<p><strong>ಬಾಗಲಕೋಟೆ:</strong> ಕೇಂದ್ರ ರೈಲ್ವೆ ಬಜೆಟ್ ಜಿಲ್ಲೆಯ ಪಾಲಿಗೆ ಶ್ಯೂನವಾಗಿದೆ. ಯಾವೊಂದು ಹೊಸ ರೈಲಾಗಲಿ, ಹೊಸ ರೈಲು ಮಾರ್ಗವಾಗಲಿ ಹಾಗೂ ಈಗಾಗಲೇ ಘೋಷಣೆಯಾದ ಮಾರ್ಗಕ್ಕೆ ಬಜೆಟ್ನಲ್ಲಿ ಅನುದಾನವಾಗಲಿ ಬಿಡುಗಡೆಯಾಗಿಲ್ಲದಿರುವುದು ಜಿಲ್ಲೆಯ ಜನತೆಯನ್ನು ನಿರಾಶೆಗೆ ನೂಕಿದೆ.<br /> <br /> ಬಾದಾಮಿ ಮತ್ತು ಆಲಮಟ್ಟಿ ರೈಲ್ವೆ ನಿಲ್ದಾಣಗಳನ್ನು `ಆದರ್ಶ ರೈಲು ನಿಲ್ದಾಣ~ ಎಂದು ಘೋಷಿಸಿರುವುದು ಹಾಗೂ ಗದಗ-ಸೊಲ್ಲಾಪುರ ಮಾರ್ಗವನ್ನು ಡಬ್ಲಿಂಗ್ ಸಂಬಂಧ ಸರ್ವೇ ಮಾಡಲು ಅನುಮತಿ ನೀಡಿರುವುದು ಈ ಭಾರಿಯ ರೈಲ್ವೆ ಬಜೆಟ್ ವಿಶೇಷವಾಗಿದೆ.<br /> <br /> ಬುಧವಾರ ಮಂಡನೆಯಾದ ರೈಲ್ವೆ ಬಜೆಟ್ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲೆಯ ಬಹುತೇಕ ಮುಖಂಡರು, ಜನಪ್ರತಿನಿಧಿಗಳು ಮತ್ತು ಹೋರಾಟಗಾರರು ತೀವ್ರ ಅಸಮಾದಾನ ವ್ಯಕ್ತಪಡಿಸಿದ್ದಾರೆ.<br /> <br /> <strong>`ಕನಸಿನಲ್ಲೇ ಕಾಲ ಕಳೆಯುವಂತಾಗಿದೆ~</strong><br /> ಪ್ರಸಕ್ತ ಸಾಲಿನ ರೈಲು ಬಜೆಟ್ ಉತ್ತರ ಕರ್ನಾಟಕಕ್ಕೆ ನಿರಾಶೆ ಮೂಡಿಸಿದೆ. ಜನತೆ ಕನಸಿನಲ್ಲೇ ಕಾಲ ಕಳೆಯುವಂತಾಗಿದೆ. ಪ್ರಾದೇಶಿಕ ಅಸಮಾನತೆಗೆ ಕೇಂದ್ರ ರೈಲ್ವೆ ಬಜೆಟ್ ಕಾರಣವಾಗಿದೆ. <br /> <br /> ಸಚಿವ ಮುನಿಯಪ್ಪ ಅವರು ಕೂಡಲಸಂಗಮಕ್ಕೆ ಬಂದಾಗ ಹಾಗೂ ಹಲವಾರು ಭಾರಿ ಭೇಟಿಯಾದಾಗ ಈ ಭಾಗದ ರೈಲ್ವೆ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದ್ದರು. ಅವರ ಭರವಸೆ ಕೇವಲ ಮೂಗಿಗೆ ತುಪ್ಪ ಸವರಿದಂತಾಗಿದೆ.