<p><strong>ಬಳ್ಳಾರಿ: </strong>ಸ್ಥಳೀಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ವಿದ್ಯಾರ್ಥಿ ಹೋರಾಟ ಸಮಿತಿ ಪದಾಧಿಕಾರಿಗಳು ಶುಕ್ರವಾರ ವಿವಿಯ ಕುಲಪತಿ ಡಾ.ಮಂಜಪ್ಪ ಹೊಸಮನೆ ಹಾಗೂ ಕುಲಸಚಿವರಾದ ರಂಗರಾಜ ವನದುರ್ಗ ಅವರನ್ನು ಭೇಟಿ ಮಾಡಿ, ಮೌಲ್ಯಮಾಪನ ಸಮಸ್ಯೆಗಳ ಕುರಿತು ಚರ್ಚಿಸಿ, ಸಮಸ್ಯೆಗಳ ಪರಿಹಾರ ಕೋರಿದರು.<br /> <br /> ಮೌಲ್ಯಮಾಪನ ದೋಷದಿಂದಾಗಿ ನ್ಯಾಯಯುತವಾಗಿ ಅಂಕ ಪಡೆಯದ ವಿದ್ಯಾರ್ಥಿಗಳಿಂದ ರಿಯಾಯಿತಿ ಶುಲ್ಕ ಪಡೆದು, ಮರು ಮೌಲ್ಯಮಾಪನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಕುಲಪತಿಗಳು ಭರವಸೆ ನೀಡಿದರು.<br /> ಕಾಲೇಜುಗಳಿಗೆ ಈ ಕುರಿತು ಸುತ್ತೋಲೆ ಕಳುಹಿಸಲಾಗುವುದು, ಎಲ್ಲ ವಿಷಯಗಳ ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಯ ಹಸ್ತ್ರಪ್ರತಿ ನೀಡಲೂ ಕಡಿಮೆ ಶುಲ್ಕ ಪಡೆಯಲು ಕ್ರಮ ಕೈಗೊಳ್ಳಲಾಗುವುದು.<br /> <br /> ಈ ಕುರಿತು ಮಾರ್ಚ್ 21 ರಂದು ನಡೆಯಲಿರುವ ಅಕಾಡೆಮಿಕ್ ಕೌನ್ಸಿಲ್ನ ಸಭೆಯಲ್ಲಿ ಚರ್ಚಿಸಿ, ವಿದ್ಯಾರ್ಥಿಗಳ ಪರ ನಿರ್ಧಾರ ಕೈಕೊಳ್ಳಲಾಗುವುದು, ಸ್ಥಳೀಯ ವೀರಶೈವ ವಾಣಿಜ್ಯ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಪಡೆದ ವಿವಿಧ ವಿಷಯಗಳ ಮೌಖಿಕ ಪರೀಕ್ಷೆ ಯ ಅಂಕಗಳನ್ನು ಅಂಕಪಟ್ಟಿಯಲ್ಲಿ ಸೇರಿಸಿ, ಹೊಸ ಅಂಕಪಟ್ಟಿ ನೀಡ ಲಾಗುವುದು.<br /> <br /> ಆಯಾ ಸೆಮಿಸ್ಟರ್ಗಳ ಪರೀಕ್ಷೆಯ ದಿನಾಂಕವನ್ನು ಒಂದು ತಿಂಗಳು ಅಥವಾ ಕನಿಷ್ಠ 20 ದಿನ ಮುಂಚಿತವಾಗಿ ಘೋಷಿಸಲಾಗು ವುದು, ಎರಡು ವಿಷಯಗಳ ಪರೀಕ್ಷೆಗಳ ನಡುವೆ ಕನಿಷ್ಠ ಒಂದು ದಿನದ ಸಮಯಾವಕಾಶ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.<br /> <br /> ಹೋರಾಟ ಸಮಿತಿ ಸಂಚಾಲಕ ಡಾ.