<p>ರಾಯಚೂರು: ತೋಟಗಾರಿಕೆ ಬೆಳೆ ಬೀಜ, ಅಪರೂಪದ ಜಾನುವಾರು, ಭೂಮಿ ಸಂರಕ್ಷಣೆ, ಹತ್ತಾರು ಬಗೆಯ ಕೃಷಿ ಯಂತ್ರೋಪಕರಣ, ವಿವಿಧ ತಳಿಯ ಬೆಳೆ, ಕೃಷಿ ಸಂಶೋಧನೆಗಳು, ಲಾಭದಾಯಕ ಕೃಷಿ ವಿಧಾನ, ಎಲ್ಲಕ್ಕಿಂತ ಹೆಚ್ಚಾಗಿ ದಶಕಗಳ ಕಾಲ ಕೃಷಿ ಮಾಡಿ ಯಶಸ್ವಿಯಾದ ರೈತರ ಯಶೋಗಾಥೆ ನುಡಿಗಳು... <br /> <br /> ಹೀಗೆ ಹತ್ತು ಹಲವು ಉಪಯುಕ್ತ ಮಾಹಿತಿ ಒಳಗೊಂಡ ವಸ್ತು ಪ್ರದರ್ಶನವನ್ನು ಶುಕ್ರವಾರ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆರಂಭಗೊಂಡ `ಕೃಷಿ ಮೇಳ~ದಲ್ಲಿ ಏರ್ಪಡಿಸಲಾಗಿತ್ತು. ಕೃಷಿ ಮೇಳದ ಮೊದಲ ದಿನವಾಗಿದ್ದರಿಂದ ಶುಕ್ರವಾರ ಮಧ್ಯಾಹ್ನದವರೆಗೂ ರೈತರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿರಲಿಲ್ಲ. ಕೃಷಿ ವಿವಿ ಸಿಬ್ಬಂದಿ, ವಿದ್ಯಾರ್ಥಿಗಳ ಓಡಾಟವೇ ಹೆಚ್ಚಾಗಿತ್ತು. ಮಧ್ಯಾಹ್ನದ ಬಳಿಕ ಜಿಲ್ಲೆಯ ವಿವಿಧ ಭಾಗ, ಹೊರ ಜಿಲ್ಲೆಗಳಿಂದ ಕೆಲ ರೈತರು ಬಂದರು.<br /> <br /> ಪ್ರತಿ ವರ್ಷ ಮೊದಲ ದಿನ ಕೃಷಿ ಮೇಳ ಉದ್ಘಾಟನೆಯನ್ನು ಕೃಷಿ ಸಚಿವರು ನೆರವೇರಿಸುತ್ತಿದ್ದರು. ಕೃಷಿ ಇಲಾಖೆ ಹಾಗೂ ವಿವಿ ಹೆಚ್ಚಿನ ರೈತರನ್ನು ಕರೆತರಲು ಮುತುವರ್ಜಿ ವಹಿಸುತ್ತಿದ್ದವು. ಸಾರ್ವಜನಿಕರು ಆಗಮಿಸುತ್ತಿದ್ದರಿಂದ ಹೆಚ್ಚಿನ ಜನ ಕಾಣಿಸುತ್ತಿದ್ದರು. ಈ ಬಾರಿ ಎರಡನೇ ದಿನ (ಶನಿವಾರ) ಉದ್ಘಾಟನೆ ಸಮಾರಂಭವಿದ್ದು, ಜನರ ಗೈರು ಎದ್ದು ತೋರಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಯಚೂರು: ತೋಟಗಾರಿಕೆ ಬೆಳೆ ಬೀಜ, ಅಪರೂಪದ ಜಾನುವಾರು, ಭೂಮಿ ಸಂರಕ್ಷಣೆ, ಹತ್ತಾರು ಬಗೆಯ ಕೃಷಿ ಯಂತ್ರೋಪಕರಣ, ವಿವಿಧ ತಳಿಯ ಬೆಳೆ, ಕೃಷಿ ಸಂಶೋಧನೆಗಳು, ಲಾಭದಾಯಕ ಕೃಷಿ ವಿಧಾನ, ಎಲ್ಲಕ್ಕಿಂತ ಹೆಚ್ಚಾಗಿ ದಶಕಗಳ ಕಾಲ ಕೃಷಿ ಮಾಡಿ ಯಶಸ್ವಿಯಾದ ರೈತರ ಯಶೋಗಾಥೆ ನುಡಿಗಳು... <br /> <br /> ಹೀಗೆ ಹತ್ತು ಹಲವು ಉಪಯುಕ್ತ ಮಾಹಿತಿ ಒಳಗೊಂಡ ವಸ್ತು ಪ್ರದರ್ಶನವನ್ನು ಶುಕ್ರವಾರ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆರಂಭಗೊಂಡ `ಕೃಷಿ ಮೇಳ~ದಲ್ಲಿ ಏರ್ಪಡಿಸಲಾಗಿತ್ತು. ಕೃಷಿ ಮೇಳದ ಮೊದಲ ದಿನವಾಗಿದ್ದರಿಂದ ಶುಕ್ರವಾರ ಮಧ್ಯಾಹ್ನದವರೆಗೂ ರೈತರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿರಲಿಲ್ಲ. ಕೃಷಿ ವಿವಿ ಸಿಬ್ಬಂದಿ, ವಿದ್ಯಾರ್ಥಿಗಳ ಓಡಾಟವೇ ಹೆಚ್ಚಾಗಿತ್ತು. ಮಧ್ಯಾಹ್ನದ ಬಳಿಕ ಜಿಲ್ಲೆಯ ವಿವಿಧ ಭಾಗ, ಹೊರ ಜಿಲ್ಲೆಗಳಿಂದ ಕೆಲ ರೈತರು ಬಂದರು.<br /> <br /> ಪ್ರತಿ ವರ್ಷ ಮೊದಲ ದಿನ ಕೃಷಿ ಮೇಳ ಉದ್ಘಾಟನೆಯನ್ನು ಕೃಷಿ ಸಚಿವರು ನೆರವೇರಿಸುತ್ತಿದ್ದರು. ಕೃಷಿ ಇಲಾಖೆ ಹಾಗೂ ವಿವಿ ಹೆಚ್ಚಿನ ರೈತರನ್ನು ಕರೆತರಲು ಮುತುವರ್ಜಿ ವಹಿಸುತ್ತಿದ್ದವು. ಸಾರ್ವಜನಿಕರು ಆಗಮಿಸುತ್ತಿದ್ದರಿಂದ ಹೆಚ್ಚಿನ ಜನ ಕಾಣಿಸುತ್ತಿದ್ದರು. ಈ ಬಾರಿ ಎರಡನೇ ದಿನ (ಶನಿವಾರ) ಉದ್ಘಾಟನೆ ಸಮಾರಂಭವಿದ್ದು, ಜನರ ಗೈರು ಎದ್ದು ತೋರಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>