<p>`ನನ್ನ 50 ವರ್ಷದ ಸಿನಿಮಾ ಬದುಕಿನಲ್ಲಿ ಒಂದರ ಹಿಂದೆ ಮತ್ತೊಂದು ಚಿತ್ರ ಗೆದ್ದ ಉದಾಹರಣೆ ಇರಲಿಲ್ಲ. ಈಗ `ವಿಷ್ಣುವರ್ಧನ~ ಆ ಕಹಿ ಸರಪಣಿಯನ್ನು ತುಂಡರಿಸಿದೆ~ ಎನ್ನುತ್ತಾ ಮುಖದಲ್ಲಿ ಎದ್ದು ಕಾಣುತ್ತಿದ್ದ ಸಂಭ್ರಮದ ಗೆರೆಯ ನಡುವೆಯೇ ಭಾವುಕರಾದರು ನಿರ್ಮಾಪಕ ದ್ವಾರಕೀಶ್.<br /> <br /> ವಿಷ್ಣುವರ್ಧನ ನಿರೀಕ್ಷೆಗೂ ಮೀರಿ ಓಡುತ್ತಿದೆ ಎಂಬುದು ದ್ವಾರಕೀಶ್ ಸಂಭ್ರಮಕ್ಕೆ ಕಾರಣ. ಚಿತ್ರ ಯಶಸ್ವಿ ನಾಲ್ಕು ವಾರಗಳನ್ನು ಪೂರೈಸಿದ್ದಕ್ಕೆ ಹಮ್ಮಿಕೊಂಡಿದ್ದ ಸಂತೋಷಕೂಟವದು. ಹೊತ್ತು ಕಳೆದಂತೆ ಒಬ್ಬೊಬ್ಬರೇ ಅತಿಥಿಗಳು ನಿಧಾನವಾಗಿ ಸೇರಿಕೊಳ್ಳುತ್ತಿದ್ದರು. <br /> <br /> `18 ವರ್ಷದಿಂದ ಹುಡುಕುತ್ತಿದ್ದ ಗೆಲುವು ಸಿಕ್ಕಿದ್ದು `ಆಪ್ತಮಿತ್ರ~ ಚಿತ್ರದಲ್ಲಿ. ಅದರ ಬೆನ್ನಲ್ಲೇ `ವಿಷ್ಣುವರ್ಧನ~ ಗೆದ್ದಿದೆ. ಒಂದು ಗೆದ್ದರೆ ಅದರ ನಂತರದ ಚಿತ್ರದಲ್ಲಿ ಎದುರಾಗುತ್ತಿದ್ದದ್ದು ಸೋಲು. ಹೀಗೆ ನನ್ನ ವೃತ್ತಿ ಬದುಕು ಸಾಗಿತ್ತು. ಆದರೆ ಎರಡು ಗೆಲುವು ಹೀಗೆ ಎಂದೂ ಬಂದಿರಲಿಲ್ಲ~- ದ್ವಾರಕೀಶ್ ಮಾತಿಗೆ ವಿರಾಮ ಕೊಡಲಿಲ್ಲ. <br /> <br /> ಸಿನಿಮಾ ಅದ್ಭುತವಾಗಿದೆ ಎಂಬ ಪ್ರತಿಕ್ರಿಯೆ ರಾಜ್ಯದ ಮೂಲೆಮೂಲೆಯಿಂದ ಬರುತ್ತಿದೆ. `ಆಪ್ತಮಿತ್ರ~ದ ದಾಖಲೆಗಳನ್ನೂ ಮುರಿದು ಮುಂದೆ ಸಾಗುತ್ತಿದೆ. ಆದರೆ ಗೆಲುವಿನ ಕೀರ್ತಿ ನನಗೆ ಬೇಡ. ಅದೆಲ್ಲಾ ನಟ ಸುದೀಪ್, ನಿರ್ದೇಶಕ ಪಿ.ಕುಮಾರ್, ಮಗ ಯೋಗೀಶ್, ಸಂಗೀತ ನಿರ್ದೇಶಕ ಹರಿಕೃಷ್ಣ ಅವರಿಗೆ ಸಲ್ಲಲಿ ಎಂದರು.