<br /> <br /> ಬಾಗಲಕೋಟೆ- ರಾಯಚೂರು ಹೊಸ ರೈಲು ಮಾರ್ಗಕ್ಕೆ ಈ ಭಾರಿಯ ಬಜೆಟ್ನಲ್ಲಿ ಘೋಷಣೆಯಾಗುತ್ತದೆ ಎಂಬ ನಿರೀಕ್ಷೆ ಇತ್ತು. ಅಲ್ಲದೇ ಗದಗ-ಬಾಗಲಕೋಟೆ-ವಿಜಾಪುರ ಮಾರ್ಗದಲ್ಲಿ ಹೊಸ ಪ್ಯಾಸೆಂಜರ್ ರೈಲು ಓಡಿಸಬಹುದೆಂದು ನಿರೀಕ್ಷಿಸಲಾಗಿತ್ತು. ಬಾಗಲಕೋಟೆ-ಕುಡುಚಿ ರೈಲ್ವೆ ಮಾರ್ಗಕ್ಕೆ ಹೆಚ್ಚಿನ ಅನುದಾನ ಬಿಡುಗಡೆಯಾಗುತ್ತದೆ ಎಂದು ಸಹ ನಿರೀಕ್ಷಿಸಲಾಗಿತ್ತು. ಇದರಲ್ಲಿ ಯಾವೊಂದು ಬೇಡಿಕೆ ಈಡೇರದಿರುವುದು ತೀವ್ರ ನಿರಾಸೆ ಮೂಡಿಸಿದೆ.<br /> -ಜಯಬಸವ ಮೃತ್ಯುಂಜಯ ಸ್ವಾಮೀಜಿ<br /> ಕೂಡಲಸಂಗಮ<br /> <br /> <strong>ಜಿಲ್ಲೆಗೆ, ರಾಜ್ಯಕ್ಕೆ ಶೂನ್ಯವಾದ ಬಜೆಟ್</strong><br /> ಸೊಲ್ಲಾಪುರ-ಗದಗ ಮಾರ್ಗದ ಗೇಜ್ ಪರಿ ವರ್ತನೆಯಾದ ದಿನದಿಂದ ಇಲ್ಲಿಯ ವರೆಗೆ ಈ ಮಾರ್ಗದಲ್ಲಿ ಹತ್ತಾರು ರೈಲು ಸಂಚರಿಸಬೇಕಿತ್ತು, ಆದರೆ ಈವರೆಗೂ ಸಾಧ್ಯವಾಗಿಲ್ಲ. ಈ ಭಾರಿಯ ರೈಲ್ವೆ ಬಜೆಟ್ ರಾಜ್ಯದ ಪಾಲಿಗೆ ಹಾಗೂ ಬಾಗಲಕೋಟೆ ಜಿಲ್ಲೆಯ ಪಾಲಿಗೆ ಶೂನ್ಯವಾಗಿದೆ. ಹಳೆಯದನ್ನೇ ಸಚಿವರು ಪುನರ್ ಉಚ್ಛರಿಸಿದ್ದಾರೆ. ಕೊನೆ ಪಕ್ಷ ಕುಡುಚಿ-ಬಾಗಲಕೋಟೆ ರೈಲು ಮಾರ್ಗವನ್ನು ನಿಗದಿತ ಸಮಯಕ್ಕೆಪೂರ್ಣಗೊಳಿಸುವ ಭರವಸೆಯೂ ಈ ಬಜೆಟ್ನಲ್ಲಿ ಸಿಕ್ಕದಿರುವುದು ನಿರಾಸೆ ಮೂಡಿಸದೆ.<br /> ಪಿ.ಎಚ್.ಪೂಜಾರ<br /> ಮಾಜಿ ಶಾಸಕರು, ಬಾಗಲಕೋಟೆ<br /> <br /> <strong>ಇದು ರೈಲ್ವೆ ಅಧಿಕಾರಿಗಳ ಬಜೆಟ್!</strong><br /> ಸಂಸತ್ತಿನಲ್ಲಿ ಬುಧವಾರ ಮಂಡನೆಯಾದ ರೈಲ್ವೆ ಬಜೆಟ್ ಸಾರ್ವಜನಿಕ ವಾದುದಲ್ಲ, ರೈಲ್ವೆ ಅಧಿಕಾರಿಗಳೇ ರೂಪಿಸಿ ಮಂಡಿಸಿದ ಬಜೆಟ್ ಆಗಿದೆ.<br /> <br /> ಉತ್ತರ ಕರ್ನಾಟಕದ ಜನತೆ ರೈಲ್ವೆಗಾಗಿ ನಡೆಸಿದ ಹೋರಾಟಕ್ಕೆ ಬೆಲೆ ಸಿಕ್ಕಿಲ್ಲ, ಜನತೆಯ ಕೂಗಿಗೆ ಸಚಿವ ಮುನಿಯಪ್ಪ ಸ್ಪಂದಿಸಿಲ್ಲ, ನ್ಯಾಯ ದೊರಕಿಸಿಕೊಡುವಲ್ಲಿ ವಿಫಲರಾಗಿದ್ದಾರೆ.