ಪ್ರಮೋದ್ ಸಹ ಸಂಚಾಲಕ ಅರುಣ್, ಸಿದ್ಧಾರ್ಥ, ವಿನಯ್, ದೀಪಕ್, ದೇವಿಸಿಂಗ್ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ: </strong>ಸ್ಥಳೀಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ವಿದ್ಯಾರ್ಥಿ ಹೋರಾಟ ಸಮಿತಿ ಪದಾಧಿಕಾರಿಗಳು ಶುಕ್ರವಾರ ವಿವಿಯ ಕುಲಪತಿ ಡಾ.ಮಂಜಪ್ಪ ಹೊಸಮನೆ ಹಾಗೂ ಕುಲಸಚಿವರಾದ ರಂಗರಾಜ ವನದುರ್ಗ ಅವರನ್ನು ಭೇಟಿ ಮಾಡಿ, ಮೌಲ್ಯಮಾಪನ ಸಮಸ್ಯೆಗಳ ಕುರಿತು ಚರ್ಚಿಸಿ, ಸಮಸ್ಯೆಗಳ ಪರಿಹಾರ ಕೋರಿದರು.<br /> <br /> ಮೌಲ್ಯಮಾಪನ ದೋಷದಿಂದಾಗಿ ನ್ಯಾಯಯುತವಾಗಿ ಅಂಕ ಪಡೆಯದ ವಿದ್ಯಾರ್ಥಿಗಳಿಂದ ರಿಯಾಯಿತಿ ಶುಲ್ಕ ಪಡೆದು, ಮರು ಮೌಲ್ಯಮಾಪನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಕುಲಪತಿಗಳು ಭರವಸೆ ನೀಡಿದರು.<br /> ಕಾಲೇಜುಗಳಿಗೆ ಈ ಕುರಿತು ಸುತ್ತೋಲೆ ಕಳುಹಿಸಲಾಗುವುದು, ಎಲ್ಲ ವಿಷಯಗಳ ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಯ ಹಸ್ತ್ರಪ್ರತಿ ನೀಡಲೂ ಕಡಿಮೆ ಶುಲ್ಕ ಪಡೆಯಲು ಕ್ರಮ ಕೈಗೊಳ್ಳಲಾಗುವುದು.<br /> <br /> ಈ ಕುರಿತು ಮಾರ್ಚ್ 21 ರಂದು ನಡೆಯಲಿರುವ ಅಕಾಡೆಮಿಕ್ ಕೌನ್ಸಿಲ್ನ ಸಭೆಯಲ್ಲಿ ಚರ್ಚಿಸಿ, ವಿದ್ಯಾರ್ಥಿಗಳ ಪರ ನಿರ್ಧಾರ ಕೈಕೊಳ್ಳಲಾಗುವುದು, ಸ್ಥಳೀಯ ವೀರಶೈವ ವಾಣಿಜ್ಯ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಪಡೆದ ವಿವಿಧ ವಿಷಯಗಳ ಮೌಖಿಕ ಪರೀಕ್ಷೆ ಯ ಅಂಕಗಳನ್ನು ಅಂಕಪಟ್ಟಿಯಲ್ಲಿ ಸೇರಿಸಿ, ಹೊಸ ಅಂಕಪಟ್ಟಿ ನೀಡ ಲಾಗುವುದು.<br /> <br /> ಆಯಾ ಸೆಮಿಸ್ಟರ್ಗಳ ಪರೀಕ್ಷೆಯ ದಿನಾಂಕವನ್ನು ಒಂದು ತಿಂಗಳು ಅಥವಾ ಕನಿಷ್ಠ 20 ದಿನ ಮುಂಚಿತವಾಗಿ ಘೋಷಿಸಲಾಗು ವುದು, ಎರಡು ವಿಷಯಗಳ ಪರೀಕ್ಷೆಗಳ ನಡುವೆ ಕನಿಷ್ಠ ಒಂದು ದಿನದ ಸಮಯಾವಕಾಶ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.<br /> <br /> ಹೋರಾಟ ಸಮಿತಿ ಸಂಚಾಲಕ ಡಾ.ಪ್ರಮೋದ್ ಸಹ ಸಂಚಾಲಕ ಅರುಣ್, ಸಿದ್ಧಾರ್ಥ, ವಿನಯ್, ದೀಪಕ್, ದೇವಿಸಿಂಗ್ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>