<p><strong>ಬೆಂಗಳೂರು:</strong> ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೇ ಅವಕಾಶ ಇಲ್ಲದ ಬಿ.ಇಡಿ ವಿದ್ಯಾರ್ಹತೆಯನ್ನು ಪದವಿ ಪೂರ್ವ ಕಾಲೇಜು ಉಪನ್ಯಾಸಕರ ನೇಮಕಕ್ಕೆ ಕಡ್ಡಾಯಗೊಳಿಸುವ ಮೂಲಕ ಸರ್ಕಾರ ಬಿ.ಕಾಂ ಮತ್ತು ಎಂ.ಕಾಂ ಪದವೀಧರರಿಗೆ ಪ್ರವೇಶ ಬಾಗಿಲನ್ನು ಬಂದ್ ಮಾಡಿದೆ!<br /> <br /> ರಾಜ್ಯದಲ್ಲಿ ಈಗ ಇರುವ ನಿಯಮಗಳ ಪ್ರಕಾರ ಬಿ.ಕಾಂ, ಎಂ.ಕಾಂ. ಪದವೀಧರರಿಗೆ ಬಿ.ಇಡಿ ಮಾಡಲು ಅವಕಾಶ ಇಲ್ಲ. ಆದರೆ ಸರ್ಕಾರ ಹೊಸದಾಗಿ ರೂಪಿಸಿರುವ ನಿಯಮಗಳ ಪ್ರಕಾರ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ನೇಮಕಕ್ಕೆ ಬಿ.ಇಡಿ ವಿದ್ಯಾರ್ಹತೆ ಕಡ್ಡಾಯ. ಹೀಗಾಗಿ ಈ ಕೋರ್ಸ್ ಗಳನ್ನು ಪೂರೈಸಿದವರಿಗೆ ಈಗ ಸಂಕಟದ ಸ್ಥಿತಿ ಎದುರಾಗಿದೆ.<br /> <br /> `ಬಿ.ಇಡಿ ಕೋರ್ಸ್ ಸೇರಲು ನಮಗೆ ಅರ್ಜಿ ಕೂಡ ನೀಡುವುದಿಲ್ಲ. ಇನ್ನು ಕಲಿಯುವ ಮಾತೆಲ್ಲಿ? ಆದರೆ, ಇದ್ಯಾವುದನ್ನೂ ಗಮನಿಸದ ಸರ್ಕಾರ, ಉಪನ್ಯಾಸಕರಿಗೆ ಬಿಇಡಿ ವಿದ್ಯಾರ್ಹತೆ ಕಡ್ಡಾಯ ಮಾಡಿದೆ. ಇದು ಯಾವ ನ್ಯಾಯ~ ಎಂಬುದು ಎಂ.ಕಾಂ. ಪದವೀಧರ ನಿರುದ್ಯೋಗಿಗಳ ಪ್ರಶ್ನೆ.<br /> <br /> ಬಿ.ಎ, ಬಿ.ಎಸ್ಸಿ ಪದವಿ ಪಡೆದವರಿಗೆ ಮಾತ್ರ ಬಿಇಡಿ ಪ್ರವೇಶಕ್ಕೆ ಅವಕಾಶವಿದೆ. ಮೊದಲಿನಿಂದಲೂ ಇದೇ ನಿಯಮವನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಎನ್ಸಿಇಆರ್ಟಿ ಈಚೆಗೆ ಮಾಡಿರುವ ತಿದ್ದುಪಡಿ ಪ್ರಕಾರ ಬಿ.ಕಾಂ ಪದವೀಧರರು ಸಹ ಬಿ.ಇಡಿಗೆ ಸೇರಲು ಅವಕಾಶವಿದೆ. ಆದರೆ ರಾಜ್ಯದಲ್ಲಿ ಈ ಸಂಬಂಧ ಇನ್ನೂ ತಿದ್ದುಪಡಿ ಆಗಿಲ್ಲ. ಹೀಗಾಗಿ ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯದಲ್ಲೂ ಸದ್ಯಕ್ಕೆ ಬಿ.ಕಾಂ ಪದವೀಧರರಿಗೆ ಬಿಇಡಿ ವ್ಯಾಸಂಗಕ್ಕೆ ಅವಕಾಶವಿಲ್ಲ.<br /> <br /> ಆದರೆ, ಶಿಕ್ಷಣ ಇಲಾಖೆಯು ಪಿಯು ಉಪನ್ಯಾಸಕರ ನೇಮಕಕ್ಕೆ ಹೊಸದಾಗಿ ರೂಪಿಸಿರುವ ವಿಶೇಷ ನೇಮಕಾತಿ ನಿಯಮಗಳಲ್ಲಿ ಏಕಾಏಕಿ ಬಿ.ಇಡಿ ವಿದ್ಯಾರ್ಹತೆಯನ್ನು ಕಡ್ಡಾಯಗೊಳಿಸಿರುವುದು ನಗೆಪಾಟಲಿಗೆ ಈಡಾಗಿದೆ.<br /> <br /> ವಾಣಿಜ್ಯ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದವರಿಗೆ ಬಿ.ಇಡಿ ಮಾಡಲು ಅವಕಾಶ ಇಲ್ಲ ಎಂಬುದು ನಿಯಮಾವಳಿಗಳನ್ನು ರೂಪಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿಲ್ಲವೇ ಎಂದು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಎಂ.ಕಾಂ ಪದವೀಧರರು ಖಾರವಾಗಿ ಪ್ರಶ್ನಿಸಿದರು. <br /> <br /> ಎಂ.ಕಾಂ.ನಲ್ಲಿ ಸ್ನಾತಕೋತ್ತರ ಪದವಿ ಪಡೆದವರು ವಾಣಿಜ್ಯ, ಲೆಕ್ಕಶಾಸ್ತ್ರ ವಿಷಯದ ಉಪನ್ಯಾಸಕರಾಗಿ ಇದುವರೆಗೆ ನೇಮಕಗೊಳ್ಳುತ್ತಿದ್ದರು. ಆದರೆ ಈಗ ಎಂ.ಕಾಂ.,ಬಿ.ಇಡಿ ವಿದ್ಯಾರ್ಹತೆ ಹೊಂದಿರುವವರು ಇಲ್ಲದೆ ಇರುವಾಗ ಈ ಹುದ್ದೆಗಳನ್ನು ಭರ್ತಿ ಮಾಡುವುದಾದರೂ ಹೇಗೆ ಎಂಬುದು ಸ್ನಾತಕೋತ್ತರ ಪದವಿ ಪಡೆದಿರುವ ಎ.ಸೋಮಶೇಖರ್, ಕುಮಾರ್ ಅವರ ಪ್ರಶ್ನೆ.<br /> <br /> ಒಟ್ಟು 1,765 ಪಿಯು ಉಪನ್ಯಾಸಕರ ನೇಮಕ ಪ್ರಕ್ರಿಯೆ ಮುಂದಿನ ತಿಂಗಳು ಆರಂಭವಾಗಲಿದ್ದು, ಹಲವರು ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ. ಆದರೆ ವಾಣಿಜ್ಯ ವಿಭಾಗದ ಅಭ್ಯರ್ಥಿಗಳು, ಸ್ನಾತಕೋತ್ತರ ಪದವಿಯೊಂದಿಗೆ ಬಿ.ಇಡಿ ವಿದ್ಯಾರ್ಹತೆ ಹೊಂದಿಲ್ಲದೆ ಇರುವವರು ಗೊಂದಲದಲ್ಲಿದ್ದಾರೆ.<br /> ವಾಣಿಜ್ಯ ವಿಷಯದ ಪದವೀಧರರಿಗೂ ಬಿ.ಇಡಿ ವ್ಯಾಸಂಗಕ್ಕೆ ಅವಕಾಶ ಕಲ್ಪಿಸುವ ಸಂಬಂಧ ನಿಯಮಾವಳಿಗೆ ತಿದ್ದುಪಡಿ ತರಲು ಚಿಂತನೆ ನಡೆದಿದೆ.<br /> <br /> ಪ್ರಸಕ್ತ ಸಾಲಿನಲ್ಲಿ ಬಿ.