನಿ ಕಂಪಿಸುತ್ತಿತ್ತು. `ನಾಯಕ ನಾಯಕಿ ಇಬ್ಬರೂ ಅನಾಥರು. ನಾಯಕನಿಗೆ ಅಪ್ಪ ಅಮ್ಮ ಇಲ್ಲ. <br /> <br /> ನಾಯಕಿಗೆ ಅಪ್ಪ ಇದ್ದೂ ಇಲ್ಲದಂತೆ. ಮಾಗಡಿ ಎಂಬುದು ಊರಿನ ಹೆಸರಲ್ಲ. ಅದು ನಾಯಕನ ಹೆಸರು. ಕೇರಳದ ನಟಿ ರಕ್ಷಿತಾ ಚಿತ್ರದ ನಾಯಕಿಯಾದ ನಂತರ ಆಕೆಗೆ ಅನೇಕ ಅವಕಾಶಗಳು ಅರಸಿ ಬಂದವು~ ಎಂದು ಖುಷಿಗೊಂಡರು ಅವರು. ಅದು ಕಾಕತಾಳೀಯವೇ ಅಲ್ಲವೇ ಎಂಬುದನ್ನು ಅವರು ಬಹಿರಂಗಪಡಿಸಲಿಲ್ಲ.<br /> <br /> ಪದ್ಮಾ ವಾಸಂತಿ ಚಿತ್ರದಲ್ಲಿ ಘರ್ವಾಲಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೊದ ಮೊದಲು ಅವರು ಪಾತ್ರಕ್ಕೆ ಒಪ್ಪಲಿಲ್ಲವಂತೆ. ನಿರ್ದೇಶಕರು ಹರಸಾಹಸ ಪಟ್ಟರು. ಮನೆಗೆ ತೆರಳಿ ದುಂಬಾಲು ಬಿದ್ದರು. ಪರಿಣಾಮ ನಾಯಕಿಯ ಸಾಕುತಾಯಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. <br /> <br /> ಪತ್ರಿಕೆಗಳಲ್ಲಿ ಬರುವ ಸುದ್ದಿ ಚಿತ್ರದ ಕತೆಗೆ ಪ್ರೇರಣೆ. ಕಾರ್ಪೊರೇಟ್ ಜಗತ್ತಿನ ಅಪರಾಧವನ್ನು, ಅಲ್ಲಿ ನಡೆಯುವ ಕೊಲೆ ಆತ್ಮಹತ್ಯೆಯನ್ನು ಕುರಿತ ಚಿತ್ರ ಇದು. ಹಳ್ಳಿಯಿಂದ ಬಂದ ಹುಡುಗನಿಗೂ ಕಾರ್ಪೊರೇಟ್ ಜಗತ್ತಿಗೂ ಏನು ಸಂಬಂಧ ಎಂದು ಕೇಳಿಕೊಳ್ಳುವಂತಿಲ್ಲ. ಅದನ್ನು ಚಿತ್ರಮಂದಿರದಲ್ಲಿಯೇ ವೀಕ್ಷಿಸಬೇಕಂತೆ. <br /> <br /> ಚಿತ್ರದ ಮೊದಲ ಪ್ರತಿ ನೋಡಿದ ನಂತರವೇ ನಿರ್ದೇಶಕರು ನನ್ನನ್ನು ಆಲಂಗಿಸಿ ಮೆಚ್ಚುಗೆ ವ್ಯಕ್ತಪಡಿಸಿದರು ಎನ್ನುತ್ತ ಮಾತಿಗಿಳಿದರು ನಾಯಕ ನಟ ದೀಪಕ್. <br /> <br /> ಅಲ್ಲಿಯವರೆಗೆ ತಮ್ಮ ನಟನೆಯನ್ನು ತಿದ್ದುವುದೇ ನಿರ್ದೇಶಕರ ಕೆಲಸವಾಗಿತ್ತಂತೆ. ಕತೆಗೆ ನಾಯಕನ ಪಾತ್ರವನ್ನು ಹೊಂದಿಸಿರುವುದರಿಂದ ಅವರ ಶ್ರಮ ಹೆಚ್ಚಾಗಿಯೇ ಇತ್ತಂತೆ. <br /> <br /> `ಚಿತ್ರದಲ್ಲಿ ಅತಿಯಾದ ಸಂಭಾಷಣೆಯ ಹೊರೆಯಿಲ್ಲ. ಆಕ್ಷನ್ ಮತ್ತು ಮೆಲೋಡ್ರಾಮವನ್ನು ಹದವಾಗಿ ಬೆರೆಸಿದಂಥ ಸಿನಿಮಾ. ಕೂಲಿ ಮಾಡಿದರೂ ಸರಿ ರೌಡಿಸಂ ಬೇಡ ಎನ್ನುವುದು ನಾಯಕನ ನಿಲುವು~ ಎಂದರು ದೀಪಕ್. <br /> </p>.