<br /> <br /> ವಿಜಾಪುರ-ಬಾಗಲಕೋಟೆ-ಗದಗ-ಬಳ್ಳಾರಿ ಮಾರ್ಗದಲ್ಲಿ ಹಗಲು ಹೊತ್ತಿನಲ್ಲಿ ಪ್ಯಾಸೆಂಜರ್ ರೈಲು ಓಡಾಟಕ್ಕೆ ಹಸಿರು ನಿಶಾನೆ ಸಿಗತ್ತದೆ ಎಂದು ನಿರೀಕ್ಷಿಸಲಾಗಿತ್ತು. ಹಂಪಿ ಏಕ್ಸಪ್ರೆಸ್ ವಿಜಾಪುರದ ವರೆಗೆ ವಿಸ್ತರಸಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಕುಡುಚಿ-ಬಾಗಲಕೋಟೆ ರೈಲು ಮಾರ್ಗಕ್ಕೆ ಹೆಚ್ಚಿನ ಅನುದಾನ ನಿರೀಕ್ಷಿಸಲಾಗಿತ್ತು, ಆದರೆ ಕೊನೆ ಪಕ್ಷ ಒಂದೇ ಒಂದು ಹೊಸ ರೈಲು ಸಹ ಮಾರ್ಗದಲ್ಲಿ ಸಂಚರಿಸಲು ಅವಕಾಶ ಮಾಡಿಕೊಡದಿರುವುದು ತೀವ್ರ ನಿರಾಸೆ ಮೂಡಿಸದೆ.<br /> <br /> ಬಾದಾಮಿ ಮತ್ತು ಆಲಮಟ್ಟಿ ರೈಲು ನಿಲ್ದಾಣಗಳನ್ನು ಅದರ್ಶ ರೈಲು ನಿಲ್ದಾಣ ಎಂದು ಘೋಷಿಸಿರುವುದು ಸ್ವಾಗತಾರ್ಹ ಆದರೆ, 2010ರಲ್ಲಿ ಬಾಗಲಕೋಟೆ ರೈಲು ನಿಲ್ದಾಣವನ್ನೂ ಸಹ ಅದರ್ಶ ರೈಲು ನಿಲ್ದಾಣ ಎಂದು ಘೋಷಣೆ ಮಾಡಲಾಗಿತ್ತು, ಆದರೆ ಇದುವರೆಗೂ ರೂ. 5 ಕೋಟಿ ಅನುದಾನ ಬಿಡುಗಡೆಯಾಗಿಲ್ಲ ಹಾಗೂ ರೈಲುಗಳೇ ಈ ಮಾರ್ಗವಾಗಿ ಸಂಚರಿಸದಿರುವಾಗ ಆದರ್ಶ ರೈಲು ನಿಲ್ದಾಣ ಘೋಷಣೆಗೆ ಅರ್ಥವಿಲ್ಲ.<br /> <br /> ಈ ಭಾಗದ ಜನತೆ ಹೋರಾಟ ನಡೆಸಿದಾಗ ರೈಲ್ವೆ ಸಚಿವ ಮುನಿಯಪ್ಪ ನೀಡಿದ್ದ ಭರವಸೆಯನ್ನು ಮರೆತಿರುವುದು ವಿಷಾದಕರ, ಮುಂದಿನ ದಿನಗಳಲ್ಲಿ ಈ ಭಾಗದ ರೈಲ್ವೆ ಯೋಜನೆ ಅನುಷ್ಠಾನಕ್ಕೆ ತೀವ್ರ ಹೋರಾಟ ರೂಪಿಸುತ್ತೇವೆ.<br /> ಕುತ್ಬುದ್ದೀನ್ ಖಾಜಿ<br /> ಅಧ್ಯಕ್ಷರು, ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ.<br /> <br /> <strong>ನಿರಾಶಾದಾಯಕ ಬಜೆಟ್</strong><br /> ಸೊಲ್ಲಾಪುರ ಮತ್ತು ಗದಗ ಬ್ರಾಡ್ಗೇಜ್ ಪರಿವರ್ತನೆಯಾದ ಮೇಲೆ ಹತ್ತುಹಲವು ರೈಲುಗಳು ಓಡಾಡಬೇಕಿತ್ತು. ಆದರೆ ಆ ತರಹದ ವ್ಯವಸ್ಥೆ ಆಗಲಿಲ್ಲ. ಮುಂಬೈ ಹಾಗೂ ಬೆಂಗಳೂರಿಗೆ ಹೋಗಲಿಕ್ಕೆ ಅತ್ಯಂತ ಕಡಿಮೆ ಸಮಯ, ಕಡಿಮೆ ಖರ್ಚಿನ ಪ್ರಯಾಣ ಇದ್ದರೂ ಈ ಭಾಗಕ್ಕೆ ಹೊಸದಾಗಿ ಯಾವುದೇ ಎಕ್ಸಪ್ರೆಸ್ ಹಾಗೂ ಪ್ಯಾಸೆಂಜರ್ ರೈಲುಗಳನ್ನು ಈ ಮಾರ್ಗದ ಮುಖಾಂತರ ಓಡಿಸಲು ಅವಕಾಶ ನೀಡಿಲ್ಲ, ಈ ಭಾಗದ ಜನರು ಇದರಿಂದ ವಂಚಿತರಾಗಿದ್ದಾರೆ. ರೈಲ್ವೆ ಬಜೆಟ್ ನಿರಾಶದಾಯಕವಾಗಿದೆ.