<p><strong>ಹರಿಹರ</strong>: ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ಗ್ರಾಮಸ್ಥರು ಬುಧವಾರ ತಾಲ್ಲೂಕಿನ ಭಾಸ್ಕರ್ರಾವ್ ಕ್ಯಾಂಪ್ನಲ್ಲಿ ಒತ್ತುವರಿಯಾದ ರುದ್ರಭೂಮಿಯನ್ನು ಹದ್ದುಬಸ್ತು ಮಾಡಿಕೊಡಬೇಕು ಎಂದು ಆಗ್ರಹಿಸಿ ತಾಲ್ಲೂಕು ಕಚೇರಿ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದರು.<br /> <br /> ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಬೇವಿನಹಳ್ಳಿ ಮಹೇಶ್ ಮಾತನಾಡಿ, ಒಂದು ದಶಕದಿಂದ ಭಾಸ್ಕರ್ರಾವ್ ಕ್ಯಾಂಪ್ನಲ್ಲಿ ರುದ್ರಭೂಮಿಯ ಸಮಸ್ಯೆ ಕಾಡುತ್ತಿದೆ. ಕ್ಯಾಂಪ್ನಲ್ಲಿರುವ 18 ಎಕರೆ ಗೋಮಾಳದಲ್ಲಿ 4 ಎಕರೆ ಜಮೀನನ್ನು ರುದ್ರಭೂಮಿಗೆ ಕಾದಿಟ್ಟು ಉಳಿದ 14 ಎಕರೆ ಜಮೀನನ್ನು ರೀಗ್ರಾಂಟ್ನಲ್ಲಿ ಸ್ಥಳೀಯ ಉಳಿಮೆದಾರರಿಗೆ ಹಂಚಿಕೆ ಮಾಡಲಾಗಿತ್ತು. <br /> <br /> ಹೀಗೆ ಸರ್ಕಾರದಿಂದ ಜಮೀನು ಪಡೆದ ಕೆಲವರು ರುದ್ರಭೂಮಿಯ ಜಾಗವನ್ನೂ ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಸ್ಥಳೀಯರಿಗೆ ರುದ್ರಭೂಮಿ ಸಮಸ್ಯೆ ನಿರಂತರವಾಗಿ ಕಾಡುತ್ತಿದೆ. ಕಳೆದ 2 ವರ್ಷಗಳಿಂದ ತಹಶೀಲ್ದಾರ್ಗೆ ಈ ಬಗ್ಗೆ ಹಲವಾರು ಮನವಿ ಸಲ್ಲಿಸಲಾಗಿದೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.<br /> <br /> ಕ್ಯಾಂಪ್ನ ಎಂ.ಬಿ. ಮಂಜಪ್ಪ ಮೃತಪಟ್ಟಿದ್ದಾರೆ. ಅವರ ಶವಸಂಸ್ಕಾರ ಮಾಡಲು ಜಾಗ ಇಲ್ಲ. ಬೋವಿ ಮಂಜಪ್ಪ, ಬೋವಿ ಮೈಲಪ್ಪ, ಬೋವಿ ನಾಗಪ್ಪ, ಈರಪ್ಪ ಸಲ್ಲಹಳ್ಳಿ ಮೊದಲಾದವರು ರುದ್ರಭೂಮಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಗ್ರಾಮಸ್ಥರು ಪ್ರಶ್ನಿಸಿದರೆ ಗಲಾಟೆ ಮಾಡುತ್ತಾರೆ. ಅದಕ್ಕೂ ಮೀರಿ ಗ್ರಾಮದವರು ಶವಸಂಸ್ಕಾರ ಮಾಡಿದರೆ, ಅದೇ ಸ್ಥಳದಲ್ಲಿ ಪುನಃ ಉಳುಮೆ ಆರಂಭಿಸುತ್ತಾರೆ. ಅಧಿಕಾರಿಗಳ ಇಂಥ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.<br /> <br /> ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಜಿ. ನಜ್ಮಾ ಮಾತನಾಡಿ, ಈ ವಿಷಯ ನನ್ನ ಗಮನಕ್ಕೆ ಬಂದು ಎಂಟು ತಿಂಗಳಾಯಿತು. ಅಂದಿನಿಂದ ಇಂದಿನವರೆಗೂ ಮೇಲಧಿಕಾರಿಗಳಿಗೆ ಸುಮಾರು ಮೂರು ಬಾರಿ ಪತ್ರ ಬರೆದಿದ್ದೇನೆ. ಸ್ಥಳದ ನಿಖರತೆ ಹಾಗೂ ಪೋಡು ಮಾಡಲು ಬೇಕಾದ ನಕ್ಷೆಯಲ್ಲಿ ಕೆಲವು ತಾಂತ್ರಿಕ ದೋಷಗಳಿವೆ.<br /> <br /> ಈ ಬಗ್ಗೆ ಸರ್ವೇ ಇಲಾಖೆಗೆ ಸೂಚನೆ ನೀಡಿದ್ದೇನೆ. ಈ ದಿನ ಬೆಳಿಗ್ಗೆ ವಿಷಯ ತಿಳಿಯುತ್ತಿದ್ದಂತೆ ಖುದ್ದಾಗಿ ಗ್ರಾಮಕ್ಕೆ ಭೇಟಿ ನೀಡಿದ್ದೇನೆ. ಕ್ಯಾಂಪ್ ನಾವು ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದರೆ ನೀವುಗಳು ಇಲ್ಲಿ ಪ್ರತಿಭಟನೆ ಮಾಡುತ್ತಿದ್ದೀರಿ. ರುದ್ರಭೂಮಿ ಸಮಸ್ಯೆ ಪರಿಹಾರವಾಗಿದೆ. ಸ್ಥಳೀಯ ಗ್ರಾ.ಪಂ.ಗೆ ತಂತಿ ಬೇಲಿ ಹಾಗೂ ನಾಮಫಲಕ ಹಾಕಿಸಲು ಸೂಚನೆ ನೀಡಿದ್ದೇನೆ ಎಂದರು.<br /> <br /> ಪ್ರತಿಭಟನಾಕಾರರೊಂದಿಗೆ ಅವರೂ ಕ್ಯಾಂಪ್ಗೆ ಹೋಗಿ ಶವಸಂಸ್ಕಾರ ಆಗುವವರೆಗೂ ಇದ್ದುದು ವಿಶೇಷವಾಗಿತ್ತು. ನಂತರ, ಗ್ರಾಮಸ್ಥರ ಎದುರೇ ಪಿಡಿಒ ಅವರಿಗೆ ಶೀಘ್ರದಲ್ಲಿ ತಂತಿ ಬೇಲಿ ಹಾಕಿಸಲು ಸೂಚನೆ ನೀಡಿದರು.<br /> <br /> ಪ್ರತಿಭಟನೆಯಲ್ಲಿ ಮೆಣಸಿನಹಾಳು ರುದ್ರಗೌಡ, ಬಾವಿಮನಿ ಪುಟ್ಟವೀರಪ್ಪ, ಶ್ರೀನಿವಾಸ, ಶೇಷಯ್ಯ, ಕೃಷ್ಣಮೂರ್ತಿ, ಎಂ.ಡಿ. ಮಂಜುನಾಥ, ಗಂಗಮ್ಮ, ನೀಲಮ್ಮ, ಸಾಕಮ್ಮ, ಹನುಮಮ್ಮ, ಶಿವಕ್ಕ, ಚಂದ್ರಮ್ಮ, ಬಸಪ್ಪ, ಐರಣಿ ಹನುಮಂತಪ್ಪ, ತಿಮ್ಮಣ್ಣ ಮತ್ತಿತರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಿಹರ</strong>: ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ಗ್ರಾಮಸ್ಥರು ಬುಧವಾರ ತಾಲ್ಲೂಕಿನ ಭಾಸ್ಕರ್ರಾವ್ ಕ್ಯಾಂಪ್ನಲ್ಲಿ ಒತ್ತುವರಿಯಾದ ರುದ್ರಭೂಮಿಯನ್ನು ಹದ್ದುಬಸ್ತು ಮಾಡಿಕೊಡಬೇಕು ಎಂದು ಆಗ್ರಹಿಸಿ ತಾಲ್ಲೂಕು ಕಚೇರಿ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದರು.<br /> <br /> ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಬೇವಿನಹಳ್ಳಿ ಮಹೇಶ್ ಮಾತನಾಡಿ, ಒಂದು ದಶಕದಿಂದ ಭಾಸ್ಕರ್ರಾವ್ ಕ್ಯಾಂಪ್ನಲ್ಲಿ ರುದ್ರಭೂಮಿಯ ಸಮಸ್ಯೆ ಕಾಡುತ್ತಿದೆ. ಕ್ಯಾಂಪ್ನಲ್ಲಿರುವ 18 ಎಕರೆ ಗೋಮಾಳದಲ್ಲಿ 4 ಎಕರೆ ಜಮೀನನ್ನು ರುದ್ರಭೂಮಿಗೆ ಕಾದಿಟ್ಟು ಉಳಿದ 14 ಎಕರೆ ಜಮೀನನ್ನು ರೀಗ್ರಾಂಟ್ನಲ್ಲಿ ಸ್ಥಳೀಯ ಉಳಿಮೆದಾರರಿಗೆ ಹಂಚಿಕೆ ಮಾಡಲಾಗಿತ್ತು. <br /> <br /> ಹೀಗೆ ಸರ್ಕಾರದಿಂದ ಜಮೀನು ಪಡೆದ ಕೆಲವರು ರುದ್ರಭೂಮಿಯ ಜಾಗವನ್ನೂ ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಸ್ಥಳೀಯರಿಗೆ ರುದ್ರಭೂಮಿ ಸಮಸ್ಯೆ ನಿರಂತರವಾಗಿ ಕಾಡುತ್ತಿದೆ. ಕಳೆದ 2 ವರ್ಷಗಳಿಂದ ತಹಶೀಲ್ದಾರ್ಗೆ ಈ ಬಗ್ಗೆ ಹಲವಾರು ಮನವಿ ಸಲ್ಲಿಸಲಾಗಿದೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.