<p>ತುಮಕೂರು: ಲಾಂಛನ ಬದಲಾವಣೆ ಮಾಡಿರುವ ತುಮಕೂರು ವಿಶ್ವವಿದ್ಯಾ ನಿಲಯದ ಕ್ರಮ ವಿರೋಧಿಸಿ ಪ್ರತಿಭಟನೆ ಮುಂದುವರೆದಿದ್ದು, ಬುಧವಾರ ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.<br /> <br /> ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ನಂತರ ಹಳೆ ಲಾಂಛನ ಮುಂದುವರೆಸು ವಂತೆ ಒತ್ತಾಯಿಸಿ ನಗರದ ಐದು ಕೊಳೆಗೇರಿಗಳಲ್ಲಿ 500 ಜನರ ಸಹಿ ಸಂಗ್ರಹದ ಮನವಿಯನ್ನು ಜಿಲ್ಲಾಧಿಕಾ ರಿಗೆ ಸಲ್ಲಿಸಿದರು.<br /> <br /> ಪ್ರತಿಭಟನೆಯಲ್ಲಿ ಸಮಿತಿ ಕಾರ್ಯ ದರ್ಶಿ ಅಲ್ತಾಫ್, ಯುವ ಜನರ ಒಕ್ಕೂಟದ ಸಂಚಾಲಕ ಶೆಟ್ಟಳಯ್ಯ, ಗಾಯತ್ರಿ, ಸ್ನೇಹಾ, ಅರುಣ್, ಸುನಿಲ್ ಇತರರು ಇದ್ದರು.<br /> <br /> <strong>ಇಂದು ಬಹಿರಂಗ ಸಭೆ</strong><br /> ತುಮಕೂರು ವಿಶ್ವವಿದ್ಯಾನಿಲಯ ಲಾಂಛನ ಬದಲಿಸಿರುವ ಕ್ರಮ ಖಂಡಿಸಿ ಜಿಲ್ಲಾ ಸ್ವಾಭಿಮಾನಿ ನಾಗರಿಕರ ವೇದಿಕೆ, ವಿ.ವಿ. ಹಿಂದಿನ ಲಾಂಛನ ಉಳಿಸಿ ಹೋರಾಟ ಸಮಿತಿ ಜಂಟಿಯಾಗಿ ಗುರುವಾರ ನಗರದ ಟೌನ್ಹಾಲ್ ವೃತ್ತದಲ್ಲಿ ಬೆಳಿಗ್ಗೆ 11ಕ್ಕೆ ಬಹಿರಂಗ ಸಭೆ ಆಯೋಜಿಸಿವೆ.<br /> <br /> ಸಭೆಯಲ್ಲಿ ಚಿಂತಕ ದೊರೈರಾಜ್, ಸಿಂಡಿಕೇಟ್ ಮಾಜಿ ಸದಸ್ಯ ಎಂ.ಜಿ. ಶ್ರೀನಿವಾಸಯ್ಯ, ಚಿದಂಬರಯ್ಯ ಭಾಗವ ಹಿಸುವರು ಎಂದು ಹೋರಾಟಗಾರ ಚೇಳೂರು ವೆಂಕಟೇಶ್ ತಿಳಿಸಿದ್ದಾರೆ.<br /> <br /> <strong>ಧರಣಿಗೆ ಬೆಂಬಲ<br /> </strong> ಗ್ರಾಮೀಣ ಕೃಪಾಂಕ ನೌಕರರು ಬೆಂಗಳೂರಿನಲ್ಲಿ ಏ. 12ರಿಂದ ಹಮ್ಮಿ ಕೊಂಡಿರುವ ಅನಿರ್ದಿಷ್ಟಾವಧಿ ಧರಣಿಗೆ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಬೆಂಬಲ ವ್ಯಕ್ತಪಡಿಸಿದೆ ಎಂದು ಒಕ್ಕೂ ಟದ ಜಿಲ್ಲಾ ಕಾರ್ಯದರ್ಶಿ ಪಿ.