<p><strong>ನವದೆಹಲಿ/ರಾಮೇಶ್ವರ (ಪಿಟಿಐ): </strong> ಶ್ರೀಲಂಕಾ ನೌಕಾದಳದವರು ಭಾರತದ 16 ಮಂದಿ ಮೀನುಗಾರರ ಮೇಲೆ ದಾಳಿ ಮಾಡಿ ಗಾಯಗೊಳಿಸಿರುವ ವಿಚಾರವನ್ನು ಸಂಬಂಧಪಟ್ಟ ಶ್ರೀಲಂಕಾ ಅಧಿಕಾರಿಗಳ ಜತೆ ಚರ್ಚಿಸುವಂತೆ ಕೊಲಂಬೊ ದಲ್ಲಿಯ ಭಾರತದ ರಾಯಭಾರ ಕಚೇರಿಗೆ ಸೂಚಿಸಲಾಗಿದೆ.<br /> <br /> ಸಮುದ್ರದಲ್ಲಿ ಅಂತರರಾಷ್ಟ್ರೀಯ ಜಲಗಡಿಯ ಬಳಿ ಮೀನುಗಾರಿಕೆ ನಡೆಸುತ್ತಿದ್ದ 16 ಮಂದಿ ಭಾರತೀಯ ಮೀನುಗಾರರ ಮೇಲೆ ಶ್ರೀಲಂಕಾದ ನೌಕಾಪಡೆಯ ಸಿಬ್ಬಂದಿ ಹಲ್ಲೆ ಮಾಡಿದ್ದರಿಂದ ಎಲ್ಲಾ ಮೀನುಗಾರರೂ ಗಾಯಗೊಂಡಿದ್ದಾರೆ. <br /> <br /> ನೌಕಾಪಡೆಯ ಸಿಬ್ಬಂದಿ ದೊಣ್ಣೆ, ಕಲ್ಲು ಮತ್ತು ಬಾಟಲಿಗಳಿಂದ ಮೀನುಗಾರರ ಮೇಲೆ ಹಲ್ಲೆ ನಡೆಸಿದ್ದರಿಂದ 25 ವರ್ಷದ ಮೀನುಗಾರನ ಮೂಳೆ ಮುರಿದಿದೆ ಮತ್ತು ಇತರರಿಗೆ ತೀವ್ರವಾದ ಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.<br /> <br /> ಮೀನುಗಾರಿಕೆ ನಡೆಸುತ್ತಿದ್ದ 25 ದೋಣಿಗಳನ್ನು ಸುತ್ತುವರಿದ ನೌಕಾಪಡೆಯ ಸಿಬ್ಬಂದಿ ತಮ್ಮ ಮೇಲೆ ಕಲ್ಲು ಮತ್ತು ಬಾಟಲಿಗಳನ್ನು ತೂರಿದರು ಮತ್ತು ದೋಣಿ ಹಾಗೂ ಬಲೆಗೆ ಹಾನಿ ಉಂಟು ಮಾಡಿದರು ಎಂದು ಮೂಳೆ ಮುರಿದಿರುವ ಯುವಕ ತಿಳಿಸಿದ್ದಾನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ/ರಾಮೇಶ್ವರ (ಪಿಟಿಐ): </strong> ಶ್ರೀಲಂಕಾ ನೌಕಾದಳದವರು ಭಾರತದ 16 ಮಂದಿ ಮೀನುಗಾರರ ಮೇಲೆ ದಾಳಿ ಮಾಡಿ ಗಾಯಗೊಳಿಸಿರುವ ವಿಚಾರವನ್ನು ಸಂಬಂಧಪಟ್ಟ ಶ್ರೀಲಂಕಾ ಅಧಿಕಾರಿಗಳ ಜತೆ ಚರ್ಚಿಸುವಂತೆ ಕೊಲಂಬೊ ದಲ್ಲಿಯ ಭಾರತದ ರಾಯಭಾರ ಕಚೇರಿಗೆ ಸೂಚಿಸಲಾಗಿದೆ.<br /> <br /> ಸಮುದ್ರದಲ್ಲಿ ಅಂತರರಾಷ್ಟ್ರೀಯ ಜಲಗಡಿಯ ಬಳಿ ಮೀನುಗಾರಿಕೆ ನಡೆಸುತ್ತಿದ್ದ 16 ಮಂದಿ ಭಾರತೀಯ ಮೀನುಗಾರರ ಮೇಲೆ ಶ್ರೀಲಂಕಾದ ನೌಕಾಪಡೆಯ ಸಿಬ್ಬಂದಿ ಹಲ್ಲೆ ಮಾಡಿದ್ದರಿಂದ ಎಲ್ಲಾ ಮೀನುಗಾರರೂ ಗಾಯಗೊಂಡಿದ್ದಾರೆ. <br /> <br /> ನೌಕಾಪಡೆಯ ಸಿಬ್ಬಂದಿ ದೊಣ್ಣೆ, ಕಲ್ಲು ಮತ್ತು ಬಾಟಲಿಗಳಿಂದ ಮೀನುಗಾರರ ಮೇಲೆ ಹಲ್ಲೆ ನಡೆಸಿದ್ದರಿಂದ 25 ವರ್ಷದ ಮೀನುಗಾರನ ಮೂಳೆ ಮುರಿದಿದೆ ಮತ್ತು ಇತರರಿಗೆ ತೀವ್ರವಾದ ಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.<br /> <br /> ಮೀನುಗಾರಿಕೆ ನಡೆಸುತ್ತಿದ್ದ 25 ದೋಣಿಗಳನ್ನು ಸುತ್ತುವರಿದ ನೌಕಾಪಡೆಯ ಸಿಬ್ಬಂದಿ ತಮ್ಮ ಮೇಲೆ ಕಲ್ಲು ಮತ್ತು ಬಾಟಲಿಗಳನ್ನು ತೂರಿದರು ಮತ್ತು ದೋಣಿ ಹಾಗೂ ಬಲೆಗೆ ಹಾನಿ ಉಂಟು ಮಾಡಿದರು ಎಂದು ಮೂಳೆ ಮುರಿದಿರುವ ಯುವಕ ತಿಳಿಸಿದ್ದಾನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>