<p>ನವದೆಹಲಿ: ಬೇಸಿಗೆಯ ಬಿಸಿ ಏರುತ್ತಿದ್ದಂತೆ ಗ್ರಾಹಕರಿಗೆ ವಿದ್ಯುತ್ ದರ ಏರಿಕೆಯ ಬರೆಯೂ ಬೀಳಲಿದೆ. ದೇಶದಾದ್ಯಂತ ವಿದ್ಯುತ್ ಸರಬರಾಜು ಸಂಸ್ಥೆಗಳು ನಷ್ಟ ಭರಿಸಿಕೊಳ್ಳಲು ವಿದ್ಯುತ್ ದರ ಏರಿಕೆಗೆ ಮುಂದಾಗಿವೆ.<br /> <br /> ಕೇಂದ್ರ ವಿದ್ಯುತ್ ನಿಯಂತ್ರಣ ಆಯೋಗ (ಸಿಇಆರ್ಸಿ) ಹಾಗೂ ಕೇಂದ್ರ ಇಂಧನ ಸಚಿವಾಲಯಗಳು ರಾಜ್ಯಗಳ ವಿದ್ಯುತ್ ಮಂಡಳಿಗಳು ಹಾಗೂ ವಿದ್ಯುತ್ ಸರಬರಾಜು ಸಂಸ್ಥೆಗಳಿಗೆ ಹೆಚ್ಚುತ್ತಿರುವ ನಷ್ಟ ತುಂಬಿಕೊಳ್ಳುವಂತೆ ಸೂಚನೆ ನೀಡಿವೆ.<br /> <br /> ಈ ಹಿನ್ನೆಲೆಯಲ್ಲಿ ಹಲವು ರಾಜ್ಯ ಸರ್ಕಾರಗಳು ಭಾರಿ ಪ್ರಮಾಣದಲ್ಲಿ ವಿದ್ಯುತ್ ದರ ಏರಿಸುತ್ತಿವೆ.<br /> ಕಳೆದ 18 ತಿಂಗಳಲ್ಲಿ 24 ರಾಜ್ಯಗಳು ವಿದ್ಯುತ್ ದರದಲ್ಲಿ ಶೇ 20ರಿಂದ ಶೇ 37ರವರೆಗೆ ಏರಿಕೆ ಮಾಡಿವೆ. <br /> <br /> ಇತ್ತೀಚೆಗಷ್ಟೇ ತಮಿಳುನಾಡು ಹಿಂದಿದ್ದ ದರಕ್ಕಿಂತ ಶೇ 37ರಷ್ಟು ವಿದ್ಯುತ್ ದರ ಏರಿಸಿದೆ. ಬಿಹಾರ, ರಾಜಸ್ತಾನ, ಮಧ್ಯಪ್ರದೇಶಗಳ ಸಹ ಶುಲ್ಕ ಏರಿಸಿವೆ. ಕರ್ನಾಟಕ, ತ್ರಿಪುರಾ ಹಾಗೂ ಪಂಜಾಬ್ ದರ ಏರಿಕೆಯ ಪ್ರಸ್ತಾಪವನ್ನು ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಕಳುಹಿಸಿವೆ.<br /> <br /> ಬಹುತೇಕ ಎಲ್ಲ ರಾಜ್ಯಗಳ ವಿದ್ಯುತ್ ಮಂಡಳಿಗಳ ಹಾಗೂ ವಿದ್ಯುತ್ ಸರಬರಾಜು ಸಂಸ್ಥೆಗಳ ಸ್ಥಿತಿ ಗಂಭೀರವಾಗಿದೆ. ಒಟ್ಟಾರೆ ನಷ್ಟದ ಬಾಕಿ ರೂ 1.16 ಲಕ್ಷ ಕೋಟಿಗಳಷ್ಟಿರುವುದರಿಂದ ವಿದ್ಯುತ್ ದರ ಏರಿಸುವುದು ಅನಿವಾರ್ಯವಾಗಿದೆ ಎಂದು ಇಂಧನ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.<br /> <br /> ಕಲ್ಲಿದ್ದಲು ಹಾಗೂ ಅನಿಲದ ಕೊರತೆಯಿಂದ ವಿದ್ಯುತ್ ಖರೀದಿ ದರವೂ ಏರುತ್ತಿದ್ದು, ವಿದ್ಯುತ್ ಸರಬರಾಜು ಕಂಪೆನಿಗಳು ಉಳಿದುಕೊಳ್ಳಬೇಕಾದರೆ ದರ ಏರಿಕೆ ಅನಿವಾರ್ಯವಾಗಿದೆ ಎಂದೂ ಈ ಅಧಿಕಾರಿ ಹೇಳಿದ್ದಾರೆ.