<p><strong>ಮದ್ದೂರು:-</strong> ಕಾಂಗ್ರೆಸ್ ಸಾಧನಾ ಪಾದಯಾತ್ರೆಗೆ ವಿಧಾನ ಪರಿಷತ್ ಮಾಜಿ ಸದಸ್ಯ ಮಧು ಜಿ. ಮಾದೇಗೌಡ ಅವರನ್ನು ಆಹ್ವಾನಿಸಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ನ ಕೆಲ ಕಾರ್ಯಕರ್ತರು ಸಂಸದೆ ರಮ್ಯಾ ವಿರುದ್ಧ ಮದ್ದೂರಿನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.<br /> <br /> ಈ ಸಂದರ್ಭದಲ್ಲಿ ತೀವ್ರ ತಳ್ಳಾಟ, ಮಾತಿನ ಚಕಮಕಿ ನಡೆದು, ಪೊಲೀಸರು ಕಾರ್ಯಕರ್ತರನ್ನು ಚದುರಿಸಿದರು.<br /> <br /> ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಅವರು ಕೆಪಿಸಿಸಿ ಸದಸ್ಯ ಗುರುಚರಣ್ ಅವರೊಂದಿಗೆ ಪಟ್ಟಣದ ಉಗ್ರನರಸಿಂಹಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಿದರು. ಬಳಿಕ ಕೋಟೆ ಬೀದಿಯ ಒಂದೆರಡು ಮನೆಗಳಿಗೆ ಭೇಟಿ ನೀಡಿದರು.<br /> <br /> ಅಷ್ಟರಲ್ಲಿ ಅಲ್ಲಿಗೆ ಧಾವಿಸಿದ ತಾಲ್ಲೂಕು ಪಂಚಾಯಿತಿ ಸದಸ್ಯ ಭರತೇಶ್, ಕಾರ್ಯಕರ್ತರಾದ ಎಂ.ಆರ್. ಅವಿನಾಶ್, ಕಾಡರವಿ, ವಳಗೆರೆಹಳ್ಳಿ ಅವಿನಂದನ್, ಮಾಚಹಳ್ಳಿ ಕುಮಾರ್, ಸಿದ್ದು, ಆನಂದ್, ನಗರಕೆರೆ ಪುರುಷೋತ್ತಮ್, ಧನು, ಅಶೋಕ್, ಉಮೇಶ್ ಅವರು ರಮ್ಯಾ ಅವರನ್ನು ಸುತ್ತುವರಿದರು.<br /> <br /> ‘ನಮ್ಮ ನಾಯಕ ಮಧು ಜಿ. ಮಾದೇಗೌಡ ಅವರನ್ನು ಪಾದಯಾತ್ರೆಗೆ ಆಹ್ವಾನಿಸಿಲ್ಲ. ಅವರನ್ನು ಕಡೆಗಣಿಸಿದ್ದೀರಿ. ಇಲ್ಲಿಗೇ ಪಾದಯಾತ್ರೆ ನಿಲ್ಲಿಸಿ ಮನೆಗೆ ತೆರಳಿ’ ಎಂದು ಕೂಗಾಡಿದರು.<br /> <br /> ಈ ಸಂದರ್ಭದಲ್ಲಿ ಗುರುಚರಣ್ ಬೆಂಬಲಿಗರು ಹಾಗೂ ಮಧು ಬೆಂಬಲಿಗರ ನಡುವೆ ತಳ್ಳಾಟ ನೂಕಾಟ ನಡೆಯಿತು.<br /> ರಮ್ಯಾ ವಿರುದ್ಧ ಮಧು ಬೆಂಬಲಿಗರು ಧಿಕ್ಕಾರ ಮೊಳಗಿಸಿದರೆ, ಗುರುಚರಣ್ ಬೆಂಬಲಿಗರು ರಮ್ಯಾ ಪರವಾಗಿ ಜೈಕಾರ ಹಾಕಿದರು.<br /> <br /> ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಗಿ ರಮ್ಯಾ ಅವರು ಉದ್ರಿಕ್ತ ಗುಂಪಿನಿಂದ ಹೊರಬಂದು ತಮ್ಮ ಕಾರಿನಲ್ಲಿ ಕುಳಿತರು.<br /> ಇತ್ತ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ, ತಳ್ಳಾಟ ಹೆಚ್ಚಾಗುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಪಿಎಸ್ಐ ಶ್ರೀಧರ್, ಕಾರ್ಯಕರ್ತರನ್ನು ಸಮಾಧಾನಪಡಿಸಲು ಗಂಟೆಗೂ ಹೆಚ್ಚು ಕಾಲ ಯತ್ನಿಸಿದರು.