<p>ಅಲ್ಲದೆ ತಾವು ದೃಶ್ಯವೊಂದರ ಚಿತ್ರೀಕರಣದ ಸಂದರ್ಭದಲ್ಲಿ ನೀರುಪಾಲಾಗಿ ಬಿಡುತ್ತಿದ್ದ ಘಟನೆಯನ್ನು ನೆನೆದರು. ದೀಪಕ್ ಒಂದು ಹಾಡಿಗೆ ಪ್ರೇರಣೆ ಕೂಡ ಆಗಿದ್ದಾರೆ. ಅವರು ಹೇಳಿದ ಸಾಲೊಂದನ್ನೇ ಹಿಗ್ಗಿಸಿ ಹಾಡು ರಚಿಸಲಾಗಿದೆ. <br /> <br /> ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಚಿತ್ರಕ್ಕೆ ಹಾಡುಗಳನ್ನು ಮಾಡಿದ್ದು ಒಂದು ದೊಡ್ಡ ಸಾಹಸ ಎಂದು ಬಣ್ಣಿಸಿದರು. ಹಾಡುಗಳನ್ನು ಸಂಯೋಜಿಸುವಾಗ ಚಿತ್ರ ತಂಡದ ಪ್ರಮುಖರೆಲ್ಲಾ ಭಾಗವಹಿದ್ದರಂತೆ. ಒಂದು ಹಾಡನ್ನು ಸ್ವತಃ ಅವರೇ ಹಾಡಿದ್ದಾರೆ. <br /> <br /> ನಿರ್ಮಾಪಕ ಭಾ.ಮ.ಹರೀಶ್ ಚಿತ್ರಕ್ಕಾಗಿ ರಾಜ್ಯದಲ್ಲಿ ಸುಮಾರು ನೂರಕ್ಕೂ ಹೆಚ್ಚು ಚಿತ್ರಮಂದಿರಗಳನ್ನು ಕಾದಿರಿಸಿದ್ದಾರಂತೆ. ಚಿತ್ರೀಕರಣಕ್ಕೂ ಮುನ್ನ ಆರು ಏಳು ತಿಂಗಳು ನಿರ್ದೇಶಕರು ಪಟ್ಟ ಶ್ರಮವನ್ನು ಅವರು ಸ್ಮರಿಸಿದರು. ತಮ್ಮ `ಮೆಜೆಸ್ಟಿಕ್~ ಚಿತ್ರದ ನಂತರ ಇದು ಅವರಿಗೆ ಯಶಸ್ಸು ತಂದುಕೊಡಲಿದೆ ಎಂಬುದು ಅವರ ಭಾವನೆ. <br /> <br /> `ಬಾಲ್ಯದ ಗೆಳೆಯ ಎಂಬುದನ್ನೂ ಕಡೆಗಣಿಸಿ ನಿರ್ದೇಶಕರು ಒಬ್ಬ ಮೇಷ್ಟ್ರಂತೆ ವರ್ತಿಸಿದರು~ ಎಂದು ಹಾಸ್ಯಮಯವಾಗಿ ಕೆಣಕಿದರು ಚಿತ್ರದ ಮತ್ತೊಬ್ಬ ನಿರ್ಮಾಪಕ ದಿವಾಕರ್. ನಿರ್ದೇಶಕರು ಕೇಳಿದ್ದಕ್ಕೆಲ್ಲ ಅವರು ಇಲ್ಲ ಎಂದಿಲ್ಲ.<br /> <br /> ಹಣಕ್ಕಿಂತ ಚಿತ್ರ ಉತ್ತಮವಾಗಿ ಮೂಡಿ ಬಂದಿರುವುದು ಮುಖ್ಯ ಎನ್ನುವುದು ಅವರ ಧೋರಣೆ. ನೃತ್ಯ ನಿರ್ದೇಶಕ ರಘು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. <br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಲ್ಲಿ ಸೇರಿದ್ದವರಲ್ಲಿ ಕಾತರವಿತ್ತು. `ಮಾಗಡಿ~ ಬಿಡುಗಡೆಯ ಹೊಸ್ತಿಲಿನಲ್ಲಿತ್ತು. ಚಿತ್ರದ ನಿರ್ದೇಶಕ ಸುರೇಶ್ ಗೋಸ್ವಾಮಿ ದನಿ ಕಂಪಿಸುತ್ತಿತ್ತು. `ನಾಯಕ ನಾಯಕಿ ಇಬ್ಬರೂ ಅನಾಥರು. ನಾಯಕನಿಗೆ ಅಪ್ಪ ಅಮ್ಮ ಇಲ್ಲ. <br /> <br /> ನಾಯಕಿಗೆ ಅಪ್ಪ ಇದ್ದೂ ಇಲ್ಲದಂತೆ. ಮಾಗಡಿ ಎಂಬುದು ಊರಿನ ಹೆಸರಲ್ಲ. ಅದು ನಾಯಕನ ಹೆಸರು. ಕೇರಳದ ನಟಿ ರಕ್ಷಿತಾ ಚಿತ್ರದ ನಾಯಕಿಯಾದ ನಂತರ ಆಕೆಗೆ ಅನೇಕ ಅವಕಾಶಗಳು ಅರಸಿ ಬಂದವು~ ಎಂದು ಖುಷಿಗೊಂಡರು ಅವರು. ಅದು ಕಾಕತಾಳೀಯವೇ ಅಲ್ಲವೇ ಎಂಬುದನ್ನು ಅವರು ಬಹಿರಂಗಪಡಿಸಲಿಲ್ಲ.<br /> <br /> ಪದ್ಮಾ ವಾಸಂತಿ ಚಿತ್ರದಲ್ಲಿ ಘರ್ವಾಲಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೊದ ಮೊದಲು ಅವರು ಪಾತ್ರಕ್ಕೆ ಒಪ್ಪಲಿಲ್ಲವಂತೆ. ನಿರ್ದೇಶಕರು ಹರಸಾಹಸ ಪಟ್ಟರು. ಮನೆಗೆ ತೆರಳಿ ದುಂಬಾಲು ಬಿದ್ದರು. ಪರಿಣಾಮ ನಾಯಕಿಯ ಸಾಕುತಾಯಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. <br /> <br /> ಪತ್ರಿಕೆಗಳಲ್ಲಿ ಬರುವ ಸುದ್ದಿ ಚಿತ್ರದ ಕತೆಗೆ ಪ್ರೇರಣೆ. ಕಾರ್ಪೊರೇಟ್ ಜಗತ್ತಿನ ಅಪರಾಧವನ್ನು, ಅಲ್ಲಿ ನಡೆಯುವ ಕೊಲೆ ಆತ್ಮಹತ್ಯೆಯನ್ನು ಕುರಿತ ಚಿತ್ರ ಇದು. ಹಳ್ಳಿಯಿಂದ ಬಂದ ಹುಡುಗನಿಗೂ ಕಾರ್ಪೊರೇಟ್ ಜಗತ್ತಿಗೂ ಏನು ಸಂಬಂಧ ಎಂದು ಕೇಳಿಕೊಳ್ಳುವಂತಿಲ್ಲ. ಅದನ್ನು ಚಿತ್ರಮಂದಿರದಲ್ಲಿಯೇ ವೀಕ್ಷಿಸಬೇಕಂತೆ. <br /> <br /> ಚಿತ್ರದ ಮೊದಲ ಪ್ರತಿ ನೋಡಿದ ನಂತರವೇ ನಿರ್ದೇಶಕರು ನನ್ನನ್ನು ಆಲಂಗಿಸಿ ಮೆಚ್ಚುಗೆ ವ್ಯಕ್ತಪಡಿಸಿದರು ಎನ್ನುತ್ತ ಮಾತಿಗಿಳಿದರು ನಾಯಕ ನಟ ದೀಪಕ್. <br /> <br /> ಅಲ್ಲಿಯವರೆಗೆ ತಮ್ಮ ನಟನೆಯನ್ನು ತಿದ್ದುವುದೇ ನಿರ್ದೇಶಕರ ಕೆಲಸವಾಗಿತ್ತಂತೆ. ಕತೆಗೆ ನಾಯಕನ ಪಾತ್ರವನ್ನು ಹೊಂದಿಸಿರುವುದರಿಂದ ಅವರ ಶ್ರಮ ಹೆಚ್ಚಾಗಿಯೇ ಇತ್ತಂತೆ. <br /> <br /> `ಚಿತ್ರದಲ್ಲಿ ಅತಿಯಾದ ಸಂಭಾಷಣೆಯ ಹೊರೆಯಿಲ್ಲ. ಆಕ್ಷನ್ ಮತ್ತು ಮೆಲೋಡ್ರಾಮವನ್ನು ಹದವಾಗಿ ಬೆರೆಸಿದಂಥ ಸಿನಿಮಾ. ಕೂಲಿ ಮಾಡಿದರೂ ಸರಿ ರೌಡಿಸಂ ಬೇಡ ಎನ್ನುವುದು ನಾಯಕನ ನಿಲುವು~ ಎಂದರು ದೀಪಕ್. <br /> </p>.