<p><strong>ನವದೆಹಲಿ (ಪಿಟಿಐ): </strong>ಭಾರತದ ರಶೀದ್ ಖಾನ್ ಇಲ್ಲಿ ಕೊನೆಗೊಂಡ ಎಸ್ಎಐಎಲ್- ಎಸ್ಬಿಐ ಓಪನ್ ಗಾಲ್ಫ್ ಟೂರ್ನಿಯಲ್ಲಿ ಚಾಂಪಿಯನ್ ಆದರು. ದೆಹಲಿ ಗಾಲ್ಫ್ ಕ್ಲಬ್ ಕೋರ್ಸ್ನಲ್ಲಿ ಶನಿವಾರ ನಡೆದ ಅಂತಿಮ ಸುತ್ತಿನ ಸ್ಪರ್ಧೆ ಕೊನೆಗೊಳಿಸಲು ರಶೀದ್ 71 ಅವಕಾಶಗಳನ್ನು ಬಳಸಿಕೊಂಡರು.</p>.<p>ಅವರಿಗೆ ಪ್ರಬಲ ಪೈಪೋಟಿ ನೀಡಿದ ಬಾಂಗ್ಲಾದೇಶದ ಸಿದ್ದೀಕುರ್ ರಹಮಾನ್ 69 ಅವಕಾಶಗಳಲ್ಲಿ ಸ್ಪರ್ಧೆ ಕೊನೆಗೊಳಿಸಿದರು. ನಾಲ್ಕು ಸುತ್ತುಗಳ ಬಳಿಕ ಇಬ್ಬರು ಸ್ಪರ್ಧಿಗಳು ತಲಾ 270 ಸ್ಕೋರ್ಗಳೊಂದಿಗೆ ಜಂಟಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡರು. ಇದರಿಂದ ವಿಜೇತರನ್ನು ನಿರ್ಣಯಿಸಲು ‘ಪ್ಲೇ ಆಫ್’ ಮೊರೆಹೋಗಲಾಯಿತು.<br /> <br /> ದೆಹಲಿಯ ರಶೀದ್ ‘ಪ್ಲೇ ಆಫ್’ ನಲ್ಲಿ ಗೆಲುವು ಪಡೆದರಲ್ಲದೆ, ₨ 33 ಲಕ್ಷ ನಗದು ಬಹುಮಾನ ತಮ್ಮದಾ ಗಿಸಿಕೊಂಡರು. 23ರ ಹರೆಯದ ಸ್ಪರ್ಧಿಗೆ ಏಷ್ಯನ್ ಟೂರ್ನಲ್ಲಿ ದೊರೆತ ಚೊಚ್ಚಲ ಪ್ರಶಸ್ತಿ ಇದು.<br /> <br /> ಹೋದ ವರ್ಷ ನಡೆದ ಟೂರ್ನಿ ಯಲ್ಲಿ ರಶೀದ್ ‘ಪ್ಲೇ ಆಫ್’ನಲ್ಲಿ ಅನಿರ್ಬನ್ ಲಾಹಿರಿ ಎದುರು ಸೋಲು ಅನುಭವಿಸಿ ‘ರನ್ನರ್ ಅಪ್’ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಭಾರತದ ರಶೀದ್ ಖಾನ್ ಇಲ್ಲಿ ಕೊನೆಗೊಂಡ ಎಸ್ಎಐಎಲ್- ಎಸ್ಬಿಐ ಓಪನ್ ಗಾಲ್ಫ್ ಟೂರ್ನಿಯಲ್ಲಿ ಚಾಂಪಿಯನ್ ಆದರು. ದೆಹಲಿ ಗಾಲ್ಫ್ ಕ್ಲಬ್ ಕೋರ್ಸ್ನಲ್ಲಿ ಶನಿವಾರ ನಡೆದ ಅಂತಿಮ ಸುತ್ತಿನ ಸ್ಪರ್ಧೆ ಕೊನೆಗೊಳಿಸಲು ರಶೀದ್ 71 ಅವಕಾಶಗಳನ್ನು ಬಳಸಿಕೊಂಡರು.</p>.<p>ಅವರಿಗೆ ಪ್ರಬಲ ಪೈಪೋಟಿ ನೀಡಿದ ಬಾಂಗ್ಲಾದೇಶದ ಸಿದ್ದೀಕುರ್ ರಹಮಾನ್ 69 ಅವಕಾಶಗಳಲ್ಲಿ ಸ್ಪರ್ಧೆ ಕೊನೆಗೊಳಿಸಿದರು. ನಾಲ್ಕು ಸುತ್ತುಗಳ ಬಳಿಕ ಇಬ್ಬರು ಸ್ಪರ್ಧಿಗಳು ತಲಾ 270 ಸ್ಕೋರ್ಗಳೊಂದಿಗೆ ಜಂಟಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡರು. ಇದರಿಂದ ವಿಜೇತರನ್ನು ನಿರ್ಣಯಿಸಲು ‘ಪ್ಲೇ ಆಫ್’ ಮೊರೆಹೋಗಲಾಯಿತು.<br /> <br /> ದೆಹಲಿಯ ರಶೀದ್ ‘ಪ್ಲೇ ಆಫ್’ ನಲ್ಲಿ ಗೆಲುವು ಪಡೆದರಲ್ಲದೆ, ₨ 33 ಲಕ್ಷ ನಗದು ಬಹುಮಾನ ತಮ್ಮದಾ ಗಿಸಿಕೊಂಡರು. 23ರ ಹರೆಯದ ಸ್ಪರ್ಧಿಗೆ ಏಷ್ಯನ್ ಟೂರ್ನಲ್ಲಿ ದೊರೆತ ಚೊಚ್ಚಲ ಪ್ರಶಸ್ತಿ ಇದು.<br /> <br /> ಹೋದ ವರ್ಷ ನಡೆದ ಟೂರ್ನಿ ಯಲ್ಲಿ ರಶೀದ್ ‘ಪ್ಲೇ ಆಫ್’ನಲ್ಲಿ ಅನಿರ್ಬನ್ ಲಾಹಿರಿ ಎದುರು ಸೋಲು ಅನುಭವಿಸಿ ‘ರನ್ನರ್ ಅಪ್’ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>