<p><strong>ಬೆಂಗಳೂರು: </strong>ಪೊಲೀಸ್ ಇಲಾಖೆಗೆ ಸಾಕಷ್ಟು ಸವಾಲಾಗಿದ್ದ ಮಲ್ಲೇಶ್ವರದ ಸೇಂಟ್ ಪೀಟರ್ಸ್ ಪೊಂಟಿಫಿಕಲ್ ಸೆಮಿನರಿಯ ರೆಕ್ಟರ್ (ಮುಖ್ಯಸ್ಥ) ಕೆ.ಜೆ.ಥಾಮಸ್ (62) ಕೊಲೆ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿರುವ ನಗರ ಪೊಲೀಸರು ಇಲಿಯಾಜ್ ಎಂಬ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.<br /> <br /> ‘ಪ್ರಕರಣ ಸಂಬಂಧ ಇಲಿಯಾಜ್ನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಥಾಮಸ್ ಅವರ ಕೊಲೆಗೆ ಸೆಮಿನರಿಯ ಆಡಳಿತಾತ್ಮಕ ಮತ್ತು ವ್ಯವಹಾರಿಕ ವಿಷಯಗಳೇ ಮುಖ್ಯ ಕಾರಣ’ ಎಂದು ಉನ್ನತ ಪೊಲೀಸ್ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.<br /> <br /> ‘ಹಲವು ಶಿಕ್ಷಣ ಸಂಸ್ಥೆಗಳು ಆ ಸೆಮಿನರಿಯ ಅಧೀನದಲ್ಲಿವೆ. ಆ ಶಿಕ್ಷಣ ಸಂಸ್ಥೆಗಳಿಂದ ಬರುವ ವರಮಾನ ಸೆಮಿನರಿಗೆ ಸೇರುತ್ತಿತ್ತು. ಸುಮಾರು 20 ವರ್ಷಗಳಿಂದ ಸೆಮಿನರಿಯಲ್ಲಿ ರೆಕ್ಟರ್ ಆಗಿದ್ದ ಕೇರಳ ಮೂಲದ ಥಾಮಸ್ ಅವರೇ ಸೆಮಿನರಿಯ ಆಡಳಿತಾತ್ಮಕ ಮುಖ್ಯಸ್ಥರೂ ಆಗಿದ್ದರು.<br /> <br /> ಥಾಮಸ್ ಅವರ ಬದಲಿಗೆ ಕನ್ನಡ ಭಾಷಿಕರನ್ನೇ ಸೆಮಿನರಿಯ ರೆಕ್ಟರ್ ಸ್ಥಾನಕ್ಕೆ ನೇಮಿಸಬೇಕೆಂದು ಕೆಲ ಕ್ರೈಸ್ತ ಸಂಘಟನೆಗಳು ಒತ್ತಾಯಿಸುತ್ತಿದ್ದವು. ಈ ಸಂಬಂಧ ವಿವಾದ ತಲೆದೋರಿತ್ತು. ಇದೇ ಕಾರಣದಿಂದ ಕೊಲೆ ನಡೆದಿದೆ’ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.<br /> <br /> ‘ಕೊಲೆ ಘಟನೆಯ ನಂತರ ಥಾಮಸ್ ಅವರ ಕೊಠಡಿಯಲ್ಲಿದ್ದ ಸೆಮಿನರಿಯ ದೈನಂದಿನ ವ್ಯವಹಾರ ಮತ್ತು ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಪಟ್ಟ ದಾಖಲೆಪತ್ರಗಳು ನಾಪತ್ತೆಯಾಗಿದ್ದವು. ಆರೋಪಿಗಳು ಕೃತ್ಯ ಎಸಗಿದ ಬಳಿಕ ಆ ದಾಖಲೆಪತ್ರಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದರು. ಅಲ್ಲದೇ, ಕೆಲ ಪ್ರಮುಖ ದಾಖಲೆಪತ್ರಗಳನ್ನು ತೆಗೆದುಕೊಂಡು ಹೋಗಿದ್ದರು. ಘಟನಾ ಸ್ಥಳದಲ್ಲಿ ದೊರೆತ ಸಾಂದರ್ಭಿಕ ಸಾಕ್ಷ್ಯಗಳು ಮತ್ತು ಪೊಲೀಸ್ ಮಾಹಿತಿದಾರರು ನೀಡಿದ ಸುಳಿವು ಆಧರಿಸಿ ಪ್ರಕರಣ ಭೇದಿಸಲಾಯಿತು’ ಎಂದು ಹೇಳಿದ್ದಾರೆ.