<p>ನವದೆಹಲಿ (ಐಎಎನ್ಎಸ್): ಸಂಸದರು, ಶಾಸಕರ ಆಯ್ಕೆಗೆ ನಡೆವ ಚುನಾವಣೆಗಳಲ್ಲಿ ಈಗಾಗಲೇ ಎಲೆಕ್ಟ್ರಾನಿಕ್ ಮತಯಂತ್ರಗಳು ಕಡ್ಡಾಯವಾಗಿ ಬಳಕೆಯಾಗುತ್ತಿವೆ. ಆದರೆ, ರಾಷ್ಟ್ರಪತಿ ಆಯ್ಕೆಗೆ ನಡೆಯುವ ಚುನಾವಣೆಯಲ್ಲಿ ಮಾತ್ರ ಹಿಂದಿನಂತೆ ಇನ್ನೂ ಬ್ಯಾಲಟ್ ಪೇಪರ್ ಪದ್ಧತಿಯೇ ಚಾಲ್ತಿಯಲ್ಲಿದೆ. ಹೀಗೇಕೆ?<br /> <br /> -ರಾಷ್ಟ್ರಪತಿ ಆಯ್ಕೆಗೆ ಅಂಕಿತ ಹಾಕುವಾಗ ಪ್ರತಿಯೊಬ್ಬ ಮತದಾರನೂ ತನ್ನ ಮೊದಲ ಹಾಗೂ ಎರಡನೇ ಪ್ರಾಶಸ್ತ್ಯದ ಮತಗಳನ್ನು ದಾಖಲಿಸಬೇಕಾಗಿರುವುದೇ ಇದಕ್ಕೆ ಕಾರಣ.<br /> <br /> ರಾಷ್ಟ್ರಪತಿ ಆಯ್ಕೆಗೆ ಸಿದ್ಧಪಡಿಸುವ ಬ್ಯಾಲಟ್ ಪೇಪರ್ನಲ್ಲಿ ಯಾವುದೇ ಚಿಹ್ನೆ ಇರುವುದಿಲ್ಲ. ಎರಡು ಕಾಲಂಗಳು (ಲಂಬ ಸಾಲುಗಳು) ಮಾತ್ರ ಇರುತ್ತವೆ. ಒಂದು ಸಾಲಿನಲ್ಲಿ ಅಭ್ಯರ್ಥಿಗಳ ಹೆಸರು ಇರುತ್ತದೆ. ಮತ್ತೊಂದು ಸಾಲು ಖಾಲಿ ಇರುತ್ತದೆ. ಮತದಾರರು ಈ ಖಾಲಿ ಸಾಲಿನ ಪೆಟ್ಟಿಗೆಗಳಲ್ಲಿ ತಮ್ಮ ಆದ್ಯತೆಯನ್ನು 1 ಅಥವಾ 2 ಎಂದು ದಾಖಲಿಸಬೇಕಾಗುತ್ತದೆ.<br /> <br /> ಇನ್ನು, ವಿಧಾನಸಭಾ ಶಾಸಕರು ಆಯಾಯ ರಾಜ್ಯಗಳ ವಿಧಾನಸಭೆಯಲ್ಲಿ ಮತ ಚಲಾಯಿಸುತ್ತಾರೆ. ನಂತರ ಈ ಪೆಟ್ಟಿಗೆಗಳನ್ನು ಎಣಿಕೆಗಾಗಿ ದೆಹಲಿಗೆ ತೆಗೆದುಕೊಂಡು ಹೋಗಬೇಕಾಗುತ್ತದೆ. ಚುನಾವಣೆ ನಂತರ ಫಲಿತಾಂಶ ಪ್ರಕಟವಾಗುವುದಕ್ಕೆ ಮೂರು ದಿನ ಹಿಡಿಯುವುದಕ್ಕೆ ಇದು ಕಾರಣ.<br /> <br /> ಸಂಸದರು ದೆಹಲಿಯಲ್ಲಿ ಅಥವಾ ತಾವು ಆಯ್ಕೆಯಾಗಿರುವ ರಾಜ್ಯಗಳ ವಿಧಾನಸಭೆಯ ಮತಗಟ್ಟೆಯಲ್ಲಿ ಮತ ಚಲಾಯಿಸಬಹುದು. ಆದರೆ ವಿಧಾನಸಭೆಯಲ್ಲಿ ಮತ ಚಲಾಯಿಸುವುದಾದರೆ ಅದಕ್ಕೆ ಮುಂಚಿತವಾಗಿಯೇ ಅನುಮತಿ ಪಡೆದಿರಬೇಕಾಗುತ್ತದೆ.