ಕೆ. ರಂಗಸ್ವಾಮಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತುಮಕೂರು: ಲಾಂಛನ ಬದಲಾವಣೆ ಮಾಡಿರುವ ತುಮಕೂರು ವಿಶ್ವವಿದ್ಯಾ ನಿಲಯದ ಕ್ರಮ ವಿರೋಧಿಸಿ ಪ್ರತಿಭಟನೆ ಮುಂದುವರೆದಿದ್ದು, ಬುಧವಾರ ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.<br /> <br /> ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ನಂತರ ಹಳೆ ಲಾಂಛನ ಮುಂದುವರೆಸು ವಂತೆ ಒತ್ತಾಯಿಸಿ ನಗರದ ಐದು ಕೊಳೆಗೇರಿಗಳಲ್ಲಿ 500 ಜನರ ಸಹಿ ಸಂಗ್ರಹದ ಮನವಿಯನ್ನು ಜಿಲ್ಲಾಧಿಕಾ ರಿಗೆ ಸಲ್ಲಿಸಿದರು.<br /> <br /> ಪ್ರತಿಭಟನೆಯಲ್ಲಿ ಸಮಿತಿ ಕಾರ್ಯ ದರ್ಶಿ ಅಲ್ತಾಫ್, ಯುವ ಜನರ ಒಕ್ಕೂಟದ ಸಂಚಾಲಕ ಶೆಟ್ಟಳಯ್ಯ, ಗಾಯತ್ರಿ, ಸ್ನೇಹಾ, ಅರುಣ್, ಸುನಿಲ್ ಇತರರು ಇದ್ದರು.<br /> <br /> <strong>ಇಂದು ಬಹಿರಂಗ ಸಭೆ</strong><br /> ತುಮಕೂರು ವಿಶ್ವವಿದ್ಯಾನಿಲಯ ಲಾಂಛನ ಬದಲಿಸಿರುವ ಕ್ರಮ ಖಂಡಿಸಿ ಜಿಲ್ಲಾ ಸ್ವಾಭಿಮಾನಿ ನಾಗರಿಕರ ವೇದಿಕೆ, ವಿ.ವಿ. ಹಿಂದಿನ ಲಾಂಛನ ಉಳಿಸಿ ಹೋರಾಟ ಸಮಿತಿ ಜಂಟಿಯಾಗಿ ಗುರುವಾರ ನಗರದ ಟೌನ್ಹಾಲ್ ವೃತ್ತದಲ್ಲಿ ಬೆಳಿಗ್ಗೆ 11ಕ್ಕೆ ಬಹಿರಂಗ ಸಭೆ ಆಯೋಜಿಸಿವೆ.<br /> <br /> ಸಭೆಯಲ್ಲಿ ಚಿಂತಕ ದೊರೈರಾಜ್, ಸಿಂಡಿಕೇಟ್ ಮಾಜಿ ಸದಸ್ಯ ಎಂ.ಜಿ. ಶ್ರೀನಿವಾಸಯ್ಯ, ಚಿದಂಬರಯ್ಯ ಭಾಗವ ಹಿಸುವರು ಎಂದು ಹೋರಾಟಗಾರ ಚೇಳೂರು ವೆಂಕಟೇಶ್ ತಿಳಿಸಿದ್ದಾರೆ.<br /> <br /> <strong>ಧರಣಿಗೆ ಬೆಂಬಲ<br /> </strong> ಗ್ರಾಮೀಣ ಕೃಪಾಂಕ ನೌಕರರು ಬೆಂಗಳೂರಿನಲ್ಲಿ ಏ. 12ರಿಂದ ಹಮ್ಮಿ ಕೊಂಡಿರುವ ಅನಿರ್ದಿಷ್ಟಾವಧಿ ಧರಣಿಗೆ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಬೆಂಬಲ ವ್ಯಕ್ತಪಡಿಸಿದೆ ಎಂದು ಒಕ್ಕೂ ಟದ ಜಿಲ್ಲಾ ಕಾರ್ಯದರ್ಶಿ ಪಿ.ಕೆ. ರಂಗಸ್ವಾಮಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>