<p>ಕೊಚ್ಚಿ (ಪಿಟಿಐ): ಇಟಲಿಯ ನೌಕಾಪಡೆಯ ಯೋಧರಿಂದ ಹತ್ಯೆಗೀಡಾದ ಇಬ್ಬರು ಮೀನುಗಾರರ ಕುಟುಂಬಕ್ಕೆ ಇಟಲಿ ಸರ್ಕಾರ ಮಂಗಳವಾರ ಹಠಾತ್ತಾಗಿ ಒಂದು ಕೋಟಿ ರೂಪಾಯಿ ಪರಿಹಾರ ಧನ ನೀಡಿದೆ. ಆದರೆ ಯೋಧರ ವಿರುದ್ಧದ ಕ್ರಿಮಿನಲ್ ಪ್ರಕರಣ ಮಾತ್ರ ಮುಂದುವರಿಯಲಿದೆ.<br /> <br /> ಯೋಧರ ವಿರುದ್ಧದ ಎಫ್ಐಆರ್ ಕೈ ಬಿಡುವಂತೆ ಕೋರಿ ಮೃತ ಮೀನುಗಾರರಾದ ವೆಲೆಂಟೈನ್ ಜಲಸ್ಟೈನ್ ಮತ್ತು ಅಜೇಶ್ ಬಿಂಕಿ ಕುಟುಂಬದ ಸದಸ್ಯರು ಸಲ್ಲಿಸಿದ ಅರ್ಜಿಗೆ ಕೇರಳ ಹೈಕೋರ್ಟ್ ಒಪ್ಪಿಗೆ ಸೂಚಿಸಿದೆ. <br /> <br /> ಆದಾಗ್ಯೂ, ಆರೋಪಿ ಯೋಧರ ವಿರುದ್ಧ ಸಲ್ಲಿಸಿರುವ ಕ್ರಿಮಿನಲ್ ಪ್ರಕರಣದಲ್ಲಿ ಮೀನುಗಾರರ ಕುಟುಂಬ ಪ್ರತಿವಾದಿಯಾಗಿರಲಿಲ್ಲ. ರಾಜ್ಯ ಸರ್ಕಾರದಿಂದಲೇ ಈ ಪ್ರಕರಣ ದಾಖಲಾಗಿದ್ದು, ಪರಿಹಾರ ನೀಡಿರುವುದಕ್ಕೂ ಕ್ರಿಮಿನಲ್ ಪ್ರಕರಣಕ್ಕೂ ಸಂಬಂಧವಿಲ್ಲ ಮತ್ತು ಈ ಪ್ರಕರಣ ಮುಂದುವರಿಯಲಿದೆ ಎಂದು ಅಡ್ವೊಕೇಟ್ ಜನರಲ್ ಕೆ.ಪಿ. ದಂಡಪಾಣಿ ಹೇಳಿದ್ದಾರೆ. ಇಟಲಿ ಅಧಿಕಾರಿಗಳು ಹೈಕೋರ್ಟ್ನ ಲೋಕ್ ಅದಾಲತ್ಗೆ ಈ ಮೊತ್ತದ ಡಿಡಿಯನ್ನು ಹಸ್ತಾಂತರಿಸಿದರು.<br /> <br /> ಈ ಪ್ರಕರಣವನ್ನು ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳುವುದಾಗಿ ಇಟಲಿ ಅಧಿಕಾರಿಗಳು ಮತ್ತು ಮೀನುಗಾರರ ಕುಟುಂಬಗಳು ಒಪ್ಪಿಗೆ ಸೂಚಿಸಿದ್ದವು. ಇದಕ್ಕೆ ನ್ಯಾಯಾಲಯ ಅನುಮತಿ ನೀಡಿತ್ತು. <br /> <br /> ಮೀನುಗಾರರನ್ನು ಹತ್ಯೆಗೈದ ಯೋಧರನ್ನು ಕ್ಷಮಿಸಲಾಗಿದೆ ಎಂಬ ಪತ್ರವನ್ನು ಮೀನುಗಾರರ ಕುಟುಂಬದವರು ಇಟಲಿ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊಚ್ಚಿ (ಪಿಟಿಐ): ಇಟಲಿಯ ನೌಕಾಪಡೆಯ ಯೋಧರಿಂದ ಹತ್ಯೆಗೀಡಾದ ಇಬ್ಬರು ಮೀನುಗಾರರ ಕುಟುಂಬಕ್ಕೆ ಇಟಲಿ ಸರ್ಕಾರ ಮಂಗಳವಾರ ಹಠಾತ್ತಾಗಿ ಒಂದು ಕೋಟಿ ರೂಪಾಯಿ ಪರಿಹಾರ ಧನ ನೀಡಿದೆ. ಆದರೆ ಯೋಧರ ವಿರುದ್ಧದ ಕ್ರಿಮಿನಲ್ ಪ್ರಕರಣ ಮಾತ್ರ ಮುಂದುವರಿಯಲಿದೆ.<br /> <br /> ಯೋಧರ ವಿರುದ್ಧದ ಎಫ್ಐಆರ್ ಕೈ ಬಿಡುವಂತೆ ಕೋರಿ ಮೃತ ಮೀನುಗಾರರಾದ ವೆಲೆಂಟೈನ್ ಜಲಸ್ಟೈನ್ ಮತ್ತು ಅಜೇಶ್ ಬಿಂಕಿ ಕುಟುಂಬದ ಸದಸ್ಯರು ಸಲ್ಲಿಸಿದ ಅರ್ಜಿಗೆ ಕೇರಳ ಹೈಕೋರ್ಟ್ ಒಪ್ಪಿಗೆ ಸೂಚಿಸಿದೆ. <br /> <br /> ಆದಾಗ್ಯೂ, ಆರೋಪಿ ಯೋಧರ ವಿರುದ್ಧ ಸಲ್ಲಿಸಿರುವ ಕ್ರಿಮಿನಲ್ ಪ್ರಕರಣದಲ್ಲಿ ಮೀನುಗಾರರ ಕುಟುಂಬ ಪ್ರತಿವಾದಿಯಾಗಿರಲಿಲ್ಲ. ರಾಜ್ಯ ಸರ್ಕಾರದಿಂದಲೇ ಈ ಪ್ರಕರಣ ದಾಖಲಾಗಿದ್ದು, ಪರಿಹಾರ ನೀಡಿರುವುದಕ್ಕೂ ಕ್ರಿಮಿನಲ್ ಪ್ರಕರಣಕ್ಕೂ ಸಂಬಂಧವಿಲ್ಲ ಮತ್ತು ಈ ಪ್ರಕರಣ ಮುಂದುವರಿಯಲಿದೆ ಎಂದು ಅಡ್ವೊಕೇಟ್ ಜನರಲ್ ಕೆ.ಪಿ. ದಂಡಪಾಣಿ ಹೇಳಿದ್ದಾರೆ. ಇಟಲಿ ಅಧಿಕಾರಿಗಳು ಹೈಕೋರ್ಟ್ನ ಲೋಕ್ ಅದಾಲತ್ಗೆ ಈ ಮೊತ್ತದ ಡಿಡಿಯನ್ನು ಹಸ್ತಾಂತರಿಸಿದರು.<br /> <br /> ಈ ಪ್ರಕರಣವನ್ನು ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳುವುದಾಗಿ ಇಟಲಿ ಅಧಿಕಾರಿಗಳು ಮತ್ತು ಮೀನುಗಾರರ ಕುಟುಂಬಗಳು ಒಪ್ಪಿಗೆ ಸೂಚಿಸಿದ್ದವು. ಇದಕ್ಕೆ ನ್ಯಾಯಾಲಯ ಅನುಮತಿ ನೀಡಿತ್ತು. <br /> <br /> ಮೀನುಗಾರರನ್ನು ಹತ್ಯೆಗೈದ ಯೋಧರನ್ನು ಕ್ಷಮಿಸಲಾಗಿದೆ ಎಂಬ ಪತ್ರವನ್ನು ಮೀನುಗಾರರ ಕುಟುಂಬದವರು ಇಟಲಿ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>