<br /> <br /> ‘ಕೆಲ ವರ್ಷಗಳ ಹಿಂದೆ ಕ್ರೈಸ್ತ ಧರ್ಮಕ್ಕೆ ಮತಾಂತರನಾಗಿದ್ದ ಇಲಿಯಾಜ್, ನಗರದ ಚರ್ಚ್ ಒಂದರಲ್ಲಿ ಧರ್ಮ ಗುರುವಾಗಿ ಕೆಲಸ ಮಾಡುತ್ತಿದ್ದ. ಇತರೆ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನು ಬಂಧಿಸಿದ ಬಳಿಕ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.<br /> <br /> ಮಂಪರು ಪರೀಕ್ಷೆ: ಘಟನಾ ದಿನ ಸೆಮಿನರಿಯ ಸಹಾಯಕ ಪಾದ್ರಿ ಪ್ಯಾಟ್ರಿಕ್, ಇತರೆ ನಾಲ್ಕು ಮಂದಿ ಪಾದ್ರಿಗಳು, ಅಡುಗೆ ಸಹಾಯಕ ರಾಜ ಮತ್ತು ಆತನ ತಮ್ಮ ರೆಡ್ಡಿ, ಭದ್ರತಾ ಸಿಬ್ಬಂದಿ ಮಾನ್ಸಿಂಗ್ ಮಾತ್ರ ಸೆಮಿನರಿಯಲ್ಲಿದ್ದರು.<br /> <br /> ಆ ಎಂಟು ಮಂದಿಯಲ್ಲಿ ಪ್ಯಾಟ್ರಿಕ್, ರಾಜ ಮತ್ತು ರೆಡ್ಡಿಗೆ ಪೊಲೀಸರು ಗುಜರಾತ್ನ ಗಾಂಧಿನಗರದ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್ಎಸ್ಎಲ್) ಮಂಪರು ಪರೀಕ್ಷೆ ಮಾಡಿಸಿದ್ದರು. ಕಳೆದ ವಾರ ಸಹ ಮತ್ತಿಬ್ಬರು ವ್ಯಕ್ತಿಗಳಿಗೆ ಮಂಪರು ಪರೀಕ್ಷೆ ಮಾಡಲಾಗಿತ್ತು.<br /> <br /> 2013ರ ಮಾ.31ರಂದು ರಾತ್ರಿ ಸೆಮಿನರಿಗೆ ನುಗ್ಗಿದ್ದ ದುಷ್ಕರ್ಮಿಗಳು ಥಾಮಸ್ ಅವರ ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆ ಮಾಡಿದ್ದರು.<br /> <br /> ಆಗ ನಗರ ಪೊಲೀಸ್ ಕಮಿಷನರ್ ಆಗಿದ್ದ ಜ್ಯೋತಿಪ್ರಕಾಶ್ ಮಿರ್ಜಿ ಅವರು ಕೊಲೆ ಪ್ರಕರಣದ ಶೀಘ್ರ ತನಿಖೆಗೆ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಪ್ರಣವ್ ಮೊಹಾಂತಿ ಅವರ ನೇತೃತ್ವದಲ್ಲಿ ವಿಶೇಷ ತಂಡವೊಂದನ್ನು ರಚಿಸಿದ್ದರು.<br /> <br /> ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ಆದಷ್ಟು ಬೇಗನೆ ಆರೋಪಿಗಳನ್ನು ಪತ್ತೆ ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ಆದೇಶಿಸಿದ್ದರು.