<br /> ವೀರಣ್ಣ ಚರಂತಿಮಠ<br /> ಶಾಸಕರು, ಬಾಗಲಕೋಟೆ<br /> <br /> <strong>ಅಧಿವೇಶನದಲ್ಲಿ ಪ್ರಶ್ನಿಸುತ್ತೇನೆ</strong><br /> ಸಂಸತ್ತಿನಲ್ಲಿ ಬುಧವಾರ ಮಂಡನೆಯಾದ ರೈಲ್ವೆ ಬಜೆಟ್ ರಾಜ್ಯ ಮತ್ತು ಜಿಲ್ಲೆಗೆ ಹೇಳಿಕೊಳ್ಳುವಂತ ಬಜೆಟ್ ಆಗಿಲ್ಲ, ಕೇವಲ ಮೈಸೂರು ಭಾಗಕ್ಕೆ ಹೊಸ ರೈಲ್ವೆ ಸೇವೆಗಳನ್ನು ಒದಗಿಸಲಾಗಿದೆ. ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಲಾಗಿದೆ.<br /> <br /> ಗದಗ-ಸೊಲ್ಲಾಪುರ ಮಾರ್ಗವನ್ನು ದ್ವಿಪಥ ಮಾಡುವ ಸಂಬಂಧ ಸರ್ವೇ ಮಾಡಲು ಅನುಮೋದನೆ ಸಿಕ್ಕಿದೆ, ಆಲಮಟ್ಟಿ, ಬಾದಾಮಿ, ಹಾವೇರಿ ರೈಲು ನಿಲ್ದಾಣಗಳನ್ನು ಅದರ್ಶ ರೈಲು ನಿಲ್ದಾಣ ಎಂದು ಗುರುತಿಸಲಾಗಿರುವುದು ಸಂತಸ ಸಂಗತಿ. ಕುಡಚಿ-ಬಾಗಲಕೋಟೆ ರೈಲ್ವೆ ಮಾರ್ಗಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಗೆ ಕೆಲ ಅಡಚಣೆ ಇರುವುದರಿಂದ ಯೋಜನೆಗೆ ಹಿನ್ನಡೆಯಾಗಿದೆ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುತ್ತೇನೆ. <br /> ಪಿ.ಸಿ.ಗದ್ದಿಗೌಡರ.<br /> ಸಂಸದ, ಬಾಗಲಕೋಟೆ.</p>.<p><br /> <strong>ಸಂತೋಷ ತಾರದ ಬಜೆಟ್</strong><br /> ಉತ್ತರ ಕರ್ನಾಟಕಕ್ಕೆ ಪ್ರಸಕ್ತ ರೈಲ್ವೆ ಬಜೆಟ್ ಯಾವುದೇ ರೀತಿಯ ಸಂತಸ ತಂದಿಲ್ಲ, ಮೈಸೂರಿಗೆ ಮಾತ್ರ ಹೊಸ ರೈಲು ಘೋಷಣೆ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ನಡೆದ ಹೋರಾಟಕ್ಕೆ ಕೇಂದ್ರ ಸರ್ಕಾರ ಮತ್ತು ಸಚಿವರು ಯಾವುದೇ ರೀತಿ ಸ್ಪಂದಿಸಿಲ್ಲ.