<p><strong>ಚಿಂತಾಮಣಿ: </strong>ಕಾಲೇಜು ವಿದ್ಯಾರ್ಥಿನಿ ಅಪಹರಣಕ್ಕೆ ವಿಫಲ ಯತ್ನ ನಡೆಸಿದ ಘಟನೆ ಶನಿವಾರ ನಗರದ ಮಹಿಳಾ ಕಾಲೇಜಿನ ಬಳಿ ನಡೆದಿದೆ. ನಗರದ ಮಹಿಳಾ ಪದವಿ ಕಾಲೇಜು ಗೇಟ್ ಬಳಿ ಅಪಹರಣಕಾರರಿಂದ ತಪ್ಪಿಸಿಕೊಂಡ ವಿದ್ಯಾರ್ಥಿನಿ ಸೌಂದರ್ಯ, ನಗರಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.<br /> <br /> ಮಹಿಳಾ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಕಾಂ., ವ್ಯಾಸಂಗ ಮಾಡುತ್ತಿರುವ ಸೌಂದರ್ಯ ಬೆಳಿಗ್ಗೆ ತನ್ನ ಸ್ವಗ್ರಾಮ ತುಳುವನೂರಿನಿಂದ ಕಾಲೇಜಿಗೆ ಬರುತ್ತಿದ್ದಾಗ ಅದೇ ಗ್ರಾಮದ ಶ್ರಿಧರರೆಡ್ಡಿ ಅಪಹರಣದ ಯತ್ನ ನಡೆಸಿದ್ದಾನೆ.<br /> <br /> ಕಾಲೇಜು ಗೇಟ್ ಬಳಿ ತೆರಳುತ್ತಿದ್ದ ವೇಳೆ ಶ್ರಿಧರರೆಡ್ಡಿ ಮತ್ತು ಸಹಚರರು ಹಿಂದಿನಿಂದ ಕಾರಿನಲ್ಲಿ ಬಂದು ಏಕಾಏಕಿ ಹತ್ತಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ವಿದ್ಯಾರ್ಥಿನಿ ತಕ್ಷಣ ಕೂಗಾಡಿದ್ದಾಳೆ. ಕೂಗಾಟ ಕೇಳಿ ಸುತ್ತಮುತ್ತಲಿದ್ದ ಸಾರ್ವಜನಿಕರು ಕಾರಿನ ಹತ್ತಿರಕ್ಕೆ ಓಡಿ ಬಂದಿದ್ದಾರೆ.<br /> <br /> ಸಾರ್ವಜನಿಕರನ್ನು ಕಂಡ ಶ್ರಿಧರರೆಡ್ಡಿ ಮತ್ತು ಸಹಚರರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಚಾಲಕ ರಮೇಶ್ ಎಂಬುವವನನ್ನು ಹಿಡಿಯುವಲ್ಲಿ ಸಾರ್ವಜನಿಕರು ಯಶಸ್ವಿಯಾಗಿದ್ದಾರೆ. ಕಾರನ್ನು, ಚಾಲಕ ರಮೇಶನನ್ನು ನಗರ ಠಾಣೆಗೆ ಒಪ್ಪಿಸಿದ್ದಾರೆ.<br /> <br /> ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ. ರಮೇಶನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಇತರರರ ಬಂಧನಕ್ಕೆ ಬಲೆ ಬೀಸಿದ್ದಾರೆ.<br /> <strong><br /> ಘಟನೆಯ ಹಿನ್ನೆಲೆ:</strong> ಶ್ರಿಧರರೆಡ್ಡಿ ತನ್ನನ್ನು ಪ್ರೀತಿಸುವಂತೆ ಹಿಂದೆ ಬಿದ್ದು ಪೀಡಿಸುತ್ತಿದ್ದ. ಈ ವಿಷಯವನ್ನು ಪೋಷಕರಿಗೂ ಸಹ ತಿಳಿಸಿದ್ದು, ಪಂಚಾಯಿತಿ ನಡೆಸಿ ಆತನಿಗೆ ಬುದ್ಧಿವಾದ ಹೇಳಿದ್ದರು. ಆದರೂ ಚಾಳಿ ಬಿಡದೆ ಆಕೆಗೆ ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ತಿಳಿದು ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂತಾಮಣಿ: </strong>ಕಾಲೇಜು ವಿದ್ಯಾರ್ಥಿನಿ ಅಪಹರಣಕ್ಕೆ ವಿಫಲ ಯತ್ನ ನಡೆಸಿದ ಘಟನೆ ಶನಿವಾರ ನಗರದ ಮಹಿಳಾ ಕಾಲೇಜಿನ ಬಳಿ ನಡೆದಿದೆ. ನಗರದ ಮಹಿಳಾ ಪದವಿ ಕಾಲೇಜು ಗೇಟ್ ಬಳಿ ಅಪಹರಣಕಾರರಿಂದ ತಪ್ಪಿಸಿಕೊಂಡ ವಿದ್ಯಾರ್ಥಿನಿ ಸೌಂದರ್ಯ, ನಗರಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.<br /> <br /> ಮಹಿಳಾ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಕಾಂ., ವ್ಯಾಸಂಗ ಮಾಡುತ್ತಿರುವ ಸೌಂದರ್ಯ ಬೆಳಿಗ್ಗೆ ತನ್ನ ಸ್ವಗ್ರಾಮ ತುಳುವನೂರಿನಿಂದ ಕಾಲೇಜಿಗೆ ಬರುತ್ತಿದ್ದಾಗ ಅದೇ ಗ್ರಾಮದ ಶ್ರಿಧರರೆಡ್ಡಿ ಅಪಹರಣದ ಯತ್ನ ನಡೆಸಿದ್ದಾನೆ.<br /> <br /> ಕಾಲೇಜು ಗೇಟ್ ಬಳಿ ತೆರಳುತ್ತಿದ್ದ ವೇಳೆ ಶ್ರಿಧರರೆಡ್ಡಿ ಮತ್ತು ಸಹಚರರು ಹಿಂದಿನಿಂದ ಕಾರಿನಲ್ಲಿ ಬಂದು ಏಕಾಏಕಿ ಹತ್ತಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ವಿದ್ಯಾರ್ಥಿನಿ ತಕ್ಷಣ ಕೂಗಾಡಿದ್ದಾಳೆ. ಕೂಗಾಟ ಕೇಳಿ ಸುತ್ತಮುತ್ತಲಿದ್ದ ಸಾರ್ವಜನಿಕರು ಕಾರಿನ ಹತ್ತಿರಕ್ಕೆ ಓಡಿ ಬಂದಿದ್ದಾರೆ.<br /> <br /> ಸಾರ್ವಜನಿಕರನ್ನು ಕಂಡ ಶ್ರಿಧರರೆಡ್ಡಿ ಮತ್ತು ಸಹಚರರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಚಾಲಕ ರಮೇಶ್ ಎಂಬುವವನನ್ನು ಹಿಡಿಯುವಲ್ಲಿ ಸಾರ್ವಜನಿಕರು ಯಶಸ್ವಿಯಾಗಿದ್ದಾರೆ. ಕಾರನ್ನು, ಚಾಲಕ ರಮೇಶನನ್ನು ನಗರ ಠಾಣೆಗೆ ಒಪ್ಪಿಸಿದ್ದಾರೆ.<br /> <br /> ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ. ರಮೇಶನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಇತರರರ ಬಂಧನಕ್ಕೆ ಬಲೆ ಬೀಸಿದ್ದಾರೆ.<br /> <strong><br /> ಘಟನೆಯ ಹಿನ್ನೆಲೆ:</strong> ಶ್ರಿಧರರೆಡ್ಡಿ ತನ್ನನ್ನು ಪ್ರೀತಿಸುವಂತೆ ಹಿಂದೆ ಬಿದ್ದು ಪೀಡಿಸುತ್ತಿದ್ದ. ಈ ವಿಷಯವನ್ನು ಪೋಷಕರಿಗೂ ಸಹ ತಿಳಿಸಿದ್ದು, ಪಂಚಾಯಿತಿ ನಡೆಸಿ ಆತನಿಗೆ ಬುದ್ಧಿವಾದ ಹೇಳಿದ್ದರು. ಆದರೂ ಚಾಳಿ ಬಿಡದೆ ಆಕೆಗೆ ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ತಿಳಿದು ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>