ಇಡಿ ಪ್ರವೇಶ ಪ್ರಕ್ರಿಯೆ ಈಗಾಗಲೇ ಆರಂಭವಾಗಿರುವುದರಿಂದ ಈ ವರ್ಷವಂತೂ ಬದಲಾವಣೆ ಅಸಾಧ್ಯ. ಮುಂದಿನ ವರ್ಷದಿಂದ ಬದಲಾವಣೆ ಜಾರಿಯಾಗಬಹುದು. ಆದರೆ ಸದ್ಯಕ್ಕಂತೂ ವಾಣಿಜ್ಯ ಪದವೀಧರರಿಗೆ ಬಿಇಡಿಗೆ ಪ್ರವೇಶ ನೀಡುತ್ತಿಲ್ಲ ಎಂದು ಕೇಂದ್ರೀಕೃತ ದಾಖಲಾತಿ ಘಟಕದ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.<br /> <br /> ಭವಿಷ್ಯಕ್ಕೆ ಮಾರಕ: ರಾಜ್ಯದಲ್ಲಿ ಎರಡು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಸ್ನಾತಕೋತ್ತರ ಪದವೀಧರರಿದ್ದು, ಇವರಲ್ಲಿ ಬಹುತೇಕ ಮಂದಿ 10-15 ವರ್ಷಗಳಿಂದ ಖಾಸಗಿ, ಸರ್ಕಾರಿ ಕಾಲೇಜುಗಳಲ್ಲಿ ಅರೆಕಾಲಿಕ, ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.<br /> <br /> ಈಗ ಬಿಇಡಿ ಕಡ್ಡಾಯ ಮಾಡುವ ಮೂಲಕ ಅವರ ಭವಿಷ್ಯಕ್ಕೆ ಮಾರಕವಾಗುವ ನಿಲುವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತೆಗೆದುಕೊಂಡಿದ್ದಾರೆ ಎಂದು ಅಖಿಲ ಕರ್ನಾಟಕ ಸ್ನಾತಕೋತ್ತರ ಪದವೀಧರರ ವೇದಿಕೆಯ ಅಧ್ಯಕ್ಷ ಎನ್.ವಾಸುದೇವ್ ಅಸಮಾಧಾನ ವ್ಯಕ್ತಪಡಿಸಿದರು.<br /> <br /> `ಪ್ರೌಢಶಾಲಾ ಉಪನ್ಯಾಸಕರ ನೇಮಕಕ್ಕೆ ನಿಗದಿಪಡಿಸಿರುವ ಬಿ.ಇಡಿ ವಿದ್ಯಾರ್ಹತೆಯನ್ನು ಪಿಯು ಉಪನ್ಯಾಸಕರಿಗೂ ವಿಸ್ತರಿಸಿರುವುದು ಸರಿಯಲ್ಲ. ಬಲವಂತವಾಗಿ ಬಿ.ಇಡಿ ವಿದ್ಯಾರ್ಹತೆಯನ್ನು ಹೇರಿರುವುದರ ಹಿಂದೆ ಬಿ.ಇಡಿ ಕಾಲೇಜುಗಳನ್ನು ಉಳಿಸುವ ಹುನ್ನಾರವಿದೆ. <br /> <br /> ರಾಜ್ಯದಲ್ಲಿ 428 ಬಿ.ಇಡಿ ಕಾಲೇಜುಗಳಿದ್ದು, 40 ಸಾವಿರ ಸೀಟುಗಳಿವೆ. ಆದರೆ ಕಳೆದ ವರ್ಷ ವಿದ್ಯಾರ್ಥಿಗಳು ದಾಖಲಾಗದ ಕಾರಣ ಕಾಲೇಜುಗಳು ಮುಚ್ಚುವ ಸ್ಥಿತಿಯಲ್ಲಿದ್ದು, ಸಚಿವು ಅವುಗಳನ್ನು ಉಳಿಸುವ ಜವಾಬ್ದಾರಿ ಹೊತ್ತಿದ್ದಾರೆ~ ಎಂದು ಟೀಕಿಸಿದರು.