<br /> ಬಸವಪ್ರಭು ಸರನಾಡಗೌಡ<br /> ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ಕೇಂದ್ರ ರೈಲ್ವೆ ಬಜೆಟ್ ಜಿಲ್ಲೆಯ ಪಾಲಿಗೆ ಶ್ಯೂನವಾಗಿದೆ. ಯಾವೊಂದು ಹೊಸ ರೈಲಾಗಲಿ, ಹೊಸ ರೈಲು ಮಾರ್ಗವಾಗಲಿ ಹಾಗೂ ಈಗಾಗಲೇ ಘೋಷಣೆಯಾದ ಮಾರ್ಗಕ್ಕೆ ಬಜೆಟ್ನಲ್ಲಿ ಅನುದಾನವಾಗಲಿ ಬಿಡುಗಡೆಯಾಗಿಲ್ಲದಿರುವುದು ಜಿಲ್ಲೆಯ ಜನತೆಯನ್ನು ನಿರಾಶೆಗೆ ನೂಕಿದೆ.<br /> <br /> ಬಾದಾಮಿ ಮತ್ತು ಆಲಮಟ್ಟಿ ರೈಲ್ವೆ ನಿಲ್ದಾಣಗಳನ್ನು `ಆದರ್ಶ ರೈಲು ನಿಲ್ದಾಣ~ ಎಂದು ಘೋಷಿಸಿರುವುದು ಹಾಗೂ ಗದಗ-ಸೊಲ್ಲಾಪುರ ಮಾರ್ಗವನ್ನು ಡಬ್ಲಿಂಗ್ ಸಂಬಂಧ ಸರ್ವೇ ಮಾಡಲು ಅನುಮತಿ ನೀಡಿರುವುದು ಈ ಭಾರಿಯ ರೈಲ್ವೆ ಬಜೆಟ್ ವಿಶೇಷವಾಗಿದೆ.<br /> <br /> ಬುಧವಾರ ಮಂಡನೆಯಾದ ರೈಲ್ವೆ ಬಜೆಟ್ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲೆಯ ಬಹುತೇಕ ಮುಖಂಡರು, ಜನಪ್ರತಿನಿಧಿಗಳು ಮತ್ತು ಹೋರಾಟಗಾರರು ತೀವ್ರ ಅಸಮಾದಾನ ವ್ಯಕ್ತಪಡಿಸಿದ್ದಾರೆ.<br /> <br /> <strong>`ಕನಸಿನಲ್ಲೇ ಕಾಲ ಕಳೆಯುವಂತಾಗಿದೆ~</strong><br /> ಪ್ರಸಕ್ತ ಸಾಲಿನ ರೈಲು ಬಜೆಟ್ ಉತ್ತರ ಕರ್ನಾಟಕಕ್ಕೆ ನಿರಾಶೆ ಮೂಡಿಸಿದೆ. ಜನತೆ ಕನಸಿನಲ್ಲೇ ಕಾಲ ಕಳೆಯುವಂತಾಗಿದೆ. ಪ್ರಾದೇಶಿಕ ಅಸಮಾನತೆಗೆ ಕೇಂದ್ರ ರೈಲ್ವೆ ಬಜೆಟ್ ಕಾರಣವಾಗಿದೆ. <br /> <br /> ಸಚಿವ ಮುನಿಯಪ್ಪ ಅವರು ಕೂಡಲಸಂಗಮಕ್ಕೆ ಬಂದಾಗ ಹಾಗೂ ಹಲವಾರು ಭಾರಿ ಭೇಟಿಯಾದಾಗ ಈ ಭಾಗದ ರೈಲ್ವೆ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದ್ದರು. ಅವರ ಭರವಸೆ ಕೇವಲ ಮೂಗಿಗೆ ತುಪ್ಪ ಸವರಿದಂತಾಗಿದೆ.