<p><strong>ಬೆಂಗಳೂರು: </strong>`ಮಾನಸಿಕ ದೌರ್ಬಲ್ಯ ಹೊಂದಿರುವ ಮಕ್ಕಳನ್ನು ಸಮಾಜದಲ್ಲಿ ಕಡೆಗಣಿಸಬಾರದು. ಅವರನ್ನು ಸಮಾಜದ ಅಂಗವಾಗಿ ಪರಿಗಣಿಸಬೇಕು~ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅಭಿಪ್ರಾಯಪಟ್ಟರು.<br /> ಅಸೋಸಿಯೇಷನ್ ಫಾರ್ ದಿ ಮೆಂಟಲಿ ಚಾಲೆಂಜ್ಡ್ (ಎಎಂಸಿ) ಸಂಸ್ಥೆ ಶುಕ್ರವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ಮಾನಸಿಕ ದೌರ್ಬಲ್ಯ ಪ್ರಕೃತಿದತ್ತವಾದುದು. ಅದು ಹುಟ್ಟಿನಿಂದ ಬರುವಂತಹದು. ಸಮಾಜದಲ್ಲಿ ಇತರರಂತೆ ಬದುಕುವ ನೆಲೆ ರೂಪಿಸುವ ಮೂಲಕ ಅವರಲ್ಲಿರುವ ಮಾನಸಿಕ ಕೊರತೆಯನ್ನು ನೀಗಿಸುವಲ್ಲಿ ಇಂತಹ ಸಂಸ್ಥೆಗಳ ಪಾತ್ರ ಅಗತ್ಯ~ ಎಂದು ನುಡಿದರು.<br /> <br /> `ಎಲ್ಲರಲ್ಲೂ ಪ್ರತಿಭೆಗಳು ಸುಪ್ತವಾಗಿ ಅಡಕವಾಗಿರುತ್ತವೆ. ಇಂತಹ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರತರುವಲ್ಲಿ ತಾಯಂದಿರ ಪಾತ್ರ ಮಹತ್ವದಾಗಿದೆ. ಮಾನಸಿಕ ದೌರ್ಬಲ್ಯತೆಯುಳ್ಳ ಮಕ್ಕಳ ಆರೈಕೆಗೆ ತಾಯಂದಿರು ಹೆಚ್ಚಿನ ಕಾಳಜಿ ವಹಿಸಬೇಕು~ ಎಂದರು.<br /> <br /> `ಕಾಲಚಕ್ರ ಬದಲಾದಂತೆ ವ್ಯಕ್ತಿಯ ಜೀವನದ ಘಟ್ಟಗಳು ಬದಲಾಗುತ್ತವೆ. ಇಂದು ಯುವಕರಾದವರು ನಾಳೆ ವೃದ್ಧರಾಗುತ್ತಾರೆ. ಇದೆಲ್ಲಾ ಪ್ರಕೃತಿ ನಿಯಮ. ಈ ಮಕ್ಕಳನ್ನು ಮಾನಸಿಕ ದೌರ್ಬಲ್ಯರೆಂದು ಪರಿಗಣಿಸದೆ ಅವರನ್ನು ಕ್ರಿಯಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿ ಅವರಲ್ಲಿರುವ ಸೃಜನಶೀಲತೆಯನ್ನು ಬೆಳಕಿಗೆ ತರಬೇಕು~ ಎಂದರು.<br /> <br /> `ಕರ್ನಾಟಕ ಸಾಮಾಜಿಕ ಸೇವಾ ಕಾರ್ಯಗಳಿಗೆ ಉತ್ತಮ ತಾಣವಾಗಿದೆ. ನಾನು ರಾಜ್ಯಪಾಲನಾಗಿ ಬಂದ ದಿನದಿಂದ ಹಲವಾರು ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಸಂಸ್ಥೆಗಳನ್ನು ನೋಡಿದ್ದೇನೆ. ಸಾಮಾಜಿಕ ಸೇವೆಗಳಿಗೆ ಸಂಬಂಧಿಸಿದಂತೆ ಯೋಜನೆಗಳನ್ನು ಜಾರಿಗೆ ತರಲು ಕರ್ನಾಟಕದಲ್ಲಿ ಉತ್ತಮ ವಾತಾವರಣವಿದೆ~ ಎಂದು ಪ್ರಶಂಸಿದರು.<br /> <br /> `ಸಾಮಾಜಿಕ ಕಾರ್ಯದಲ್ಲಿ ತೊಡಗುವ ಯಾವುದೇ ಸಂಸ್ಥೆಗಳಿಗೆ ರಾಜಭವನದ ಬಾಗಿಲು ಸದಾ ತೆರೆದಿರುತ್ತದೆ. ಇಂತಹ ಕಾರ್ಯದಲ್ಲಿ ತೊಡಗುವ ಸಂಸ್ಥೆಗಳಿಗೆ ನೆರವು ನೀಡುತ್ತೇನೆ~ ಎಂದು ಹೇಳಿದರು.<br /> ಸುವರ್ಣ ಮಹೋತ್ಸವದ ಅಂಗವಾಗಿ ಬೆಂಗಳೂರು ಲಿಟಲ್ ಥಿಯೇಟರ್ ತಂಡದವರು `ರೊಬಿಸ್ ಗಾರ್ಡನ್~ ನಾಟಕ ಪ್ರದರ್ಶಿಸಿದರು.<br /> <br /> ಸಂಸ್ಥೆಯ ಮುಖ್ಯಸ್ಥ ಕೆ.