<br /> <br /> `ಪಿಯು ಕಾಲೇಜುಗಳನ್ನು ಪ್ರೌಢಶಿಕ್ಷಣ ಮಂಡಳಿಯ ವ್ಯಾಪ್ತಿಗೆ ತರಲಾಗದೆ ಹಿಂಬಾಗಿಲ ಮೂಲಕ ಬಿ.ಇಡಿ ಕಡ್ಡಾಯ ಮಾಡಿರುವುದು ಸರಿಯಲ್ಲ. ಅಷ್ಟೊಂದು ಕಾಳಜಿ ಇದ್ದರೆ ಮೊದಲು ಕೇಂದ್ರ ಸರ್ಕಾರದ ಏಕರೂಪ ಶಿಕ್ಷಣ ವ್ಯವಸ್ಥೆಯನ್ನು ರಾಜ್ಯದಲ್ಲೂ ಜಾರಿಗೆ ತನ್ನಿ, ಆ ನಂತರ ಉಪನ್ಯಾಸಕರ ನೇಮಕ ಮಾಡಿಕೊಳ್ಳಿ, ಆ ರೀತಿ ಮಾಡಲು ಸಾಧ್ಯವಾಗದಿದ್ದರೆ ಬಿ.ಇಡಿ ಕಡ್ಡಾಯ ಎಂಬ ನಿಯಮವನ್ನು ತೆಗೆದುಹಾಕಿ~ ಎಂದು ಒತ್ತಾಯಿಸಿದರು.<br /> <br /> <strong>ಪ್ರಮುಖ ವಿಷಯಗಳ ಖಾಲಿ ಹುದ್ದೆಗಳು</strong><br /> ಕನ್ನಡ- 148, ಇಂಗ್ಲಿಷ್- 140, ಇತಿಹಾಸ- 101, ಅರ್ಥಶಾಸ್ತ್ರ- 138, ರಾಜ್ಯಶಾಸ್ತ್ರ- 65, ಸಮಾಜ ಶಾಸ್ತ್ರ- 110, ವಾಣಿಜ್ಯ ಶಾಸ್ತ್ರ- 135, ಭೌತವಿಜ್ಞಾನ- 223, ರಸಾಯನ ವಿಜ್ಞಾನ- 220, ಗಣಿತ- 134, ಜೀವವಿಜ್ಞಾನ- 228</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೇ ಅವಕಾಶ ಇಲ್ಲದ ಬಿ.ಇಡಿ ವಿದ್ಯಾರ್ಹತೆಯನ್ನು ಪದವಿ ಪೂರ್ವ ಕಾಲೇಜು ಉಪನ್ಯಾಸಕರ ನೇಮಕಕ್ಕೆ ಕಡ್ಡಾಯಗೊಳಿಸುವ ಮೂಲಕ ಸರ್ಕಾರ ಬಿ.ಕಾಂ ಮತ್ತು ಎಂ.ಕಾಂ ಪದವೀಧರರಿಗೆ ಪ್ರವೇಶ ಬಾಗಿಲನ್ನು ಬಂದ್ ಮಾಡಿದೆ!<br /> <br /> ರಾಜ್ಯದಲ್ಲಿ ಈಗ ಇರುವ ನಿಯಮಗಳ ಪ್ರಕಾರ ಬಿ.ಕಾಂ, ಎಂ.ಕಾಂ. ಪದವೀಧರರಿಗೆ ಬಿ.ಇಡಿ ಮಾಡಲು ಅವಕಾಶ ಇಲ್ಲ. ಆದರೆ ಸರ್ಕಾರ ಹೊಸದಾಗಿ ರೂಪಿಸಿರುವ ನಿಯಮಗಳ ಪ್ರಕಾರ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ನೇಮಕಕ್ಕೆ ಬಿ.ಇಡಿ ವಿದ್ಯಾರ್ಹತೆ ಕಡ್ಡಾಯ. ಹೀಗಾಗಿ ಈ ಕೋರ್ಸ್ ಗಳನ್ನು ಪೂರೈಸಿದವರಿಗೆ ಈಗ ಸಂಕಟದ ಸ್ಥಿತಿ ಎದುರಾಗಿದೆ.<br /> <br /> `ಬಿ.