<p><strong>ಬೆಂಗಳೂರು: </strong>ಇಲ್ಲಿಯ ಕಿರ್ಲೋಸ್ಕರ್ ಕಾಲೋನಿಯ ಶ್ರೀ ತ್ಯಾಗರಾಜ ಗಾನಸಭಾ ಟ್ರಸ್ಟ್ನ 40ನೇ ವರ್ಷದ ಭಗವತ್ ಶಂಕರ ಜಯಂತಿ ಸಂಗೀತೋತ್ಸವ ಸಮಾರಂಭ ಮೇ 4ರಿಂದ ಆರಂಭವಾಗಲಿದ್ದು, ಹಿರಿಯ ಗಾಯಕಿ, ವಿದುಷಿ ಎಂ.ಎಸ್.ಶೀಲಾ ಅವರು ಸಂಗೀತೋತ್ಸವದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ ಎಂದು ಟ್ರಸ್ಟ್ನ ಕೋಶಾಧಿಕಾರಿ ಬಿ.ಕೆ.ಚಂದ್ರಮೌಳಿ ಪ್ರಕಟಿಸಿದರು.<br /> <br /> ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜಾಜಿನಗರದ ಶ್ರೀವಾಣಿ ವಿದ್ಯಾಕೇಂದ್ರದಲ್ಲಿ ಸಂಗೀತೋತ್ಸವ ನಡೆಯಲಿದ್ದು, ಮೇ 4ರಂದು ಸಂಜೆ ಟ್ರಸ್ಟ್ನ ಅಧ್ಯಕ್ಷ ಎಲ್.ಎಸ್.ಶ್ಯಾಮಸುಂದರ ಶರ್ಮ ಕಾರ್ಯಕ್ರಮವನ್ನು ಉದ್ಘಾಟಿಸುವರು’ ಎಂದು ಹೇಳಿದರು.<br /> <br /> ಮೇ 8ರಂದು ನಡೆಯಲಿರುವ ಸಮಾರೋಪದಲ್ಲಿ ಎಂ.ಎಲ್.ಶೀಲಾ ಅವರಿಗೆ ಕಲಾಭೂಷಣ ಬಿರುದು, ಗಾಯಕಿ ಪದ್ಮಾಮೂರ್ತಿ, ಸಂಗೀತಗಾರ್ತಿ ರೇವತಿಮೂರ್ತಿ, ಕಲಾ ಸಂಘಟಕ ಮುಂಬೈನ ಬಿ.ನಾಗಭೂಷಣ, ವೇದ ಪಂಡಿತ ಜಿ.ಎ.ಸುಬ್ರಹ್ಮಣ್ಯ ಶಾಸ್ತ್ರಿ ಅವರಿಗೆ ಗೌರವ ಸಮರ್ಪಣೆ ನಡೆಯಲಿದೆ. <br /> <br /> ಪ್ರತಿದಿನ ಸಂಜೆ 6.30ರಿಂದ ರಾತ್ರಿ 9ರವರೆಗೆ ವಿವಿಧ ಸಂಗೀತ ಕಾರ್ಯಕ್ರಮಗಳು ಜರುಗಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಇಲ್ಲಿಯ ಕಿರ್ಲೋಸ್ಕರ್ ಕಾಲೋನಿಯ ಶ್ರೀ ತ್ಯಾಗರಾಜ ಗಾನಸಭಾ ಟ್ರಸ್ಟ್ನ 40ನೇ ವರ್ಷದ ಭಗವತ್ ಶಂಕರ ಜಯಂತಿ ಸಂಗೀತೋತ್ಸವ ಸಮಾರಂಭ ಮೇ 4ರಿಂದ ಆರಂಭವಾಗಲಿದ್ದು, ಹಿರಿಯ ಗಾಯಕಿ, ವಿದುಷಿ ಎಂ.ಎಸ್.ಶೀಲಾ ಅವರು ಸಂಗೀತೋತ್ಸವದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ ಎಂದು ಟ್ರಸ್ಟ್ನ ಕೋಶಾಧಿಕಾರಿ ಬಿ.ಕೆ.ಚಂದ್ರಮೌಳಿ ಪ್ರಕಟಿಸಿದರು.<br /> <br /> ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜಾಜಿನಗರದ ಶ್ರೀವಾಣಿ ವಿದ್ಯಾಕೇಂದ್ರದಲ್ಲಿ ಸಂಗೀತೋತ್ಸವ ನಡೆಯಲಿದ್ದು, ಮೇ 4ರಂದು ಸಂಜೆ ಟ್ರಸ್ಟ್ನ ಅಧ್ಯಕ್ಷ ಎಲ್.ಎಸ್.ಶ್ಯಾಮಸುಂದರ ಶರ್ಮ ಕಾರ್ಯಕ್ರಮವನ್ನು ಉದ್ಘಾಟಿಸುವರು’ ಎಂದು ಹೇಳಿದರು.<br /> <br /> ಮೇ 8ರಂದು ನಡೆಯಲಿರುವ ಸಮಾರೋಪದಲ್ಲಿ ಎಂ.ಎಲ್.ಶೀಲಾ ಅವರಿಗೆ ಕಲಾಭೂಷಣ ಬಿರುದು, ಗಾಯಕಿ ಪದ್ಮಾಮೂರ್ತಿ, ಸಂಗೀತಗಾರ್ತಿ ರೇವತಿಮೂರ್ತಿ, ಕಲಾ ಸಂಘಟಕ ಮುಂಬೈನ ಬಿ.ನಾಗಭೂಷಣ, ವೇದ ಪಂಡಿತ ಜಿ.ಎ.ಸುಬ್ರಹ್ಮಣ್ಯ ಶಾಸ್ತ್ರಿ ಅವರಿಗೆ ಗೌರವ ಸಮರ್ಪಣೆ ನಡೆಯಲಿದೆ. <br /> <br /> ಪ್ರತಿದಿನ ಸಂಜೆ 6.30ರಿಂದ ರಾತ್ರಿ 9ರವರೆಗೆ ವಿವಿಧ ಸಂಗೀತ ಕಾರ್ಯಕ್ರಮಗಳು ಜರುಗಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>