<p><strong>ರೋಣ: </strong>ತಾಲ್ಲೂಕಿನ ಹೊನ್ನಾಪೂರ ಗ್ರಾಮದಲ್ಲಿರುವ 170 ಪಡಿತರ ಚೀಟಿದಾರರು ಪ್ರತಿ ತಿಂಗಳು ಪಡಿತರ ಪಡೆಯಲು ಪಕ್ಕದ ಸವಡಿ ಗ್ರಾಮಕ್ಕೆ ತೆರಳಬೇಕಾಗಿದ್ದು, ಪ್ರತಿ ತಿಂಗಳ ಪಡಿತರ ವಿತರಿಸಲು ಕ್ರಮ ಕೈಕೊಳ್ಳಬೇಕು ಎಂದು ಗ್ರಾಮಸ್ಥರು ಲೋಕಾಯುಕ್ತ ಅಧಿಕಾರಿಗಳಿಗೆ ಬುಧವಾರ ದೂರು ನೀಡಿದ್ದಾರೆ. <br /> <br /> ಪಟ್ಟಣದ ತಾ.ಪಂ. ಸಭಾಭವನದಲ್ಲಿ ಜರುಗಿದ ಸಾರ್ವಜನಿಕರಿಂದ ಕುಂದು ಕೊರತೆಗಳ ಅರ್ಜಿ ಅಹ ವಾಲುಗಳನ್ನು ಸ್ವೀಕರಿಸುವ ಅವಧಿಯಲ್ಲಿ ಹೊನ್ನಾಪೂರ ಗ್ರಾಮಸ್ಥರು ದೂರು ಸಲ್ಲಿಸಿದರು. ದೂರು ಸ್ವೀಕರಿಸಿದ ಲೋಕಾಯುಕ್ತ ಇನಸ್ಪೆಕ್ಟರ್ ಕರಿಬಸನಗೌಡ ಈ ಕುರಿತು ತಾವು ಜಿಲ್ಲಾಧಿಕಾರಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳ ಜೊತೆ ಚರ್ಚಿಸಿ ಗ್ರಾಮದಲ್ಲಿಯೇ ಪಡಿತರ ವಿತರಿಸಲು ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸುವುದಾಗಿ ಹೇಳಿದರು. <br /> <br /> ‘ಸವಡಿ ಗ್ರಾಮದ ಪಡಿತರ ಚೀಟಿದಾರರು ಗ್ರಾಮದಲ್ಲಿರುವ ನ್ಯಾಯಬೆಲೆ ಅಂಗಡಿಗಳಲ್ಲಿ 16ಕೆ.ಜಿ.ಪಡಿತರ ವಿತರಿಸುವ ಬದಲಾಗಿ 12ಕೆ.ಜಿ ಪಡಿತರ ಮಾತ್ರ ನೀಡುತ್ತಿದ್ದಾರೆ’ ಎಂದು ದೂರಿದಾಗ, ಸ್ಥಳದಲ್ಲಿದ್ದ ಕಂದಾಯ ಇಲಾಖೆ ಶಿರಸ್ತೇದಾರರಿಗೆ ಗ್ರಾಮದಲ್ಲಿ ಸಮರ್ಪಕ ಪಡಿತರ ವಿತರಿಸಲು ಕ್ರಮ ಕೈಕೊಳ್ಳುವಂತೆ ಸೂಚಿಸಿದರು. <br /> <br /> ಬೆಳವಣಕಿ ಗ್ರಾಮಸ್ಥರೊಬ್ಬರು ಕಂದಾಯ ಇಲಾಖೆಗೆ ಹಾಗೂ 2008-09ನೇ ಸಾಲಿನಲ್ಲಿ ಎರಡು ಸಲ ಹಣವನ್ನು ಭರಿಸಿರುವುದಾಗಿ ದೂರಿದರು, ಕಂದಾಯ ಇಲಾಖೆ ಅಧಿಕಾರಿಗಳು ಹೆಚ್ಚುವರಿ ಹಣವನ್ನು 2009-10ನೇ ಸಾಲಿಗಾಗಿ ಸರಿಪಡಿಸಿ ರಶೀದಿ ನೀಡುವುದಾಗಿ ಹೇಳಿದರು. <br /> <br /> ಬೆಳವಣಕಿ ಗ್ರಾಮಸ್ಥರೊಬ್ಬರು ದೂರು ಸಲ್ಲಿಸಿ 2008ರಲ್ಲಿ ತಮ್ಮ ಜಮೀನು ಸರ್ವೇ ಕೈಕೊಳ್ಳಲು ಅರ್ಜಿ ಸಲ್ಲಿಸಿದ್ದು ಇದುವರೆಗೂ ಸರ್ವೇ ಆಗಿಲ್ಲವೆಂದು ದೂರಿದಾಗ ಸ್ಥಳದಲ್ಲಿದ್ದ ಸರ್ವೇ ಅಧಿಕಾರಿಗೆ ಒಂದು ವಾರದಲ್ಲಿ ಸರ್ವೇ ಕಾರ್ಯವನ್ನು ಕೈಕೊಳ್ಳಬೇಕು ಎಂದು ಸೂಚಿಸಿದರು. <br /> <br /> ರೋಣ ಪಟ್ಟಣದ ಬಿ.