<p>`ಧೈರ್ಯವಿದ್ದರೆ ವರದಿ ತಿರಸ್ಕರಿಸಿ; ಹೆಗ್ಡೆಸವಾಲು~ (ಪ್ರ. ವಾ. ಅ. 15) ವರದಿ ಓದಿ ಅವಕ್ಕಾದೆ.ಸದ್ಯ ಸಿಕ್ಕಿರುವ ಸದವಕಾಶ ಉಪಯೋಗಿಸಿಕೊಂಡು ತೂಗುಕತ್ತಿಯಿಂದ ತಪ್ಪಿಸಿಕೊಳ್ಳಲು ತಾಕಲಾಡುತ್ತಿರುವ ಸರ್ಕಾರ, ನ್ಯಾ. ಸಂತೋಷ್ ಹೆಗ್ಡೆಯವರ ನೈತಿಕ ಸವಾಲು ಸ್ವೀಕರಿಸುವುದಾದರೂ ಉಂಟೇ?!ಇಷ್ಟಕ್ಕೂ ಸರ್ಕಾರವೆನ್ನುವುದೇನು? ರಾಜಕೀಯಸ್ಥರ ಒಂದು ಗುಂಪು. <br /> <br /> ರಾಜಕೀಯವೆನ್ನುವುದೇ ಸುಳ್ಳು-ತಟವಟಗಳ ಇನ್ನೊಂದು ಹೆಸರು. ಜಟಿಲ ಕಾನೂನುಗಳನ್ನೂ, ಅತ್ಯುನ್ನತ ಅಂಪೈರುಗಳನ್ನೂ ಮಣ್ಣುಮುಕ್ಕಿಸುವುದೇ ಅದರ ಆಟದ ಪರಿಯಲ್ಲವೇ? <br /> <br /> ಮಂತ್ರಿಮಹೋದಯರುಗಳೂ ಸರ್ಕಾರದ ನೌಕರರು ಎಂಬ ಕಟ್ಟಳೆಯಡಿ ಅವರುಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಶಿಫಾರಸು ಆದರೆ ಮುಖ್ಯಮಂತ್ರಿ ಮತ್ತು ಮಂತ್ರಿಗಳು ಸರ್ಕಾರಿ ನೌಕರರೆನ್ನುವುದರಲ್ಲೇ ದೋಷ ಅಡಗಿದೆ.</p>.<p>ಐಎಎಸ್, ಐಪಿಎಸ್ಗಳಿರಲಿ ಎರಡನೆ ದರ್ಜೆ ಗುಮಾಸ್ತನಿಗೂ ಕನಿಷ್ಠ ವಿದ್ಯಾರ್ಹತೆ ನಿಗದಿಯಾಗಿರುತ್ತದೆ; ಇಲಾಖೆ ಪರೀಕ್ಷೆ ಬರೆದು ಬಡ್ತಿ ಪಡೆಯುತ್ತಾರೆ; ಪರಿಣತಿ ಬೇಡ, ಅಕ್ಷರಜ್ಞಾವೂ ಇರಲಾರದವರು ಇದ್ದಕ್ಕಿದಂತೆ ಇವರೆಲ್ಲರ `ಬಾಸ್~ ಆಗಿಬಿಡುವುದು ಹಾಸ್ಯಾಸ್ಪದವಲ್ಲವೇ?<br /> <br /> ಚುನಾಯಿತ ಸದಸ್ಯರು ಆಡಳಿತದ ಮುಖ್ಯಸ್ಥರಾಗಬೇಕು, ನಿಜ. ಆದರೆ ನೌಕರಶಾಹೀ ಅರ್ಥದಲ್ಲಲ್ಲ, ನೈತಿಕ ಅರ್ಥದಲ್ಲಿ. <br /> <br /> ಈಗಂತು ಇವರದು ದೋಚುವ-ಬಾಚುವ ದರ್ಬಾರು! `ನಾಳೆ ಯಾರೋ, ನಾವ್ಯಾರೋ ಸಿಕ್ಕಾಗ, ಸಿಕ್ಕಷ್ಟೂ ಹೊಡೆದು ಜಾಗ ಖಾಲಿ ಮಾಡು~ ಎಂಬುದೇ ಧ್ಯೇಯವಾಕ್ಯ! ಇದೇ ದುರಂತ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಧೈರ್ಯವಿದ್ದರೆ ವರದಿ ತಿರಸ್ಕರಿಸಿ; ಹೆಗ್ಡೆಸವಾಲು~ (ಪ್ರ. ವಾ. ಅ. 15) ವರದಿ ಓದಿ ಅವಕ್ಕಾದೆ.