<p>ಕೇಂದ್ರದ ಯುಪಿಎ ಸರ್ಕಾರ ಹೈದ್ರಾಬಾದ ಕರ್ನಾಟಕದ 6 ಜಿಲ್ಲೆಗಳಿಗೆ ಸಂವಿಧಾನದ 371ನೇ ಕಲಂ ಅನ್ವಯ ವಿಶೇಷ ಸ್ಥಾನಮಾನ ನೀಡಲು ನಿರ್ಧರಿಸಿದ್ದು ಸ್ವಾಗತಾರ್ಹ. 1948ರ ಹೈದ್ರಾಬಾದ್ ವಿಮೋಚನೆಯ ನಂತರ ತೆಲಂಗಾಣ ಹಾಗೂ ವಿದರ್ಭ ಜೊತೆಗೆ ನೀಡಬೇಕಿತ್ತು. ತಡವಾಗಿಯಾದರೂ ಈ ಕುರಿತು ನಿರ್ಧರಿಸಿದ್ದು ಸಂತಸದ ವಿಚಾರ.<br /> <br /> ವಿಜಾಪುರವು ಸಹ ಮುಂಬೈ ಕರ್ನಾಟಕದ ಅತ್ಯಂತ ಹಿಂದುಳಿದ ಮತ್ತು ಬರದ ಜಿಲ್ಲೆ. ಈ ಜಿಲ್ಲೆ ಹಾಗೂ ಜಿಲ್ಲೆಗೆ ಅಂಟಿಕೊಂಡಿರುವ ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೂ ಪ್ರಾಕೃತಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳಲ್ಲಿ ಹೆಚ್ಚಿನ ವ್ಯತ್ಯಾಸಗಳಿಲ್ಲ. ಗುಲಬರ್ಗಾ ವಿಭಾಗಕ್ಕೆ ಈಗಾಗಲೇ ಜಿಲ್ಲೆಯ ನ್ಯಾಯಾಂಗ ಹಾಗೂ ಸಾರಿಗೆ ಇಲಾಖೆಯನ್ನು ಸೇರಿಸಲಾಗಿದೆ. <br /> <br /> ವಿಜಾಪುರ ಜಿಲ್ಲೆಯಲ್ಲಿಯೂ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಹಾಗೂ ಪರಿಶಿಷ್ಟ ವರ್ಗಗಳ ಸಂಖ್ಯೆವು ಗಣನೀಯ ಪ್ರಮಾಣದಲ್ಲಿದೆ. ಗುಲಬರ್ಗಾ ನಂತರ ಲಂಬಾಣಿ ತಾಂಡಾಗಳ ಸಂಖ್ಯೆ ಹೆಚ್ಚಿರುವುದು ವಿಜಾಪುರದಲ್ಲಿ.<br /> <br /> ಕಳೆದ ವರ್ಷ ರಾಜ್ಯ ಸರ್ಕಾರವೇ ಪ್ರಕಟಿಸಿದ ಮಾನವ ಅಭಿವೃದ್ಧಿ ಸೂಚ್ಯಂಕದ ಪ್ರಕಾರ ವಿಜಾಪುರ ಜಿಲ್ಲೆಯಲ್ಲಿ ದಲಿತರು ಮತ್ತು ಮೇಲ್ವರ್ಗದವರ ನಡುವಿನ ಶೈಕ್ಷಣಿಕ ಮಟ್ಟದ ವ್ಯತ್ಯಾಸ ಅತ್ಯಂತ ಕೆಳಮಟ್ಟದಲ್ಲಿದೆ. <br /> <br /> ವಿಶೇಷ ಸ್ಥಾನಮಾನವು ಶೈಕ್ಷಣಿಕ ಮತ್ತು ಔದ್ಯೋಗಿಕ ಮೀಸಲಾತಿ ಒದಗಿಸುವುದರಿಂದ ಈ ಜಿಲ್ಲೆಯ ಅಲ್ಪಸಂಖ್ಯಾತರು ಮತ್ತು ದಲಿತರ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳು ಸುಧಾರಿಸಲು ಸಾಧ್ಯ. ರಾಜ್ಯ ಸರ್ಕಾರ ತಕ್ಷಣ ಅಂಕಿ ಸಂಖ್ಯೆಯ ದಾಖಲೆಗಳ ಸಮೇತ ಕೇಂದ್ರಕ್ಕೆ ಶಿಫಾರಸು ಮಾಡುವುದರ ಮೂಲಕ ಈ ಜಿಲ್ಲೆಗೂ ಸಾಮಾಜಿಕ ನ್ಯಾಯವನ್ನು ಒದಗಿಸಬೇಕು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೇಂದ್ರದ ಯುಪಿಎ ಸರ್ಕಾರ ಹೈದ್ರಾಬಾದ ಕರ್ನಾಟಕದ 6 ಜಿಲ್ಲೆಗಳಿಗೆ ಸಂವಿಧಾನದ 371ನೇ ಕಲಂ ಅನ್ವಯ ವಿಶೇಷ ಸ್ಥಾನಮಾನ ನೀಡಲು ನಿರ್ಧರಿಸಿದ್ದು ಸ್ವಾಗತಾರ್ಹ. 1948ರ ಹೈದ್ರಾಬಾದ್ ವಿಮೋಚನೆಯ ನಂತರ ತೆಲಂಗಾಣ ಹಾಗೂ ವಿದರ್ಭ ಜೊತೆಗೆ ನೀಡಬೇಕಿತ್ತು. ತಡವಾಗಿಯಾದರೂ ಈ ಕುರಿತು ನಿರ್ಧರಿಸಿದ್ದು ಸಂತಸದ ವಿಚಾರ.<br /> <br /> ವಿಜಾಪುರವು ಸಹ ಮುಂಬೈ ಕರ್ನಾಟಕದ ಅತ್ಯಂತ ಹಿಂದುಳಿದ ಮತ್ತು ಬರದ ಜಿಲ್ಲೆ. ಈ ಜಿಲ್ಲೆ ಹಾಗೂ ಜಿಲ್ಲೆಗೆ ಅಂಟಿಕೊಂಡಿರುವ ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೂ ಪ್ರಾಕೃತಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳಲ್ಲಿ ಹೆಚ್ಚಿನ ವ್ಯತ್ಯಾಸಗಳಿಲ್ಲ. ಗುಲಬರ್ಗಾ ವಿಭಾಗಕ್ಕೆ ಈಗಾಗಲೇ ಜಿಲ್ಲೆಯ ನ್ಯಾಯಾಂಗ ಹಾಗೂ ಸಾರಿಗೆ ಇಲಾಖೆಯನ್ನು ಸೇರಿಸಲಾಗಿದೆ. <br /> <br /> ವಿಜಾಪುರ ಜಿಲ್ಲೆಯಲ್ಲಿಯೂ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಹಾಗೂ ಪರಿಶಿಷ್ಟ ವರ್ಗಗಳ ಸಂಖ್ಯೆವು ಗಣನೀಯ ಪ್ರಮಾಣದಲ್ಲಿದೆ. ಗುಲಬರ್ಗಾ ನಂತರ ಲಂಬಾಣಿ ತಾಂಡಾಗಳ ಸಂಖ್ಯೆ ಹೆಚ್ಚಿರುವುದು ವಿಜಾಪುರದಲ್ಲಿ.<br /> <br /> ಕಳೆದ ವರ್ಷ ರಾಜ್ಯ ಸರ್ಕಾರವೇ ಪ್ರಕಟಿಸಿದ ಮಾನವ ಅಭಿವೃದ್ಧಿ ಸೂಚ್ಯಂಕದ ಪ್ರಕಾರ ವಿಜಾಪುರ ಜಿಲ್ಲೆಯಲ್ಲಿ ದಲಿತರು ಮತ್ತು ಮೇಲ್ವರ್ಗದವರ ನಡುವಿನ ಶೈಕ್ಷಣಿಕ ಮಟ್ಟದ ವ್ಯತ್ಯಾಸ ಅತ್ಯಂತ ಕೆಳಮಟ್ಟದಲ್ಲಿದೆ. <br /> <br /> ವಿಶೇಷ ಸ್ಥಾನಮಾನವು ಶೈಕ್ಷಣಿಕ ಮತ್ತು ಔದ್ಯೋಗಿಕ ಮೀಸಲಾತಿ ಒದಗಿಸುವುದರಿಂದ ಈ ಜಿಲ್ಲೆಯ ಅಲ್ಪಸಂಖ್ಯಾತರು ಮತ್ತು ದಲಿತರ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳು ಸುಧಾರಿಸಲು ಸಾಧ್ಯ. ರಾಜ್ಯ ಸರ್ಕಾರ ತಕ್ಷಣ ಅಂಕಿ ಸಂಖ್ಯೆಯ ದಾಖಲೆಗಳ ಸಮೇತ ಕೇಂದ್ರಕ್ಕೆ ಶಿಫಾರಸು ಮಾಡುವುದರ ಮೂಲಕ ಈ ಜಿಲ್ಲೆಗೂ ಸಾಮಾಜಿಕ ನ್ಯಾಯವನ್ನು ಒದಗಿಸಬೇಕು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>