<p><strong>ಬೀದರ್</strong>: ನಗರದಲ್ಲಿರುವ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಮಂಗಳವಾರ ದಿಢೀರ್ ಭೇಟಿ ನೀಡಿದ ಲೋಕಾಯುಕ್ತ ನ್ಯಾಯಮೂರ್ತಿ ಡಾ.ವೈ.ಭಾಸ್ಕರರಾವ್ ಅವರು ಅಲ್ಲಿನ ಅವ್ಯವಸ್ಥೆ ಕಂಡು ಆಕ್ರೋಶ ವ್ಯಕ್ತಪಡಿಸಿದ್ದು, ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಲು ಒತ್ತು ನೀಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.<br /> <br /> `ಬೆಳಗಿನ ಹೊತ್ತು ಸ್ವಚ್ಛತೆ ಮಾಡಬೇಕು. 10 ಗಂಟೆ ಕಳೆದರೂ ಸ್ವಚ್ಛತೆ ಮಾಡಿಲ್ಲ. ಸಿಬ್ಬಂದಿಯೂ ಬಂದಿಲ್ಲ. ನಿರ್ಲಕ್ಷ್ಯ ಕಾಣುತ್ತಿದೆ' ಎಂದು ಜಿಲ್ಲಾ ಆರೋಗ್ಯಾಧಿಕಾರಿ ಅವರನ್ನು ಉದ್ದೇಶಿಸಿ ಆಕ್ಷೇಪ ವ್ಯಕ್ತಪಡಿಸಿದರು. ಆಸ್ಪತ್ರೆ ವಿವಿಧ ವಾರ್ಡ್ಗಳಿಗೂ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.<br /> <br /> ಬೆಳಿಗ್ಗೆ 9.30ಕ್ಕೆ ಆಸ್ಪತ್ರೆಗೆ ಆಗಮಿಸಿದ ಅವರು, ಶಸ್ತ್ರಚಿಕಿತ್ಸಾ ವಿಭಾಗ, ಗರ್ಭಿಣಿಯರ ಆರೈಕೆ ವಿಭಾಗಗಳಿಗೆ ಭೇಟಿ ನೀಡಿ ರೋಗಿಗಳಿಂದ ಚಿಕಿತ್ಸೆ ಮತ್ತು ಸೇವೆ ಕುರಿತು ಮಾಹಿತಿ ಪಡೆದರು. ಬಳಿಕ ಹಾಜರಾತಿ ದಾಖಲೆ ಪರಿಶೀಲಿಸಿದರು.<br /> <br /> ಆ ನಂತರ ಅಡುಗೆ ಕೋಣೆಯತ್ತ ತೆರಳಿದ್ದು, ಅಲ್ಲಿ ಅಡುಗೆ ಬಳಸುತ್ತಿರುವ ಪರಿಕರಗಳ ಬಗೆಗೆ ಮಾಹಿತಿ ಪಡೆದರು. ಆ ಸಂದರ್ಭದಲ್ಲಿ ಸ್ಟೋರ್ ರೂಂಗೆ ಬೀಗ ಹಾಕಲಾಗಿತ್ತು. ಸಿಬ್ಬಂದಿ ಕರೆಸುವಂತೆ ಸೂಚಿಸಿ ಅಲ್ಲಿಯೇ ನಿಂತರು. ಇತ್ತ, ಸಿಬ್ಬಂದಿ ಬರುವುದು ಅದಕ್ಕಾಗಿ ಸುಮಾರು 20 ನಿಮಿಷ ಕಾಯಬೇಕಾಯಿತು. ಅಕ್ಕಿ, ಬೇಳೆಯನ್ನು ಹಿಡಿದು ಗುಣಮಟ್ಟ ಪರಿಶೀಲಿಸಿದ ಅವರು, ರೋಗಿಗಳಿಗೆ ಕೊಡುವ ಆಹಾರದ ವಿವರ ಪಡೆದರು.<br /> <br /> ಅನೈರ್ಮಲ್ಯ ಕುರಿತು ಆಕ್ಷೇಪ ಕೇಳಿಬಂದಾಗ ಜಿಲ್ಲಾ ಶಸ್ತ್ರಚಿಕಿತ್ಸಕ ಕಾಶೀನಾಥ ಕಾಂಬ್ಳೆ, ವೈದ್ಯರು, ಶುಶ್ರೂಷಕರೂ ಸೇರಿದಂತೆ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಹೀಗಾಗಿ ಪರಿಪೂರ್ಣ ನಿರ್ವಹಣೆ ಸಾಧ್ಯ ಆಗುತ್ತಿಲ್ಲ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ನಗರದಲ್ಲಿರುವ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಮಂಗಳವಾರ ದಿಢೀರ್ ಭೇಟಿ ನೀಡಿದ ಲೋಕಾಯುಕ್ತ ನ್ಯಾಯಮೂರ್ತಿ ಡಾ.