ಎಸ್. ನಾಯಕ ನೀಡಿರುವ ದೂರಿನ ಪ್ರಕಾರ ಹಾಗೂ 20-8-2010ರಂದು ಮಾಹಿತಿ ಹಕ್ಕು ಅಡಿಯಲ್ಲಿ ಮಾಹಿತಿ ಕೇಳಿದ್ದು ಇದುವರೆಗೂ ಮಾಹಿತಿ ನೀಡಿಲ್ಲವೆಂದು ದೂರಿನಲ್ಲಿ ತಿಳಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಕೂಡಲೇ ಮಾಹಿತಿ ನೀಡುವಂತೆ ಆದೇಶಿಸುವುದಾಗಿ ಅಧಿಕಾರಿಗಳು ಹೇಳಿದರು. <br /> <br /> ಡಿ.ಎಸ್.ಎಸ್. ಸಂಘದ ಮೌನೇಶ ಹಾದಿಮನಿ ನೀಡಿದ ದೂರಿನಲ್ಲಿ ರೋಣ ಪುರಸಭೆ ಅಧಿಕಾರಿಗಳು 2009-10ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಪಂಗಡದವರಿಗೆ ಮೀಸಲಾಗಿಟ್ಟಿರುವ ಶೇ.18ರ ಅನುದಾನವನ್ನು ಇದುವರೆಗೆ ಬಳಕೆ ಮಾಡಲು ಕ್ರಿಯಾಯೋಜನೆ ತಯಾರಿಸಿದ ಯೋಜನೆಗಾಗಿ ಹಣ ವೆಚ್ಚಮಾಡಲು ಈಗಾಗಲೇ ಜಿಲ್ಲಾಧಿಕಾರಿಗಳು ಅನುಮತಿಯನ್ನು ನೀಡಿದ್ದಾರೆ ಎಂದು ಹೇಳಿದರು. <br /> <br /> ಸಿಬ್ಬಂದಿ ಕೂರತೆ ಸಾರ್ವಜನಿಕ ಸಮಸ್ಯೆಯಲ್ಲ ಅದು ಆಡಳಿತಾತ್ಮಕ ಸಮಸ್ಯೆ ಎಂದು ಲೋಕಾಯುಕ್ತ ಎಸ್.ಪಿ. ಬಿ.ಎನ್.ನೀಲಗಾರ ಪುರಸಭೆಯ ವ್ಯವಸ್ಥಾಪಕ ಬಸಯ್ಯ ಅಂಗಡಿಯವರಿಗೆ ಹೇಳಿದರು. <br /> <br /> ಚರ್ಮಗಾರರಿಗೆ ಕುಟೀರಗಳನ್ನು ಇದುವರೆಗೂ ಫಲಾನುಭವಿಗಳಿಗೆ ವಿತರಿಸಿಲ್ಲ ಎನ್ನುವ ದೂರಿಗೆ ಅನುಗುಣವಾಗಿ ಲೋಕಾಯುಕ್ತ ಅಧಿಕಾರಿಗಳು ಪುರಸಭೆಯ ಅಧಿಕಾರಿಯನ್ನು ಪ್ರಶ್ನಿಸಿದಾಗ ರಾಜ್ಯ ಚರ್ಮ ಅಭಿವೃದ್ದಿ ನಿಗಮದವರು ಪ್ರತಿ ಕುಟೀರಕ್ಕೆ ವೆಚ್ಚವಾಗುವ ದರವಾರು ಪಟ್ಟಿ ಸಲ್ಲಿಸದೆ ಇರುವುದರಿಂದ ವಿಳಂಬವಾಗಿದೆ ಎಂದು ಹೇಳಿದರು. ಲೋಕಾಯುಕ್ತ ಅಧಿಕಾರಿಗಳು ಈ ವಿಷಯ ಕುರಿತು ಜಿಲ್ಲಾ ಕೋಶಾಭಿವೃದ್ಧಿ ಅಧಿಕಾರಿ ಶಿವಣ್ಣ ಅವರೊಂದಿಗೆ ದೂರವಾಣಿ ಮುಖಾಂತರ ಚರ್ಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರೋಣ: </strong>ತಾಲ್ಲೂಕಿನ ಹೊನ್ನಾಪೂರ ಗ್ರಾಮದಲ್ಲಿರುವ 170 ಪಡಿತರ ಚೀಟಿದಾರರು ಪ್ರತಿ ತಿಂಗಳು ಪಡಿತರ ಪಡೆಯಲು ಪಕ್ಕದ ಸವಡಿ ಗ್ರಾಮಕ್ಕೆ ತೆರಳಬೇಕಾಗಿದ್ದು, ಪ್ರತಿ ತಿಂಗಳ ಪಡಿತರ ವಿತರಿಸಲು ಕ್ರಮ ಕೈಕೊಳ್ಳಬೇಕು ಎಂದು ಗ್ರಾಮಸ್ಥರು ಲೋಕಾಯುಕ್ತ ಅಧಿಕಾರಿಗಳಿಗೆ ಬುಧವಾರ ದೂರು ನೀಡಿದ್ದಾರೆ. <br /> <br /> ಪಟ್ಟಣದ ತಾ.ಪಂ. ಸಭಾಭವನದಲ್ಲಿ ಜರುಗಿದ ಸಾರ್ವಜನಿಕರಿಂದ ಕುಂದು ಕೊರತೆಗಳ ಅರ್ಜಿ ಅಹ ವಾಲುಗಳನ್ನು ಸ್ವೀಕರಿಸುವ ಅವಧಿಯಲ್ಲಿ ಹೊನ್ನಾಪೂರ ಗ್ರಾಮಸ್ಥರು ದೂರು ಸಲ್ಲಿಸಿದರು. ದೂರು ಸ್ವೀಕರಿಸಿದ ಲೋಕಾಯುಕ್ತ ಇನಸ್ಪೆಕ್ಟರ್ ಕರಿಬಸನಗೌಡ ಈ ಕುರಿತು ತಾವು ಜಿಲ್ಲಾಧಿಕಾರಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳ ಜೊತೆ ಚರ್ಚಿಸಿ ಗ್ರಾಮದಲ್ಲಿಯೇ ಪಡಿತರ ವಿತರಿಸಲು ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸುವುದಾಗಿ ಹೇಳಿದರು. <br /> <br /> ‘ಸವಡಿ ಗ್ರಾಮದ ಪಡಿತರ ಚೀಟಿದಾರರು ಗ್ರಾಮದಲ್ಲಿರುವ ನ್ಯಾಯಬೆಲೆ ಅಂಗಡಿಗಳಲ್ಲಿ 16ಕೆ.ಜಿ.ಪಡಿತರ ವಿತರಿಸುವ ಬದಲಾಗಿ 12ಕೆ.ಜಿ ಪಡಿತರ ಮಾತ್ರ ನೀಡುತ್ತಿದ್ದಾರೆ’ ಎಂದು ದೂರಿದಾಗ, ಸ್ಥಳದಲ್ಲಿದ್ದ ಕಂದಾಯ ಇಲಾಖೆ ಶಿರಸ್ತೇದಾರರಿಗೆ ಗ್ರಾಮದಲ್ಲಿ ಸಮರ್ಪಕ ಪಡಿತರ ವಿತರಿಸಲು ಕ್ರಮ ಕೈಕೊಳ್ಳುವಂತೆ ಸೂಚಿಸಿದರು. <br /> <br /> ಬೆಳವಣಕಿ ಗ್ರಾಮಸ್ಥರೊಬ್ಬರು ಕಂದಾಯ ಇಲಾಖೆಗೆ ಹಾಗೂ 2008-09ನೇ ಸಾಲಿನಲ್ಲಿ ಎರಡು ಸಲ ಹಣವನ್ನು ಭರಿಸಿರುವುದಾಗಿ ದೂರಿದರು, ಕಂದಾಯ ಇಲಾಖೆ ಅಧಿಕಾರಿಗಳು ಹೆಚ್ಚುವರಿ ಹಣವನ್ನು 2009-10ನೇ ಸಾಲಿಗಾಗಿ ಸರಿಪಡಿಸಿ ರಶೀದಿ ನೀಡುವುದಾಗಿ ಹೇಳಿದರು. <br /> <br /> ಬೆಳವಣಕಿ ಗ್ರಾಮಸ್ಥರೊಬ್ಬರು ದೂರು ಸಲ್ಲಿಸಿ 2008ರಲ್ಲಿ ತಮ್ಮ ಜಮೀನು ಸರ್ವೇ ಕೈಕೊಳ್ಳಲು ಅರ್ಜಿ ಸಲ್ಲಿಸಿದ್ದು ಇದುವರೆಗೂ ಸರ್ವೇ ಆಗಿಲ್ಲವೆಂದು ದೂರಿದಾಗ ಸ್ಥಳದಲ್ಲಿದ್ದ ಸರ್ವೇ ಅಧಿಕಾರಿಗೆ ಒಂದು ವಾರದಲ್ಲಿ ಸರ್ವೇ ಕಾರ್ಯವನ್ನು ಕೈಕೊಳ್ಳಬೇಕು ಎಂದು ಸೂಚಿಸಿದರು. <br /> <br /> ರೋಣ ಪಟ್ಟಣದ ಬಿ.