<br /> <br /> <strong>15 ಲಕ್ಷ ಬೆರಳಚ್ಚು ಮಾದರಿ ತಪಾಸಣೆ</strong><br /> ‘ಪ್ರಕರಣ ಸಂಬಂಧ 15 ಲಕ್ಷಕ್ಕೂ ಹೆಚ್ಚು ಬೆರಳಚ್ಚು ಮಾದರಿಗಳನ್ನು ಪರಿಶೀಲಿಸಲಾಗಿದೆ. ಘಟನಾ ಸ್ಥಳದಲ್ಲಿ ಪತ್ತೆಯಾಗಿದ್ದ ಬೆರಳಚ್ಚು ಮಾದರಿಯನ್ನು ರಾಜ್ಯ ಅಪರಾಧ ದಾಖಲಾತಿ ವಿಭಾಗದಲ್ಲಿ (ಎಸ್ಸಿಆರ್ಬಿ) ಸಂಗ್ರಹಿಸಲಾಗಿರುವ ಹಾಗೂ ಮಲ್ಲೇಶ್ವರ ಸುತ್ತಮುತ್ತಲ ಠಾಣೆಗಳ ವ್ಯಾಪ್ತಿಯಲ್ಲಿನ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಸುಮಾರು 7 ಲಕ್ಷ ಬೆರಳಚ್ಚು ಮಾದರಿಗಳೊಂದಿಗೆ ಹೋಲಿಸಿ ನೋಡಲಾಗಿದೆ. ಅಲ್ಲದೇ ಬಿಹಾರ, ಒಡಿಶಾ, ಪಶ್ಚಿಮಬಂಗಾಳ, ದೆಹಲಿ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ರಾಜ್ಯದಲ್ಲಿನ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಬೆರಳಚ್ಚು ಮಾದರಿಗಳೊಂದಿಗೆ ತಾಳೆ ಹಾಕಿ ನೋಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.</p>.<p>‘ಕೊಲೆ ಘಟನೆ ನಡೆಯುವುದಕ್ಕೂ ಮುನ್ನ ಒಂದು ತಿಂಗಳ ಅಂತರದಲ್ಲಿ ಸೇಂಟ್ ಪೀಟರ್ಸ್ ಪೊಂಟಿಫಿಕಲ್ ಸೆಮಿನರಿ ಸುತ್ತಮುತ್ತಲ ಪ್ರದೇಶದಲ್ಲಿನ ಮೊಬೈಲ್ ಗೋಪುರಗಳ ಮೂಲಕ ವಿನಿಮಯವಾಗಿದ್ದ ಸುಮಾರು 25 ಲಕ್ಷ ಕರೆಗಳು ಹಾಗೂ ಆ ಕರೆಗಳ ಸಂಭಾಷಣೆಯ ವಿವರವನ್ನು ಸಂಗ್ರಹಿಸಿ ಪರಿಶೀಲಿಸಲಾಗಿದೆ’ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಪೊಲೀಸ್ ಇಲಾಖೆಗೆ ಸಾಕಷ್ಟು ಸವಾಲಾಗಿದ್ದ ಮಲ್ಲೇಶ್ವರದ ಸೇಂಟ್ ಪೀಟರ್ಸ್ ಪೊಂಟಿಫಿಕಲ್ ಸೆಮಿನರಿಯ ರೆಕ್ಟರ್ (ಮುಖ್ಯಸ್ಥ) ಕೆ.ಜೆ.ಥಾಮಸ್ (62) ಕೊಲೆ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿರುವ ನಗರ ಪೊಲೀಸರು ಇಲಿಯಾಜ್ ಎಂಬ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.<br /> <br /> ‘ಪ್ರಕರಣ ಸಂಬಂಧ ಇಲಿಯಾಜ್ನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಥಾಮಸ್ ಅವರ ಕೊಲೆಗೆ ಸೆಮಿನರಿಯ ಆಡಳಿತಾತ್ಮಕ ಮತ್ತು ವ್ಯವಹಾರಿಕ ವಿಷಯಗಳೇ ಮುಖ್ಯ ಕಾರಣ’ ಎಂದು ಉನ್ನತ ಪೊಲೀಸ್ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.<br /> <br /> ‘ಹಲವು ಶಿಕ್ಷಣ ಸಂಸ್ಥೆಗಳು ಆ ಸೆಮಿನರಿಯ ಅಧೀನದಲ್ಲಿವೆ. ಆ ಶಿಕ್ಷಣ ಸಂಸ್ಥೆಗಳಿಂದ ಬರುವ ವರಮಾನ ಸೆಮಿನರಿಗೆ ಸೇರುತ್ತಿತ್ತು. ಸುಮಾರು 20 ವರ್ಷಗಳಿಂದ ಸೆಮಿನರಿಯಲ್ಲಿ ರೆಕ್ಟರ್ ಆಗಿದ್ದ ಕೇರಳ ಮೂಲದ ಥಾಮಸ್ ಅವರೇ ಸೆಮಿನರಿಯ ಆಡಳಿತಾತ್ಮಕ ಮುಖ್ಯಸ್ಥರೂ ಆಗಿದ್ದರು.