<p><strong>ಮಂಡ್ಯ:</strong> ಹಲವಾರು ಪ್ರವಾಸಿ ತಾಣಗಳಿಂದ ಖ್ಯಾತಿ ಹೊಂದಿರುವ ಮಂಡ್ಯ ಜಿಲ್ಲೆಯು ರಾಜಕೀಯವಾಗಿಯೂ ಅಷ್ಟೇ ಸುದ್ದಿ ಮಾಡಿದೆ. ಘಟಾನುಘಟಿ ರಾಜಕೀಯ ನಾಯಕರು ಮಂಡ್ಯದಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ.<br /> <br /> ಅಂತಹ ಪ್ರಭಾವಿ ನಾಯಕರದಲ್ಲಿ 1952ರಲ್ಲಿ ನಡೆದ ಮೊದಲ ಚುನಾವಣೆಯಿಂದ ಸತತ ನಾಲ್ಕು ಗೆಲುವು ಪಡೆಯುವ ಮೂಲಕ ಸೋಲಿಲ್ಲದ ಸರ್ದಾರ ಎನಿಸಿಕೊಂಡಿದ್ದವರು ಎಂ.ಕೆ. ಶಿವನಂಜಪ್ಪ.<br /> <br /> ಸ್ವಾತಂತ್ರ್ಯ ನಂತರ 1952ರಲ್ಲಿ ಮೊದಲ ಬಾರಿಗೆ ನಡೆದ ಚುನಾವಣೆಯಲ್ಲಿ ಸರಳ, ಶಿವಭಕ್ತರೂ ಆಗಿದ್ದ ಶಿವನಂಜಪ್ಪ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಾರೆ. ಮಂಡ್ಯದ ಕಾಳನಾಯಕನ ಕೆಂಪೇಗೌಡರ ಪುತ್ರರಾದ ಅವರು, ಹಳ್ಳಿಯಲ್ಲಿ ನ್ಯಾಯ ಪಂಚಾಯಿತಿ ಮಾಡುವ ಮೂಲಕ ಪ್ರಸಿದ್ಧಿ ಪಡೆದುಕೊಂಡಿದ್ದರು.<br /> <br /> ಶಿವನಂಜಪ್ಪ ಅವರ ಎದುರಾಳಿಯಾಗಿ ರಾಜ್ಯದಲ್ಲಿ ಪ್ರಬಲವಾಗಿದ್ದ ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿಯಿಂದ ಎಂ.ಸಿ. ಲಿಂಗೇಗೌಡ ಸ್ಪರ್ಧೆಗೆ ಇಳಿದಿದ್ದರು. 1947ರಿಂದ 52ರವರೆಗಿನ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿ, ಉಪ ಸಭಾಪತಿಗಳಾಗಿಯೂ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದರು.<br /> <br /> ಚುನಾವಣೆ ಎಂದರೆ ಸಾಕು ಹತ್ತಾರು ಮಂದಿ ಪೈಪೋಟಿಗೆ ಬಿದ್ದು ಸ್ಪರ್ಧಿಸುತ್ತಾರೆ. ಆದರೆ, ಮಂಡ್ಯದ ಮೊದಲ ಲೋಕಸಭಾ ಚುನಾವಣೆಗೆ ಇಬ್ಬರೇ ಅಭ್ಯರ್ಥಿಗಳು ಸ್ಪರ್ಧಿಸಿದ್ದು ವಿಶೇಷವಾಗಿತ್ತು. ನೇರಾನೇರ ಹಣಾಹಣಿ ನಡೆಯಿತು.<br /> <br /> ಕೇವಲ 3,60,464 ಮತದಾರರನ್ನು ಹೊಂದಿದ್ದ ಮಂಡ್ಯ ಕ್ಷೇತ್ರದಲ್ಲಿ 2,12,015 ಮಂದಿ ಮತ ಚಲಾಯಿಸಿದರು. ಶೇ 58.82 ಮತದಾನವಾಗಿತ್ತು. ಶಿವನಂಜಪ್ಪ ಅವರು 39,117 ಮತಗಳ ಅಂತರದಿಂದ ಜಯ ಸಾಧಿಸುವ ಮೂಲಕ ಮಂಡ್ಯ ಲೋಕಸಭಾ ಕ್ಷೇತ್ರದ ಮೊದಲ ಸಂಸದ ಎಂಬ ಕೀರ್ತಿಗೆ ಭಾಜನರಾದರು.<br /> <br /> <strong>ಅಭ್ಯರ್ಥಿ ಹೆಸರು ಪಕ್ಷ ಪಡೆದ ಮತ</strong></p>.<p>4ಎಂ.ಕೆ. ಶಿವನಂಜಪ್ಪ ಕಾಂಗ್ರೆಸ್ 1,25,566 (ವಿಜೇತ)</p>.<p>4ಎಂ.