ಎಸ್. ನಾಯಕ ನೀಡಿರುವ ದೂರಿನ ಪ್ರಕಾರ ಹಾಗೂ 20-8-2010ರಂದು ಮಾಹಿತಿ ಹಕ್ಕು ಅಡಿಯಲ್ಲಿ ಮಾಹಿತಿ ಕೇಳಿದ್ದು ಇದುವರೆಗೂ ಮಾಹಿತಿ ನೀಡಿಲ್ಲವೆಂದು ದೂರಿನಲ್ಲಿ ತಿಳಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಕೂಡಲೇ ಮಾಹಿತಿ ನೀಡುವಂತೆ ಆದೇಶಿಸುವುದಾಗಿ ಅಧಿಕಾರಿಗಳು ಹೇಳಿದರು. <br /> <br /> ಡಿ.ಎಸ್.ಎಸ್. ಸಂಘದ ಮೌನೇಶ ಹಾದಿಮನಿ ನೀಡಿದ ದೂರಿನಲ್ಲಿ ರೋಣ ಪುರಸಭೆ ಅಧಿಕಾರಿಗಳು 2009-10ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಪಂಗಡದವರಿಗೆ ಮೀಸಲಾಗಿಟ್ಟಿರುವ ಶೇ.18ರ ಅನುದಾನವನ್ನು ಇದುವರೆಗೆ ಬಳಕೆ ಮಾಡಲು ಕ್ರಿಯಾಯೋಜನೆ ತಯಾರಿಸಿದ ಯೋಜನೆಗಾಗಿ ಹಣ ವೆಚ್ಚಮಾಡಲು ಈಗಾಗಲೇ ಜಿಲ್ಲಾಧಿಕಾರಿಗಳು ಅನುಮತಿಯನ್ನು ನೀಡಿದ್ದಾರೆ ಎಂದು ಹೇಳಿದರು. <br /> <br /> ಸಿಬ್ಬಂದಿ ಕೂರತೆ ಸಾರ್ವಜನಿಕ ಸಮಸ್ಯೆಯಲ್ಲ ಅದು ಆಡಳಿತಾತ್ಮಕ ಸಮಸ್ಯೆ ಎಂದು ಲೋಕಾಯುಕ್ತ ಎಸ್.ಪಿ. ಬಿ.ಎನ್.ನೀಲಗಾರ ಪುರಸಭೆಯ ವ್ಯವಸ್ಥಾಪಕ ಬಸಯ್ಯ ಅಂಗಡಿಯವರಿಗೆ ಹೇಳಿದರು. <br /> <br /> ಚರ್ಮಗಾರರಿಗೆ ಕುಟೀರಗಳನ್ನು ಇದುವರೆಗೂ ಫಲಾನುಭವಿಗಳಿಗೆ ವಿತರಿಸಿಲ್ಲ ಎನ್ನುವ ದೂರಿಗೆ ಅನುಗುಣವಾಗಿ ಲೋಕಾಯುಕ್ತ ಅಧಿಕಾರಿಗಳು ಪುರಸಭೆಯ ಅಧಿಕಾರಿಯನ್ನು ಪ್ರಶ್ನಿಸಿದಾಗ ರಾಜ್ಯ ಚರ್ಮ ಅಭಿವೃದ್ದಿ ನಿಗಮದವರು ಪ್ರತಿ ಕುಟೀರಕ್ಕೆ ವೆಚ್ಚವಾಗುವ ದರವಾರು ಪಟ್ಟಿ ಸಲ್ಲಿಸದೆ ಇರುವುದರಿಂದ ವಿಳಂಬವಾಗಿದೆ ಎಂದು ಹೇಳಿದರು. ಲೋಕಾಯುಕ್ತ ಅಧಿಕಾರಿಗಳು ಈ ವಿಷಯ ಕುರಿತು ಜಿಲ್ಲಾ ಕೋಶಾಭಿವೃದ್ಧಿ ಅಧಿಕಾರಿ ಶಿವಣ್ಣ ಅವರೊಂದಿಗೆ ದೂರವಾಣಿ ಮುಖಾಂತರ ಚರ್ಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>