<p><strong>ತರೀಕೆರೆ:</strong> ಅಲ್ಲಿ ರಾಜಕೀಯ ಪಕ್ಷದ ಮುಖಂಡರಿರಲಿಲ್ಲ, ಜನ ಪ್ರತಿನಿಧಿ ಅಥವಾ ಸರ್ಕಾರಿ ಅಧಿಕಾರಿಗಳು ಮತ್ತು ಸಂಸ್ಥೆಯ ಮುಖ್ಯಸ್ಥರು ಇರಲಿಲ್ಲ ಆದರೆ ಅದೊಂದು ಅದ್ದೂರಿ ಸಮಾರಂಭವಾಗಿ ಮಾರ್ಪಟ್ಟಿತ್ತು.<br /> ಪಟ್ಟಣದ ತುಂಗಭದ್ರಾ ವಸತಿ ಶಾಲೆಯಲ್ಲಿ ಭಾನುವಾರ ನಡೆದ ಶಾಲೆಯ ವಿದ್ಯಾರ್ಥಿಗಳ ಸಾಮೂಹಿಕ ಹುಟ್ಟುಹಬ್ಬ ಮತ್ತು ವಾರ್ಷಿಕೋತ್ಸವ ಇದಕ್ಕೆ ಸಾಕ್ಷಿಯಾಯಿತು.<br /> <br /> ಶಾಲೆಯಲ್ಲಿನ 63 ಮಕ್ಕಳು ಮತ್ತು ಗ್ರಾಮೀಣ ಪ್ರದೇಶದಿಂದ ಆಗಮಿಸಿದ್ದ ಪೋಷಕರು ಒಬ್ಬೊಬ್ಬರಾಗಿ ಬಂದು ಸರಸ್ವತಿ ದೇವಿಯ ಭಾವಚಿತ್ರಕ್ಕೆ ನಮಸ್ಕರಿಸಿ, ಒಂದೊಂದು ಮೇಣದ ಬತ್ತಿಯನ್ನು ಹಚ್ಚಿ ಕೇಕ್ ಕತ್ತರಿಸಿ ಸಾಮೂಹಿಕವಾಗಿ ಹುಟ್ಟು ಹಬ್ಬವನ್ನು ಆಚರಿಸಿದರು.<br /> <br /> ಕಾರ್ಯಕ್ರಮವನ್ನು ಉದ್ಘಾಟನೆಯನ್ನು ನಿವೃತ್ತ ಸೈನಿಕ ಗಾಳಪ್ಪ ನೆರವೇರಿಸಿ ಮಕ್ಕಳಿಗೆ ಶಿಸ್ತು ಮತ್ತು ಸಂಯಮದ ಬಗ್ಗೆ ತಿಳಿಹೇಳಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಾಜಸೇವಕ ರಾಜಗೋಪಾಲ ಶ್ರಮದ ಮತ್ತು ಸಮಯದ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು. <br /> <br /> ಜೀವವಿಮಾ ನೌಕರ ಲೋಕೇಶ್, ಎಸ್ಜೆಎಂ ಕಾಲೇಜಿನ ನೌಕರ ತಿಪ್ಪೇಶ್, ಪೋಷಕರಾದ ಅರ್ಜುನ್, ಮೂರ್ತಿ, ಗೌರಮ್ಮ, ಗೌರಿಬಾಯಿ, ಶಿಕ್ಷಕರಾದ ಜಗದೀಶ್, ರಂಗನಾಥ್, ರೇಖಾ, ಸವಿತಾ, ಚಂದ್ರಕಲಾ, ಅನಿತಾ ಮತ್ತು ವ್ಯವಸ್ಥಾಪಕ ತಿಪ್ಪೆಸ್ವಾಮಿ ತಮ್ಮ ಅನಿಸಿಕೆಗಳನ್ನು ಮಕ್ಕಳಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತರೀಕೆರೆ:</strong> ಅಲ್ಲಿ ರಾಜಕೀಯ ಪಕ್ಷದ ಮುಖಂಡರಿರಲಿಲ್ಲ, ಜನ ಪ್ರತಿನಿಧಿ ಅಥವಾ ಸರ್ಕಾರಿ ಅಧಿಕಾರಿಗಳು ಮತ್ತು ಸಂಸ್ಥೆಯ ಮುಖ್ಯಸ್ಥರು ಇರಲಿಲ್ಲ ಆದರೆ ಅದೊಂದು ಅದ್ದೂರಿ ಸಮಾರಂಭವಾಗಿ ಮಾರ್ಪಟ್ಟಿತ್ತು.<br /> ಪಟ್ಟಣದ ತುಂಗಭದ್ರಾ ವಸತಿ ಶಾಲೆಯಲ್ಲಿ ಭಾನುವಾರ ನಡೆದ ಶಾಲೆಯ ವಿದ್ಯಾರ್ಥಿಗಳ ಸಾಮೂಹಿಕ ಹುಟ್ಟುಹಬ್ಬ ಮತ್ತು ವಾರ್ಷಿಕೋತ್ಸವ ಇದಕ್ಕೆ ಸಾಕ್ಷಿಯಾಯಿತು.<br /> <br /> ಶಾಲೆಯಲ್ಲಿನ 63 ಮಕ್ಕಳು ಮತ್ತು ಗ್ರಾಮೀಣ ಪ್ರದೇಶದಿಂದ ಆಗಮಿಸಿದ್ದ ಪೋಷಕರು ಒಬ್ಬೊಬ್ಬರಾಗಿ ಬಂದು ಸರಸ್ವತಿ ದೇವಿಯ ಭಾವಚಿತ್ರಕ್ಕೆ ನಮಸ್ಕರಿಸಿ, ಒಂದೊಂದು ಮೇಣದ ಬತ್ತಿಯನ್ನು ಹಚ್ಚಿ ಕೇಕ್ ಕತ್ತರಿಸಿ ಸಾಮೂಹಿಕವಾಗಿ ಹುಟ್ಟು ಹಬ್ಬವನ್ನು ಆಚರಿಸಿದರು.<br /> <br /> ಕಾರ್ಯಕ್ರಮವನ್ನು ಉದ್ಘಾಟನೆಯನ್ನು ನಿವೃತ್ತ ಸೈನಿಕ ಗಾಳಪ್ಪ ನೆರವೇರಿಸಿ ಮಕ್ಕಳಿಗೆ ಶಿಸ್ತು ಮತ್ತು ಸಂಯಮದ ಬಗ್ಗೆ ತಿಳಿಹೇಳಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಾಜಸೇವಕ ರಾಜಗೋಪಾಲ ಶ್ರಮದ ಮತ್ತು ಸಮಯದ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು. <br /> <br /> ಜೀವವಿಮಾ ನೌಕರ ಲೋಕೇಶ್, ಎಸ್ಜೆಎಂ ಕಾಲೇಜಿನ ನೌಕರ ತಿಪ್ಪೇಶ್, ಪೋಷಕರಾದ ಅರ್ಜುನ್, ಮೂರ್ತಿ, ಗೌರಮ್ಮ, ಗೌರಿಬಾಯಿ, ಶಿಕ್ಷಕರಾದ ಜಗದೀಶ್, ರಂಗನಾಥ್, ರೇಖಾ, ಸವಿತಾ, ಚಂದ್ರಕಲಾ, ಅನಿತಾ ಮತ್ತು ವ್ಯವಸ್ಥಾಪಕ ತಿಪ್ಪೆಸ್ವಾಮಿ ತಮ್ಮ ಅನಿಸಿಕೆಗಳನ್ನು ಮಕ್ಕಳಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>