<p><span style="font-size: 26px;"><strong>ಅಂಕೋಲಾ:</strong> ಇಲ್ಲಿಯ ಹಾರವಾಡದ ಕಡಲ ಕಿನಾರೆಯಲ್ಲಿ ಕಳೆದೆರಡು ದಿನಗಳಿಂದ ಕಡಲ್ಕೊರೆತ ಉಂಟಾಗಿದ್ದು, ಮಂಗಳವಾರ ತೀವೃಗೊಂಡಿತು. ಇದು ಸ್ಥಳೀಯ ಮೀನುಗಾರರ ಮತ್ತು ಅಲ್ಲಿಯ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.</span><br /> <br /> ಈ ಭಾಗದಲ್ಲಿಹೆಚ್ಚಿನ ಕಡಲ್ಕೊರೆತ ಉಂಟಾಗುತ್ತಿದ್ದರಿಂದ ಕಳೆದ 15 ವರ್ಷಗಳ ಹಿಂದೆ ಸರ್ಕಾರ ಅಂದು ಈ ಗ್ರಾಮದ ಕಡಲ ಕಿನಾರೆಯುದ್ದಕ್ಕೂ ಶಾಶ್ವತ ತಡೆಗೋಡೆಯನ್ನು ನಿರ್ಮಿಸಿತ್ತು. ನಂತರ ಈ ಭಾಗದಲ್ಲಿ ಕಡಲ್ಕೊರೆತ ಉಂಟಾಗಿರಲಿಲ್ಲ. ಬೃಹತ್ ಕಲ್ಲುಗಳ ಮೂಲಕ ತಡೆಗೋಡೆಯನ್ನು ನಿರ್ಮಿಸಿದ್ದರಿಂದ ಕಡಲ್ಕೊರೆತಕ್ಕೆ ತಡೆಬಿದ್ದಿತ್ತು. ಆದರೆ ಈ ವರ್ಷ ಮತ್ತೆ ಕಡಲು ತನ್ನ ಆರ್ಭಟವನ್ನು ಮುಂದುವರೆಸಿದೆ. 15 ವರ್ಷಗಳ ನಂತರ ಆರಂಭವಾದ ಕಡಲ್ಕೊರೆತದಿಂದ ಬೃಹತ್ ಕಲ್ಲುಗಳು ನೀರುಪಾಲಾಗುತ್ತಿವೆ.<br /> <br /> ಈಗಾಗಲೇ ಕೆಲವು ಕಡೆಗಳಲ್ಲಿ ಧರೆಗಳು, ಉಸುಕಿನ ದಿಬ್ಬಗಳು ಕುಸಿಯುತ್ತಿದ್ದು, ಸ್ಥಳೀಯ ನಿವಾಸಿಗಳ ನಿದ್ದೆಗಡಿಸಿದೆ. ಈ ಬಗ್ಗೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಗ್ರಾ.ಪಂ. ಅಧ್ಯಕ್ಷ ಉಮೇಶ ಕಾಂಚನ್, ಸದಸ್ಯ ಶ್ರೀಕಾಂತ ನಾಯ್ಕ ಇತರರು ಆಗ್ರಹಿಸಿದ್ದಾರೆ.<br /> <br /> <strong><span style="font-size: 26px;">ಮನೆ ಕುಸಿತ</span></strong><br /> <span style="font-size: 26px;">ಭಟ್ಕಳ: ತಾಲ್ಲೂಕಿನ 24 ತಾಸು ಸುರಿದ್ದ ಭಾರಿ ಮಳೆಗೆ ಎರಡು ಮನೆಗಳು ಕುಸಿದು ಹಾನಿಗೀಡಾಗಿದೆ.</span></p>.<p>ಪಟ್ಟಣದ ಕೋಗ್ತಿನಗರದ ನೂರುನ್ನಿಸ್ ಮೊಯಿದ್ದೀನ್ ಸಾಬ್ ಹಾಗೂ ಬೇಂಗ್ರೆಯಲ್ಲಿ ಸುಬ್ರಾಯ ಅಣ್ಣಪ್ಪ ನಾಯ್ಕ ಎಂಬವರ ಮನೆಗಳು ಮಳೆಯ ರಭಸಕ್ಕೆ ಕುಸಿದು ಹಾನಿಗೀಡಾಗಿದೆ.<br /> <br /> ಸ್ಥಳಕ್ಕೆ ಕಂದಾಯ ಇಲಾಖೆ ಹಾಗು ಸ್ಥಳೀಯ ಗ್ರಾ.ಪಂ.ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಹಾನಿಯ ಅಂದಾಜು ಮಾಡಿದ್ದಾರೆ. ತಾಲ್ಲೂಕಿನಲ್ಲಿ ದಾಖಲೆ ಎಂಬಂತೆ ಮಂಗಳವಾರ 180 ಮಿ.ಮೀ ಮಳೆಯಾಗಿದೆ. ಈವರೆಗೆ ಒಟ್ಟು 682 ಮಿ.