<p><strong>ಗಜೇಂದ್ರಗಡ: </strong>ಅತಿಯಾದ ರಾಸಾನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯಿಂದ ಭೂಮಿಯ ಸತ್ವ ಕಳೆದು ಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ರೈತರನ್ನು ಸಾವಯುವ ಕೃಷಿಯತ್ತ ಕೊಂಡೊಯ್ಯುವುದು ಅತ್ಯವಶ್ಯವಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಎನ್.ವಿ.ಚಂದ್ರಶೇಖರ ತಿಳಿಸಿದರು.<br /> <br /> ಭೂಚೇತನ ಯೋಜನೆ ಅಡಿಯಲ್ಲಿ ಇತ್ತೀಚೆಗೆ ಇಲ್ಲಿಗೆ ಸಮೀಪದ ಮ್ಯಾಕಲ್ಝರಿ ಗ್ರಾಮದ ಚನ್ನಬಸಯ್ಯ ಕಾರಡ ಗಿಮಠ ಅವರ ಹೊಲದಲ್ಲಿ ಕೃಷಿ ಇಲಾಖೆಯ ಮತ್ತು ಕಿಸಾನ್ ಭಾರತಿ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಮೆಕ್ಕೆ ಜೋಳ ಬೆಳೆಯ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು.<br /> <br /> ಭೂಮಿಯಲ್ಲಿ ಅಗತ್ಯ ಪೋಷ ಕಾಂಶಗಳನ್ನು ಹೆಚ್ಚಿಸಲು ಕೊಟ್ಟಿಗೆ ಗೊಬ್ಬರ, ಎರೆಹುಳ ಗೊಬ್ಬರ, ಜೀವಾ ಮೃತ, ಬೀಜಾಮೃತ, ಪಂಚಗವ್ಯ, ಬಯೋಡಜಿಸ್ಟ್ದಿಂದ ದೊರೆಯುವ ರಸಸಾರವನ್ನು ಬಳಿಕೆ ಮಾಡಬೇಕು. ಆ ಮೂಲಕ ಹೆಚ್ಚು ಇಳುವರಿಯನ್ನು ತೆಗೆಯಬಹುದು ಎಂದು ಅವರು ವಿವರಿಸಿದರು.<br /> <br /> ರಾಜ್ಯದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಸರ್ಕಾರ ಸಬ್ಸಿಡಿ ದರದಲ್ಲಿ ಬೀಜ ಗಳನ್ನು ವಿತರಣೆ ಮಾಡುತ್ತಿದೆ. ರೈತರು ಕೃಷಿ ತಜ್ಞರ ಜೊತೆಗೆ ಚರ್ಚಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು.<br /> ಕಿಸಾನ್ ಭಾರತ ಟ್ರಸ್ಟ್ನ ಭೀಮರಾವ್ ದೇಶಪಾಂಡೆ ಮಾತನಾಡಿ, ರೈತರು ಸಾವಯುವ ಕೃಷಿಯನ್ನು ಬದಿಗೊತ್ತಿ ರಾಸಾಯನಿಕ ಗೊಬ್ಬರದ ಬೆನ್ನು ಹತ್ತಿದ್ದರಿಂದ ಭೂಮಿ ಬರಡಾಗುತ್ತಿದೆ. <br /> <br /> ಬಂಜರಾಗುತ್ತಿರುವ ಭೂಮಿಗೆ ಮರುಸತ್ವ ಕೊಡಲು ಸಾವಯವ ಕೃಷಿಯನ್ನು ಅಳವಡಿಸಿ ಕೊಳ್ಳುವುದು ಅನಿವಾರ್ಯ ವಾಗಿದೆ ಎಂದು ತಿಳಿಸಿದರು.ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಎ.ಸೂಡಿಶೆಟ್ಟರ ಅವರು ಸಾವಯುವ ಕೃಷಿ ಬೆಳವಣಿಗೆಗೆ ಇಲಾಖೆ ಯಲ್ಲಿ ಹಲವು ಯೋಜನೆಗಳಿದ್ದು ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.<br /> <br /> ಕುಂಟೋಜಿ ಗ್ರಾ.ಪಂ.ನ ಮಾಜಿ ಅಧ್ಯಕ್ಷ ಚನ್ನಬಸಯ್ಯ ಕಾರಡಗಿಮಠ ಅಧ್ಯಕ್ಷತೆ ವಹಿಸಿದ್ದರು. ಶರಣಪ್ಪ ದೊಣ್ಣೆಗುಡ್ಡ, ವಿ.ಎಸ್.ಭಾವಿ, ಅಂದಪ್ಪ ಅಂಗಡಿ, ಶರಣಪ್ಪ ಅವಾರಿ, ಮಲ್ಲಿಕಾ ರ್ಜುನ ಕಲ್ಲೂರ, ಅಮರೇಶ ಕುಂಬಾರ ಹಾಜರಿದ್ದರು. ಸಹಾಯಕ ಕೃಷಿ ಅಧಿಕಾರಿ ವಿ.ಟಿ. ವಿರಕ್ತಮಠ ಸ್ವಾಗತಿಸಿದರು. ಕೆ.