ಇಡಿ ಕೋರ್ಸ್ ಸೇರಲು ನಮಗೆ ಅರ್ಜಿ ಕೂಡ ನೀಡುವುದಿಲ್ಲ. ಇನ್ನು ಕಲಿಯುವ ಮಾತೆಲ್ಲಿ? ಆದರೆ, ಇದ್ಯಾವುದನ್ನೂ ಗಮನಿಸದ ಸರ್ಕಾರ, ಉಪನ್ಯಾಸಕರಿಗೆ ಬಿಇಡಿ ವಿದ್ಯಾರ್ಹತೆ ಕಡ್ಡಾಯ ಮಾಡಿದೆ. ಇದು ಯಾವ ನ್ಯಾಯ~ ಎಂಬುದು ಎಂ.ಕಾಂ. ಪದವೀಧರ ನಿರುದ್ಯೋಗಿಗಳ ಪ್ರಶ್ನೆ.<br /> <br /> ಬಿ.ಎ, ಬಿ.ಎಸ್ಸಿ ಪದವಿ ಪಡೆದವರಿಗೆ ಮಾತ್ರ ಬಿಇಡಿ ಪ್ರವೇಶಕ್ಕೆ ಅವಕಾಶವಿದೆ. ಮೊದಲಿನಿಂದಲೂ ಇದೇ ನಿಯಮವನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಎನ್ಸಿಇಆರ್ಟಿ ಈಚೆಗೆ ಮಾಡಿರುವ ತಿದ್ದುಪಡಿ ಪ್ರಕಾರ ಬಿ.ಕಾಂ ಪದವೀಧರರು ಸಹ ಬಿ.ಇಡಿಗೆ ಸೇರಲು ಅವಕಾಶವಿದೆ. ಆದರೆ ರಾಜ್ಯದಲ್ಲಿ ಈ ಸಂಬಂಧ ಇನ್ನೂ ತಿದ್ದುಪಡಿ ಆಗಿಲ್ಲ. ಹೀಗಾಗಿ ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯದಲ್ಲೂ ಸದ್ಯಕ್ಕೆ ಬಿ.ಕಾಂ ಪದವೀಧರರಿಗೆ ಬಿಇಡಿ ವ್ಯಾಸಂಗಕ್ಕೆ ಅವಕಾಶವಿಲ್ಲ.<br /> <br /> ಆದರೆ, ಶಿಕ್ಷಣ ಇಲಾಖೆಯು ಪಿಯು ಉಪನ್ಯಾಸಕರ ನೇಮಕಕ್ಕೆ ಹೊಸದಾಗಿ ರೂಪಿಸಿರುವ ವಿಶೇಷ ನೇಮಕಾತಿ ನಿಯಮಗಳಲ್ಲಿ ಏಕಾಏಕಿ ಬಿ.ಇಡಿ ವಿದ್ಯಾರ್ಹತೆಯನ್ನು ಕಡ್ಡಾಯಗೊಳಿಸಿರುವುದು ನಗೆಪಾಟಲಿಗೆ ಈಡಾಗಿದೆ.<br /> <br /> ವಾಣಿಜ್ಯ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದವರಿಗೆ ಬಿ.ಇಡಿ ಮಾಡಲು ಅವಕಾಶ ಇಲ್ಲ ಎಂಬುದು ನಿಯಮಾವಳಿಗಳನ್ನು ರೂಪಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿಲ್ಲವೇ ಎಂದು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಎಂ.ಕಾಂ ಪದವೀಧರರು ಖಾರವಾಗಿ ಪ್ರಶ್ನಿಸಿದರು. <br /> <br /> ಎಂ.ಕಾಂ.ನಲ್ಲಿ ಸ್ನಾತಕೋತ್ತರ ಪದವಿ ಪಡೆದವರು ವಾಣಿಜ್ಯ, ಲೆಕ್ಕಶಾಸ್ತ್ರ ವಿಷಯದ ಉಪನ್ಯಾಸಕರಾಗಿ ಇದುವರೆಗೆ ನೇಮಕಗೊಳ್ಳುತ್ತಿದ್ದರು. ಆದರೆ ಈಗ ಎಂ.ಕಾಂ.,ಬಿ.