<br /> <br /> ಬಾಗಲಕೋಟೆ- ರಾಯಚೂರು ಹೊಸ ರೈಲು ಮಾರ್ಗಕ್ಕೆ ಈ ಭಾರಿಯ ಬಜೆಟ್ನಲ್ಲಿ ಘೋಷಣೆಯಾಗುತ್ತದೆ ಎಂಬ ನಿರೀಕ್ಷೆ ಇತ್ತು. ಅಲ್ಲದೇ ಗದಗ-ಬಾಗಲಕೋಟೆ-ವಿಜಾಪುರ ಮಾರ್ಗದಲ್ಲಿ ಹೊಸ ಪ್ಯಾಸೆಂಜರ್ ರೈಲು ಓಡಿಸಬಹುದೆಂದು ನಿರೀಕ್ಷಿಸಲಾಗಿತ್ತು. ಬಾಗಲಕೋಟೆ-ಕುಡುಚಿ ರೈಲ್ವೆ ಮಾರ್ಗಕ್ಕೆ ಹೆಚ್ಚಿನ ಅನುದಾನ ಬಿಡುಗಡೆಯಾಗುತ್ತದೆ ಎಂದು ಸಹ ನಿರೀಕ್ಷಿಸಲಾಗಿತ್ತು. ಇದರಲ್ಲಿ ಯಾವೊಂದು ಬೇಡಿಕೆ ಈಡೇರದಿರುವುದು ತೀವ್ರ ನಿರಾಸೆ ಮೂಡಿಸಿದೆ.<br /> -ಜಯಬಸವ ಮೃತ್ಯುಂಜಯ ಸ್ವಾಮೀಜಿ<br /> ಕೂಡಲಸಂಗಮ<br /> <br /> <strong>ಜಿಲ್ಲೆಗೆ, ರಾಜ್ಯಕ್ಕೆ ಶೂನ್ಯವಾದ ಬಜೆಟ್</strong><br /> ಸೊಲ್ಲಾಪುರ-ಗದಗ ಮಾರ್ಗದ ಗೇಜ್ ಪರಿ ವರ್ತನೆಯಾದ ದಿನದಿಂದ ಇಲ್ಲಿಯ ವರೆಗೆ ಈ ಮಾರ್ಗದಲ್ಲಿ ಹತ್ತಾರು ರೈಲು ಸಂಚರಿಸಬೇಕಿತ್ತು, ಆದರೆ ಈವರೆಗೂ ಸಾಧ್ಯವಾಗಿಲ್ಲ. ಈ ಭಾರಿಯ ರೈಲ್ವೆ ಬಜೆಟ್ ರಾಜ್ಯದ ಪಾಲಿಗೆ ಹಾಗೂ ಬಾಗಲಕೋಟೆ ಜಿಲ್ಲೆಯ ಪಾಲಿಗೆ ಶೂನ್ಯವಾಗಿದೆ. ಹಳೆಯದನ್ನೇ ಸಚಿವರು ಪುನರ್ ಉಚ್ಛರಿಸಿದ್ದಾರೆ. ಕೊನೆ ಪಕ್ಷ ಕುಡುಚಿ-ಬಾಗಲಕೋಟೆ ರೈಲು ಮಾರ್ಗವನ್ನು ನಿಗದಿತ ಸಮಯಕ್ಕೆಪೂರ್ಣಗೊಳಿಸುವ ಭರವಸೆಯೂ ಈ ಬಜೆಟ್ನಲ್ಲಿ ಸಿಕ್ಕದಿರುವುದು ನಿರಾಸೆ ಮೂಡಿಸದೆ.<br /> ಪಿ.ಎಚ್.ಪೂಜಾರ<br /> ಮಾಜಿ ಶಾಸಕರು, ಬಾಗಲಕೋಟೆ<br /> <br /> <strong>ಇದು ರೈಲ್ವೆ ಅಧಿಕಾರಿಗಳ ಬಜೆಟ್!</strong><br /> ಸಂಸತ್ತಿನಲ್ಲಿ ಬುಧವಾರ ಮಂಡನೆಯಾದ ರೈಲ್ವೆ ಬಜೆಟ್ ಸಾರ್ವಜನಿಕ ವಾದುದಲ್ಲ, ರೈಲ್ವೆ ಅಧಿಕಾರಿಗಳೇ ರೂಪಿಸಿ ಮಂಡಿಸಿದ ಬಜೆಟ್ ಆಗಿದೆ.<br /> <br /> ಉತ್ತರ ಕರ್ನಾಟಕದ ಜನತೆ ರೈಲ್ವೆಗಾಗಿ ನಡೆಸಿದ ಹೋರಾಟಕ್ಕೆ ಬೆಲೆ ಸಿಕ್ಕಿಲ್ಲ, ಜನತೆಯ ಕೂಗಿಗೆ ಸಚಿವ ಮುನಿಯಪ್ಪ ಸ್ಪಂದಿಸಿಲ್ಲ, ನ್ಯಾಯ ದೊರಕಿಸಿಕೊಡುವಲ್ಲಿ ವಿಫಲರಾಗಿದ್ದಾರೆ.