ಎಚ್. ಗಂಗೂರ ನಿರೂಪಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಜೇಂದ್ರಗಡ: </strong>ಅತಿಯಾದ ರಾಸಾನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯಿಂದ ಭೂಮಿಯ ಸತ್ವ ಕಳೆದು ಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ರೈತರನ್ನು ಸಾವಯುವ ಕೃಷಿಯತ್ತ ಕೊಂಡೊಯ್ಯುವುದು ಅತ್ಯವಶ್ಯವಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಎನ್.ವಿ.ಚಂದ್ರಶೇಖರ ತಿಳಿಸಿದರು.<br /> <br /> ಭೂಚೇತನ ಯೋಜನೆ ಅಡಿಯಲ್ಲಿ ಇತ್ತೀಚೆಗೆ ಇಲ್ಲಿಗೆ ಸಮೀಪದ ಮ್ಯಾಕಲ್ಝರಿ ಗ್ರಾಮದ ಚನ್ನಬಸಯ್ಯ ಕಾರಡ ಗಿಮಠ ಅವರ ಹೊಲದಲ್ಲಿ ಕೃಷಿ ಇಲಾಖೆಯ ಮತ್ತು ಕಿಸಾನ್ ಭಾರತಿ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಮೆಕ್ಕೆ ಜೋಳ ಬೆಳೆಯ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು.<br /> <br /> ಭೂಮಿಯಲ್ಲಿ ಅಗತ್ಯ ಪೋಷ ಕಾಂಶಗಳನ್ನು ಹೆಚ್ಚಿಸಲು ಕೊಟ್ಟಿಗೆ ಗೊಬ್ಬರ, ಎರೆಹುಳ ಗೊಬ್ಬರ, ಜೀವಾ ಮೃತ, ಬೀಜಾಮೃತ, ಪಂಚಗವ್ಯ, ಬಯೋಡಜಿಸ್ಟ್ದಿಂದ ದೊರೆಯುವ ರಸಸಾರವನ್ನು ಬಳಿಕೆ ಮಾಡಬೇಕು. ಆ ಮೂಲಕ ಹೆಚ್ಚು ಇಳುವರಿಯನ್ನು ತೆಗೆಯಬಹುದು ಎಂದು ಅವರು ವಿವರಿಸಿದರು.<br /> <br /> ರಾಜ್ಯದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಸರ್ಕಾರ ಸಬ್ಸಿಡಿ ದರದಲ್ಲಿ ಬೀಜ ಗಳನ್ನು ವಿತರಣೆ ಮಾಡುತ್ತಿದೆ. ರೈತರು ಕೃಷಿ ತಜ್ಞರ ಜೊತೆಗೆ ಚರ್ಚಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು.<br /> ಕಿಸಾನ್ ಭಾರತ ಟ್ರಸ್ಟ್ನ ಭೀಮರಾವ್ ದೇಶಪಾಂಡೆ ಮಾತನಾಡಿ, ರೈತರು ಸಾವಯುವ ಕೃಷಿಯನ್ನು ಬದಿಗೊತ್ತಿ ರಾಸಾಯನಿಕ ಗೊಬ್ಬರದ ಬೆನ್ನು ಹತ್ತಿದ್ದರಿಂದ ಭೂಮಿ ಬರಡಾಗುತ್ತಿದೆ. <br /> <br /> ಬಂಜರಾಗುತ್ತಿರುವ ಭೂಮಿಗೆ ಮರುಸತ್ವ ಕೊಡಲು ಸಾವಯವ ಕೃಷಿಯನ್ನು ಅಳವಡಿಸಿ ಕೊಳ್ಳುವುದು ಅನಿವಾರ್ಯ ವಾಗಿದೆ ಎಂದು ತಿಳಿಸಿದರು.ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಎ.ಸೂಡಿಶೆಟ್ಟರ ಅವರು ಸಾವಯುವ ಕೃಷಿ ಬೆಳವಣಿಗೆಗೆ ಇಲಾಖೆ ಯಲ್ಲಿ ಹಲವು ಯೋಜನೆಗಳಿದ್ದು ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.<br /> <br /> ಕುಂಟೋಜಿ ಗ್ರಾ.ಪಂ.ನ ಮಾಜಿ ಅಧ್ಯಕ್ಷ ಚನ್ನಬಸಯ್ಯ ಕಾರಡಗಿಮಠ ಅಧ್ಯಕ್ಷತೆ ವಹಿಸಿದ್ದರು. ಶರಣಪ್ಪ ದೊಣ್ಣೆಗುಡ್ಡ, ವಿ.ಎಸ್.ಭಾವಿ, ಅಂದಪ್ಪ ಅಂಗಡಿ, ಶರಣಪ್ಪ ಅವಾರಿ, ಮಲ್ಲಿಕಾ ರ್ಜುನ ಕಲ್ಲೂರ, ಅಮರೇಶ ಕುಂಬಾರ ಹಾಜರಿದ್ದರು. ಸಹಾಯಕ ಕೃಷಿ ಅಧಿಕಾರಿ ವಿ.ಟಿ. ವಿರಕ್ತಮಠ ಸ್ವಾಗತಿಸಿದರು. ಕೆ.ಎಚ್. ಗಂಗೂರ ನಿರೂಪಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>