<br /> <br /> ಮೊದಲ ಸುತ್ತಿನ ಎಣಿಕೆಯಲ್ಲಿ, ಮೊದಲ ಪ್ರಾಶಸ್ತ್ಯದ ಮತಗಳನ್ನು ಮಾತ್ರ ಲೆಕ್ಕ ಹಾಕಲಾಗುತ್ತದೆ. ಯಾವುದೇ ಅಭ್ಯರ್ಥಿ ಪರ ಶೇ 50ಕ್ಕಿಂತ ಹೆಚ್ಚು ಮತಗಳು ಚಲಾವಣೆಗೊಂಡಿದ್ದರೆ, ಅವರನ್ನು ವಿಜಯಿ ಅಭ್ಯರ್ಥಿಯೆಂದು ಘೋಷಿಸಲಾಗುತ್ತದೆ.<br /> <br /> ಮೊದಲ ಸುತ್ತಿನ ಎಣಿಕೆಯಲ್ಲಿ ಯಾವ ಅಭ್ಯರ್ಥಿಯ ಪರವಾಗಿಯೂ ಸ್ಪಷ್ಟ ಫಲಿತಾಂಶ ಪ್ರಕಟವಾಗದಿದ್ದರೆ ಆಗ ಎರಡನೇ ಪ್ರಾಶಸ್ತ್ಯದ ಮತಗಳನ್ನು ಗಣನೆಗೆ ತೆಗೆದುಕೊಂಡು, ಅದನ್ನು ಮೊದಲನೇ ಪ್ರಾಶಸ್ತ್ಯದ ಮತಗಳಿಗೆ ಕೂಡಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಐಎಎನ್ಎಸ್): ಸಂಸದರು, ಶಾಸಕರ ಆಯ್ಕೆಗೆ ನಡೆವ ಚುನಾವಣೆಗಳಲ್ಲಿ ಈಗಾಗಲೇ ಎಲೆಕ್ಟ್ರಾನಿಕ್ ಮತಯಂತ್ರಗಳು ಕಡ್ಡಾಯವಾಗಿ ಬಳಕೆಯಾಗುತ್ತಿವೆ. ಆದರೆ, ರಾಷ್ಟ್ರಪತಿ ಆಯ್ಕೆಗೆ ನಡೆಯುವ ಚುನಾವಣೆಯಲ್ಲಿ ಮಾತ್ರ ಹಿಂದಿನಂತೆ ಇನ್ನೂ ಬ್ಯಾಲಟ್ ಪೇಪರ್ ಪದ್ಧತಿಯೇ ಚಾಲ್ತಿಯಲ್ಲಿದೆ. ಹೀಗೇಕೆ?<br /> <br /> -ರಾಷ್ಟ್ರಪತಿ ಆಯ್ಕೆಗೆ ಅಂಕಿತ ಹಾಕುವಾಗ ಪ್ರತಿಯೊಬ್ಬ ಮತದಾರನೂ ತನ್ನ ಮೊದಲ ಹಾಗೂ ಎರಡನೇ ಪ್ರಾಶಸ್ತ್ಯದ ಮತಗಳನ್ನು ದಾಖಲಿಸಬೇಕಾಗಿರುವುದೇ ಇದಕ್ಕೆ ಕಾರಣ.