<br /> <br /> ಆದರೆ, ಮಧು ಬೆಂಬಲಿಗರು ಇದಕ್ಕೆ ಜಗ್ಗದೇ ರಸ್ತೆಯಲ್ಲಿ ಕುಳಿತು ಪಾದಯಾತ್ರೆ ಮುಂದೆ ಹೋಗದಂತೆ ಅಡ್ಡಿಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮದ್ದೂರು:-</strong> ಕಾಂಗ್ರೆಸ್ ಸಾಧನಾ ಪಾದಯಾತ್ರೆಗೆ ವಿಧಾನ ಪರಿಷತ್ ಮಾಜಿ ಸದಸ್ಯ ಮಧು ಜಿ. ಮಾದೇಗೌಡ ಅವರನ್ನು ಆಹ್ವಾನಿಸಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ನ ಕೆಲ ಕಾರ್ಯಕರ್ತರು ಸಂಸದೆ ರಮ್ಯಾ ವಿರುದ್ಧ ಮದ್ದೂರಿನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.<br /> <br /> ಈ ಸಂದರ್ಭದಲ್ಲಿ ತೀವ್ರ ತಳ್ಳಾಟ, ಮಾತಿನ ಚಕಮಕಿ ನಡೆದು, ಪೊಲೀಸರು ಕಾರ್ಯಕರ್ತರನ್ನು ಚದುರಿಸಿದರು.<br /> <br /> ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಅವರು ಕೆಪಿಸಿಸಿ ಸದಸ್ಯ ಗುರುಚರಣ್ ಅವರೊಂದಿಗೆ ಪಟ್ಟಣದ ಉಗ್ರನರಸಿಂಹಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಿದರು. ಬಳಿಕ ಕೋಟೆ ಬೀದಿಯ ಒಂದೆರಡು ಮನೆಗಳಿಗೆ ಭೇಟಿ ನೀಡಿದರು.<br /> <br /> ಅಷ್ಟರಲ್ಲಿ ಅಲ್ಲಿಗೆ ಧಾವಿಸಿದ ತಾಲ್ಲೂಕು ಪಂಚಾಯಿತಿ ಸದಸ್ಯ ಭರತೇಶ್, ಕಾರ್ಯಕರ್ತರಾದ ಎಂ.ಆರ್. ಅವಿನಾಶ್, ಕಾಡರವಿ, ವಳಗೆರೆಹಳ್ಳಿ ಅವಿನಂದನ್, ಮಾಚಹಳ್ಳಿ ಕುಮಾರ್, ಸಿದ್ದು, ಆನಂದ್, ನಗರಕೆರೆ ಪುರುಷೋತ್ತಮ್, ಧನು, ಅಶೋಕ್, ಉಮೇಶ್ ಅವರು ರಮ್ಯಾ ಅವರನ್ನು ಸುತ್ತುವರಿದರು.<br /> <br /> ‘ನಮ್ಮ ನಾಯಕ ಮಧು ಜಿ. ಮಾದೇಗೌಡ ಅವರನ್ನು ಪಾದಯಾತ್ರೆಗೆ ಆಹ್ವಾನಿಸಿಲ್ಲ. ಅವರನ್ನು ಕಡೆಗಣಿಸಿದ್ದೀರಿ. ಇಲ್ಲಿಗೇ ಪಾದಯಾತ್ರೆ ನಿಲ್ಲಿಸಿ ಮನೆಗೆ ತೆರಳಿ’ ಎಂದು ಕೂಗಾಡಿದರು.<br /> <br /> ಈ ಸಂದರ್ಭದಲ್ಲಿ ಗುರುಚರಣ್ ಬೆಂಬಲಿಗರು ಹಾಗೂ ಮಧು ಬೆಂಬಲಿಗರ ನಡುವೆ ತಳ್ಳಾಟ ನೂಕಾಟ ನಡೆಯಿತು.<br /> ರಮ್ಯಾ ವಿರುದ್ಧ ಮಧು ಬೆಂಬಲಿಗರು ಧಿಕ್ಕಾರ ಮೊಳಗಿಸಿದರೆ, ಗುರುಚರಣ್ ಬೆಂಬಲಿಗರು ರಮ್ಯಾ ಪರವಾಗಿ ಜೈಕಾರ ಹಾಕಿದರು.<br /> <br /> ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಗಿ ರಮ್ಯಾ ಅವರು ಉದ್ರಿಕ್ತ ಗುಂಪಿನಿಂದ ಹೊರಬಂದು ತಮ್ಮ ಕಾರಿನಲ್ಲಿ ಕುಳಿತರು.<br /> ಇತ್ತ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ, ತಳ್ಳಾಟ ಹೆಚ್ಚಾಗುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಪಿಎಸ್ಐ ಶ್ರೀಧರ್, ಕಾರ್ಯಕರ್ತರನ್ನು ಸಮಾಧಾನಪಡಿಸಲು ಗಂಟೆಗೂ ಹೆಚ್ಚು ಕಾಲ ಯತ್ನಿಸಿದರು.<br /> <br /> ಆದರೆ, ಮಧು ಬೆಂಬಲಿಗರು ಇದಕ್ಕೆ ಜಗ್ಗದೇ ರಸ್ತೆಯಲ್ಲಿ ಕುಳಿತು ಪಾದಯಾತ್ರೆ ಮುಂದೆ ಹೋಗದಂತೆ ಅಡ್ಡಿಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>