ಸಿ. ಲಿಂಗೇಗೌಡ ಕೆಎಂಪಿಪಿ 86,449</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ:</strong> ಹಲವಾರು ಪ್ರವಾಸಿ ತಾಣಗಳಿಂದ ಖ್ಯಾತಿ ಹೊಂದಿರುವ ಮಂಡ್ಯ ಜಿಲ್ಲೆಯು ರಾಜಕೀಯವಾಗಿಯೂ ಅಷ್ಟೇ ಸುದ್ದಿ ಮಾಡಿದೆ. ಘಟಾನುಘಟಿ ರಾಜಕೀಯ ನಾಯಕರು ಮಂಡ್ಯದಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ.<br /> <br /> ಅಂತಹ ಪ್ರಭಾವಿ ನಾಯಕರದಲ್ಲಿ 1952ರಲ್ಲಿ ನಡೆದ ಮೊದಲ ಚುನಾವಣೆಯಿಂದ ಸತತ ನಾಲ್ಕು ಗೆಲುವು ಪಡೆಯುವ ಮೂಲಕ ಸೋಲಿಲ್ಲದ ಸರ್ದಾರ ಎನಿಸಿಕೊಂಡಿದ್ದವರು ಎಂ.ಕೆ. ಶಿವನಂಜಪ್ಪ.<br /> <br /> ಸ್ವಾತಂತ್ರ್ಯ ನಂತರ 1952ರಲ್ಲಿ ಮೊದಲ ಬಾರಿಗೆ ನಡೆದ ಚುನಾವಣೆಯಲ್ಲಿ ಸರಳ, ಶಿವಭಕ್ತರೂ ಆಗಿದ್ದ ಶಿವನಂಜಪ್ಪ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಾರೆ. ಮಂಡ್ಯದ ಕಾಳನಾಯಕನ ಕೆಂಪೇಗೌಡರ ಪುತ್ರರಾದ ಅವರು, ಹಳ್ಳಿಯಲ್ಲಿ ನ್ಯಾಯ ಪಂಚಾಯಿತಿ ಮಾಡುವ ಮೂಲಕ ಪ್ರಸಿದ್ಧಿ ಪಡೆದುಕೊಂಡಿದ್ದರು.<br /> <br /> ಶಿವನಂಜಪ್ಪ ಅವರ ಎದುರಾಳಿಯಾಗಿ ರಾಜ್ಯದಲ್ಲಿ ಪ್ರಬಲವಾಗಿದ್ದ ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿಯಿಂದ ಎಂ.ಸಿ. ಲಿಂಗೇಗೌಡ ಸ್ಪರ್ಧೆಗೆ ಇಳಿದಿದ್ದರು. 1947ರಿಂದ 52ರವರೆಗಿನ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿ, ಉಪ ಸಭಾಪತಿಗಳಾಗಿಯೂ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದರು.<br /> <br /> ಚುನಾವಣೆ ಎಂದರೆ ಸಾಕು ಹತ್ತಾರು ಮಂದಿ ಪೈಪೋಟಿಗೆ ಬಿದ್ದು ಸ್ಪರ್ಧಿಸುತ್ತಾರೆ. ಆದರೆ, ಮಂಡ್ಯದ ಮೊದಲ ಲೋಕಸಭಾ ಚುನಾವಣೆಗೆ ಇಬ್ಬರೇ ಅಭ್ಯರ್ಥಿಗಳು ಸ್ಪರ್ಧಿಸಿದ್ದು ವಿಶೇಷವಾಗಿತ್ತು. ನೇರಾನೇರ ಹಣಾಹಣಿ ನಡೆಯಿತು.<br /> <br /> ಕೇವಲ 3,60,464 ಮತದಾರರನ್ನು ಹೊಂದಿದ್ದ ಮಂಡ್ಯ ಕ್ಷೇತ್ರದಲ್ಲಿ 2,12,015 ಮಂದಿ ಮತ ಚಲಾಯಿಸಿದರು. ಶೇ 58.82 ಮತದಾನವಾಗಿತ್ತು. ಶಿವನಂಜಪ್ಪ ಅವರು 39,117 ಮತಗಳ ಅಂತರದಿಂದ ಜಯ ಸಾಧಿಸುವ ಮೂಲಕ ಮಂಡ್ಯ ಲೋಕಸಭಾ ಕ್ಷೇತ್ರದ ಮೊದಲ ಸಂಸದ ಎಂಬ ಕೀರ್ತಿಗೆ ಭಾಜನರಾದರು.<br /> <br /> <strong>ಅಭ್ಯರ್ಥಿ ಹೆಸರು ಪಕ್ಷ ಪಡೆದ ಮತ</strong></p>.<p>4ಎಂ.ಕೆ. ಶಿವನಂಜಪ್ಪ ಕಾಂಗ್ರೆಸ್ 1,25,566 (ವಿಜೇತ)</p>.<p>4ಎಂ.ಸಿ. ಲಿಂಗೇಗೌಡ ಕೆಎಂಪಿಪಿ 86,449</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>