<p>ಟ್ರಿಪೋಲಿ (ಎಪಿ): ಮಿಸರತ ನಗರದಲ್ಲಿರುವ ಬಂಡುಕೋರ ಜತೆಗೆ ಸ್ಥಳೀಯ ಬುಡಕಟ್ಟು ಮುಖಂಡರು ಸಂಧಾನ ಪ್ರಯತ್ನ ಆರಂಭಿಸಿದ್ದು, ಶಸ್ತ್ರಾಸ್ತ್ರ ಒಪ್ಪಿಸಿ ಶರಣಾಗಲು 48 ಗಂಟೆಗಳ ಬಂಡುಕೋರರಿಗೆ ಗಡುವು ನೀಡಲಾಗಿದೆ.<br /> <br /> ಒಂದು ದಿನದ ಭಾರಿ ಕಾಳಗದ ಬಳಿಕ ಮಾತುಕತೆಯ ಈ ಹೊಸ ಅಂಕ ಆರಂಭವಾಗಿದೆ. ಇದುವರೆಗಿನ ಹೋರಾಟದಲ್ಲಿ ನಗರದಲ್ಲಿ 25 ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.<br /> <br /> ಒಂದು ವೇಳೆ ಮಾತುಕತೆ ವಿಫಲವಾದಲ್ಲಿ ಬುಡಕಟ್ಟು ನಾಯಕರು, ಶಸ್ತ್ರಸಜ್ಜಿತ ಬೆಂಬಲಿಗರನ್ನು ನಗರಕ್ಕೆ ನುಗ್ಗಿಸಿ ಬಂಡುಕೋರರನ್ನೇ ಬಗ್ಗುಬಡಿಯುವರು ಎಂದು ಲಿಬಿಯಾದ ವಿದೇಶಾಂಗ ಉಪ ಸಚಿವ ಖಾಲಿದ್ ಕಯೀಂ ತಿಳಿಸಿದರು. ನಗರದಲ್ಲಿ ಜನಸಂಖ್ಯೆ ಮೂರು ಲಕ್ಷದಷ್ಟಿದೆ ಎನ್ನಲಾಗಿದೆ. <br /> <br /> ತನ್ಮಧ್ಯೆ ಗಡಾಫಿ ಬೆಂಬಲದ ಸರ್ಕಾರಿ ಸೇನೆ ಮಿಸರತ ನಗರಕ್ಕಾಗಿ ಸಶಸ್ತ್ರ ಹೋರಾಟ ಸ್ಥಗಿತಗೊಳಿಸಿದೆ. ನಗರದಿಂದ ಸೇನೆ ವಾಪಸಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಆದರೆ ಪೂರ್ಣ ವಾಪಸಾತಿ ದೃಢ ಪಟ್ಟಿಲ್ಲ.<br /> ಮಾತುಕತೆಗೆ ಆದ್ಯತೆ: ಲಿಬಿಯಾ ಸೇನೆಯು ದೇಶದ ಮೂರನೇ ಅತಿದೊಡ್ಡ ನಗರವಾದ ಮಿಸರತವನ್ನು ತ್ಯಜಿಸುವುದಿಲ್ಲ.<br /> <br /> ಆದರೆ ಬಂಡುಕೋರರ ವಿರುದ್ಧದ ಕಾರ್ಯಾಚರಣೆಯನ್ನು ಕೊನೆಗೊಳಿಸಿ ಅವರೊಂದಿಗೆ ಮಾತುಕತೆಗೆ ಆದ್ಯತೆ ನೀಡಲಿದೆ ಎಂದು ಕಯೀಂ ಭಾನುವಾರ ತಿಳಿಸಿದ್ದಾರೆ.<br /> <br /> ‘ಅಲ್ಲಿನ ಸಮಸ್ಯೆಗಳಿಗೆ ಸ್ಥಳೀಯ ಬುಡಕಟ್ಟು ಜನರಿಂದಲೇ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆದಿದೆ. ಆದರೂ ಸೇನೆ ಅಲ್ಲಿಯೇ ಇರುತ್ತದೆ. ಆದರೆ ಕಾರ್ಯಾಚರಣೆಯನ್ನು ಕೊನೆಗೊಳಿಸಿದೆ’ ಎಂದು ಅವರು ಹೇಳಿದ್ದಾರೆ.<br /> <br /> ಬುಡಕಟ್ಟು ಜನರು 48 ಗಂಟೆಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸುವರು. ಸೇನಾ ಕಾರ್ಯಾಚರಣೆಗಿಂತ ಶಾಂತಿ ಸಂಧಾನದ ಮೂಲಕ ಯುದ್ಧಕೊನೆಗೊಳ್ಳಬಹುದು ಎಂಬ ನಂಬಿಕೆ ಇದೆ ಎಂದು ಅವರು ತಿಳಿಸಿದ್ದಾರೆ.<br /> <br /> ಖಾಲಿದ್ ಅವರು ಶುಕ್ರವಾರ ನೀಡಿದ ಹೇಳಿಕೆಯಲ್ಲಿ, ಲಿಬಿಯಾ ಸೇನೆ ಮಿಸರತ ಪಟ್ಟಣವನ್ನು ತ್ಯಜಿಸಲಿದೆ. ಬುಡಕಟ್ಟು ಜನರೇ ಅಲ್ಲಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವರು ಎಂದು ಹೇಳಿದ್ದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಟ್ರಿಪೋಲಿ (ಎಪಿ): ಮಿಸರತ ನಗರದಲ್ಲಿರುವ ಬಂಡುಕೋರ ಜತೆಗೆ ಸ್ಥಳೀಯ ಬುಡಕಟ್ಟು ಮುಖಂಡರು ಸಂಧಾನ ಪ್ರಯತ್ನ ಆರಂಭಿಸಿದ್ದು, ಶಸ್ತ್ರಾಸ್ತ್ರ ಒಪ್ಪಿಸಿ ಶರಣಾಗಲು 48 ಗಂಟೆಗಳ ಬಂಡುಕೋರರಿಗೆ ಗಡುವು ನೀಡಲಾಗಿದೆ.