<p><strong>ಕುಮಟಾ:</strong> ಇಲ್ಲಿಯ ಅಘನಾಶಿನಿ ಹಿನ್ನೀರು ಪ್ರದೇಶವಾದ ಮಾಣಿಕಟ್ಟಾ ಗಜನಿಯ ಸುಮಾರು 400 ಎಕರೆ ಪ್ರದೇಶದ ವರ್ಷದ ಕೊನೆಯ ಮೀನು ಹಿಡಿಯುವ ಸುಗ್ಗಿ ಸೋಮವಾರ ಕಣ್ಮನ ಸೆಳೆಯಿತು.<br /> <br /> ಮಾಣಿಕಟ್ಟಾ ಗಜನಿಯಲ್ಲಿ ಪ್ರತೀ ವರ್ಷ ಸಾಧ್ಯವಾದಷ್ಟು ಪ್ರಮಾಣದಲ್ಲಿ ಕಗ್ಗ ಭತ್ತ ಬೆಳೆಯುತ್ತಾರೆ. ಕಗ್ಗ ಭತ್ತ ಬಿತ್ತನೆಗೆ ಮುನ್ನ ಗಜನಿಯಲ್ಲಿದ್ದ ಉಪ್ಪು ನೀರು ಹೊರಗೆ ಹೋಗಲು ಮಳೆ ಬಿದ್ದ ನಂತರ ನದಿಯ ನೀರನ್ನು ಗಜನಿ ಒಳಗೆ-ಹೊರಗೆ ತೆಗೆದುಕೊಳ್ಳಲಾಗುತ್ತದೆ.<br /> <br /> ನೀರು ಗಜನಿ ಒಳಗೆ- ಹೊರಗೆ ಬಂದು ಹೋಗುವಾಗ ಜಂತ್ರಡಿ ಗೇಟಿನಲ್ಲಿ ಬಲೆ ಕಟ್ಟಿ ಸಾಕಷ್ಟು ಮೀನು ಹಿಡಿಯಲಾಗುತ್ತದೆ. ಹೀಗೆ ಬಲೆಗೆ ಬಿದ್ದ ಮೀನು ರೈತರಿಗೆ ಅಧಿಕ ಲಾಭ ತರುತ್ತದೆ. ಹೀಗೆ ಸಾಮೂಹಿಕವಾಗಿ ಮೀನು ಹಿಡಿಯುವುದು ಒಂದೆರಡು ದಿನ ಮಾತ್ರ ಇರುವುದು ವಿಶೇಷ.<br /> <br /> ಮಳೆಗಾಲದಲ್ಲಿ ಸಮುದ್ರ ಮೀನು ಗಣನೀಯ ಮಟ್ಟದಲ್ಲಿ ಕಡಿಮೆ ಆಗುವಾಗ ಗಜನಿ ಮೀನಿಗೆ ಬೇಡಿಕೆ ಹೆಚ್ಚು. ಎಷ್ಟೋ ಮೀನುಗಾರ ಮಹಿಳೆಯರು ನೇರವಾಗಿ ಗಜನಿಗೆ ಬಂದು ಮೀನು ಖರೀದಿ ಮಾಡಿ ಅದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.<br /> <br /> ಇಲ್ಲಿ ಸಿಗುವ ನೋಗಲಾ, ಕಾಗಳಸಿ, ಮಂಡ್ಲಿ, ಬೈಗೆ, ಮಡ್ಲೆ, ಹೂವಿನ ಸೆಳಕ, ಕೊಕ್ಕರ, ಕುರಡೆ, ಕೆಂಸ, ಯೇರಿ, ಪೇಡಿ, ನೆಪ್ಪೆ, ಹುಲಕಾ, ಒಣ ಕಾಂಡಿ ಮುಂತಾದ ಒಂದೊಂದು ಮೀನಿಗೂ ಒಂದೊಂದು ಬಗೆಯ ರುಚಿಯಿದ್ದು, ಅವು ಬಿಸಿ ದೋಸೆಯಂತೆ ಖರ್ಚಾಗುತ್ತದೆ.<br /> <br /> ಗಜನಿಯಲ್ಲಿ ಉಪ್ಪು ನೀರು ಖಾಲಿಯಾದ ನಂತರ ಇನ್ನು 15 ದಿನದೊಳಗೆ ಕಗ್ಗ ಭತ್ತದ ಬಿತ್ತನೆ ಮಾಡಲಾಗುತ್ತದೆ. ಇಲ್ಲಿಯ ಮಾಣಿಕಟ್ಟಾ ರೈತರ ಒಕ್ಕೂಟದ ರೈತರು ಕಡ್ಡಾಯವಾಗಿ ಕಗ್ಗ ಭತ್ತದ ಕೃಷಿ ಮಾಡಬೇಕಿದ್ದು, ತಪ್ಪಿದವರಿಗೆ ಒಕ್ಕೂಟದ ವತಿಯಿಂದ ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.