<br /> <br /> ರಾಷ್ಟ್ರಪತಿ ಆಯ್ಕೆಗೆ ಸಿದ್ಧಪಡಿಸುವ ಬ್ಯಾಲಟ್ ಪೇಪರ್ನಲ್ಲಿ ಯಾವುದೇ ಚಿಹ್ನೆ ಇರುವುದಿಲ್ಲ. ಎರಡು ಕಾಲಂಗಳು (ಲಂಬ ಸಾಲುಗಳು) ಮಾತ್ರ ಇರುತ್ತವೆ. ಒಂದು ಸಾಲಿನಲ್ಲಿ ಅಭ್ಯರ್ಥಿಗಳ ಹೆಸರು ಇರುತ್ತದೆ. ಮತ್ತೊಂದು ಸಾಲು ಖಾಲಿ ಇರುತ್ತದೆ. ಮತದಾರರು ಈ ಖಾಲಿ ಸಾಲಿನ ಪೆಟ್ಟಿಗೆಗಳಲ್ಲಿ ತಮ್ಮ ಆದ್ಯತೆಯನ್ನು 1 ಅಥವಾ 2 ಎಂದು ದಾಖಲಿಸಬೇಕಾಗುತ್ತದೆ.<br /> <br /> ಇನ್ನು, ವಿಧಾನಸಭಾ ಶಾಸಕರು ಆಯಾಯ ರಾಜ್ಯಗಳ ವಿಧಾನಸಭೆಯಲ್ಲಿ ಮತ ಚಲಾಯಿಸುತ್ತಾರೆ. ನಂತರ ಈ ಪೆಟ್ಟಿಗೆಗಳನ್ನು ಎಣಿಕೆಗಾಗಿ ದೆಹಲಿಗೆ ತೆಗೆದುಕೊಂಡು ಹೋಗಬೇಕಾಗುತ್ತದೆ. ಚುನಾವಣೆ ನಂತರ ಫಲಿತಾಂಶ ಪ್ರಕಟವಾಗುವುದಕ್ಕೆ ಮೂರು ದಿನ ಹಿಡಿಯುವುದಕ್ಕೆ ಇದು ಕಾರಣ.<br /> <br /> ಸಂಸದರು ದೆಹಲಿಯಲ್ಲಿ ಅಥವಾ ತಾವು ಆಯ್ಕೆಯಾಗಿರುವ ರಾಜ್ಯಗಳ ವಿಧಾನಸಭೆಯ ಮತಗಟ್ಟೆಯಲ್ಲಿ ಮತ ಚಲಾಯಿಸಬಹುದು. ಆದರೆ ವಿಧಾನಸಭೆಯಲ್ಲಿ ಮತ ಚಲಾಯಿಸುವುದಾದರೆ ಅದಕ್ಕೆ ಮುಂಚಿತವಾಗಿಯೇ ಅನುಮತಿ ಪಡೆದಿರಬೇಕಾಗುತ್ತದೆ.<br /> <br /> ಮೊದಲ ಸುತ್ತಿನ ಎಣಿಕೆಯಲ್ಲಿ, ಮೊದಲ ಪ್ರಾಶಸ್ತ್ಯದ ಮತಗಳನ್ನು ಮಾತ್ರ ಲೆಕ್ಕ ಹಾಕಲಾಗುತ್ತದೆ. ಯಾವುದೇ ಅಭ್ಯರ್ಥಿ ಪರ ಶೇ 50ಕ್ಕಿಂತ ಹೆಚ್ಚು ಮತಗಳು ಚಲಾವಣೆಗೊಂಡಿದ್ದರೆ, ಅವರನ್ನು ವಿಜಯಿ ಅಭ್ಯರ್ಥಿಯೆಂದು ಘೋಷಿಸಲಾಗುತ್ತದೆ.<br /> <br /> ಮೊದಲ ಸುತ್ತಿನ ಎಣಿಕೆಯಲ್ಲಿ ಯಾವ ಅಭ್ಯರ್ಥಿಯ ಪರವಾಗಿಯೂ ಸ್ಪಷ್ಟ ಫಲಿತಾಂಶ ಪ್ರಕಟವಾಗದಿದ್ದರೆ ಆಗ ಎರಡನೇ ಪ್ರಾಶಸ್ತ್ಯದ ಮತಗಳನ್ನು ಗಣನೆಗೆ ತೆಗೆದುಕೊಂಡು, ಅದನ್ನು ಮೊದಲನೇ ಪ್ರಾಶಸ್ತ್ಯದ ಮತಗಳಿಗೆ ಕೂಡಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>