<br /> <br /> ಮಂಗಳೂರಲ್ಲಿ ಮೊದಲ ವಾರವೇ ಐದೂವರೆ ಲಕ್ಷ, ಶಿವಮೊಗ್ಗದಲ್ಲಿ ಗಳಿಕೆ 25 ಲಕ್ಷ... ಹೀಗೆ ದ್ವಾರಕೀಶ್ ಗಳಿಕೆಯ ಪಟ್ಟಿ ಬಿಚ್ಚಿಟ್ಟರು. <br /> <br /> ಸಿನಿಮಾ ಯಶಸ್ಸಿಗೆ ಎಲ್ಲರೂ ಕಾರಣಕರ್ತರು. ನಾನು ಯಶಸ್ವೀ ತಂಡದ ಸದಸ್ಯ ಮಾತ್ರ. ಬದುಕಿನ ವ್ಯಂಗ್ಯವೆಂದರೆ ಇದೇ. ಚಿತ್ರ ಗೆದ್ದಾಗ ನಾಯಕ ಪಟ್ಟ ಶ್ರಮವನ್ನು ಎಲ್ಲರೂ ಹೇಳುತ್ತಾರೆ. ಸೋತಾಗ ಯಾರೂ ತುಟಿ ಬಿಚ್ಚುವುದಿಲ್ಲ ಎಂದ ಸುದೀಪ್, `ಗೂಳಿ~ ಚಿತ್ರದ ತಮ್ಮ ಅನುಭವ ಹಂಚಿಕೊಂಡರು. ನಾಯಕ ತೊಟ್ಟಿಯಲ್ಲಿ ಬಚ್ಚಿಟ್ಟುಕೊಳ್ಳುವ ದೃಶ್ಯವದು. <br /> <br /> ಕಸವನ್ನು ತನ್ನ ಮೇಲೆ ತಾನೇ ಸುರಿದುಕೊಳ್ಳಬೇಕು. ಆದರೆ ಸೆಟ್ ಹುಡುಗರು ಆ ತೊಟ್ಟಿಯಲ್ಲಿ ನಿಜವಾದ ಕಸವನ್ನೇ ತುಂಬಿಟ್ಟಿದ್ದರು. ವಾಸನೆ ಬೀರುತ್ತಿದ್ದ ತೊಟ್ಟಿಯಲ್ಲಿ ಕೂರುವುದಕ್ಕೂ ಆಗುತ್ತಿರಲಿಲ್ಲ. ಆದರೂ ದೃಶ್ಯವನ್ನು ಮಾಡಿದೆ. ನಾನು ಪಟ್ಟ ಕಷ್ಟದ ಬಗ್ಗೆ ನಿರ್ಮಾಪಕರಾಗಲೀ, ನಿರ್ದೇಶಕರಾಗಲೀ ಮಾತನಾಡಲಿಲ್ಲ. <br /> <br /> ಏಕೆಂದರೆ ಸಿನಿಮಾ ಗೆಲ್ಲಲಿಲ್ಲ. ಸುದೀಪ್ ಮಾತು ಬಳಿಕ ನಿರ್ದೇಶಕ ಪಿ.ಕುಮಾರ್ ಹೊಗಳಿಕೆಗೆ ತಿರುಗಿತು. <br /> <br /> ಪರಭಾಷೆಯ ಖ್ಯಾತ ನಟರು ಚಿತ್ರನೋಡಿ ರೋಮಾಂಚಿತರಾಗಿದ್ದಾರೆ. ಹಿಂದಿ ನಟ ವಿವೇಕ್ ಒಬೆರಾಯ್ ಅವರಂತೂ ಸುದೀಪ್ ನಟನೆಗೆ ಮಾರುಹೋಗಿ ತಾವೇ ಆ ಪಾತ್ರವನ್ನು ಹಿಂದಿಯಲ್ಲಿ ಮಾಡುವುದಾಗಿ ಹೇಳಿದ್ದಾರೆ ಎಂದು ಪುಳಕಿತರಾದರು ದ್ವಾರಕೀಶ್ ಪುತ್ರ ಮತ್ತು ಚಿತ್ರದ ಕಾರ್ಯಕಾರಿ ನಿರ್ಮಾಪಕ ಯೋಗೀಶ್. ತಮಿಳು, ತೆಲುಗು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ `ವಿಷ್ಣುವರ್ಧನ~ ರಿಮೇಕ್ ಆಗಲಿದ್ದಾನೆ ಎಂಬ ಮಾತನ್ನೂ ಸೇರಿಸಿದರು.<br /> <br /> ಇದುವರೆಗಿನ ಸಿನಿಮಾ ಗಳಿಕೆ ಎಂಟು ಕೋಟಿ ರೂಪಾಯಿ ಎಂಬುದು ಹಂಚಿಕೆದಾರ ಕುಮಾರ್ ನೀಡಿದ ಲೆಕ್ಕ. ಸಂಜೀವ್ ಸರೋವರ್ ಮಗನ ನಟನೆಯ ಚಿತ್ರ ಗೆದ್ದ ಸಂಭ್ರಮಕ್ಕೆ ಸಾಕ್ಷಿಯಾದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ನನ್ನ 