<p><strong>ಪುಣೆ (ಐಎಎನ್ಎಸ್): </strong>2010ರಲ್ಲಿ ನಡೆದ ಜರ್ಮನ್ ಬೇಕರಿ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮತ್ತು ಇಂಡಿಯನ್ ಮುಜಾಹಿದೀನ್ (ಐಎಂ) ಸ್ಥಾಪಕ ಯಾಸೀನ್ ಭಟ್ಕಳನನ್ನು ಶುಕ್ರವಾರ ಇಲ್ಲಿನ ಕೋರ್ಟ್ 14 ದಿನಗಳ ಪೊಲೀಸ್ ವಶಕ್ಕೆ ಒಪ್ಪಿಸಿದೆ.<br /> <br /> ‘ಯಾಸೀನ್ನನ್ನು ಮುಂಬೈಯಿಂದ ಕರೆತಂದು ಇಲ್ಲಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಸ್.ಡಿ. ದರ್ಣೆ ಅವರ ಮುಂದೆ ಹಾಜರುಪಡಿಸಲಾಯಿತು. ಅವರು ಯಾಸೀನ್ನನ್ನು ಮಾರ್ಚ್ 28ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ’ ಎಂದು ಆರೋಪಿ ಪರ ವಕೀಲ ಐ.ಪಿ.ಎಸ್ ಗಿಲ್ ಅವರು ಹೇಳಿದ್ದಾರೆ.<br /> <br /> ಯಾಸೀನ್ನನ್ನು ಪೊಲೀಸ್ ವಶಕ್ಕೆ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ಭಯೋತ್ಪಾದನ ನಿಗ್ರಹ ದಳದ ಸಹಾಯಕ ಪೊಲೀಸ್ ಆಯುಕ್ತ ಶಾಂತಾರಾಮ ಟಾಯ್ದೆ, ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ವಿಷಯಗಳನ್ನು ಸ್ಪಷ್ಟಪಡಿಸಿಕೊಳ್ಳಬೇಕಾಗಿದೆ. ಆದ್ದರಿಂದ ಅವನನ್ನು ಪೊಲೀಸ್ ವಶಕ್ಕೆ ಒಪ್ಪಿಸಬೇಕು’ ಎಂದು ಹೇಳಿದ್ದರು.<br /> <br /> ‘17ಜನರು ಸಾವನ್ನಪ್ಪಿ, 64 ಜನರು ಗಾಯಗೊಂಡಿದ್ದ ಜರ್ಮನ್ ಬೇಕರಿ ಬಾಂಬ್ಸ್ಫೋಟ ಪ್ರಕರಣದಲ್ಲಿ ಬಾಂಬ್ ಇರಿಸಿದ್ದು ಯಾಸೀನ್ ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ. ಆದರೆ ಈ ಸ್ಫೋಟದಲ್ಲಿ ಬಳಸಿದ್ದ ಸ್ಫೋಟಕಗಳನ್ನು ಈತ ಎಲ್ಲಿಂದ ಪಡೆದಿದ್ದ ಎಂಬುದರ ತನಿಖೆಗಾಗಿ ಪೊಲೀಸರು ಯಾಸೀನ್ನನ್ನು ವಿಚಾರಣೆಗೆ ಒಳಪಡಿಸಬೇಕಾಗಿದೆ’ ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುಣೆ (ಐಎಎನ್ಎಸ್): </strong>2010ರಲ್ಲಿ ನಡೆದ ಜರ್ಮನ್ ಬೇಕರಿ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮತ್ತು ಇಂಡಿಯನ್ ಮುಜಾಹಿದೀನ್ (ಐಎಂ) ಸ್ಥಾಪಕ ಯಾಸೀನ್ ಭಟ್ಕಳನನ್ನು ಶುಕ್ರವಾರ ಇಲ್ಲಿನ ಕೋರ್ಟ್ 14 ದಿನಗಳ ಪೊಲೀಸ್ ವಶಕ್ಕೆ ಒಪ್ಪಿಸಿದೆ.<br /> <br /> ‘ಯಾಸೀನ್ನನ್ನು ಮುಂಬೈಯಿಂದ ಕರೆತಂದು ಇಲ್ಲಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಸ್.ಡಿ. ದರ್ಣೆ ಅವರ ಮುಂದೆ ಹಾಜರುಪಡಿಸಲಾಯಿತು. ಅವರು ಯಾಸೀನ್ನನ್ನು ಮಾರ್ಚ್ 28ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ’ ಎಂದು ಆರೋಪಿ ಪರ ವಕೀಲ ಐ.ಪಿ.ಎಸ್ ಗಿಲ್ ಅವರು ಹೇಳಿದ್ದಾರೆ.<br /> <br /> ಯಾಸೀನ್ನನ್ನು ಪೊಲೀಸ್ ವಶಕ್ಕೆ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ಭಯೋತ್ಪಾದನ ನಿಗ್ರಹ ದಳದ ಸಹಾಯಕ ಪೊಲೀಸ್ ಆಯುಕ್ತ ಶಾಂತಾರಾಮ ಟಾಯ್ದೆ, ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ವಿಷಯಗಳನ್ನು ಸ್ಪಷ್ಟಪಡಿಸಿಕೊಳ್ಳಬೇಕಾಗಿದೆ. ಆದ್ದರಿಂದ ಅವನನ್ನು ಪೊಲೀಸ್ ವಶಕ್ಕೆ ಒಪ್ಪಿಸಬೇಕು’ ಎಂದು ಹೇಳಿದ್ದರು.<br /> <br /> ‘17ಜನರು ಸಾವನ್ನಪ್ಪಿ, 64 ಜನರು ಗಾಯಗೊಂಡಿದ್ದ ಜರ್ಮನ್ ಬೇಕರಿ ಬಾಂಬ್ಸ್ಫೋಟ ಪ್ರಕರಣದಲ್ಲಿ ಬಾಂಬ್ ಇರಿಸಿದ್ದು ಯಾಸೀನ್ ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ. ಆದರೆ ಈ ಸ್ಫೋಟದಲ್ಲಿ ಬಳಸಿದ್ದ ಸ್ಫೋಟಕಗಳನ್ನು ಈತ ಎಲ್ಲಿಂದ ಪಡೆದಿದ್ದ ಎಂಬುದರ ತನಿಖೆಗಾಗಿ ಪೊಲೀಸರು ಯಾಸೀನ್ನನ್ನು ವಿಚಾರಣೆಗೆ ಒಳಪಡಿಸಬೇಕಾಗಿದೆ’ ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>