ಜೈರಾಜ್, ಸಂಸ್ಥಾಪಕ ಸದಸ್ಯೆ ಸುಧಾರೆಡ್ಡಿ, ಗೌರವ ಕಾರ್ಯದರ್ಶಿ ಮೀರಾ ರಾಮಚಂದ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>`ಮಾನಸಿಕ ದೌರ್ಬಲ್ಯ ಹೊಂದಿರುವ ಮಕ್ಕಳನ್ನು ಸಮಾಜದಲ್ಲಿ ಕಡೆಗಣಿಸಬಾರದು. ಅವರನ್ನು ಸಮಾಜದ ಅಂಗವಾಗಿ ಪರಿಗಣಿಸಬೇಕು~ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅಭಿಪ್ರಾಯಪಟ್ಟರು.<br /> ಅಸೋಸಿಯೇಷನ್ ಫಾರ್ ದಿ ಮೆಂಟಲಿ ಚಾಲೆಂಜ್ಡ್ (ಎಎಂಸಿ) ಸಂಸ್ಥೆ ಶುಕ್ರವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ಮಾನಸಿಕ ದೌರ್ಬಲ್ಯ ಪ್ರಕೃತಿದತ್ತವಾದುದು. ಅದು ಹುಟ್ಟಿನಿಂದ ಬರುವಂತಹದು. ಸಮಾಜದಲ್ಲಿ ಇತರರಂತೆ ಬದುಕುವ ನೆಲೆ ರೂಪಿಸುವ ಮೂಲಕ ಅವರಲ್ಲಿರುವ ಮಾನಸಿಕ ಕೊರತೆಯನ್ನು ನೀಗಿಸುವಲ್ಲಿ ಇಂತಹ ಸಂಸ್ಥೆಗಳ ಪಾತ್ರ ಅಗತ್ಯ~ ಎಂದು ನುಡಿದರು.<br /> <br /> `ಎಲ್ಲರಲ್ಲೂ ಪ್ರತಿಭೆಗಳು ಸುಪ್ತವಾಗಿ ಅಡಕವಾಗಿರುತ್ತವೆ. ಇಂತಹ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರತರುವಲ್ಲಿ ತಾಯಂದಿರ ಪಾತ್ರ ಮಹತ್ವದಾಗಿದೆ. ಮಾನಸಿಕ ದೌರ್ಬಲ್ಯತೆಯುಳ್ಳ ಮಕ್ಕಳ ಆರೈಕೆಗೆ ತಾಯಂದಿರು ಹೆಚ್ಚಿನ ಕಾಳಜಿ ವಹಿಸಬೇಕು~ ಎಂದರು.<br /> <br /> `ಕಾಲಚಕ್ರ ಬದಲಾದಂತೆ ವ್ಯಕ್ತಿಯ ಜೀವನದ ಘಟ್ಟಗಳು ಬದಲಾಗುತ್ತವೆ. ಇಂದು ಯುವಕರಾದವರು ನಾಳೆ ವೃದ್ಧರಾಗುತ್ತಾರೆ. ಇದೆಲ್ಲಾ ಪ್ರಕೃತಿ ನಿಯಮ. ಈ ಮಕ್ಕಳನ್ನು ಮಾನಸಿಕ ದೌರ್ಬಲ್ಯರೆಂದು ಪರಿಗಣಿಸದೆ ಅವರನ್ನು ಕ್ರಿಯಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿ ಅವರಲ್ಲಿರುವ ಸೃಜನಶೀಲತೆಯನ್ನು ಬೆಳಕಿಗೆ ತರಬೇಕು~ ಎಂದರು.<br /> <br /> `ಕರ್ನಾಟಕ ಸಾಮಾಜಿಕ ಸೇವಾ ಕಾರ್ಯಗಳಿಗೆ ಉತ್ತಮ ತಾಣವಾಗಿದೆ. ನಾನು ರಾಜ್ಯಪಾಲನಾಗಿ ಬಂದ ದಿನದಿಂದ ಹಲವಾರು ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಸಂಸ್ಥೆಗಳನ್ನು ನೋಡಿದ್ದೇನೆ. ಸಾಮಾಜಿಕ ಸೇವೆಗಳಿಗೆ ಸಂಬಂಧಿಸಿದಂತೆ ಯೋಜನೆಗಳನ್ನು ಜಾರಿಗೆ ತರಲು ಕರ್ನಾಟಕದಲ್ಲಿ ಉತ್ತಮ ವಾತಾವರಣವಿದೆ~ ಎಂದು ಪ್ರಶಂಸಿದರು.<br /> <br /> `ಸಾಮಾಜಿಕ ಕಾರ್ಯದಲ್ಲಿ ತೊಡಗುವ ಯಾವುದೇ ಸಂಸ್ಥೆಗಳಿಗೆ ರಾಜಭವನದ ಬಾಗಿಲು ಸದಾ ತೆರೆದಿರುತ್ತದೆ. ಇಂತಹ ಕಾರ್ಯದಲ್ಲಿ ತೊಡಗುವ ಸಂಸ್ಥೆಗಳಿಗೆ ನೆರವು ನೀಡುತ್ತೇನೆ~ ಎಂದು ಹೇಳಿದರು.<br /> ಸುವರ್ಣ ಮಹೋತ್ಸವದ ಅಂಗವಾಗಿ ಬೆಂಗಳೂರು ಲಿಟಲ್ ಥಿಯೇಟರ್ ತಂಡದವರು `ರೊಬಿಸ್ ಗಾರ್ಡನ್~ ನಾಟಕ ಪ್ರದರ್ಶಿಸಿದರು.<br /> <br /> ಸಂಸ್ಥೆಯ ಮುಖ್ಯಸ್ಥ ಕೆ.ಜೈರಾಜ್, ಸಂಸ್ಥಾಪಕ ಸದಸ್ಯೆ ಸುಧಾರೆಡ್ಡಿ, ಗೌರವ ಕಾರ್ಯದರ್ಶಿ ಮೀರಾ ರಾಮಚಂದ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>