50 ವರ್ಷದ ಸಿನಿಮಾ ಬದುಕಿನಲ್ಲಿ ಒಂದರ ಹಿಂದೆ ಮತ್ತೊಂದು ಚಿತ್ರ ಗೆದ್ದ ಉದಾಹರಣೆ ಇರಲಿಲ್ಲ. ಈಗ `ವಿಷ್ಣುವರ್ಧನ~ ಆ ಕಹಿ ಸರಪಣಿಯನ್ನು ತುಂಡರಿಸಿದೆ~ ಎನ್ನುತ್ತಾ ಮುಖದಲ್ಲಿ ಎದ್ದು ಕಾಣುತ್ತಿದ್ದ ಸಂಭ್ರಮದ ಗೆರೆಯ ನಡುವೆಯೇ ಭಾವುಕರಾದರು ನಿರ್ಮಾಪಕ ದ್ವಾರಕೀಶ್.<br /> <br /> ವಿಷ್ಣುವರ್ಧನ ನಿರೀಕ್ಷೆಗೂ ಮೀರಿ ಓಡುತ್ತಿದೆ ಎಂಬುದು ದ್ವಾರಕೀಶ್ ಸಂಭ್ರಮಕ್ಕೆ ಕಾರಣ. ಚಿತ್ರ ಯಶಸ್ವಿ ನಾಲ್ಕು ವಾರಗಳನ್ನು ಪೂರೈಸಿದ್ದಕ್ಕೆ ಹಮ್ಮಿಕೊಂಡಿದ್ದ ಸಂತೋಷಕೂಟವದು. ಹೊತ್ತು ಕಳೆದಂತೆ ಒಬ್ಬೊಬ್ಬರೇ ಅತಿಥಿಗಳು ನಿಧಾನವಾಗಿ ಸೇರಿಕೊಳ್ಳುತ್ತಿದ್ದರು. <br /> <br /> `18 ವರ್ಷದಿಂದ ಹುಡುಕುತ್ತಿದ್ದ ಗೆಲುವು ಸಿಕ್ಕಿದ್ದು `ಆಪ್ತಮಿತ್ರ~ ಚಿತ್ರದಲ್ಲಿ. ಅದರ ಬೆನ್ನಲ್ಲೇ `ವಿಷ್ಣುವರ್ಧನ~ ಗೆದ್ದಿದೆ. ಒಂದು ಗೆದ್ದರೆ ಅದರ ನಂತರದ ಚಿತ್ರದಲ್ಲಿ ಎದುರಾಗುತ್ತಿದ್ದದ್ದು ಸೋಲು. ಹೀಗೆ ನನ್ನ ವೃತ್ತಿ ಬದುಕು ಸಾಗಿತ್ತು. ಆದರೆ ಎರಡು ಗೆಲುವು ಹೀಗೆ ಎಂದೂ ಬಂದಿರಲಿಲ್ಲ~- ದ್ವಾರಕೀಶ್ ಮಾತಿಗೆ ವಿರಾಮ ಕೊಡಲಿಲ್ಲ. <br /> <br /> ಸಿನಿಮಾ ಅದ್ಭುತವಾಗಿದೆ ಎಂಬ ಪ್ರತಿಕ್ರಿಯೆ ರಾಜ್ಯದ ಮೂಲೆಮೂಲೆಯಿಂದ ಬರುತ್ತಿದೆ. `ಆಪ್ತಮಿತ್ರ~ದ ದಾಖಲೆಗಳನ್ನೂ ಮುರಿದು ಮುಂದೆ ಸಾಗುತ್ತಿದೆ. ಆದರೆ ಗೆಲುವಿನ ಕೀರ್ತಿ ನನಗೆ ಬೇಡ. ಅದೆಲ್ಲಾ ನಟ ಸುದೀಪ್, ನಿರ್ದೇಶಕ ಪಿ.ಕುಮಾರ್, ಮಗ ಯೋಗೀಶ್, ಸಂಗೀತ ನಿರ್ದೇಶಕ ಹರಿಕೃಷ್ಣ ಅವರಿಗೆ ಸಲ್ಲಲಿ ಎಂದರು.