<p><strong>ನವದೆಹಲಿ (ಪಿಟಿಐ): </strong>ಆಸ್ಟ್ರೇಲಿಯಾ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಮೂವರು ಸ್ಪೆಶಲಿಸ್ಟ್ ಸ್ಪಿನ್ನರ್ಗಳನ್ನು ಆಡಿಸಬೇಕು ಎಂದು ಪಾಕಿಸ್ತಾನ ತಂಡದ ಮಾಜಿ ನಾಯಕ ವಾಸೀಮ್ ಅಕ್ರಮ್ ಅಭಿಪ್ರಾಯಪಟ್ಟಿದ್ದಾರೆ.</p>.<p>ರಿಕಿ ಪಾಂಟಿಂಗ್ ನೇತೃತ್ವದ ಆಸೀಸ್ ತಂಡ ಸ್ಪಿನ್ ಬೌಲಿಂಗ್ ಮುಂದೆ ತಡಕಾಡುತ್ತದೆ ಎಂಬ ಕಾರಣಕ್ಕೆ ಅವರು ಈ ಸಲಹೆ ನೀಡಿದ್ದಾರೆ. ‘ಅಹಮದಾಬಾದ್ನ ಕ್ರೀಡಾಂಗಣದ ಪಿಚ್ನಲ್ಲಿ ಚೆಂಡು ಹೆಚ್ಚಿನ ತಿರುವು ಪಡೆಯುವುದಾದರೆ, ಮಹೇಂದ್ರ ಸಿಂಗ್ ದೋನಿ ಮೂವರು ಸ್ಪಿನರ್ಗಳನ್ನು ಆಡಿಸಬೇಕು. ಆಸೀಸ್ ಆಟಗಾರರು ಸ್ಪಿನ್ ಎದುರು ಉತ್ತಮವಾಗಿ ಆಡುವುದಿಲ್ಲ’ ಎಂದು ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.</p>.<p>ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿದೆ. ಆದರೆ ಪಿಚ್ ಸ್ಪಿನ್ನರ್ಗಳಿಗೆ ನೆರವು ನೀಡದಿದ್ದರೆ ಭಾರತ ಈ ಯೋಜನೆ ಕೈಬಿಡಬೇಕು ಎಂದಿದ್ದಾರೆ.</p>.<p>‘ಬ್ಯಾಟಿಂಗ್ಗೆ ನೆರವು ನೀಡುವ ಪಿಚ್ನಲ್ಲಿ ಮೂವರು ಸ್ಪಿನ್ನರ್ಗಳನ್ನು ಆಡಿಸಿದರೆ ಅದು ಭಾರತಕ್ಕೆ ತಿರುಗುಬಾಣವಾಗಿ ಪರಿಣಮಿಸಬಹುದು. ಏಕೆಂದರೆ ಫ್ಲಾಟ್ ಪಿಚ್ಗಳಲ್ಲಿ ಸ್ಪಿನ್ನರ್ಗಳಿಗೆ ಯಾವುದೇ ನೆರವು ಲಭಿಸದು’ ಎಂದರು.</p>.<p>ಭಾರತ ತಂಡ ಲೀಗ್ ಹಂತದ ಆರು ಪಂದ್ಯಗಳಲ್ಲಿ ನಾಲ್ಕರಲ್ಲೂ ಇಬ್ಬರು ಸ್ಪೆಶಲಿಸ್ಟ್ ಸ್ಪಿನ್ನರ್ಗಳೊಂದಿಗೆ ಆಡಿದೆ. ಮೂವರು ಸ್ಪಿನ್ನರ್ಗಳನ್ನು (ಹರಭಜನ್ ಸಿಂಗ್, ಆರ್. ಅಶ್ವಿನ್ ಮತ್ತು ಪಿಯೂಷ್ ಚಾವ್ಲ) ಒಟ್ಟಾಗಿ ಯಾವುದೇ ಪಂದ್ಯದಲ್ಲೂ ಕಣಕ್ಕಿಳಿಸಿಲ್ಲ.</p>.<p>ಶ್ರೀಲಂಕಾ ತಂಡ ಆಸ್ಟ್ರೇಲಿಯಾ ವಿರುದ್ಧದ ಲೀಗ್ ಹಂತದ ಪಂದ್ಯದಲ್ಲಿ ಮೂವರು ಸ್ಪಿನ್ನರ್ಗಳೊಂದಿಗೆ ಆಡಿತ್ತು. ಮುತ್ತಯ್ಯ ಮುರಳೀಧರನ್, ಅಜಂತಾ ಮೆಂಡಿಸ್ ಮತ್ತು ರಂಗನಾ ಹೆರಾತ್ ಕಣಕ್ಕಿಳಿದಿದ್ದರು. ಆದರೆ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು.