<p><strong>ಕೋಲಾರ: </strong> ಸುಂಕ ರಹಿತ ರೇಷ್ಮೆ ಆಮದು ನೀತಿಯನ್ನು ವಾಪಸು ಪಡೆಯಬೇಕು. ಸುಂಕ ರಹಿತವಾಗಿ ರೇಷ್ಮೆ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಸೋಮವಾರ ರೇಷ್ಮೆ ಬೆಳೆಗಾರರ ಅಭಿವೃದ್ಧಿ ಸಂಘದ ನೇತೃತ್ವದಲ್ಲಿ ನೂರಾರು ಬೆಳೆಗಾರರು, ರೀಲರುಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು.<br /> <br /> ರೇಷ್ಮೆಗೂಡು ಮಾರುಕಟ್ಟೆಯಿಂದ ಶುರುವಾದ ಮೆರವಣಿಗೆ ಎಂ.ಬಿ.ರಸ್ತೆ, ಮೆಕ್ಕೆ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣವನ್ನು ತಲುಪಿತು. ಅಲ್ಲಿಯೂ ಬೆಳೆಗಾರರು, ರೀಲರುಗಳು ಧರಣಿ ನಡೆಸಿದರು.<br /> <br /> ಕೇಂದ್ರದ ಜವಳಿ ಮತ್ತು ಆರ್ಥಿಕ ಸಚಿವಾಲಯವು ಕಳೆದ ಆಗಸ್ಟ್ನಲ್ಲಿ ಪ್ರಕಟಿಸಿರುವ, ಸುಂಕ ರಹಿತವಾಗಿ 2500 ಮೆಟ್ರಿಕ್ ಟನ್ ರೇಷ್ಮೆಯನ್ನು ಆಮದು ಮಾಡಿಕೊಳ್ಳುವ ನೀತಿಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.<br /> <br /> ಬಂಡವಾಳಶಾಹಿ ವರ್ತಕರು ನಡೆಸಿರುವ ಕೈವಾಡದಿಂದ ಗೂಡಗಳ ಬೆಲೆ ಕೆಜಿಗೆ 350ರಿಂದ 425 ಇದ್ದದ್ದು 150ರಿಂದ 250ಕ್ಕೆ ಕುಸಿದಿರುವುದು ಬೆಳೆಗಾರರಲ್ಲಿ ಆತಂಕವನ್ನು ಮೂಡಿಸಿದೆ ಎಂದರು.<br /> <br /> ಹತ್ತು ಲಕ್ಷ ಬೆಳೆಗಾರರು ಮತ್ತು ರೀಲರ್ ಕುಟುಂಬಗಳು ರೇಷ್ಮೆಗೂಡು ಉದ್ದಿಮೆಯನ್ನು ಜೀವನೋಪಾಯಕ್ಕಾಗಿ ಅವಲಂಬಿಸಿವೆ. ಕೆಲವೇ ವರ್ತಕರ ಹಿತಕ್ಕೋಸ್ಕರ ರೂಪಿಸಲಾಗಿರುವ ನೀತಿಯನ್ನು ಕೈಬಿಡಬೇಕು. ಬೆಳೆಗಾರರು ಮತ್ತು ರೀಲರ್ಗಳ ಹಿತ ಕಾಪಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.<br /> <br /> ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಚಿನ್ನಾಪುರ ನಾರಾಯಣಸ್ವಾಮಿ, ದ್ಯಾವೀರಪ್ಪ, ರೀಲರ್ಗಳ ಸಂಘದ ಅಧ್ಯಕ್ಷ ಚಾಂದ್ಪಾಷಾ, ವೆಂಕಟಸ್ವಾಮಿ, ಮುನಿಸೊಣ್ಣಪ್ಪ, ಎ.ಅರ್ಜುನ್, ಆರ್.ಪ್ರಕಾಶ್, ನಂಜುಂಡಪ್ಪ, ಎಸ್.ಎಂ.ನಾರಾಯಣಸ್ವಾಮಿ, ಸಿ.ವಿ.