<br /> <br /> ಮಂಗಳೂರಲ್ಲಿ ಮೊದಲ ವಾರವೇ ಐದೂವರೆ ಲಕ್ಷ, ಶಿವಮೊಗ್ಗದಲ್ಲಿ ಗಳಿಕೆ 25 ಲಕ್ಷ... ಹೀಗೆ ದ್ವಾರಕೀಶ್ ಗಳಿಕೆಯ ಪಟ್ಟಿ ಬಿಚ್ಚಿಟ್ಟರು. <br /> <br /> ಸಿನಿಮಾ ಯಶಸ್ಸಿಗೆ ಎಲ್ಲರೂ ಕಾರಣಕರ್ತರು. ನಾನು ಯಶಸ್ವೀ ತಂಡದ ಸದಸ್ಯ ಮಾತ್ರ. ಬದುಕಿನ ವ್ಯಂಗ್ಯವೆಂದರೆ ಇದೇ. ಚಿತ್ರ ಗೆದ್ದಾಗ ನಾಯಕ ಪಟ್ಟ ಶ್ರಮವನ್ನು ಎಲ್ಲರೂ ಹೇಳುತ್ತಾರೆ. ಸೋತಾಗ ಯಾರೂ ತುಟಿ ಬಿಚ್ಚುವುದಿಲ್ಲ ಎಂದ ಸುದೀಪ್, `ಗೂಳಿ~ ಚಿತ್ರದ ತಮ್ಮ ಅನುಭವ ಹಂಚಿಕೊಂಡರು. ನಾಯಕ ತೊಟ್ಟಿಯಲ್ಲಿ ಬಚ್ಚಿಟ್ಟುಕೊಳ್ಳುವ ದೃಶ್ಯವದು. <br /> <br /> ಕಸವನ್ನು ತನ್ನ ಮೇಲೆ ತಾನೇ ಸುರಿದುಕೊಳ್ಳಬೇಕು. ಆದರೆ ಸೆಟ್ ಹುಡುಗರು ಆ ತೊಟ್ಟಿಯಲ್ಲಿ ನಿಜವಾದ ಕಸವನ್ನೇ ತುಂಬಿಟ್ಟಿದ್ದರು. ವಾಸನೆ ಬೀರುತ್ತಿದ್ದ ತೊಟ್ಟಿಯಲ್ಲಿ ಕೂರುವುದಕ್ಕೂ ಆಗುತ್ತಿರಲಿಲ್ಲ. ಆದರೂ ದೃಶ್ಯವನ್ನು ಮಾಡಿದೆ. ನಾನು ಪಟ್ಟ ಕಷ್ಟದ ಬಗ್ಗೆ ನಿರ್ಮಾಪಕರಾಗಲೀ, ನಿರ್ದೇಶಕರಾಗಲೀ ಮಾತನಾಡಲಿಲ್ಲ. <br /> <br /> ಏಕೆಂದರೆ ಸಿನಿಮಾ ಗೆಲ್ಲಲಿಲ್ಲ. ಸುದೀಪ್ ಮಾತು ಬಳಿಕ ನಿರ್ದೇಶಕ ಪಿ.ಕುಮಾರ್ ಹೊಗಳಿಕೆಗೆ ತಿರುಗಿತು. <br /> <br /> ಪರಭಾಷೆಯ ಖ್ಯಾತ ನಟರು ಚಿತ್ರನೋಡಿ ರೋಮಾಂಚಿತರಾಗಿದ್ದಾರೆ. ಹಿಂದಿ ನಟ ವಿವೇಕ್ ಒಬೆರಾಯ್ ಅವರಂತೂ ಸುದೀಪ್ ನಟನೆಗೆ ಮಾರುಹೋಗಿ ತಾವೇ ಆ ಪಾತ್ರವನ್ನು ಹಿಂದಿಯಲ್ಲಿ ಮಾಡುವುದಾಗಿ ಹೇಳಿದ್ದಾರೆ ಎಂದು ಪುಳಕಿತರಾದರು ದ್ವಾರಕೀಶ್ ಪುತ್ರ ಮತ್ತು ಚಿತ್ರದ ಕಾರ್ಯಕಾರಿ ನಿರ್ಮಾಪಕ ಯೋಗೀಶ್. ತಮಿಳು, ತೆಲುಗು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ `ವಿಷ್ಣುವರ್ಧನ~ ರಿಮೇಕ್ ಆಗಲಿದ್ದಾನೆ ಎಂಬ ಮಾತನ್ನೂ ಸೇರಿಸಿದರು.<br /> <br /> ಇದುವರೆಗಿನ ಸಿನಿಮಾ ಗಳಿಕೆ ಎಂಟು ಕೋಟಿ ರೂಪಾಯಿ ಎಂಬುದು ಹಂಚಿಕೆದಾರ ಕುಮಾರ್ ನೀಡಿದ ಲೆಕ್ಕ. ಸಂಜೀವ್ ಸರೋವರ್ ಮಗನ ನಟನೆಯ ಚಿತ್ರ ಗೆದ್ದ ಸಂಭ್ರಮಕ್ಕೆ ಸಾಕ್ಷಿಯಾದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>