<p>ದಾವಣಗೆರೆ: ಮೈಮೇಲೆ ಬೇವಿನುಡುಗೆ... ಅವರನ್ನು ಸುತ್ತುವರಿದ ಕುಟುಂಬಸ್ಥರು... ಕೈಯಲ್ಲಿ ಕಳಸ; ಬಾಯಲ್ಲಿ ಉಧೋ... ಉಧೋ... ಜಪ. <br /> <br /> ಹೀಗೆ ನಗರದ ಬಹುತೇಕ ಭಕ್ತರು ಮಂಗಳವಾರ ರಾತ್ರಿಯಿಡೀ ದುರ್ಗಾಂಬಿಕಾ ದೇವಸ್ಥಾನಕ್ಕೆ ತೆರಳುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.<br /> <br /> ಬೇವಿನುಡುಗೆ ತೊಟ್ಟವರು ದೇವರೇ ಮೈಮೇಲೆ ಬಂದವರಂತೆ ಹೆಜ್ಜೆ ಹಾಕಿದರು. ಉಡುಗೆ ಕಳಚಿಬೀಳದಂತೆ ಸಂಬಂಧಿಕರು ನೋಡಿಕೊಂಡರು. ಕೊಡ ಹಿಡಿದು ದೇವಸ್ಥಾನದ ಸುತ್ತ ಉರುಳು ಸೇವೆ ಮಾಡುವವರ ಮೈಮೇಲೆ ತಣ್ಣೀರು ಸುರಿಯುತ್ತಿದ್ದರೆ, ಅತ್ತ ಬೇವಿನುಡುಗೆ ತೊಟ್ಟ ಪುಟ್ಟಪುಟ್ಟ ಮಕ್ಕಳು ಬೆಳಿಗ್ಗೆಯ ಚಳಿಗೆ `ಚಿಳ್ಳ್~ ಎನ್ನುತ್ತಿದ್ದರು. ಆದರೂ, ಅವರ ಅಪ್ಪ, ಅಮ್ಮ ಬಿಡದೇ ದೇವರಿಗೆ ಪ್ರದಕ್ಷಿಣೆ ಹಾಕಿಸಿ, ಹರಕೆ ತೀರಿಸಿದ ಸಂತೃಪ್ತಭಾವದಲ್ಲಿ ಮಿಂದರು.<br /> <br /> ದುರ್ಗಾಂಬಿಕಾ ದೇವಸ್ಥಾನದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಹಬ್ಬದಲ್ಲಿ ಬೇವಿನುಡುಗೆ ಸೇವೆ ಹತ್ತಾರು ವರ್ಷಗಳಿಂದ ನಡೆಯುತ್ತಿದೆ. ಈ ವರ್ಷವೂ ಮಂಗಳವಾರ ರಾತ್ರಿಯಿಂದ ಬುಧವಾರವಿಡೀ ನಿರಾತಂಕವಾಗಿ ನಡೆಯಿತು.<br /> <br /> ಉಧೋ... ಉಧೋ... ಸದ್ದು, ಹಬ್ಬದ ಸಡಗರಕ್ಕೆ ಬಹುತೇಕ ಬಡಾವಣೆಯ ಮಂದಿ ಮಂಗಳವಾರ ರಾತ್ರಿಯಿಡೀ ನಿದ್ರಿಸಲೇ ಇಲ್ಲ! ಇನ್ನೂ ಬುಧವಾರ ಬಾಡೂಟದ ಜತೆಗೆ `ಮದ್ಯ~ ಅವರನ್ನು ಮಲಗಲೂ ಬಿಡಲಿಲ್ಲ. ಹೀಗೆ ವಿವಿಧೆಡೆಯಿಂದ ನೆಂಟರಿಷ್ಟರು ಆಗಮಿಸಿ, ಜಾತ್ರೆಯ `ಸವಿ~ ಸವಿದರು. ಮಕ್ಕಳಿಲ್ಲದವರು ಮಕ್ಕಳಿಗೆ, ಉದ್ಯೋಗಕ್ಕಾಗಿ, ಭೂಮಿ ವಿವಾದ ಸೇರಿದಂತೆ ಹಲವಾರು ಸಮಸ್ಯೆ ಇತ್ಯರ್ಥಪಡಿಸಿದ ದೇವಿಗೆ ಹರಕೆ ತೀರಿಸಿ ಕೃತಾರ್ಥರಾದರು.