<p><strong>ಬೆಂಗಳೂರು: `</strong>ಇತರೆ ವಿಶ್ವವಿದ್ಯಾಲಯಗಳು ಕಲಿಸದ ಶಿಸ್ತು, ಸಂಯಮ ಮತ್ತು ತಾಳ್ಮೆಯನ್ನು ಬಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಕಲಿಸುತ್ತಿದೆ. ವಿಶ್ವವಿದ್ಯಾಲಯವೆಂಬ ಕಲ್ಪನೆಯೇ ವಿದೇಶದ್ದಾದರೂ ಇಲ್ಲಿ ನೆಲೆಗೊಂಡಿರುವ ಅಧ್ಯಾತ್ಮಕ್ಕೆ ದೇಸಿಯ ಗುಣವಿದೆ~ ಎಂದು ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಹೇಳಿದರು.<br /> <br /> ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ನಗರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. <br /> <br /> `ಪ್ರಸ್ತುತ ರಾಜ್ಯದಲ್ಲಿ ಇರುವ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬಿತ್ತುವ ಕಾರ್ಯವನ್ನು ನಡೆಸುತ್ತಿಲ್ಲ ಎಂಬುದೇ ದುರಂತದ ಸಂಗತಿ. ಬದುಕಿನ ಒಳನೋಟಗಳನ್ನು ಗ್ರಹಿಸಲು ಸಾಧ್ಯವಾಗದೇ ಇರುವ ಬೋಧನೆ, ಪಾಠ ಪ್ರವಚನಗಳ ಅಗತ್ಯವಿದೆಯೇ?~ ಎಂದು ಪ್ರಶ್ನಿಸಿದರು.<br /> <br /> `ವಿದೇಶಿಯರ ಪ್ರಭಾವ ಹೇಗಿದೆಯೆಂದರೆ ಈ ನೆಲದ ಪ್ರತಿ ಕಣವನ್ನು ನಕಾರತ್ಮಕ ದೃಷ್ಟಿಕೋನದಿಂದಲೇ ತರ್ಕಿಸಲು ಆರಂಭಿಸುತ್ತೇವೆ. ಎಲ್ಲ ಕಲ್ಪನೆಗಳನ್ನು ಮೂಢನಂಬಿಕೆಗಳ ಮಾಪನದಲ್ಲಿ ಅಳೆದು ತೂಗುತ್ತೇವೆ. ಆದರೆ ಪಾಶ್ಚಿಮಾತ್ಯರ ಸಂಸ್ಕೃತಿಯಲ್ಲಿ ಹಲವು ಭಿನ್ನತೆ ಮತ್ತು ಮೌಢ್ಯವೆನಿಸುವ ನಂಬಿಕೆಗಳು ಒಳಗೊಂಡಿದೆ ಎಂಬುದನ್ನು ಮರೆಯಬಾರದು~ ಎಂದು ತಿಳಿಸಿದರು.<br /> <br /> ಸನ್ಮಾನ ಸ್ವೀಕರಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ, `ವಿದ್ಯಾ ಗುರುಗಳಾದ ಕಂಬಾರ ಅವರೊಂದಿಗೆ ಸನ್ಮಾನ ಮಾಡಿಸಿಕೊಳ್ಳುತ್ತಿರುವುದು ಅತೀವ ಸಂತಸ ತಂದಿದೆ~ ಎಂದು ಹರ್ಷ ವ್ಯಕ್ತಪಡಿಸಿದರು.<br /> <br /> ಕಾರ್ಯಕ್ರಮದಲ್ಲಿ ರಂಗಕರ್ಮಿ ಕೆ.ವಿ.ನಾಗರಾಜಮೂರ್ತಿ, ರಾಜಯೋಗಿನಿಯರಾದ ಬಿ.ಕೆ.ವೀಣಾ, ಬಿ.ಕೆ.