<br /> <br /> ಒಂದು ದಿನದ ಭಾರಿ ಕಾಳಗದ ಬಳಿಕ ಮಾತುಕತೆಯ ಈ ಹೊಸ ಅಂಕ ಆರಂಭವಾಗಿದೆ. ಇದುವರೆಗಿನ ಹೋರಾಟದಲ್ಲಿ ನಗರದಲ್ಲಿ 25 ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.<br /> <br /> ಒಂದು ವೇಳೆ ಮಾತುಕತೆ ವಿಫಲವಾದಲ್ಲಿ ಬುಡಕಟ್ಟು ನಾಯಕರು, ಶಸ್ತ್ರಸಜ್ಜಿತ ಬೆಂಬಲಿಗರನ್ನು ನಗರಕ್ಕೆ ನುಗ್ಗಿಸಿ ಬಂಡುಕೋರರನ್ನೇ ಬಗ್ಗುಬಡಿಯುವರು ಎಂದು ಲಿಬಿಯಾದ ವಿದೇಶಾಂಗ ಉಪ ಸಚಿವ ಖಾಲಿದ್ ಕಯೀಂ ತಿಳಿಸಿದರು. ನಗರದಲ್ಲಿ ಜನಸಂಖ್ಯೆ ಮೂರು ಲಕ್ಷದಷ್ಟಿದೆ ಎನ್ನಲಾಗಿದೆ. <br /> <br /> ತನ್ಮಧ್ಯೆ ಗಡಾಫಿ ಬೆಂಬಲದ ಸರ್ಕಾರಿ ಸೇನೆ ಮಿಸರತ ನಗರಕ್ಕಾಗಿ ಸಶಸ್ತ್ರ ಹೋರಾಟ ಸ್ಥಗಿತಗೊಳಿಸಿದೆ. ನಗರದಿಂದ ಸೇನೆ ವಾಪಸಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಆದರೆ ಪೂರ್ಣ ವಾಪಸಾತಿ ದೃಢ ಪಟ್ಟಿಲ್ಲ.<br /> ಮಾತುಕತೆಗೆ ಆದ್ಯತೆ: ಲಿಬಿಯಾ ಸೇನೆಯು ದೇಶದ ಮೂರನೇ ಅತಿದೊಡ್ಡ ನಗರವಾದ ಮಿಸರತವನ್ನು ತ್ಯಜಿಸುವುದಿಲ್ಲ.<br /> <br /> ಆದರೆ ಬಂಡುಕೋರರ ವಿರುದ್ಧದ ಕಾರ್ಯಾಚರಣೆಯನ್ನು ಕೊನೆಗೊಳಿಸಿ ಅವರೊಂದಿಗೆ ಮಾತುಕತೆಗೆ ಆದ್ಯತೆ ನೀಡಲಿದೆ ಎಂದು ಕಯೀಂ ಭಾನುವಾರ ತಿಳಿಸಿದ್ದಾರೆ.<br /> <br /> ‘ಅಲ್ಲಿನ ಸಮಸ್ಯೆಗಳಿಗೆ ಸ್ಥಳೀಯ ಬುಡಕಟ್ಟು ಜನರಿಂದಲೇ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆದಿದೆ. ಆದರೂ ಸೇನೆ ಅಲ್ಲಿಯೇ ಇರುತ್ತದೆ. ಆದರೆ ಕಾರ್ಯಾಚರಣೆಯನ್ನು ಕೊನೆಗೊಳಿಸಿದೆ’ ಎಂದು ಅವರು ಹೇಳಿದ್ದಾರೆ.<br /> <br /> ಬುಡಕಟ್ಟು ಜನರು 48 ಗಂಟೆಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸುವರು. ಸೇನಾ ಕಾರ್ಯಾಚರಣೆಗಿಂತ ಶಾಂತಿ ಸಂಧಾನದ ಮೂಲಕ ಯುದ್ಧಕೊನೆಗೊಳ್ಳಬಹುದು ಎಂಬ ನಂಬಿಕೆ ಇದೆ ಎಂದು ಅವರು ತಿಳಿಸಿದ್ದಾರೆ.<br /> <br /> ಖಾಲಿದ್ ಅವರು ಶುಕ್ರವಾರ ನೀಡಿದ ಹೇಳಿಕೆಯಲ್ಲಿ, ಲಿಬಿಯಾ ಸೇನೆ ಮಿಸರತ ಪಟ್ಟಣವನ್ನು ತ್ಯಜಿಸಲಿದೆ. ಬುಡಕಟ್ಟು ಜನರೇ ಅಲ್ಲಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವರು ಎಂದು ಹೇಳಿದ್ದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>