<br /> <br /> ನಗರದ ವಿವಿಧ ಬಡಾವಣೆಗಳಿಂದ ಆಮಿಸಿದ ಭಕ್ತರು ದೇಗುಲದ ಸಮೀಪ ವ್ಯವಸ್ಥೆ ಮಾಡಿದ್ದ ನೀರಿನಲ್ಲಿ ಮಿಂದು ಉರುಳು ಸೇವೆ ಮಾಡಿದರು. ಕಾಯಿಲೆ-ಕಸಾಲೆ ಗುಣವಾಗಲಿ ಎಂದು ಈ ಸೇವೆ ಮಾಡುವುದು ಎಷ್ಟುಸರಿ. ಕೆಲವು ಪದವೀಧರರೂ, ಉದ್ಯೋಗಸ್ಥರೂ ಮೌಢ್ಯದಲ್ಲಿ ಹೊರಾಳಾಡಿದ್ದು ಮಾತ್ರ ದುರಂತ ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯ.<br /> <br /> ಸಮಸ್ಯೆ ಬಂದಾಗ ಈ ಶಕ್ತಿ ದೇವತೆಗೆ ಹರಕೆ ಕಟ್ಟಿಕೊಂಡರೆ ಎಲ್ಲವೂ ಸುಗಮವಾಗಿ ನೆರವೇರುತ್ತವೆ. ಅದೇ ಕಾರಣಕ್ಕೆ ಹರಕೆ ತೀರಿಸಲು ಬಂದಿದ್ದೇನೆ. ಕೆಲವರು ಮೂರು ಹಬ್ಬದಲ್ಲಿ ಈ ಸೇವೆ ತೀರುಸುತ್ತೇವೆ ಎಂದು ಹರಕೆ ಕಟ್ಟಿಕೊಳ್ಳುತ್ತಾರೆ. ಮತ್ತೆ ಕೆಲವರು ಒಂದು ಹಬ್ಬದಲ್ಲಿ ಬೇವಿನುಡುಗೆ ಸೇವೆ ನಡೆಸುತ್ತಾರೆ. ಅದು ಅವರವರ ಇಚ್ಛೆಗೆ ಬಿಟ್ಟವಿಚಾರ~ ಎಂದು ಹರಿಹರದಿಂದ ಬಂದಿದ್ದ ಭಕ್ತರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದಾವಣಗೆರೆ: ಮೈಮೇಲೆ ಬೇವಿನುಡುಗೆ... ಅವರನ್ನು ಸುತ್ತುವರಿದ ಕುಟುಂಬಸ್ಥರು... ಕೈಯಲ್ಲಿ ಕಳಸ; ಬಾಯಲ್ಲಿ ಉಧೋ... ಉಧೋ... ಜಪ. <br /> <br /> ಹೀಗೆ ನಗರದ ಬಹುತೇಕ ಭಕ್ತರು ಮಂಗಳವಾರ ರಾತ್ರಿಯಿಡೀ ದುರ್ಗಾಂಬಿಕಾ ದೇವಸ್ಥಾನಕ್ಕೆ ತೆರಳುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.<br /> <br /> ಬೇವಿನುಡುಗೆ ತೊಟ್ಟವರು ದೇವರೇ ಮೈಮೇಲೆ ಬಂದವರಂತೆ ಹೆಜ್ಜೆ ಹಾಕಿದರು. ಉಡುಗೆ ಕಳಚಿಬೀಳದಂತೆ ಸಂಬಂಧಿಕರು ನೋಡಿಕೊಂಡರು. ಕೊಡ ಹಿಡಿದು ದೇವಸ್ಥಾನದ ಸುತ್ತ ಉರುಳು ಸೇವೆ ಮಾಡುವವರ ಮೈಮೇಲೆ ತಣ್ಣೀರು ಸುರಿಯುತ್ತಿದ್ದರೆ, ಅತ್ತ ಬೇವಿನುಡುಗೆ ತೊಟ್ಟ ಪುಟ್ಟಪುಟ್ಟ ಮಕ್ಕಳು ಬೆಳಿಗ್ಗೆಯ ಚಳಿಗೆ `ಚಿಳ್ಳ್~ ಎನ್ನುತ್ತಿದ್ದರು. ಆದರೂ, ಅವರ ಅಪ್ಪ, ಅಮ್ಮ ಬಿಡದೇ ದೇವರಿಗೆ ಪ್ರದಕ್ಷಿಣೆ ಹಾಕಿಸಿ, ಹರಕೆ ತೀರಿಸಿದ ಸಂತೃಪ್ತಭಾವದಲ್ಲಿ ಮಿಂದರು.