ಮೀ. ಮಳೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ಅಂಕೋಲಾ:</strong> ಇಲ್ಲಿಯ ಹಾರವಾಡದ ಕಡಲ ಕಿನಾರೆಯಲ್ಲಿ ಕಳೆದೆರಡು ದಿನಗಳಿಂದ ಕಡಲ್ಕೊರೆತ ಉಂಟಾಗಿದ್ದು, ಮಂಗಳವಾರ ತೀವೃಗೊಂಡಿತು. ಇದು ಸ್ಥಳೀಯ ಮೀನುಗಾರರ ಮತ್ತು ಅಲ್ಲಿಯ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.</span><br /> <br /> ಈ ಭಾಗದಲ್ಲಿಹೆಚ್ಚಿನ ಕಡಲ್ಕೊರೆತ ಉಂಟಾಗುತ್ತಿದ್ದರಿಂದ ಕಳೆದ 15 ವರ್ಷಗಳ ಹಿಂದೆ ಸರ್ಕಾರ ಅಂದು ಈ ಗ್ರಾಮದ ಕಡಲ ಕಿನಾರೆಯುದ್ದಕ್ಕೂ ಶಾಶ್ವತ ತಡೆಗೋಡೆಯನ್ನು ನಿರ್ಮಿಸಿತ್ತು. ನಂತರ ಈ ಭಾಗದಲ್ಲಿ ಕಡಲ್ಕೊರೆತ ಉಂಟಾಗಿರಲಿಲ್ಲ. ಬೃಹತ್ ಕಲ್ಲುಗಳ ಮೂಲಕ ತಡೆಗೋಡೆಯನ್ನು ನಿರ್ಮಿಸಿದ್ದರಿಂದ ಕಡಲ್ಕೊರೆತಕ್ಕೆ ತಡೆಬಿದ್ದಿತ್ತು. ಆದರೆ ಈ ವರ್ಷ ಮತ್ತೆ ಕಡಲು ತನ್ನ ಆರ್ಭಟವನ್ನು ಮುಂದುವರೆಸಿದೆ. 15 ವರ್ಷಗಳ ನಂತರ ಆರಂಭವಾದ ಕಡಲ್ಕೊರೆತದಿಂದ ಬೃಹತ್ ಕಲ್ಲುಗಳು ನೀರುಪಾಲಾಗುತ್ತಿವೆ.<br /> <br /> ಈಗಾಗಲೇ ಕೆಲವು ಕಡೆಗಳಲ್ಲಿ ಧರೆಗಳು, ಉಸುಕಿನ ದಿಬ್ಬಗಳು ಕುಸಿಯುತ್ತಿದ್ದು, ಸ್ಥಳೀಯ ನಿವಾಸಿಗಳ ನಿದ್ದೆಗಡಿಸಿದೆ. ಈ ಬಗ್ಗೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಗ್ರಾ.ಪಂ. ಅಧ್ಯಕ್ಷ ಉಮೇಶ ಕಾಂಚನ್, ಸದಸ್ಯ ಶ್ರೀಕಾಂತ ನಾಯ್ಕ ಇತರರು ಆಗ್ರಹಿಸಿದ್ದಾರೆ.<br /> <br /> <strong><span style="font-size: 26px;">ಮನೆ ಕುಸಿತ</span></strong><br /> <span style="font-size: 26px;">ಭಟ್ಕಳ: ತಾಲ್ಲೂಕಿನ 24 ತಾಸು ಸುರಿದ್ದ ಭಾರಿ ಮಳೆಗೆ ಎರಡು ಮನೆಗಳು ಕುಸಿದು ಹಾನಿಗೀಡಾಗಿದೆ.</span></p>.<p>ಪಟ್ಟಣದ ಕೋಗ್ತಿನಗರದ ನೂರುನ್ನಿಸ್ ಮೊಯಿದ್ದೀನ್ ಸಾಬ್ ಹಾಗೂ ಬೇಂಗ್ರೆಯಲ್ಲಿ ಸುಬ್ರಾಯ ಅಣ್ಣಪ್ಪ ನಾಯ್ಕ ಎಂಬವರ ಮನೆಗಳು ಮಳೆಯ ರಭಸಕ್ಕೆ ಕುಸಿದು ಹಾನಿಗೀಡಾಗಿದೆ.<br /> <br /> ಸ್ಥಳಕ್ಕೆ ಕಂದಾಯ ಇಲಾಖೆ ಹಾಗು ಸ್ಥಳೀಯ ಗ್ರಾ.ಪಂ.ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಹಾನಿಯ ಅಂದಾಜು ಮಾಡಿದ್ದಾರೆ. ತಾಲ್ಲೂಕಿನಲ್ಲಿ ದಾಖಲೆ ಎಂಬಂತೆ ಮಂಗಳವಾರ 180 ಮಿ.ಮೀ ಮಳೆಯಾಗಿದೆ. ಈವರೆಗೆ ಒಟ್ಟು 682 ಮಿ.ಮೀ. ಮಳೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>