<br /> <br /> ವಿಜಾಪುರ-ಬಾಗಲಕೋಟೆ-ಗದಗ-ಬಳ್ಳಾರಿ ಮಾರ್ಗದಲ್ಲಿ ಹಗಲು ಹೊತ್ತಿನಲ್ಲಿ ಪ್ಯಾಸೆಂಜರ್ ರೈಲು ಓಡಾಟಕ್ಕೆ ಹಸಿರು ನಿಶಾನೆ ಸಿಗತ್ತದೆ ಎಂದು ನಿರೀಕ್ಷಿಸಲಾಗಿತ್ತು. ಹಂಪಿ ಏಕ್ಸಪ್ರೆಸ್ ವಿಜಾಪುರದ ವರೆಗೆ ವಿಸ್ತರಸಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಕುಡುಚಿ-ಬಾಗಲಕೋಟೆ ರೈಲು ಮಾರ್ಗಕ್ಕೆ ಹೆಚ್ಚಿನ ಅನುದಾನ ನಿರೀಕ್ಷಿಸಲಾಗಿತ್ತು, ಆದರೆ ಕೊನೆ ಪಕ್ಷ ಒಂದೇ ಒಂದು ಹೊಸ ರೈಲು ಸಹ ಮಾರ್ಗದಲ್ಲಿ ಸಂಚರಿಸಲು ಅವಕಾಶ ಮಾಡಿಕೊಡದಿರುವುದು ತೀವ್ರ ನಿರಾಸೆ ಮೂಡಿಸದೆ.<br /> <br /> ಬಾದಾಮಿ ಮತ್ತು ಆಲಮಟ್ಟಿ ರೈಲು ನಿಲ್ದಾಣಗಳನ್ನು ಅದರ್ಶ ರೈಲು ನಿಲ್ದಾಣ ಎಂದು ಘೋಷಿಸಿರುವುದು ಸ್ವಾಗತಾರ್ಹ ಆದರೆ, 2010ರಲ್ಲಿ ಬಾಗಲಕೋಟೆ ರೈಲು ನಿಲ್ದಾಣವನ್ನೂ ಸಹ ಅದರ್ಶ ರೈಲು ನಿಲ್ದಾಣ ಎಂದು ಘೋಷಣೆ ಮಾಡಲಾಗಿತ್ತು, ಆದರೆ ಇದುವರೆಗೂ ರೂ. 5 ಕೋಟಿ ಅನುದಾನ ಬಿಡುಗಡೆಯಾಗಿಲ್ಲ ಹಾಗೂ ರೈಲುಗಳೇ ಈ ಮಾರ್ಗವಾಗಿ ಸಂಚರಿಸದಿರುವಾಗ ಆದರ್ಶ ರೈಲು ನಿಲ್ದಾಣ ಘೋಷಣೆಗೆ ಅರ್ಥವಿಲ್ಲ.<br /> <br /> ಈ ಭಾಗದ ಜನತೆ ಹೋರಾಟ ನಡೆಸಿದಾಗ ರೈಲ್ವೆ ಸಚಿವ ಮುನಿಯಪ್ಪ ನೀಡಿದ್ದ ಭರವಸೆಯನ್ನು ಮರೆತಿರುವುದು ವಿಷಾದಕರ, ಮುಂದಿನ ದಿನಗಳಲ್ಲಿ ಈ ಭಾಗದ ರೈಲ್ವೆ ಯೋಜನೆ ಅನುಷ್ಠಾನಕ್ಕೆ ತೀವ್ರ ಹೋರಾಟ ರೂಪಿಸುತ್ತೇವೆ.<br /> ಕುತ್ಬುದ್ದೀನ್ ಖಾಜಿ<br /> ಅಧ್ಯಕ್ಷರು, ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ.<br /> <br /> <strong>ನಿರಾಶಾದಾಯಕ ಬಜೆಟ್</strong><br /> ಸೊಲ್ಲಾಪುರ ಮತ್ತು ಗದಗ ಬ್ರಾಡ್ಗೇಜ್ ಪರಿವರ್ತನೆಯಾದ ಮೇಲೆ ಹತ್ತುಹಲವು ರೈಲುಗಳು ಓಡಾಡಬೇಕಿತ್ತು. ಆದರೆ ಆ ತರಹದ ವ್ಯವಸ್ಥೆ ಆಗಲಿಲ್ಲ. ಮುಂಬೈ ಹಾಗೂ ಬೆಂಗಳೂರಿಗೆ ಹೋಗಲಿಕ್ಕೆ ಅತ್ಯಂತ ಕಡಿಮೆ ಸಮಯ, ಕಡಿಮೆ ಖರ್ಚಿನ ಪ್ರಯಾಣ ಇದ್ದರೂ ಈ ಭಾಗಕ್ಕೆ ಹೊಸದಾಗಿ ಯಾವುದೇ ಎಕ್ಸಪ್ರೆಸ್ ಹಾಗೂ ಪ್ಯಾಸೆಂಜರ್ ರೈಲುಗಳನ್ನು ಈ ಮಾರ್ಗದ ಮುಖಾಂತರ ಓಡಿಸಲು ಅವಕಾಶ ನೀಡಿಲ್ಲ, ಈ ಭಾಗದ ಜನರು ಇದರಿಂದ ವಂಚಿತರಾಗಿದ್ದಾರೆ. ರೈಲ್ವೆ ಬಜೆಟ್ ನಿರಾಶದಾಯಕವಾಗಿದೆ.