ಸದ್ಯ ಸಿಕ್ಕಿರುವ ಸದವಕಾಶ ಉಪಯೋಗಿಸಿಕೊಂಡು ತೂಗುಕತ್ತಿಯಿಂದ ತಪ್ಪಿಸಿಕೊಳ್ಳಲು ತಾಕಲಾಡುತ್ತಿರುವ ಸರ್ಕಾರ, ನ್ಯಾ. ಸಂತೋಷ್ ಹೆಗ್ಡೆಯವರ ನೈತಿಕ ಸವಾಲು ಸ್ವೀಕರಿಸುವುದಾದರೂ ಉಂಟೇ?!ಇಷ್ಟಕ್ಕೂ ಸರ್ಕಾರವೆನ್ನುವುದೇನು? ರಾಜಕೀಯಸ್ಥರ ಒಂದು ಗುಂಪು. <br /> <br /> ರಾಜಕೀಯವೆನ್ನುವುದೇ ಸುಳ್ಳು-ತಟವಟಗಳ ಇನ್ನೊಂದು ಹೆಸರು. ಜಟಿಲ ಕಾನೂನುಗಳನ್ನೂ, ಅತ್ಯುನ್ನತ ಅಂಪೈರುಗಳನ್ನೂ ಮಣ್ಣುಮುಕ್ಕಿಸುವುದೇ ಅದರ ಆಟದ ಪರಿಯಲ್ಲವೇ? <br /> <br /> ಮಂತ್ರಿಮಹೋದಯರುಗಳೂ ಸರ್ಕಾರದ ನೌಕರರು ಎಂಬ ಕಟ್ಟಳೆಯಡಿ ಅವರುಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಶಿಫಾರಸು ಆದರೆ ಮುಖ್ಯಮಂತ್ರಿ ಮತ್ತು ಮಂತ್ರಿಗಳು ಸರ್ಕಾರಿ ನೌಕರರೆನ್ನುವುದರಲ್ಲೇ ದೋಷ ಅಡಗಿದೆ.</p>.<p>ಐಎಎಸ್, ಐಪಿಎಸ್ಗಳಿರಲಿ ಎರಡನೆ ದರ್ಜೆ ಗುಮಾಸ್ತನಿಗೂ ಕನಿಷ್ಠ ವಿದ್ಯಾರ್ಹತೆ ನಿಗದಿಯಾಗಿರುತ್ತದೆ; ಇಲಾಖೆ ಪರೀಕ್ಷೆ ಬರೆದು ಬಡ್ತಿ ಪಡೆಯುತ್ತಾರೆ; ಪರಿಣತಿ ಬೇಡ, ಅಕ್ಷರಜ್ಞಾವೂ ಇರಲಾರದವರು ಇದ್ದಕ್ಕಿದಂತೆ ಇವರೆಲ್ಲರ `ಬಾಸ್~ ಆಗಿಬಿಡುವುದು ಹಾಸ್ಯಾಸ್ಪದವಲ್ಲವೇ?<br /> <br /> ಚುನಾಯಿತ ಸದಸ್ಯರು ಆಡಳಿತದ ಮುಖ್ಯಸ್ಥರಾಗಬೇಕು, ನಿಜ. ಆದರೆ ನೌಕರಶಾಹೀ ಅರ್ಥದಲ್ಲಲ್ಲ, ನೈತಿಕ ಅರ್ಥದಲ್ಲಿ. <br /> <br /> ಈಗಂತು ಇವರದು ದೋಚುವ-ಬಾಚುವ ದರ್ಬಾರು! `ನಾಳೆ ಯಾರೋ, ನಾವ್ಯಾರೋ ಸಿಕ್ಕಾಗ, ಸಿಕ್ಕಷ್ಟೂ ಹೊಡೆದು ಜಾಗ ಖಾಲಿ ಮಾಡು~ ಎಂಬುದೇ ಧ್ಯೇಯವಾಕ್ಯ! ಇದೇ ದುರಂತ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>