<br /> <br /> ಆದರೆ ಮೀನು ಹಾಗೂ ಕಗ್ಗ ಭತ್ತದ ನೈಸರ್ಗಿಕ ಕೃಷಿಗೆ ಇಷ್ಟೊಂದು ವಿಫುಲ ಅವಕಾಶವಿರುವ ಗಜನಿಯಲ್ಲಿ 40 ವರ್ಷಗಳ ಹಿಂದೆ ನಿರ್ಮಿಸಿರುವ ಕಾರ್ಲ್ಯಾಂಡ್ ಕಟ್ಟೆಯ ನಿರ್ವಹಣೆ ಮಾತ್ರ ಇನ್ನೂ ಆಗಿಲ್ಲ.<br /> <br /> ಕಾರ್ಲ್ಯಾಂಡ್ ಕಟ್ಟೆ ಅಲ್ಲಲ್ಲಿ ಕಿತ್ತು ಹೋಗಿ ನೆರೆ ನೀರು ಗದ್ದೆಗೆ ನುಗ್ಗಿ ಮೊಳಕೆ ಹಂತದಲ್ಲಿರುವ ಕಗ್ಗ ಭತ್ತದ ಬೀಜ ಕೊಚ್ಚಿಕೊಂಡು ಹೋಗುವುದರಿಂದ ಕಗ್ಗ ಭತ್ತದ ಕೃಷಿಯಲ್ಲಿ ರೈತರು ಇತ್ತೀಚೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ.<br /> <br /> ಆದರೆ ಮಾಣಿಕಟ್ಟಾ ರೈತರ ಒಕ್ಕೂಟದ ನಿಯಮಕ್ಕೆ ಬಾಗಿ ಕಗ್ಗ ಭತ್ತದ ಕೃಷಿಯನ್ನು ಅನಿವಾರ್ಯವಾಗಿ ರೈತರು ಅಷ್ಟಿಷ್ಟಾದರೂ ಮಾಡುತ್ತಾರೆ. ಕಾರ್ಲ್ಯಾಂಡ್ ಕಟ್ಟೆ ದುರಸ್ತಿಗೆ ಕೋಟ್ಯಂತರ ರೂಪಾಯಿ ಅಗತ್ಯವಿದ್ದು ಯಾವ ಸರಕಾರವೂ ರೈತರ ಈ ಸಮಸ್ಯೆ ಬಗ್ಗೆ ಹಿಂದಿನಿಂದಲೂ ತಲೆ ಕೆಡಿಸಿಕೊಂಡಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಮಟಾ:</strong> ಇಲ್ಲಿಯ ಅಘನಾಶಿನಿ ಹಿನ್ನೀರು ಪ್ರದೇಶವಾದ ಮಾಣಿಕಟ್ಟಾ ಗಜನಿಯ ಸುಮಾರು 400 ಎಕರೆ ಪ್ರದೇಶದ ವರ್ಷದ ಕೊನೆಯ ಮೀನು ಹಿಡಿಯುವ ಸುಗ್ಗಿ ಸೋಮವಾರ ಕಣ್ಮನ ಸೆಳೆಯಿತು.<br /> <br /> ಮಾಣಿಕಟ್ಟಾ ಗಜನಿಯಲ್ಲಿ ಪ್ರತೀ ವರ್ಷ ಸಾಧ್ಯವಾದಷ್ಟು ಪ್ರಮಾಣದಲ್ಲಿ ಕಗ್ಗ ಭತ್ತ ಬೆಳೆಯುತ್ತಾರೆ. ಕಗ್ಗ ಭತ್ತ ಬಿತ್ತನೆಗೆ ಮುನ್ನ ಗಜನಿಯಲ್ಲಿದ್ದ ಉಪ್ಪು ನೀರು ಹೊರಗೆ ಹೋಗಲು ಮಳೆ ಬಿದ್ದ ನಂತರ ನದಿಯ ನೀರನ್ನು ಗಜನಿ ಒಳಗೆ-ಹೊರಗೆ ತೆಗೆದುಕೊಳ್ಳಲಾಗುತ್ತದೆ.<br /> <br /> ನೀರು ಗಜನಿ ಒಳಗೆ- ಹೊರಗೆ ಬಂದು ಹೋಗುವಾಗ ಜಂತ್ರಡಿ ಗೇಟಿನಲ್ಲಿ ಬಲೆ ಕಟ್ಟಿ ಸಾಕಷ್ಟು ಮೀನು ಹಿಡಿಯಲಾಗುತ್ತದೆ. ಹೀಗೆ ಬಲೆಗೆ ಬಿದ್ದ ಮೀನು ರೈತರಿಗೆ ಅಧಿಕ ಲಾಭ ತರುತ್ತದೆ. ಹೀಗೆ ಸಾಮೂಹಿಕವಾಗಿ ಮೀನು ಹಿಡಿಯುವುದು ಒಂದೆರಡು ದಿನ ಮಾತ್ರ ಇರುವುದು ವಿಶೇಷ.