ಸರಳಾ ದಾದೀಜಿ, ` ಸಂಗೀತಗಂಗಾ~ ಸಂಸ್ಥೆಯ ಸಂಚಾಲಕಿ ಹೇಮಾಪ್ರಸಾದ್ ಮತ್ತು ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: `</strong>ಇತರೆ ವಿಶ್ವವಿದ್ಯಾಲಯಗಳು ಕಲಿಸದ ಶಿಸ್ತು, ಸಂಯಮ ಮತ್ತು ತಾಳ್ಮೆಯನ್ನು ಬಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಕಲಿಸುತ್ತಿದೆ. ವಿಶ್ವವಿದ್ಯಾಲಯವೆಂಬ ಕಲ್ಪನೆಯೇ ವಿದೇಶದ್ದಾದರೂ ಇಲ್ಲಿ ನೆಲೆಗೊಂಡಿರುವ ಅಧ್ಯಾತ್ಮಕ್ಕೆ ದೇಸಿಯ ಗುಣವಿದೆ~ ಎಂದು ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಹೇಳಿದರು.<br /> <br /> ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ನಗರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. <br /> <br /> `ಪ್ರಸ್ತುತ ರಾಜ್ಯದಲ್ಲಿ ಇರುವ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬಿತ್ತುವ ಕಾರ್ಯವನ್ನು ನಡೆಸುತ್ತಿಲ್ಲ ಎಂಬುದೇ ದುರಂತದ ಸಂಗತಿ. ಬದುಕಿನ ಒಳನೋಟಗಳನ್ನು ಗ್ರಹಿಸಲು ಸಾಧ್ಯವಾಗದೇ ಇರುವ ಬೋಧನೆ, ಪಾಠ ಪ್ರವಚನಗಳ ಅಗತ್ಯವಿದೆಯೇ?~ ಎಂದು ಪ್ರಶ್ನಿಸಿದರು.<br /> <br /> `ವಿದೇಶಿಯರ ಪ್ರಭಾವ ಹೇಗಿದೆಯೆಂದರೆ ಈ ನೆಲದ ಪ್ರತಿ ಕಣವನ್ನು ನಕಾರತ್ಮಕ ದೃಷ್ಟಿಕೋನದಿಂದಲೇ ತರ್ಕಿಸಲು ಆರಂಭಿಸುತ್ತೇವೆ. ಎಲ್ಲ ಕಲ್ಪನೆಗಳನ್ನು ಮೂಢನಂಬಿಕೆಗಳ ಮಾಪನದಲ್ಲಿ ಅಳೆದು ತೂಗುತ್ತೇವೆ. ಆದರೆ ಪಾಶ್ಚಿಮಾತ್ಯರ ಸಂಸ್ಕೃತಿಯಲ್ಲಿ ಹಲವು ಭಿನ್ನತೆ ಮತ್ತು ಮೌಢ್ಯವೆನಿಸುವ ನಂಬಿಕೆಗಳು ಒಳಗೊಂಡಿದೆ ಎಂಬುದನ್ನು ಮರೆಯಬಾರದು~ ಎಂದು ತಿಳಿಸಿದರು.<br /> <br /> ಸನ್ಮಾನ ಸ್ವೀಕರಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ, `ವಿದ್ಯಾ ಗುರುಗಳಾದ ಕಂಬಾರ ಅವರೊಂದಿಗೆ ಸನ್ಮಾನ ಮಾಡಿಸಿಕೊಳ್ಳುತ್ತಿರುವುದು ಅತೀವ ಸಂತಸ ತಂದಿದೆ~ ಎಂದು ಹರ್ಷ ವ್ಯಕ್ತಪಡಿಸಿದರು.<br /> <br /> ಕಾರ್ಯಕ್ರಮದಲ್ಲಿ ರಂಗಕರ್ಮಿ ಕೆ.ವಿ.ನಾಗರಾಜಮೂರ್ತಿ, ರಾಜಯೋಗಿನಿಯರಾದ ಬಿ.ಕೆ.ವೀಣಾ, ಬಿ.ಕೆ.ಸರಳಾ ದಾದೀಜಿ, ` ಸಂಗೀತಗಂಗಾ~ ಸಂಸ್ಥೆಯ ಸಂಚಾಲಕಿ ಹೇಮಾಪ್ರಸಾದ್ ಮತ್ತು ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>