<br /> <br /> ಕ್ಯಾಂಪ್ನ ಎಂ.ಬಿ. ಮಂಜಪ್ಪ ಮೃತಪಟ್ಟಿದ್ದಾರೆ. ಅವರ ಶವಸಂಸ್ಕಾರ ಮಾಡಲು ಜಾಗ ಇಲ್ಲ. ಬೋವಿ ಮಂಜಪ್ಪ, ಬೋವಿ ಮೈಲಪ್ಪ, ಬೋವಿ ನಾಗಪ್ಪ, ಈರಪ್ಪ ಸಲ್ಲಹಳ್ಳಿ ಮೊದಲಾದವರು ರುದ್ರಭೂಮಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಗ್ರಾಮಸ್ಥರು ಪ್ರಶ್ನಿಸಿದರೆ ಗಲಾಟೆ ಮಾಡುತ್ತಾರೆ. ಅದಕ್ಕೂ ಮೀರಿ ಗ್ರಾಮದವರು ಶವಸಂಸ್ಕಾರ ಮಾಡಿದರೆ, ಅದೇ ಸ್ಥಳದಲ್ಲಿ ಪುನಃ ಉಳುಮೆ ಆರಂಭಿಸುತ್ತಾರೆ. ಅಧಿಕಾರಿಗಳ ಇಂಥ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.<br /> <br /> ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಜಿ. ನಜ್ಮಾ ಮಾತನಾಡಿ, ಈ ವಿಷಯ ನನ್ನ ಗಮನಕ್ಕೆ ಬಂದು ಎಂಟು ತಿಂಗಳಾಯಿತು. ಅಂದಿನಿಂದ ಇಂದಿನವರೆಗೂ ಮೇಲಧಿಕಾರಿಗಳಿಗೆ ಸುಮಾರು ಮೂರು ಬಾರಿ ಪತ್ರ ಬರೆದಿದ್ದೇನೆ. ಸ್ಥಳದ ನಿಖರತೆ ಹಾಗೂ ಪೋಡು ಮಾಡಲು ಬೇಕಾದ ನಕ್ಷೆಯಲ್ಲಿ ಕೆಲವು ತಾಂತ್ರಿಕ ದೋಷಗಳಿವೆ.<br /> <br /> ಈ ಬಗ್ಗೆ ಸರ್ವೇ ಇಲಾಖೆಗೆ ಸೂಚನೆ ನೀಡಿದ್ದೇನೆ. ಈ ದಿನ ಬೆಳಿಗ್ಗೆ ವಿಷಯ ತಿಳಿಯುತ್ತಿದ್ದಂತೆ ಖುದ್ದಾಗಿ ಗ್ರಾಮಕ್ಕೆ ಭೇಟಿ ನೀಡಿದ್ದೇನೆ. ಕ್ಯಾಂಪ್ ನಾವು ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದರೆ ನೀವುಗಳು ಇಲ್ಲಿ ಪ್ರತಿಭಟನೆ ಮಾಡುತ್ತಿದ್ದೀರಿ. ರುದ್ರಭೂಮಿ ಸಮಸ್ಯೆ ಪರಿಹಾರವಾಗಿದೆ. ಸ್ಥಳೀಯ ಗ್ರಾ.ಪಂ.ಗೆ ತಂತಿ ಬೇಲಿ ಹಾಗೂ ನಾಮಫಲಕ ಹಾಕಿಸಲು ಸೂಚನೆ ನೀಡಿದ್ದೇನೆ ಎಂದರು.<br /> <br /> ಪ್ರತಿಭಟನಾಕಾರರೊಂದಿಗೆ ಅವರೂ ಕ್ಯಾಂಪ್ಗೆ ಹೋಗಿ ಶವಸಂಸ್ಕಾರ ಆಗುವವರೆಗೂ ಇದ್ದುದು ವಿಶೇಷವಾಗಿತ್ತು. ನಂತರ, ಗ್ರಾಮಸ್ಥರ ಎದುರೇ ಪಿಡಿಒ ಅವರಿಗೆ ಶೀಘ್ರದಲ್ಲಿ ತಂತಿ ಬೇಲಿ ಹಾಕಿಸಲು ಸೂಚನೆ ನೀಡಿದರು.<br /> <br /> ಪ್ರತಿಭಟನೆಯಲ್ಲಿ ಮೆಣಸಿನಹಾಳು ರುದ್ರಗೌಡ, ಬಾವಿಮನಿ ಪುಟ್ಟವೀರಪ್ಪ, ಶ್ರೀನಿವಾಸ, ಶೇಷಯ್ಯ, ಕೃಷ್ಣಮೂರ್ತಿ, ಎಂ.ಡಿ. ಮಂಜುನಾಥ, ಗಂಗಮ್ಮ, ನೀಲಮ್ಮ, ಸಾಕಮ್ಮ, ಹನುಮಮ್ಮ, ಶಿವಕ್ಕ, ಚಂದ್ರಮ್ಮ, ಬಸಪ್ಪ, ಐರಣಿ ಹನುಮಂತಪ್ಪ, ತಿಮ್ಮಣ್ಣ ಮತ್ತಿತರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>