<br /> <br /> ಥಾಮಸ್ ಅವರ ಬದಲಿಗೆ ಕನ್ನಡ ಭಾಷಿಕರನ್ನೇ ಸೆಮಿನರಿಯ ರೆಕ್ಟರ್ ಸ್ಥಾನಕ್ಕೆ ನೇಮಿಸಬೇಕೆಂದು ಕೆಲ ಕ್ರೈಸ್ತ ಸಂಘಟನೆಗಳು ಒತ್ತಾಯಿಸುತ್ತಿದ್ದವು. ಈ ಸಂಬಂಧ ವಿವಾದ ತಲೆದೋರಿತ್ತು. ಇದೇ ಕಾರಣದಿಂದ ಕೊಲೆ ನಡೆದಿದೆ’ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.<br /> <br /> ‘ಕೊಲೆ ಘಟನೆಯ ನಂತರ ಥಾಮಸ್ ಅವರ ಕೊಠಡಿಯಲ್ಲಿದ್ದ ಸೆಮಿನರಿಯ ದೈನಂದಿನ ವ್ಯವಹಾರ ಮತ್ತು ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಪಟ್ಟ ದಾಖಲೆಪತ್ರಗಳು ನಾಪತ್ತೆಯಾಗಿದ್ದವು. ಆರೋಪಿಗಳು ಕೃತ್ಯ ಎಸಗಿದ ಬಳಿಕ ಆ ದಾಖಲೆಪತ್ರಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದರು. ಅಲ್ಲದೇ, ಕೆಲ ಪ್ರಮುಖ ದಾಖಲೆಪತ್ರಗಳನ್ನು ತೆಗೆದುಕೊಂಡು ಹೋಗಿದ್ದರು. ಘಟನಾ ಸ್ಥಳದಲ್ಲಿ ದೊರೆತ ಸಾಂದರ್ಭಿಕ ಸಾಕ್ಷ್ಯಗಳು ಮತ್ತು ಪೊಲೀಸ್ ಮಾಹಿತಿದಾರರು ನೀಡಿದ ಸುಳಿವು ಆಧರಿಸಿ ಪ್ರಕರಣ ಭೇದಿಸಲಾಯಿತು’ ಎಂದು ಹೇಳಿದ್ದಾರೆ.<br /> <br /> ‘ಕೆಲ ವರ್ಷಗಳ ಹಿಂದೆ ಕ್ರೈಸ್ತ ಧರ್ಮಕ್ಕೆ ಮತಾಂತರನಾಗಿದ್ದ ಇಲಿಯಾಜ್, ನಗರದ ಚರ್ಚ್ ಒಂದರಲ್ಲಿ ಧರ್ಮ ಗುರುವಾಗಿ ಕೆಲಸ ಮಾಡುತ್ತಿದ್ದ. ಇತರೆ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನು ಬಂಧಿಸಿದ ಬಳಿಕ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.<br /> <br /> ಮಂಪರು ಪರೀಕ್ಷೆ: ಘಟನಾ ದಿನ ಸೆಮಿನರಿಯ ಸಹಾಯಕ ಪಾದ್ರಿ ಪ್ಯಾಟ್ರಿಕ್, ಇತರೆ ನಾಲ್ಕು ಮಂದಿ ಪಾದ್ರಿಗಳು, ಅಡುಗೆ ಸಹಾಯಕ ರಾಜ ಮತ್ತು ಆತನ ತಮ್ಮ ರೆಡ್ಡಿ, ಭದ್ರತಾ ಸಿಬ್ಬಂದಿ ಮಾನ್ಸಿಂಗ್ ಮಾತ್ರ ಸೆಮಿನರಿಯಲ್ಲಿದ್ದರು.<br /> <br /> ಆ ಎಂಟು ಮಂದಿಯಲ್ಲಿ ಪ್ಯಾಟ್ರಿಕ್, ರಾಜ ಮತ್ತು ರೆಡ್ಡಿಗೆ ಪೊಲೀಸರು ಗುಜರಾತ್ನ ಗಾಂಧಿನಗರದ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್ಎಸ್ಎಲ್) ಮಂಪರು ಪರೀಕ್ಷೆ ಮಾಡಿಸಿದ್ದರು. ಕಳೆದ ವಾರ ಸಹ ಮತ್ತಿಬ್ಬರು ವ್ಯಕ್ತಿಗಳಿಗೆ ಮಂಪರು ಪರೀಕ್ಷೆ ಮಾಡಲಾಗಿತ್ತು.