<br /> ವೀರಣ್ಣ ಚರಂತಿಮಠ<br /> ಶಾಸಕರು, ಬಾಗಲಕೋಟೆ<br /> <br /> <strong>ಅಧಿವೇಶನದಲ್ಲಿ ಪ್ರಶ್ನಿಸುತ್ತೇನೆ</strong><br /> ಸಂಸತ್ತಿನಲ್ಲಿ ಬುಧವಾರ ಮಂಡನೆಯಾದ ರೈಲ್ವೆ ಬಜೆಟ್ ರಾಜ್ಯ ಮತ್ತು ಜಿಲ್ಲೆಗೆ ಹೇಳಿಕೊಳ್ಳುವಂತ ಬಜೆಟ್ ಆಗಿಲ್ಲ, ಕೇವಲ ಮೈಸೂರು ಭಾಗಕ್ಕೆ ಹೊಸ ರೈಲ್ವೆ ಸೇವೆಗಳನ್ನು ಒದಗಿಸಲಾಗಿದೆ. ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಲಾಗಿದೆ.<br /> <br /> ಗದಗ-ಸೊಲ್ಲಾಪುರ ಮಾರ್ಗವನ್ನು ದ್ವಿಪಥ ಮಾಡುವ ಸಂಬಂಧ ಸರ್ವೇ ಮಾಡಲು ಅನುಮೋದನೆ ಸಿಕ್ಕಿದೆ, ಆಲಮಟ್ಟಿ, ಬಾದಾಮಿ, ಹಾವೇರಿ ರೈಲು ನಿಲ್ದಾಣಗಳನ್ನು ಅದರ್ಶ ರೈಲು ನಿಲ್ದಾಣ ಎಂದು ಗುರುತಿಸಲಾಗಿರುವುದು ಸಂತಸ ಸಂಗತಿ. ಕುಡಚಿ-ಬಾಗಲಕೋಟೆ ರೈಲ್ವೆ ಮಾರ್ಗಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಗೆ ಕೆಲ ಅಡಚಣೆ ಇರುವುದರಿಂದ ಯೋಜನೆಗೆ ಹಿನ್ನಡೆಯಾಗಿದೆ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುತ್ತೇನೆ. <br /> ಪಿ.ಸಿ.ಗದ್ದಿಗೌಡರ.<br /> ಸಂಸದ, ಬಾಗಲಕೋಟೆ.</p>.<p><br /> <strong>ಸಂತೋಷ ತಾರದ ಬಜೆಟ್</strong><br /> ಉತ್ತರ ಕರ್ನಾಟಕಕ್ಕೆ ಪ್ರಸಕ್ತ ರೈಲ್ವೆ ಬಜೆಟ್ ಯಾವುದೇ ರೀತಿಯ ಸಂತಸ ತಂದಿಲ್ಲ, ಮೈಸೂರಿಗೆ ಮಾತ್ರ ಹೊಸ ರೈಲು ಘೋಷಣೆ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ನಡೆದ ಹೋರಾಟಕ್ಕೆ ಕೇಂದ್ರ ಸರ್ಕಾರ ಮತ್ತು ಸಚಿವರು ಯಾವುದೇ ರೀತಿ ಸ್ಪಂದಿಸಿಲ್ಲ.<br /> ಬಸವಪ್ರಭು ಸರನಾಡಗೌಡ<br /> ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>