</p>.<p>ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಲೀಗ್ ಪಂದ್ಯಗಳಲ್ಲಿ ಭಾರತದ ಬ್ಯಾಟಿಂಗ್ ಹಠಾತ್ ಕುಸಿತ ಕಂಡಿತ್ತು. ಈ ಆತಂಕವನ್ನು ಹೊತ್ತುಕೊಂಡೇ ಮಹಿ ಬಳಗ ಆಸೀಸ್ ವಿರುದ್ಧ ಆಡಲಿದೆ. ಆದರೆ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಅಕ್ರಮ್ ನುಡಿದಿದ್ದಾರೆ. ‘ಹೌದು. ಕಳೆದ ಎರಡು ಪಂದ್ಯಗಳಲ್ಲಿ ಭಾರತದ ಬ್ಯಾಟಿಂಗ್ ಹಠಾತ್ ಕುಸಿತ ಕಂಡಿತ್ತು. ಇಂತಹ ಘಟನೆ ಕೆಲವೊಮ್ಮೆ ನಡೆಯುವುದು ಸಹಜ. ಇದು ಆತಂಕ ಪಡುವ ವಿಷಯವೇ ಅಲ್ಲ’ ಎಂದಿದ್ದಾರೆ.</p>.<p>ದಕ್ಷಿಣ ಆಫ್ರಿಕಾ ವಿರುದ್ಧ ನಾಗಪುರದಲ್ಲಿ ನಡೆದ ಪಂದ್ಯದಲ್ಲಿ ಭಾರತದ ಒಂಬತ್ತು ವಿಕೆಟ್ಗಳು 29 ರನ್ಗಳ ಅಂತರದಲ್ಲಿ ಉರುಳಿತ್ತು. ವಿಂಡೀಸ್ ವಿರುದ್ಧ ಕೊನೆಯ ಏಳು ವಿಕೆಟ್ಗಳನ್ನು 51 ರನ್ಗಳಿಸುವಷ್ಟರಲ್ಲಿ ಕಳೆದುಕೊಂಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಆಸ್ಟ್ರೇಲಿಯಾ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಮೂವರು ಸ್ಪೆಶಲಿಸ್ಟ್ ಸ್ಪಿನ್ನರ್ಗಳನ್ನು ಆಡಿಸಬೇಕು ಎಂದು ಪಾಕಿಸ್ತಾನ ತಂಡದ ಮಾಜಿ ನಾಯಕ ವಾಸೀಮ್ ಅಕ್ರಮ್ ಅಭಿಪ್ರಾಯಪಟ್ಟಿದ್ದಾರೆ.</p>.<p>ರಿಕಿ ಪಾಂಟಿಂಗ್ ನೇತೃತ್ವದ ಆಸೀಸ್ ತಂಡ ಸ್ಪಿನ್ ಬೌಲಿಂಗ್ ಮುಂದೆ ತಡಕಾಡುತ್ತದೆ ಎಂಬ ಕಾರಣಕ್ಕೆ ಅವರು ಈ ಸಲಹೆ ನೀಡಿದ್ದಾರೆ. ‘ಅಹಮದಾಬಾದ್ನ ಕ್ರೀಡಾಂಗಣದ ಪಿಚ್ನಲ್ಲಿ ಚೆಂಡು ಹೆಚ್ಚಿನ ತಿರುವು ಪಡೆಯುವುದಾದರೆ, ಮಹೇಂದ್ರ ಸಿಂಗ್ ದೋನಿ ಮೂವರು ಸ್ಪಿನರ್ಗಳನ್ನು ಆಡಿಸಬೇಕು. ಆಸೀಸ್ ಆಟಗಾರರು ಸ್ಪಿನ್ ಎದುರು ಉತ್ತಮವಾಗಿ ಆಡುವುದಿಲ್ಲ’ ಎಂದು ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.</p>.<p>ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿದೆ. ಆದರೆ ಪಿಚ್ ಸ್ಪಿನ್ನರ್ಗಳಿಗೆ ನೆರವು ನೀಡದಿದ್ದರೆ ಭಾರತ ಈ ಯೋಜನೆ ಕೈಬಿಡಬೇಕು ಎಂದಿದ್ದಾರೆ.