<br /> <br /> ಮಳೆಗಾಲದಲ್ಲಿ ಸಮುದ್ರ ಮೀನು ಗಣನೀಯ ಮಟ್ಟದಲ್ಲಿ ಕಡಿಮೆ ಆಗುವಾಗ ಗಜನಿ ಮೀನಿಗೆ ಬೇಡಿಕೆ ಹೆಚ್ಚು. ಎಷ್ಟೋ ಮೀನುಗಾರ ಮಹಿಳೆಯರು ನೇರವಾಗಿ ಗಜನಿಗೆ ಬಂದು ಮೀನು ಖರೀದಿ ಮಾಡಿ ಅದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.<br /> <br /> ಇಲ್ಲಿ ಸಿಗುವ ನೋಗಲಾ, ಕಾಗಳಸಿ, ಮಂಡ್ಲಿ, ಬೈಗೆ, ಮಡ್ಲೆ, ಹೂವಿನ ಸೆಳಕ, ಕೊಕ್ಕರ, ಕುರಡೆ, ಕೆಂಸ, ಯೇರಿ, ಪೇಡಿ, ನೆಪ್ಪೆ, ಹುಲಕಾ, ಒಣ ಕಾಂಡಿ ಮುಂತಾದ ಒಂದೊಂದು ಮೀನಿಗೂ ಒಂದೊಂದು ಬಗೆಯ ರುಚಿಯಿದ್ದು, ಅವು ಬಿಸಿ ದೋಸೆಯಂತೆ ಖರ್ಚಾಗುತ್ತದೆ.<br /> <br /> ಗಜನಿಯಲ್ಲಿ ಉಪ್ಪು ನೀರು ಖಾಲಿಯಾದ ನಂತರ ಇನ್ನು 15 ದಿನದೊಳಗೆ ಕಗ್ಗ ಭತ್ತದ ಬಿತ್ತನೆ ಮಾಡಲಾಗುತ್ತದೆ. ಇಲ್ಲಿಯ ಮಾಣಿಕಟ್ಟಾ ರೈತರ ಒಕ್ಕೂಟದ ರೈತರು ಕಡ್ಡಾಯವಾಗಿ ಕಗ್ಗ ಭತ್ತದ ಕೃಷಿ ಮಾಡಬೇಕಿದ್ದು, ತಪ್ಪಿದವರಿಗೆ ಒಕ್ಕೂಟದ ವತಿಯಿಂದ ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.<br /> <br /> ಆದರೆ ಮೀನು ಹಾಗೂ ಕಗ್ಗ ಭತ್ತದ ನೈಸರ್ಗಿಕ ಕೃಷಿಗೆ ಇಷ್ಟೊಂದು ವಿಫುಲ ಅವಕಾಶವಿರುವ ಗಜನಿಯಲ್ಲಿ 40 ವರ್ಷಗಳ ಹಿಂದೆ ನಿರ್ಮಿಸಿರುವ ಕಾರ್ಲ್ಯಾಂಡ್ ಕಟ್ಟೆಯ ನಿರ್ವಹಣೆ ಮಾತ್ರ ಇನ್ನೂ ಆಗಿಲ್ಲ.<br /> <br /> ಕಾರ್ಲ್ಯಾಂಡ್ ಕಟ್ಟೆ ಅಲ್ಲಲ್ಲಿ ಕಿತ್ತು ಹೋಗಿ ನೆರೆ ನೀರು ಗದ್ದೆಗೆ ನುಗ್ಗಿ ಮೊಳಕೆ ಹಂತದಲ್ಲಿರುವ ಕಗ್ಗ ಭತ್ತದ ಬೀಜ ಕೊಚ್ಚಿಕೊಂಡು ಹೋಗುವುದರಿಂದ ಕಗ್ಗ ಭತ್ತದ ಕೃಷಿಯಲ್ಲಿ ರೈತರು ಇತ್ತೀಚೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ.<br /> <br /> ಆದರೆ ಮಾಣಿಕಟ್ಟಾ ರೈತರ ಒಕ್ಕೂಟದ ನಿಯಮಕ್ಕೆ ಬಾಗಿ ಕಗ್ಗ ಭತ್ತದ ಕೃಷಿಯನ್ನು ಅನಿವಾರ್ಯವಾಗಿ ರೈತರು ಅಷ್ಟಿಷ್ಟಾದರೂ ಮಾಡುತ್ತಾರೆ. ಕಾರ್ಲ್ಯಾಂಡ್ ಕಟ್ಟೆ ದುರಸ್ತಿಗೆ ಕೋಟ್ಯಂತರ ರೂಪಾಯಿ ಅಗತ್ಯವಿದ್ದು ಯಾವ ಸರಕಾರವೂ ರೈತರ ಈ ಸಮಸ್ಯೆ ಬಗ್ಗೆ ಹಿಂದಿನಿಂದಲೂ ತಲೆ ಕೆಡಿಸಿಕೊಂಡಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>