<p><strong>ನವದೆಹಲಿ (ಪಿಟಿಐ): </strong>ವೋಟಿಗಾಗಿ ನೋಟು ಪ್ರಕರಣದಿಂದ ಯಾರಿಗೆ ಲಾಭವಾಗಿದೆಯೋ ಅವರನ್ನು ಪೊಲೀಸರು ಏಕೆ ತನಿಖೆಗೆ ಒಳಪಡಿಸಿಲ್ಲ ಎಂದು ಈ ಹಗರಣದ ಆಪಾದನೆ ಮೇಲೆ ಬಂಧಿತರಾದ ಸುಧೀಂದ್ರ ಕುಲಕರ್ಣಿ ನ್ಯಾಯಾಲಯದಲ್ಲಿ ಶನಿವಾರ ಪ್ರಶ್ನಿಸಿದ್ದಾರೆ.<br /> <br /> ಜಾಮೀನು ನೀಡುವಂತೆ ನ್ಯಾಯಾಲಯವನ್ನು ಕೋರಿದ ಅವರು, `ಈ ಪ್ರಕರಣದಲ್ಲಿ ಯುಪಿಎ-1 ಸರ್ಕಾರದ `ಅನೇಕರು~ ನೈಜ ಫಲಾನುಭವಿಗಳು ಮತ್ತು ಆರೋಪಿಗಳು. ಆದರೆ ಅವರನ್ನು ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಮುಟ್ಟಲು ಆಗಿಲ್ಲ~ ಎಂದರು.<br /> <br /> `ನೈಜ ಫಲಾನುಭವಿಗಳು ಯಾರು ಎಂದು ಪ್ರಶ್ನಿಸಿದರೆ ಪೊಲೀಸರು ನಿರುತ್ತರರಾಗುತ್ತಾರೆ. ಏಕೆಂದರೆ ಯುಪಿಎ-1 ಸರ್ಕಾರವೇ ನಿಜವಾದ ಫಲಾನುಭವಿ. ಆ ಸರ್ಕಾರದಲ್ಲಿದ್ದ ಯಾರನ್ನೂ ಪೊಲೀಸರು ತನಿಖೆಗೆ ಒಳಪಡಿಸಿಲ್ಲ~ ಎಂದು ಸುಧೀಂದ್ರ ಕುಲಕರ್ಣಿ ಪರ ವಕೀಲರು ಆರೋಪಿಸಿದರು.<br /> <br /> `ಸಂಸದರಿಗೆ ಆಮಿಷ ಒಡ್ಡಲು ಅಷ್ಟೊಂದು ಹಣ ಎಲ್ಲಿಂದ ಬಂತು? ಅಮರ್ ಸಿಂಗ್ಗೆ ಹಣ ನೀಡಿದವರು ಯಾರು? ಪೊಲೀಸರು ಈ ಹಣದ ಜಾಡನ್ನು ಭೇದಿಸಲು ವಿಫಲರಾಗಿದ್ದಾರೆ. ಹಾಗಾಗಿ ಇದು ಈಗಲೂ ಬಗೆಹರಿಯದ ಪ್ರಶ್ನೆಯಾಗಿದೆ~ ಎಂದರು.<br /> <br /> `ನನ್ನ ಕಕ್ಷಿದಾರರು ಮುಗ್ಧರು. ಅವರು ಹಣ ಮಾಡಿಕೊಳ್ಳಲು ಈ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂಬುದಕ್ಕೆ ಲವಲೇಶದ ಸಾಕ್ಷಿಯೂ ಇಲ್ಲ. ವಿಶ್ವಾಸ ಮತಗಳಿಸಲು ಸರ್ಕಾರ ಪ್ರತಿಪಕ್ಷಗಳ ಸಂಸದರನ್ನು ಖರೀದಿಸಲು ತೊಡಗಿತ್ತು. ಭ್ರಷ್ಟಾಚಾರದ ಈ ಅತಿರೇಕವನ್ನು ಬಹಿರಂಗಪಡಿಸಲು ನನ್ನ ಕಕ್ಷಿದಾರರು ಮಾಡಿದ ಪ್ರಯತ್ನ ಅದು (ಸಂಸತ್ನಲ್ಲಿ ಹಣದ ಕಂತೆಗಳ ಪ್ರದರ್ಶನ)~ ಎಂದು ಕುಲಕರ್ಣಿ ಪರ ವಕೀಲರು ಹೇಳಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ವೋಟಿಗಾಗಿ ನೋಟು ಪ್ರಕರಣದಿಂದ ಯಾರಿಗೆ ಲಾಭವಾಗಿದೆಯೋ ಅವರನ್ನು ಪೊಲೀಸರು ಏಕೆ ತನಿಖೆಗೆ ಒಳಪಡಿಸಿಲ್ಲ ಎಂದು ಈ ಹಗರಣದ ಆಪಾದನೆ ಮೇಲೆ ಬಂಧಿತರಾದ ಸುಧೀಂದ್ರ ಕುಲಕರ್ಣಿ ನ್ಯಾಯಾಲಯದಲ್ಲಿ ಶನಿವಾರ ಪ್ರಶ್ನಿಸಿದ್ದಾರೆ.<br /> <br /> ಜಾಮೀನು ನೀಡುವಂತೆ ನ್ಯಾಯಾಲಯವನ್ನು ಕೋರಿದ ಅವರು, `ಈ ಪ್ರಕರಣದಲ್ಲಿ ಯುಪಿಎ-1 ಸರ್ಕಾರದ `ಅನೇಕರು~ ನೈಜ ಫಲಾನುಭವಿಗಳು ಮತ್ತು ಆರೋಪಿಗಳು. ಆದರೆ ಅವರನ್ನು ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಮುಟ್ಟಲು ಆಗಿಲ್ಲ~ ಎಂದರು.<br /> <br /> `ನೈಜ ಫಲಾನುಭವಿಗಳು ಯಾರು ಎಂದು ಪ್ರಶ್ನಿಸಿದರೆ ಪೊಲೀಸರು ನಿರುತ್ತರರಾಗುತ್ತಾರೆ. ಏಕೆಂದರೆ ಯುಪಿಎ-1 ಸರ್ಕಾರವೇ ನಿಜವಾದ ಫಲಾನುಭವಿ. ಆ ಸರ್ಕಾರದಲ್ಲಿದ್ದ ಯಾರನ್ನೂ ಪೊಲೀಸರು ತನಿಖೆಗೆ ಒಳಪಡಿಸಿಲ್ಲ~ ಎಂದು ಸುಧೀಂದ್ರ ಕುಲಕರ್ಣಿ ಪರ ವಕೀಲರು ಆರೋಪಿಸಿದರು.<br /> <br /> `ಸಂಸದರಿಗೆ ಆಮಿಷ ಒಡ್ಡಲು ಅಷ್ಟೊಂದು ಹಣ ಎಲ್ಲಿಂದ ಬಂತು? ಅಮರ್ ಸಿಂಗ್ಗೆ ಹಣ ನೀಡಿದವರು ಯಾರು? ಪೊಲೀಸರು ಈ ಹಣದ ಜಾಡನ್ನು ಭೇದಿಸಲು ವಿಫಲರಾಗಿದ್ದಾರೆ. ಹಾಗಾಗಿ ಇದು ಈಗಲೂ ಬಗೆಹರಿಯದ ಪ್ರಶ್ನೆಯಾಗಿದೆ~ ಎಂದರು.<br /> <br /> `ನನ್ನ ಕಕ್ಷಿದಾರರು ಮುಗ್ಧರು. ಅವರು ಹಣ ಮಾಡಿಕೊಳ್ಳಲು ಈ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂಬುದಕ್ಕೆ ಲವಲೇಶದ ಸಾಕ್ಷಿಯೂ ಇಲ್ಲ. ವಿಶ್ವಾಸ ಮತಗಳಿಸಲು ಸರ್ಕಾರ ಪ್ರತಿಪಕ್ಷಗಳ ಸಂಸದರನ್ನು ಖರೀದಿಸಲು ತೊಡಗಿತ್ತು. ಭ್ರಷ್ಟಾಚಾರದ ಈ ಅತಿರೇಕವನ್ನು ಬಹಿರಂಗಪಡಿಸಲು ನನ್ನ ಕಕ್ಷಿದಾರರು ಮಾಡಿದ ಪ್ರಯತ್ನ ಅದು (ಸಂಸತ್ನಲ್ಲಿ ಹಣದ ಕಂತೆಗಳ ಪ್ರದರ್ಶನ)~ ಎಂದು ಕುಲಕರ್ಣಿ ಪರ ವಕೀಲರು ಹೇಳಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>