</p>.<p>‘ಬ್ಯಾಟಿಂಗ್ಗೆ ನೆರವು ನೀಡುವ ಪಿಚ್ನಲ್ಲಿ ಮೂವರು ಸ್ಪಿನ್ನರ್ಗಳನ್ನು ಆಡಿಸಿದರೆ ಅದು ಭಾರತಕ್ಕೆ ತಿರುಗುಬಾಣವಾಗಿ ಪರಿಣಮಿಸಬಹುದು. ಏಕೆಂದರೆ ಫ್ಲಾಟ್ ಪಿಚ್ಗಳಲ್ಲಿ ಸ್ಪಿನ್ನರ್ಗಳಿಗೆ ಯಾವುದೇ ನೆರವು ಲಭಿಸದು’ ಎಂದರು.</p>.<p>ಭಾರತ ತಂಡ ಲೀಗ್ ಹಂತದ ಆರು ಪಂದ್ಯಗಳಲ್ಲಿ ನಾಲ್ಕರಲ್ಲೂ ಇಬ್ಬರು ಸ್ಪೆಶಲಿಸ್ಟ್ ಸ್ಪಿನ್ನರ್ಗಳೊಂದಿಗೆ ಆಡಿದೆ. ಮೂವರು ಸ್ಪಿನ್ನರ್ಗಳನ್ನು (ಹರಭಜನ್ ಸಿಂಗ್, ಆರ್. ಅಶ್ವಿನ್ ಮತ್ತು ಪಿಯೂಷ್ ಚಾವ್ಲ) ಒಟ್ಟಾಗಿ ಯಾವುದೇ ಪಂದ್ಯದಲ್ಲೂ ಕಣಕ್ಕಿಳಿಸಿಲ್ಲ.</p>.<p>ಶ್ರೀಲಂಕಾ ತಂಡ ಆಸ್ಟ್ರೇಲಿಯಾ ವಿರುದ್ಧದ ಲೀಗ್ ಹಂತದ ಪಂದ್ಯದಲ್ಲಿ ಮೂವರು ಸ್ಪಿನ್ನರ್ಗಳೊಂದಿಗೆ ಆಡಿತ್ತು. ಮುತ್ತಯ್ಯ ಮುರಳೀಧರನ್, ಅಜಂತಾ ಮೆಂಡಿಸ್ ಮತ್ತು ರಂಗನಾ ಹೆರಾತ್ ಕಣಕ್ಕಿಳಿದಿದ್ದರು. ಆದರೆ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು.</p>.<p>ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಲೀಗ್ ಪಂದ್ಯಗಳಲ್ಲಿ ಭಾರತದ ಬ್ಯಾಟಿಂಗ್ ಹಠಾತ್ ಕುಸಿತ ಕಂಡಿತ್ತು. ಈ ಆತಂಕವನ್ನು ಹೊತ್ತುಕೊಂಡೇ ಮಹಿ ಬಳಗ ಆಸೀಸ್ ವಿರುದ್ಧ ಆಡಲಿದೆ. ಆದರೆ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಅಕ್ರಮ್ ನುಡಿದಿದ್ದಾರೆ. ‘ಹೌದು. ಕಳೆದ ಎರಡು ಪಂದ್ಯಗಳಲ್ಲಿ ಭಾರತದ ಬ್ಯಾಟಿಂಗ್ ಹಠಾತ್ ಕುಸಿತ ಕಂಡಿತ್ತು. ಇಂತಹ ಘಟನೆ ಕೆಲವೊಮ್ಮೆ ನಡೆಯುವುದು ಸಹಜ. ಇದು ಆತಂಕ ಪಡುವ ವಿಷಯವೇ ಅಲ್ಲ’ ಎಂದಿದ್ದಾರೆ.</p>.<p>ದಕ್ಷಿಣ ಆಫ್ರಿಕಾ ವಿರುದ್ಧ ನಾಗಪುರದಲ್ಲಿ ನಡೆದ ಪಂದ್ಯದಲ್ಲಿ ಭಾರತದ ಒಂಬತ್ತು ವಿಕೆಟ್ಗಳು 29 ರನ್ಗಳ ಅಂತರದಲ್ಲಿ ಉರುಳಿತ್ತು. ವಿಂಡೀಸ್ ವಿರುದ್ಧ ಕೊನೆಯ ಏಳು ವಿಕೆಟ್ಗಳನ್ನು 51 ರನ್ಗಳಿಸುವಷ್ಟರಲ್ಲಿ ಕಳೆದುಕೊಂಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>