ಇಡಿ ವಿದ್ಯಾರ್ಹತೆ ಹೊಂದಿರುವವರು ಇಲ್ಲದೆ ಇರುವಾಗ ಈ ಹುದ್ದೆಗಳನ್ನು ಭರ್ತಿ ಮಾಡುವುದಾದರೂ ಹೇಗೆ ಎಂಬುದು ಸ್ನಾತಕೋತ್ತರ ಪದವಿ ಪಡೆದಿರುವ ಎ.ಸೋಮಶೇಖರ್, ಕುಮಾರ್ ಅವರ ಪ್ರಶ್ನೆ.<br /> <br /> ಒಟ್ಟು 1,765 ಪಿಯು ಉಪನ್ಯಾಸಕರ ನೇಮಕ ಪ್ರಕ್ರಿಯೆ ಮುಂದಿನ ತಿಂಗಳು ಆರಂಭವಾಗಲಿದ್ದು, ಹಲವರು ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ. ಆದರೆ ವಾಣಿಜ್ಯ ವಿಭಾಗದ ಅಭ್ಯರ್ಥಿಗಳು, ಸ್ನಾತಕೋತ್ತರ ಪದವಿಯೊಂದಿಗೆ ಬಿ.ಇಡಿ ವಿದ್ಯಾರ್ಹತೆ ಹೊಂದಿಲ್ಲದೆ ಇರುವವರು ಗೊಂದಲದಲ್ಲಿದ್ದಾರೆ.<br /> ವಾಣಿಜ್ಯ ವಿಷಯದ ಪದವೀಧರರಿಗೂ ಬಿ.ಇಡಿ ವ್ಯಾಸಂಗಕ್ಕೆ ಅವಕಾಶ ಕಲ್ಪಿಸುವ ಸಂಬಂಧ ನಿಯಮಾವಳಿಗೆ ತಿದ್ದುಪಡಿ ತರಲು ಚಿಂತನೆ ನಡೆದಿದೆ.<br /> <br /> ಪ್ರಸಕ್ತ ಸಾಲಿನಲ್ಲಿ ಬಿ.ಇಡಿ ಪ್ರವೇಶ ಪ್ರಕ್ರಿಯೆ ಈಗಾಗಲೇ ಆರಂಭವಾಗಿರುವುದರಿಂದ ಈ ವರ್ಷವಂತೂ ಬದಲಾವಣೆ ಅಸಾಧ್ಯ. ಮುಂದಿನ ವರ್ಷದಿಂದ ಬದಲಾವಣೆ ಜಾರಿಯಾಗಬಹುದು. ಆದರೆ ಸದ್ಯಕ್ಕಂತೂ ವಾಣಿಜ್ಯ ಪದವೀಧರರಿಗೆ ಬಿಇಡಿಗೆ ಪ್ರವೇಶ ನೀಡುತ್ತಿಲ್ಲ ಎಂದು ಕೇಂದ್ರೀಕೃತ ದಾಖಲಾತಿ ಘಟಕದ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.<br /> <br /> ಭವಿಷ್ಯಕ್ಕೆ ಮಾರಕ: ರಾಜ್ಯದಲ್ಲಿ ಎರಡು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಸ್ನಾತಕೋತ್ತರ ಪದವೀಧರರಿದ್ದು, ಇವರಲ್ಲಿ ಬಹುತೇಕ ಮಂದಿ 10-15 ವರ್ಷಗಳಿಂದ ಖಾಸಗಿ, ಸರ್ಕಾರಿ ಕಾಲೇಜುಗಳಲ್ಲಿ ಅರೆಕಾಲಿಕ, ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.<br /> <br /> ಈಗ ಬಿಇಡಿ ಕಡ್ಡಾಯ ಮಾಡುವ ಮೂಲಕ ಅವರ ಭವಿಷ್ಯಕ್ಕೆ ಮಾರಕವಾಗುವ ನಿಲುವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತೆಗೆದುಕೊಂಡಿದ್ದಾರೆ ಎಂದು ಅಖಿಲ ಕರ್ನಾಟಕ ಸ್ನಾತಕೋತ್ತರ ಪದವೀಧರರ ವೇದಿಕೆಯ ಅಧ್ಯಕ್ಷ ಎನ್.