ನಾರಾಯಣ್, ಗೋವಿದರಾಜ್, ಅಮೀರ್, ಬಾಬು ಮನೋಹರ್ ಬೇಗ್, ವಲದವಾಡಿ ವೆಂಕಟೇಶ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ: </strong> ಸುಂಕ ರಹಿತ ರೇಷ್ಮೆ ಆಮದು ನೀತಿಯನ್ನು ವಾಪಸು ಪಡೆಯಬೇಕು. ಸುಂಕ ರಹಿತವಾಗಿ ರೇಷ್ಮೆ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಸೋಮವಾರ ರೇಷ್ಮೆ ಬೆಳೆಗಾರರ ಅಭಿವೃದ್ಧಿ ಸಂಘದ ನೇತೃತ್ವದಲ್ಲಿ ನೂರಾರು ಬೆಳೆಗಾರರು, ರೀಲರುಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು.<br /> <br /> ರೇಷ್ಮೆಗೂಡು ಮಾರುಕಟ್ಟೆಯಿಂದ ಶುರುವಾದ ಮೆರವಣಿಗೆ ಎಂ.ಬಿ.ರಸ್ತೆ, ಮೆಕ್ಕೆ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣವನ್ನು ತಲುಪಿತು. ಅಲ್ಲಿಯೂ ಬೆಳೆಗಾರರು, ರೀಲರುಗಳು ಧರಣಿ ನಡೆಸಿದರು.<br /> <br /> ಕೇಂದ್ರದ ಜವಳಿ ಮತ್ತು ಆರ್ಥಿಕ ಸಚಿವಾಲಯವು ಕಳೆದ ಆಗಸ್ಟ್ನಲ್ಲಿ ಪ್ರಕಟಿಸಿರುವ, ಸುಂಕ ರಹಿತವಾಗಿ 2500 ಮೆಟ್ರಿಕ್ ಟನ್ ರೇಷ್ಮೆಯನ್ನು ಆಮದು ಮಾಡಿಕೊಳ್ಳುವ ನೀತಿಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.<br /> <br /> ಬಂಡವಾಳಶಾಹಿ ವರ್ತಕರು ನಡೆಸಿರುವ ಕೈವಾಡದಿಂದ ಗೂಡಗಳ ಬೆಲೆ ಕೆಜಿಗೆ 350ರಿಂದ 425 ಇದ್ದದ್ದು 150ರಿಂದ 250ಕ್ಕೆ ಕುಸಿದಿರುವುದು ಬೆಳೆಗಾರರಲ್ಲಿ ಆತಂಕವನ್ನು ಮೂಡಿಸಿದೆ ಎಂದರು.<br /> <br /> ಹತ್ತು ಲಕ್ಷ ಬೆಳೆಗಾರರು ಮತ್ತು ರೀಲರ್ ಕುಟುಂಬಗಳು ರೇಷ್ಮೆಗೂಡು ಉದ್ದಿಮೆಯನ್ನು ಜೀವನೋಪಾಯಕ್ಕಾಗಿ ಅವಲಂಬಿಸಿವೆ. ಕೆಲವೇ ವರ್ತಕರ ಹಿತಕ್ಕೋಸ್ಕರ ರೂಪಿಸಲಾಗಿರುವ ನೀತಿಯನ್ನು ಕೈಬಿಡಬೇಕು. ಬೆಳೆಗಾರರು ಮತ್ತು ರೀಲರ್ಗಳ ಹಿತ ಕಾಪಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.<br /> <br /> ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಚಿನ್ನಾಪುರ ನಾರಾಯಣಸ್ವಾಮಿ, ದ್ಯಾವೀರಪ್ಪ, ರೀಲರ್ಗಳ ಸಂಘದ ಅಧ್ಯಕ್ಷ ಚಾಂದ್ಪಾಷಾ, ವೆಂಕಟಸ್ವಾಮಿ, ಮುನಿಸೊಣ್ಣಪ್ಪ, ಎ.ಅರ್ಜುನ್, ಆರ್.ಪ್ರಕಾಶ್, ನಂಜುಂಡಪ್ಪ, ಎಸ್.ಎಂ.ನಾರಾಯಣಸ್ವಾಮಿ, ಸಿ.ವಿ.ನಾರಾಯಣ್, ಗೋವಿದರಾಜ್, ಅಮೀರ್, ಬಾಬು ಮನೋಹರ್ ಬೇಗ್, ವಲದವಾಡಿ ವೆಂಕಟೇಶ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>