<br /> <br /> 2013ರ ಮಾ.31ರಂದು ರಾತ್ರಿ ಸೆಮಿನರಿಗೆ ನುಗ್ಗಿದ್ದ ದುಷ್ಕರ್ಮಿಗಳು ಥಾಮಸ್ ಅವರ ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆ ಮಾಡಿದ್ದರು.<br /> <br /> ಆಗ ನಗರ ಪೊಲೀಸ್ ಕಮಿಷನರ್ ಆಗಿದ್ದ ಜ್ಯೋತಿಪ್ರಕಾಶ್ ಮಿರ್ಜಿ ಅವರು ಕೊಲೆ ಪ್ರಕರಣದ ಶೀಘ್ರ ತನಿಖೆಗೆ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಪ್ರಣವ್ ಮೊಹಾಂತಿ ಅವರ ನೇತೃತ್ವದಲ್ಲಿ ವಿಶೇಷ ತಂಡವೊಂದನ್ನು ರಚಿಸಿದ್ದರು.<br /> <br /> ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ಆದಷ್ಟು ಬೇಗನೆ ಆರೋಪಿಗಳನ್ನು ಪತ್ತೆ ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ಆದೇಶಿಸಿದ್ದರು.<br /> <br /> <strong>15 ಲಕ್ಷ ಬೆರಳಚ್ಚು ಮಾದರಿ ತಪಾಸಣೆ</strong><br /> ‘ಪ್ರಕರಣ ಸಂಬಂಧ 15 ಲಕ್ಷಕ್ಕೂ ಹೆಚ್ಚು ಬೆರಳಚ್ಚು ಮಾದರಿಗಳನ್ನು ಪರಿಶೀಲಿಸಲಾಗಿದೆ. ಘಟನಾ ಸ್ಥಳದಲ್ಲಿ ಪತ್ತೆಯಾಗಿದ್ದ ಬೆರಳಚ್ಚು ಮಾದರಿಯನ್ನು ರಾಜ್ಯ ಅಪರಾಧ ದಾಖಲಾತಿ ವಿಭಾಗದಲ್ಲಿ (ಎಸ್ಸಿಆರ್ಬಿ) ಸಂಗ್ರಹಿಸಲಾಗಿರುವ ಹಾಗೂ ಮಲ್ಲೇಶ್ವರ ಸುತ್ತಮುತ್ತಲ ಠಾಣೆಗಳ ವ್ಯಾಪ್ತಿಯಲ್ಲಿನ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಸುಮಾರು 7 ಲಕ್ಷ ಬೆರಳಚ್ಚು ಮಾದರಿಗಳೊಂದಿಗೆ ಹೋಲಿಸಿ ನೋಡಲಾಗಿದೆ. ಅಲ್ಲದೇ ಬಿಹಾರ, ಒಡಿಶಾ, ಪಶ್ಚಿಮಬಂಗಾಳ, ದೆಹಲಿ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ರಾಜ್ಯದಲ್ಲಿನ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಬೆರಳಚ್ಚು ಮಾದರಿಗಳೊಂದಿಗೆ ತಾಳೆ ಹಾಕಿ ನೋಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.</p>.<p>‘ಕೊಲೆ ಘಟನೆ ನಡೆಯುವುದಕ್ಕೂ ಮುನ್ನ ಒಂದು ತಿಂಗಳ ಅಂತರದಲ್ಲಿ ಸೇಂಟ್ ಪೀಟರ್ಸ್ ಪೊಂಟಿಫಿಕಲ್ ಸೆಮಿನರಿ ಸುತ್ತಮುತ್ತಲ ಪ್ರದೇಶದಲ್ಲಿನ ಮೊಬೈಲ್ ಗೋಪುರಗಳ ಮೂಲಕ ವಿನಿಮಯವಾಗಿದ್ದ ಸುಮಾರು 25 ಲಕ್ಷ ಕರೆಗಳು ಹಾಗೂ ಆ ಕರೆಗಳ ಸಂಭಾಷಣೆಯ ವಿವರವನ್ನು ಸಂಗ್ರಹಿಸಿ ಪರಿಶೀಲಿಸಲಾಗಿದೆ’ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>