<p><strong>ಅಥಣಿ (ಬೆಳಗಾವಿ ಜಿಲ್ಲೆ):</strong> ಮುಖ್ಯಮಂತ್ರಿಗಳ ಪ್ರವಾಸವನ್ನು ತಹಶೀಲ್ದಾರ್ ಉದ್ದೇಶಪೂರ್ವಕವಾಗಿ ಮೊಟಕುಗೊಳಿಸಿದ್ದಾರೆ ಎಂದು ಆರೋಪಿಸಿ ರೈತರು ಪಟ್ಟಣದ ಹೊರ ವಲಯದಲ್ಲಿ ತಹಶೀಲ್ದಾರ್ ವಾಹನಕ್ಕೆ ಶುಕ್ರವಾರ ಘೇರಾವ್ ಹಾಕಿ ಸುಮಾರು ಮೂರು ತಾಸು ಪ್ರತಿಭಟನೆ ನಡೆಸಿದರು.<br /> <br /> ಕೆಲವರು ಜೀಪ್ ಮೇಲೆ ಕಲ್ಲು ತೂರಾಟ ನಡೆಸಿದರು. ಮುಖಂಡರೊಬ್ಬರು ಬೆಂಕಿ ಹಚ್ಚುವ ಪ್ರಯತ್ನಕ್ಕೆ ಮುಂದಾದಾಗ ರೈತರೇ ಅವರನ್ನು ತಡೆದರು. ಬೆರಳೆಣಿಕೆಯಷ್ಟಿದ್ದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಪರದಾಡುವಂತಾಯಿತು. ಪರಿಸ್ಥಿತಿ ಬಿಗಡಾಯಿಸಿದ್ದರಿಂದ ತಕ್ಷಣ ಹೆಚ್ಚಿನ ಪೊಲೀಸರನ್ನು ಸ್ಥಳಕ್ಕೆ ಕರೆಸಿ, ನಿಯಂತ್ರಿಸಲಾಯಿತು.<br /> <br /> ಪ್ರವಾಸ ಪಟ್ಟಿ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಗಾಂವ, ಯಲಿಹಡಲಗಿ ಜೊತೆ ರಡ್ಡೇರಹಟ್ಟಿ, ಅವರಖೋಡ ಮತ್ತು ಸಂಕೋನಹಟ್ಟಿ ಗ್ರಾಮಗಳಿಗೆ ಭೇಟಿ ನೀಡಬೇಕಿತ್ತು. ಆದರೆ ನಂದಗಾಂವ ಮತ್ತು ಯಲಿಹಡಲಗಿ ಗ್ರಾಮಗಳಿಗೆ ಮಾತ್ರ ಸಿದ್ದರಾಮಯ್ಯ ಭೇಟಿ ನೀಡುತ್ತಿರುವ ಸಂಗತಿ ರೈತರ ಗಮನಕ್ಕೆ ಬಂದಾಗ ಗದ್ದಲ ಆರಂಭವಾಯಿತು.<br /> <br /> ನಂದಗಾಂವದಲ್ಲಿ ದ್ರಾಕ್ಷಿ ತೋಟಕ್ಕೆ ಭೇಟಿ ನೀಡಿ, ಹಾನಿ ಕುರಿತು ಪರಿಶೀಲಿಸಿದ ನಂತರ ಸಿದ್ದರಾಮಯ್ಯ ಯಲಿಹಡಲಗಿ ಕಡೆಗೆ ಹೊರಟಿದ್ದನ್ನು ಗಮನಿಸಿದ ರೈತ ಮುಖಂಡರು ತಹಶೀಲ್ದಾರ್ ಅವರ ಜೀಪ್ ಅನ್ನು ಬೆನ್ನಟ್ಟಿ ಮಾರ್ಗ ಮಧ್ಯ ತಡೆದು ಪ್ರತಿಭಟಿಸಿದರು.<br /> <br /> ಸ್ಥಳಕ್ಕೆ ಧಾವಿಸಿದ ಸಚಿವ ಪ್ರಕಾಶ ಹುಕ್ಕೇರಿ ಪ್ರತಿಭಟನಾಕಾರರ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರೂ ಸಫಲರಾಗಲಿಲ್ಲ. ನಂತರ ಜಿಲ್ಲಾಧಿಕಾರಿಯೊಡನೆ ಫೋನಿನಲ್ಲಿ ಮಾತನಾಡಿದ ಸಚಿವರು, ತಹಶೀಲ್ದಾರರ ಈ ವರ್ತನೆಯಿಂದ ರೈತರು ಹತಾಶರಾಗಿದ್ದು, ಶನಿವಾರ ಸಂಜೆಯೊಳಗಾಗಿ ತಹಶೀಲ್ದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಆಗ ರೈತರು ಪ್ರತಿಭಟನೆಯನ್ನು ಸ್ಥಗಿತಗೊಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಥಣಿ (ಬೆಳಗಾವಿ ಜಿಲ್ಲೆ):</strong> ಮುಖ್ಯಮಂತ್ರಿಗಳ ಪ್ರವಾಸವನ್ನು ತಹಶೀಲ್ದಾರ್ ಉದ್ದೇಶಪೂರ್ವಕವಾಗಿ ಮೊಟಕುಗೊಳಿಸಿದ್ದಾರೆ ಎಂದು ಆರೋಪಿಸಿ ರೈತರು ಪಟ್ಟಣದ ಹೊರ ವಲಯದಲ್ಲಿ ತಹಶೀಲ್ದಾರ್ ವಾಹನಕ್ಕೆ ಶುಕ್ರವಾರ ಘೇರಾವ್ ಹಾಕಿ ಸುಮಾರು ಮೂರು ತಾಸು ಪ್ರತಿಭಟನೆ ನಡೆಸಿದರು.<br /> <br /> ಕೆಲವರು ಜೀಪ್ ಮೇಲೆ ಕಲ್ಲು ತೂರಾಟ ನಡೆಸಿದರು. ಮುಖಂಡರೊಬ್ಬರು ಬೆಂಕಿ ಹಚ್ಚುವ ಪ್ರಯತ್ನಕ್ಕೆ ಮುಂದಾದಾಗ ರೈತರೇ ಅವರನ್ನು ತಡೆದರು. ಬೆರಳೆಣಿಕೆಯಷ್ಟಿದ್ದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಪರದಾಡುವಂತಾಯಿತು. ಪರಿಸ್ಥಿತಿ ಬಿಗಡಾಯಿಸಿದ್ದರಿಂದ ತಕ್ಷಣ ಹೆಚ್ಚಿನ ಪೊಲೀಸರನ್ನು ಸ್ಥಳಕ್ಕೆ ಕರೆಸಿ, ನಿಯಂತ್ರಿಸಲಾಯಿತು.<br /> <br /> ಪ್ರವಾಸ ಪಟ್ಟಿ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಗಾಂವ, ಯಲಿಹಡಲಗಿ ಜೊತೆ ರಡ್ಡೇರಹಟ್ಟಿ, ಅವರಖೋಡ ಮತ್ತು ಸಂಕೋನಹಟ್ಟಿ ಗ್ರಾಮಗಳಿಗೆ ಭೇಟಿ ನೀಡಬೇಕಿತ್ತು. ಆದರೆ ನಂದಗಾಂವ ಮತ್ತು ಯಲಿಹಡಲಗಿ ಗ್ರಾಮಗಳಿಗೆ ಮಾತ್ರ ಸಿದ್ದರಾಮಯ್ಯ ಭೇಟಿ ನೀಡುತ್ತಿರುವ ಸಂಗತಿ ರೈತರ ಗಮನಕ್ಕೆ ಬಂದಾಗ ಗದ್ದಲ ಆರಂಭವಾಯಿತು.<br /> <br /> ನಂದಗಾಂವದಲ್ಲಿ ದ್ರಾಕ್ಷಿ ತೋಟಕ್ಕೆ ಭೇಟಿ ನೀಡಿ, ಹಾನಿ ಕುರಿತು ಪರಿಶೀಲಿಸಿದ ನಂತರ ಸಿದ್ದರಾಮಯ್ಯ ಯಲಿಹಡಲಗಿ ಕಡೆಗೆ ಹೊರಟಿದ್ದನ್ನು ಗಮನಿಸಿದ ರೈತ ಮುಖಂಡರು ತಹಶೀಲ್ದಾರ್ ಅವರ ಜೀಪ್ ಅನ್ನು ಬೆನ್ನಟ್ಟಿ ಮಾರ್ಗ ಮಧ್ಯ ತಡೆದು ಪ್ರತಿಭಟಿಸಿದರು.<br /> <br /> ಸ್ಥಳಕ್ಕೆ ಧಾವಿಸಿದ ಸಚಿವ ಪ್ರಕಾಶ ಹುಕ್ಕೇರಿ ಪ್ರತಿಭಟನಾಕಾರರ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರೂ ಸಫಲರಾಗಲಿಲ್ಲ. ನಂತರ ಜಿಲ್ಲಾಧಿಕಾರಿಯೊಡನೆ ಫೋನಿನಲ್ಲಿ ಮಾತನಾಡಿದ ಸಚಿವರು, ತಹಶೀಲ್ದಾರರ ಈ ವರ್ತನೆಯಿಂದ ರೈತರು ಹತಾಶರಾಗಿದ್ದು, ಶನಿವಾರ ಸಂಜೆಯೊಳಗಾಗಿ ತಹಶೀಲ್ದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಆಗ ರೈತರು ಪ್ರತಿಭಟನೆಯನ್ನು ಸ್ಥಗಿತಗೊಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>