<p>ಅಲ್ಲದೆ ತಾವು ದೃಶ್ಯವೊಂದರ ಚಿತ್ರೀಕರಣದ ಸಂದರ್ಭದಲ್ಲಿ ನೀರುಪಾಲಾಗಿ ಬಿಡುತ್ತಿದ್ದ ಘಟನೆಯನ್ನು ನೆನೆದರು. ದೀಪಕ್ ಒಂದು ಹಾಡಿಗೆ ಪ್ರೇರಣೆ ಕೂಡ ಆಗಿದ್ದಾರೆ. ಅವರು ಹೇಳಿದ ಸಾಲೊಂದನ್ನೇ ಹಿಗ್ಗಿಸಿ ಹಾಡು ರಚಿಸಲಾಗಿದೆ. <br /> <br /> ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಚಿತ್ರಕ್ಕೆ ಹಾಡುಗಳನ್ನು ಮಾಡಿದ್ದು ಒಂದು ದೊಡ್ಡ ಸಾಹಸ ಎಂದು ಬಣ್ಣಿಸಿದರು. ಹಾಡುಗಳನ್ನು ಸಂಯೋಜಿಸುವಾಗ ಚಿತ್ರ ತಂಡದ ಪ್ರಮುಖರೆಲ್ಲಾ ಭಾಗವಹಿದ್ದರಂತೆ. ಒಂದು ಹಾಡನ್ನು ಸ್ವತಃ ಅವರೇ ಹಾಡಿದ್ದಾರೆ. <br /> <br /> ನಿರ್ಮಾಪಕ ಭಾ.ಮ.ಹರೀಶ್ ಚಿತ್ರಕ್ಕಾಗಿ ರಾಜ್ಯದಲ್ಲಿ ಸುಮಾರು ನೂರಕ್ಕೂ ಹೆಚ್ಚು ಚಿತ್ರಮಂದಿರಗಳನ್ನು ಕಾದಿರಿಸಿದ್ದಾರಂತೆ. ಚಿತ್ರೀಕರಣಕ್ಕೂ ಮುನ್ನ ಆರು ಏಳು ತಿಂಗಳು ನಿರ್ದೇಶಕರು ಪಟ್ಟ ಶ್ರಮವನ್ನು ಅವರು ಸ್ಮರಿಸಿದರು. ತಮ್ಮ `ಮೆಜೆಸ್ಟಿಕ್~ ಚಿತ್ರದ ನಂತರ ಇದು ಅವರಿಗೆ ಯಶಸ್ಸು ತಂದುಕೊಡಲಿದೆ ಎಂಬುದು ಅವರ ಭಾವನೆ. <br /> <br /> `ಬಾಲ್ಯದ ಗೆಳೆಯ ಎಂಬುದನ್ನೂ ಕಡೆಗಣಿಸಿ ನಿರ್ದೇಶಕರು ಒಬ್ಬ ಮೇಷ್ಟ್ರಂತೆ ವರ್ತಿಸಿದರು~ ಎಂದು ಹಾಸ್ಯಮಯವಾಗಿ ಕೆಣಕಿದರು ಚಿತ್ರದ ಮತ್ತೊಬ್ಬ ನಿರ್ಮಾಪಕ ದಿವಾಕರ್. ನಿರ್ದೇಶಕರು ಕೇಳಿದ್ದಕ್ಕೆಲ್ಲ ಅವರು ಇಲ್ಲ ಎಂದಿಲ್ಲ.<br /> <br /> ಹಣಕ್ಕಿಂತ ಚಿತ್ರ ಉತ್ತಮವಾಗಿ ಮೂಡಿ ಬಂದಿರುವುದು ಮುಖ್ಯ ಎನ್ನುವುದು ಅವರ ಧೋರಣೆ. ನೃತ್ಯ ನಿರ್ದೇಶಕ ರಘು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. <br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>