ವಾಸುದೇವ್ ಅಸಮಾಧಾನ ವ್ಯಕ್ತಪಡಿಸಿದರು.<br /> <br /> `ಪ್ರೌಢಶಾಲಾ ಉಪನ್ಯಾಸಕರ ನೇಮಕಕ್ಕೆ ನಿಗದಿಪಡಿಸಿರುವ ಬಿ.ಇಡಿ ವಿದ್ಯಾರ್ಹತೆಯನ್ನು ಪಿಯು ಉಪನ್ಯಾಸಕರಿಗೂ ವಿಸ್ತರಿಸಿರುವುದು ಸರಿಯಲ್ಲ. ಬಲವಂತವಾಗಿ ಬಿ.ಇಡಿ ವಿದ್ಯಾರ್ಹತೆಯನ್ನು ಹೇರಿರುವುದರ ಹಿಂದೆ ಬಿ.ಇಡಿ ಕಾಲೇಜುಗಳನ್ನು ಉಳಿಸುವ ಹುನ್ನಾರವಿದೆ. <br /> <br /> ರಾಜ್ಯದಲ್ಲಿ 428 ಬಿ.ಇಡಿ ಕಾಲೇಜುಗಳಿದ್ದು, 40 ಸಾವಿರ ಸೀಟುಗಳಿವೆ. ಆದರೆ ಕಳೆದ ವರ್ಷ ವಿದ್ಯಾರ್ಥಿಗಳು ದಾಖಲಾಗದ ಕಾರಣ ಕಾಲೇಜುಗಳು ಮುಚ್ಚುವ ಸ್ಥಿತಿಯಲ್ಲಿದ್ದು, ಸಚಿವು ಅವುಗಳನ್ನು ಉಳಿಸುವ ಜವಾಬ್ದಾರಿ ಹೊತ್ತಿದ್ದಾರೆ~ ಎಂದು ಟೀಕಿಸಿದರು.<br /> <br /> `ಪಿಯು ಕಾಲೇಜುಗಳನ್ನು ಪ್ರೌಢಶಿಕ್ಷಣ ಮಂಡಳಿಯ ವ್ಯಾಪ್ತಿಗೆ ತರಲಾಗದೆ ಹಿಂಬಾಗಿಲ ಮೂಲಕ ಬಿ.ಇಡಿ ಕಡ್ಡಾಯ ಮಾಡಿರುವುದು ಸರಿಯಲ್ಲ. ಅಷ್ಟೊಂದು ಕಾಳಜಿ ಇದ್ದರೆ ಮೊದಲು ಕೇಂದ್ರ ಸರ್ಕಾರದ ಏಕರೂಪ ಶಿಕ್ಷಣ ವ್ಯವಸ್ಥೆಯನ್ನು ರಾಜ್ಯದಲ್ಲೂ ಜಾರಿಗೆ ತನ್ನಿ, ಆ ನಂತರ ಉಪನ್ಯಾಸಕರ ನೇಮಕ ಮಾಡಿಕೊಳ್ಳಿ, ಆ ರೀತಿ ಮಾಡಲು ಸಾಧ್ಯವಾಗದಿದ್ದರೆ ಬಿ.ಇಡಿ ಕಡ್ಡಾಯ ಎಂಬ ನಿಯಮವನ್ನು ತೆಗೆದುಹಾಕಿ~ ಎಂದು ಒತ್ತಾಯಿಸಿದರು.<br /> <br /> <strong>ಪ್ರಮುಖ ವಿಷಯಗಳ ಖಾಲಿ ಹುದ್ದೆಗಳು</strong><br /> ಕನ್ನಡ- 148, ಇಂಗ್ಲಿಷ್- 140, ಇತಿಹಾಸ- 101, ಅರ್ಥಶಾಸ್ತ್ರ- 138, ರಾಜ್ಯಶಾಸ್ತ್ರ- 65, ಸಮಾಜ ಶಾಸ್ತ್ರ- 110, ವಾಣಿಜ್ಯ ಶಾಸ್ತ್ರ- 135, ಭೌತವಿಜ್ಞಾನ- 223, ರಸಾಯನ ವಿಜ್ಞಾನ- 220, ಗಣಿತ- 134, ಜೀವವಿಜ್ಞಾನ- 228</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>