<br /> <br /> ವಿದ್ಯುತ್ ಉತ್ಪಾದನೆಯ ವೆಚ್ಚ ಏರಿದಂತೆ ದರ ಪರಿಷ್ಕರಿಸುವ ಅಧಿಕಾರವೂ ವಿದ್ಯುತ್ ಸರಬರಾಜು ಸಂಸ್ಥೆಗಳಿಗೆ ಇರಬೇಕು. ವಿದ್ಯುತ್ ದರ ಏರಿಕೆ, ಮಾರುಕಟ್ಟೆಗೆ ಅನುಗುಣವಾಗಿ ಇರಬೇಕೇ ಹೊರತೂ ಅದು ರಾಜಕೀಯ ನಿರ್ಧಾರವಾಗಬಾರದು ಎಂದು ಮತ್ತೊಬ್ಬ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ. <br /> <br /> ವಿದ್ಯುತ್ ಸರಬರಾಜು ಕಂಪೆನಿಗಳ ಆರ್ಥಿಕ ಸ್ಥಿತಿ ಕುರಿತು ಕಳೆದ ವರ್ಷಾಂತ್ಯದಲ್ಲಿ ಸಲಹೆ ನೀಡಿದ್ದ ಶುಂಗ್ಲು ಸಮಿತಿ ಈ ಕಂಪೆನಿಗಳ ನಷ್ಟ ಸರಿದೂಗಿಸಲು ವಿಶೇಷ ನಿಧಿ ಸ್ಥಾಪಿಸುವಂತೆ ಶಿಫಾರಸು ಮಾಡಿತ್ತು.<br /> <br /> ಈ ಕಂಪೆನಿಗಳ ಸ್ಥಿತಿಗತಿಯಿಂದ ಚಿಂತಿತರಾಗಿದ್ದ ಕೇಂದ್ರ ವಿದ್ಯುತ್ ಸಚಿವ ಸುಶೀಲ್ಕುಮಾರ್ ಶಿಂಧೆ ಸಹ ಕೇಂದ್ರ ಸರ್ಕಾರ ಅವುಗಳಿಗೆ ಆರ್ಥಿಕ ಪ್ಯಾಕೇಜ್ ನೀಡಲು ಯೋಜಿಸುತ್ತಿದೆ ಎಂದಿದ್ದರು.<br /> <br /> 12ನೇ ಪಂಚ ವಾರ್ಷಿಕ ಯೋಜನೆಯ ಕರಡಿನಲ್ಲಿ ವಿದ್ಯುತ್ ಸಚಿವಾಲಯ, ವಿದ್ಯುತ್ ಕಾಯ್ದೆಗೆ ತಿದ್ದಪಡಿ ತಂದು ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗಗಳಿಗೆ ದರ ನಿರ್ಧರಿಸುವ ಅಧಿಕಾರ ನೀಡಬೇಕು ಎಂದು ಸಲಹೆ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ: ಬೇಸಿಗೆಯ ಬಿಸಿ ಏರುತ್ತಿದ್ದಂತೆ ಗ್ರಾಹಕರಿಗೆ ವಿದ್ಯುತ್ ದರ ಏರಿಕೆಯ ಬರೆಯೂ ಬೀಳಲಿದೆ. ದೇಶದಾದ್ಯಂತ ವಿದ್ಯುತ್ ಸರಬರಾಜು ಸಂಸ್ಥೆಗಳು ನಷ್ಟ ಭರಿಸಿಕೊಳ್ಳಲು ವಿದ್ಯುತ್ ದರ ಏರಿಕೆಗೆ ಮುಂದಾಗಿವೆ.<br /> <br /> ಕೇಂದ್ರ ವಿದ್ಯುತ್ ನಿಯಂತ್ರಣ ಆಯೋಗ (ಸಿಇಆರ್ಸಿ) ಹಾಗೂ ಕೇಂದ್ರ ಇಂಧನ ಸಚಿವಾಲಯಗಳು ರಾಜ್ಯಗಳ ವಿದ್ಯುತ್ ಮಂಡಳಿಗಳು ಹಾಗೂ ವಿದ್ಯುತ್ ಸರಬರಾಜು ಸಂಸ್ಥೆಗಳಿಗೆ ಹೆಚ್ಚುತ್ತಿರುವ ನಷ್ಟ ತುಂಬಿಕೊಳ್ಳುವಂತೆ ಸೂಚನೆ ನೀಡಿವೆ.<br /> <br /> ಈ ಹಿನ್ನೆಲೆಯಲ್ಲಿ ಹಲವು ರಾಜ್ಯ ಸರ್ಕಾರಗಳು ಭಾರಿ ಪ್ರಮಾಣದಲ್ಲಿ ವಿದ್ಯುತ್ ದರ ಏರಿಸುತ್ತಿವೆ.<br /> ಕಳೆದ 18 ತಿಂಗಳಲ್ಲಿ 24 ರಾಜ್ಯಗಳು ವಿದ್ಯುತ್ ದರದಲ್ಲಿ ಶೇ 20ರಿಂದ ಶೇ 37ರವರೆಗೆ ಏರಿಕೆ ಮಾಡಿವೆ. <br /> <br /> ಇತ್ತೀಚೆಗಷ್ಟೇ ತಮಿಳುನಾಡು ಹಿಂದಿದ್ದ ದರಕ್ಕಿಂತ ಶೇ 37ರಷ್ಟು ವಿದ್ಯುತ್ ದರ ಏರಿಸಿದೆ. ಬಿಹಾರ, ರಾಜಸ್ತಾನ, ಮಧ್ಯಪ್ರದೇಶಗಳ ಸಹ ಶುಲ್ಕ ಏರಿಸಿವೆ. ಕರ್ನಾಟಕ, ತ್ರಿಪುರಾ ಹಾಗೂ ಪಂಜಾಬ್ ದರ ಏರಿಕೆಯ ಪ್ರಸ್ತಾಪವನ್ನು ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಕಳುಹಿಸಿವೆ.<br /> <br /> ಬಹುತೇಕ ಎಲ್ಲ ರಾಜ್ಯಗಳ ವಿದ್ಯುತ್ ಮಂಡಳಿಗಳ ಹಾಗೂ ವಿದ್ಯುತ್ ಸರಬರಾಜು ಸಂಸ್ಥೆಗಳ ಸ್ಥಿತಿ ಗಂಭೀರವಾಗಿದೆ. ಒಟ್ಟಾರೆ ನಷ್ಟದ ಬಾಕಿ ರೂ 1.16 ಲಕ್ಷ ಕೋಟಿಗಳಷ್ಟಿರುವುದರಿಂದ ವಿದ್ಯುತ್ ದರ ಏರಿಸುವುದು ಅನಿವಾರ್ಯವಾಗಿದೆ ಎಂದು ಇಂಧನ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.<br /> <br /> ಕಲ್ಲಿದ್ದಲು ಹಾಗೂ ಅನಿಲದ ಕೊರತೆಯಿಂದ ವಿದ್ಯುತ್ ಖರೀದಿ ದರವೂ ಏರುತ್ತಿದ್ದು, ವಿದ್ಯುತ್ ಸರಬರಾಜು ಕಂಪೆನಿಗಳು ಉಳಿದುಕೊಳ್ಳಬೇಕಾದರೆ ದರ ಏರಿಕೆ ಅನಿವಾರ್ಯವಾಗಿದೆ ಎಂದೂ ಈ ಅಧಿಕಾರಿ ಹೇಳಿದ್ದಾರೆ.<br /> <br /> ವಿದ್ಯುತ್ ಉತ್ಪಾದನೆಯ ವೆಚ್ಚ ಏರಿದಂತೆ ದರ ಪರಿಷ್ಕರಿಸುವ ಅಧಿಕಾರವೂ ವಿದ್ಯುತ್ ಸರಬರಾಜು ಸಂಸ್ಥೆಗಳಿಗೆ ಇರಬೇಕು. ವಿದ್ಯುತ್ ದರ ಏರಿಕೆ, ಮಾರುಕಟ್ಟೆಗೆ ಅನುಗುಣವಾಗಿ ಇರಬೇಕೇ ಹೊರತೂ ಅದು ರಾಜಕೀಯ ನಿರ್ಧಾರವಾಗಬಾರದು ಎಂದು ಮತ್ತೊಬ್ಬ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ. <br /> <br /> ವಿದ್ಯುತ್ ಸರಬರಾಜು ಕಂಪೆನಿಗಳ ಆರ್ಥಿಕ ಸ್ಥಿತಿ ಕುರಿತು ಕಳೆದ ವರ್ಷಾಂತ್ಯದಲ್ಲಿ ಸಲಹೆ ನೀಡಿದ್ದ ಶುಂಗ್ಲು ಸಮಿತಿ ಈ ಕಂಪೆನಿಗಳ ನಷ್ಟ ಸರಿದೂಗಿಸಲು ವಿಶೇಷ ನಿಧಿ ಸ್ಥಾಪಿಸುವಂತೆ ಶಿಫಾರಸು ಮಾಡಿತ್ತು.<br /> <br /> ಈ ಕಂಪೆನಿಗಳ ಸ್ಥಿತಿಗತಿಯಿಂದ ಚಿಂತಿತರಾಗಿದ್ದ ಕೇಂದ್ರ ವಿದ್ಯುತ್ ಸಚಿವ ಸುಶೀಲ್ಕುಮಾರ್ ಶಿಂಧೆ ಸಹ ಕೇಂದ್ರ ಸರ್ಕಾರ ಅವುಗಳಿಗೆ ಆರ್ಥಿಕ ಪ್ಯಾಕೇಜ್ ನೀಡಲು ಯೋಜಿಸುತ್ತಿದೆ ಎಂದಿದ್ದರು.<br /> <br /> 12ನೇ ಪಂಚ ವಾರ್ಷಿಕ ಯೋಜನೆಯ ಕರಡಿನಲ್ಲಿ ವಿದ್ಯುತ್ ಸಚಿವಾಲಯ, ವಿದ್ಯುತ್ ಕಾಯ್ದೆಗೆ ತಿದ್ದಪಡಿ ತಂದು ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗಗಳಿಗೆ ದರ ನಿರ್ಧರಿಸುವ ಅಧಿಕಾರ ನೀಡಬೇಕು ಎಂದು ಸಲಹೆ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>