ವೈ.ಭಾಸ್ಕರರಾವ್ ಅವರು ಅಲ್ಲಿನ ಅವ್ಯವಸ್ಥೆ ಕಂಡು ಆಕ್ರೋಶ ವ್ಯಕ್ತಪಡಿಸಿದ್ದು, ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಲು ಒತ್ತು ನೀಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.<br /> <br /> `ಬೆಳಗಿನ ಹೊತ್ತು ಸ್ವಚ್ಛತೆ ಮಾಡಬೇಕು. 10 ಗಂಟೆ ಕಳೆದರೂ ಸ್ವಚ್ಛತೆ ಮಾಡಿಲ್ಲ. ಸಿಬ್ಬಂದಿಯೂ ಬಂದಿಲ್ಲ. ನಿರ್ಲಕ್ಷ್ಯ ಕಾಣುತ್ತಿದೆ' ಎಂದು ಜಿಲ್ಲಾ ಆರೋಗ್ಯಾಧಿಕಾರಿ ಅವರನ್ನು ಉದ್ದೇಶಿಸಿ ಆಕ್ಷೇಪ ವ್ಯಕ್ತಪಡಿಸಿದರು. ಆಸ್ಪತ್ರೆ ವಿವಿಧ ವಾರ್ಡ್ಗಳಿಗೂ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.<br /> <br /> ಬೆಳಿಗ್ಗೆ 9.30ಕ್ಕೆ ಆಸ್ಪತ್ರೆಗೆ ಆಗಮಿಸಿದ ಅವರು, ಶಸ್ತ್ರಚಿಕಿತ್ಸಾ ವಿಭಾಗ, ಗರ್ಭಿಣಿಯರ ಆರೈಕೆ ವಿಭಾಗಗಳಿಗೆ ಭೇಟಿ ನೀಡಿ ರೋಗಿಗಳಿಂದ ಚಿಕಿತ್ಸೆ ಮತ್ತು ಸೇವೆ ಕುರಿತು ಮಾಹಿತಿ ಪಡೆದರು. ಬಳಿಕ ಹಾಜರಾತಿ ದಾಖಲೆ ಪರಿಶೀಲಿಸಿದರು.<br /> <br /> ಆ ನಂತರ ಅಡುಗೆ ಕೋಣೆಯತ್ತ ತೆರಳಿದ್ದು, ಅಲ್ಲಿ ಅಡುಗೆ ಬಳಸುತ್ತಿರುವ ಪರಿಕರಗಳ ಬಗೆಗೆ ಮಾಹಿತಿ ಪಡೆದರು. ಆ ಸಂದರ್ಭದಲ್ಲಿ ಸ್ಟೋರ್ ರೂಂಗೆ ಬೀಗ ಹಾಕಲಾಗಿತ್ತು. ಸಿಬ್ಬಂದಿ ಕರೆಸುವಂತೆ ಸೂಚಿಸಿ ಅಲ್ಲಿಯೇ ನಿಂತರು. ಇತ್ತ, ಸಿಬ್ಬಂದಿ ಬರುವುದು ಅದಕ್ಕಾಗಿ ಸುಮಾರು 20 ನಿಮಿಷ ಕಾಯಬೇಕಾಯಿತು. ಅಕ್ಕಿ, ಬೇಳೆಯನ್ನು ಹಿಡಿದು ಗುಣಮಟ್ಟ ಪರಿಶೀಲಿಸಿದ ಅವರು, ರೋಗಿಗಳಿಗೆ ಕೊಡುವ ಆಹಾರದ ವಿವರ ಪಡೆದರು.<br /> <br /> ಅನೈರ್ಮಲ್ಯ ಕುರಿತು ಆಕ್ಷೇಪ ಕೇಳಿಬಂದಾಗ ಜಿಲ್ಲಾ ಶಸ್ತ್ರಚಿಕಿತ್ಸಕ ಕಾಶೀನಾಥ ಕಾಂಬ್ಳೆ, ವೈದ್ಯರು, ಶುಶ್ರೂಷಕರೂ ಸೇರಿದಂತೆ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಹೀಗಾಗಿ ಪರಿಪೂರ್ಣ ನಿರ್ವಹಣೆ ಸಾಧ್ಯ ಆಗುತ್ತಿಲ್ಲ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>