<br /> <br /> ದುರ್ಗಾಂಬಿಕಾ ದೇವಸ್ಥಾನದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಹಬ್ಬದಲ್ಲಿ ಬೇವಿನುಡುಗೆ ಸೇವೆ ಹತ್ತಾರು ವರ್ಷಗಳಿಂದ ನಡೆಯುತ್ತಿದೆ. ಈ ವರ್ಷವೂ ಮಂಗಳವಾರ ರಾತ್ರಿಯಿಂದ ಬುಧವಾರವಿಡೀ ನಿರಾತಂಕವಾಗಿ ನಡೆಯಿತು.<br /> <br /> ಉಧೋ... ಉಧೋ... ಸದ್ದು, ಹಬ್ಬದ ಸಡಗರಕ್ಕೆ ಬಹುತೇಕ ಬಡಾವಣೆಯ ಮಂದಿ ಮಂಗಳವಾರ ರಾತ್ರಿಯಿಡೀ ನಿದ್ರಿಸಲೇ ಇಲ್ಲ! ಇನ್ನೂ ಬುಧವಾರ ಬಾಡೂಟದ ಜತೆಗೆ `ಮದ್ಯ~ ಅವರನ್ನು ಮಲಗಲೂ ಬಿಡಲಿಲ್ಲ. ಹೀಗೆ ವಿವಿಧೆಡೆಯಿಂದ ನೆಂಟರಿಷ್ಟರು ಆಗಮಿಸಿ, ಜಾತ್ರೆಯ `ಸವಿ~ ಸವಿದರು. ಮಕ್ಕಳಿಲ್ಲದವರು ಮಕ್ಕಳಿಗೆ, ಉದ್ಯೋಗಕ್ಕಾಗಿ, ಭೂಮಿ ವಿವಾದ ಸೇರಿದಂತೆ ಹಲವಾರು ಸಮಸ್ಯೆ ಇತ್ಯರ್ಥಪಡಿಸಿದ ದೇವಿಗೆ ಹರಕೆ ತೀರಿಸಿ ಕೃತಾರ್ಥರಾದರು.<br /> <br /> ನಗರದ ವಿವಿಧ ಬಡಾವಣೆಗಳಿಂದ ಆಮಿಸಿದ ಭಕ್ತರು ದೇಗುಲದ ಸಮೀಪ ವ್ಯವಸ್ಥೆ ಮಾಡಿದ್ದ ನೀರಿನಲ್ಲಿ ಮಿಂದು ಉರುಳು ಸೇವೆ ಮಾಡಿದರು. ಕಾಯಿಲೆ-ಕಸಾಲೆ ಗುಣವಾಗಲಿ ಎಂದು ಈ ಸೇವೆ ಮಾಡುವುದು ಎಷ್ಟುಸರಿ. ಕೆಲವು ಪದವೀಧರರೂ, ಉದ್ಯೋಗಸ್ಥರೂ ಮೌಢ್ಯದಲ್ಲಿ ಹೊರಾಳಾಡಿದ್ದು ಮಾತ್ರ ದುರಂತ ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯ.<br /> <br /> ಸಮಸ್ಯೆ ಬಂದಾಗ ಈ ಶಕ್ತಿ ದೇವತೆಗೆ ಹರಕೆ ಕಟ್ಟಿಕೊಂಡರೆ ಎಲ್ಲವೂ ಸುಗಮವಾಗಿ ನೆರವೇರುತ್ತವೆ. ಅದೇ ಕಾರಣಕ್ಕೆ ಹರಕೆ ತೀರಿಸಲು ಬಂದಿದ್ದೇನೆ. ಕೆಲವರು ಮೂರು ಹಬ್ಬದಲ್ಲಿ ಈ ಸೇವೆ ತೀರುಸುತ್ತೇವೆ ಎಂದು ಹರಕೆ ಕಟ್ಟಿಕೊಳ್ಳುತ್ತಾರೆ. ಮತ್ತೆ ಕೆಲವರು ಒಂದು ಹಬ್ಬದಲ್ಲಿ ಬೇವಿನುಡುಗೆ ಸೇವೆ ನಡೆಸುತ್ತಾರೆ. ಅದು ಅವರವರ ಇಚ್ಛೆಗೆ ಬಿಟ್ಟವಿಚಾರ~ ಎಂದು ಹರಿಹರದಿಂದ ಬಂದಿದ್ದ ಭಕ್ತರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>