<p><strong>ಬೆಂಗಳೂರು:</strong> `ಪ್ರಾಚೀನ ವಿಚಾರ ಮತ್ತು ಮೌಲ್ಯ ಇಂದಿನ ಜನಾಂಗಕ್ಕೆ ದಾರಿದೀಪ. ಇತಿಹಾಸ ಅರಿಯದ ವನಿಗೆ ಭವಿಷ್ಯದ ಅರಿವು ಇರಲಾರದು~ ಎಂದು ಬಾಳೆಹೊನ್ನೂರು ರಂಭಾಪುರಿ ಮಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ನುಡಿದರು.<br /> <br /> ನಗರದಲ್ಲಿ ಶನಿವಾರ ನಡೆದ ಶರನ್ನವರಾತ್ರಿ ದಸರಾ ಮಹೋತ್ಸವ ಹಾಗೂ ಜನಜಾಗೃತಿ ಧರ್ಮ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿ, `ಮಾನವೀಯ ಮೌಲ್ಯಗಳನ್ನು ಕಾಯ್ದುಕೊಳ್ಳದಿದ್ದರೆ ಸಮಾಜ ಪತನದತ್ತ ಸಾಗುತ್ತದೆ~ ಎಂದರು.<br /> <br /> ರಂಭಾಪುರಿ ಸ್ವಾಮೀಜಿಯ 3ಡಿ ಚಿತ್ರ ಬಿಡುಗಡೆ ಮಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, `ಜಾತಿ, ಧರ್ಮಗಳ ಮಧ್ಯೆ ಕಿತ್ತಾಟ ನಡೆದಾಗಲೂ ಭಾರತ ಧರ್ಮ ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆದಿದೆ ಎಂದರು.<br /> <br /> ವಿಧಾನಪರಿಷತ್ ಸದಸ್ಯ ಎಂ.ವಿ. ರಾಜಶೇಖರನ್, `ದ್ವೇಷಗಳನ್ನು ಬಿಟ್ಟು ಸಹೋದರತ್ವದಿಂದ ಬಾಳಿದಾಗ ನೆಮ್ಮದಿ ಕಾಣಲು ಸಾಧ್ಯ~ ಎಂದರು.ಸಂಶೋಧಕ ಡಾ.ಎ.ಸಿ.ವಾಲಿ, `ಜಗದ್ಗುರು ರೇವಣಸಿದ್ಧರ ಸಾಮಾಜಿಕ ಕ್ರಾಂತಿ~ ಕುರಿತು ಉಪನ್ಯಾಸ ನೀಡಿದರು. ಯಡಿಯೂರು ಕ್ಷೇತ್ರದ ರೇಣುಕಾ ಶಿವಾಚಾರ್ಯರು `ಮಾನವ ಧರ್ಮದ ಹಿರಿಮೆ~ ಕುರಿತು ಮಾತನಾಡಿದರು. <br /> <br /> ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಕಳಕಪ್ಪ ಬಂಡಿ, ಪುಟ್ಟಣ್ಣ, ರವಿಸುಬ್ರಹ್ಮಣ್ಯ, ಡಾ.ವೈ.ಸಿ.ವಿಶ್ವನಾಥ್, ಎಂ.ಪಿ.ಕುಮಾರಸ್ವಾಮಿ, ನೆ.ಲ.ನರೇಂದ್ರಬಾಬು, ಮಾಜಿ ಸಚಿವೆಯರಾದ ರಾಣಿ ಸತೀಶ್, ಲೀಲಾದೇವಿ ಆರ್.ಪ್ರಸಾದ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ಪ್ರಾಚೀನ ವಿಚಾರ ಮತ್ತು ಮೌಲ್ಯ ಇಂದಿನ ಜನಾಂಗಕ್ಕೆ ದಾರಿದೀಪ. ಇತಿಹಾಸ ಅರಿಯದ ವನಿಗೆ ಭವಿಷ್ಯದ ಅರಿವು ಇರಲಾರದು~ ಎಂದು ಬಾಳೆಹೊನ್ನೂರು ರಂಭಾಪುರಿ ಮಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ನುಡಿದರು.<br /> <br /> ನಗರದಲ್ಲಿ ಶನಿವಾರ ನಡೆದ ಶರನ್ನವರಾತ್ರಿ ದಸರಾ ಮಹೋತ್ಸವ ಹಾಗೂ ಜನಜಾಗೃತಿ ಧರ್ಮ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿ, `ಮಾನವೀಯ ಮೌಲ್ಯಗಳನ್ನು ಕಾಯ್ದುಕೊಳ್ಳದಿದ್ದರೆ ಸಮಾಜ ಪತನದತ್ತ ಸಾಗುತ್ತದೆ~ ಎಂದರು.<br /> <br /> ರಂಭಾಪುರಿ ಸ್ವಾಮೀಜಿಯ 3ಡಿ ಚಿತ್ರ ಬಿಡುಗಡೆ ಮಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, `ಜಾತಿ, ಧರ್ಮಗಳ ಮಧ್ಯೆ ಕಿತ್ತಾಟ ನಡೆದಾಗಲೂ ಭಾರತ ಧರ್ಮ ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆದಿದೆ ಎಂದರು.<br /> <br /> ವಿಧಾನಪರಿಷತ್ ಸದಸ್ಯ ಎಂ.ವಿ. ರಾಜಶೇಖರನ್, `ದ್ವೇಷಗಳನ್ನು ಬಿಟ್ಟು ಸಹೋದರತ್ವದಿಂದ ಬಾಳಿದಾಗ ನೆಮ್ಮದಿ ಕಾಣಲು ಸಾಧ್ಯ~ ಎಂದರು.ಸಂಶೋಧಕ ಡಾ.ಎ.ಸಿ.ವಾಲಿ, `ಜಗದ್ಗುರು ರೇವಣಸಿದ್ಧರ ಸಾಮಾಜಿಕ ಕ್ರಾಂತಿ~ ಕುರಿತು ಉಪನ್ಯಾಸ ನೀಡಿದರು. ಯಡಿಯೂರು ಕ್ಷೇತ್ರದ ರೇಣುಕಾ ಶಿವಾಚಾರ್ಯರು `ಮಾನವ ಧರ್ಮದ ಹಿರಿಮೆ~ ಕುರಿತು ಮಾತನಾಡಿದರು. <br /> <br /> ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಕಳಕಪ್ಪ ಬಂಡಿ, ಪುಟ್ಟಣ್ಣ, ರವಿಸುಬ್ರಹ್ಮಣ್ಯ, ಡಾ.ವೈ.ಸಿ.ವಿಶ್ವನಾಥ್, ಎಂ.ಪಿ.ಕುಮಾರಸ್ವಾಮಿ, ನೆ.ಲ.ನರೇಂದ್ರಬಾಬು, ಮಾಜಿ ಸಚಿವೆಯರಾದ ರಾಣಿ ಸತೀಶ್, ಲೀಲಾದೇವಿ ಆರ್.ಪ್ರಸಾದ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>