<p><strong>ವಿಜಯಪುರ: </strong>`ರಾಷ್ಟ್ರದಲ್ಲಿ ಕ್ಷುಲ್ಲಕ ರಾಜಕಾರಣ ಮಾಡುವವರಿಗಿಂತಲೂ ರಾಜನೀತಿ ನಿಪುಣರ ಅಗತ್ಯವಿದೆ. ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ರಾಷ್ಟ್ರ ಎಂಬ ಮನೋಭಾವನೆಯು ರಾಜಕೀಯ ವ್ಯಕ್ತಿಗಳಲ್ಲಿ ಬೆಳೆಯಬೇಕಿದೆ~ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಹೇಳಿದರು. <br /> <br /> ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.`ಗಣಿಗಾರಿಕೆ ಮತ್ತು ಅದಿರು ಸಾಗಣೆ ಸುಂಕ ವಸೂಲಿಯಲ್ಲಿ ಸುಮಾರು 20 ಸಾವಿರ ಕೋಟಿ ರೂ.ನಷ್ಟವಾಗಿದೆ. ಆ ಕುರಿತು ಸುಪ್ರೀಂಕೋರ್ಟ್ ಕೂಡ 5 ಪಟ್ಟು ಅಧಿಕ ದಂಡ ವಸೂಲಿ ಮಾಡಲು ಆದೇಶಿಸಿದೆ.<br /> <br /> ಅದರಂತೆ ಸುಮಾರು ಒಂದು ಲಕ್ಷ 20 ಸಾವಿರ ಕೋಟಿ ರೂ.ಗಳನ್ನು ರೆಡ್ಡಿ ಸಹೋದರರಿಂದ ವಸೂಲಿ ಮಾಡಬೇಕು. ರಾಜ್ಯ ಅಭಿವೃದ್ಧಿ ಕಾರ್ಯಗಳಿಗೆ ಆಹಣವನ್ನು ಬಳಸಬೇಕು~ ಎಂದು ಅವರು ಆಗ್ರಹಿಸಿದರು.<br /> <br /> `ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲು ಬದ್ಧತೆ ಇದ್ದತೆ ಬಿಜೆಪಿ ಸರ್ಕಾರವು ಲೋಕಾಯುಕ್ತ ವರದಿಯನ್ನು ಸಂಪೂರ್ಣ ಅಂಗೀಕರಿಸಿ, ಅಕ್ರಮದಲ್ಲಿ ಪಾಲ್ಗೊಂಡ ಎಲ್ಲರ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಬೇಕು~ ಎಂದು ಅವರು ಒತ್ತಾಯಿಸಿದರು.<br /> <br /> `ಕಳೆದ ಮೂರೂ ಕಾಲು ವರ್ಷಗಳ ಆಡಳಿತಾವಧಿಯಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿನ ಯಾವೊಂದೂ ಭರವಸೆಯನ್ನು ಈಡೇರಿಸಲಾಗಿಲ್ಲ. 2 ರೂ.ಗೆ ಅಕ್ಕಿ ವಿತರಣೆ, ರೈತರಿಗೆ ನಿರಂತರ ವಿದ್ಯುತ್, ಪ್ರತಿವರ್ಷಕ್ಕೆ 3 ಲಕ್ಷ ನಿವೇಶನದಂತೆ 15 ಲಕ್ಷ ನಿವೇಶನಗಳ ಹಂಚಿಕೆಯಂತಹ ಯಾವ ಯೋಜನೆಯೂ ಕಾರ್ಯರೂಪಕ್ಕೆ ಬಂದಿಲ್ಲ~ ಎಂದು ಅವರು ಛೇಡಿಸಿದರು.<br /> <br /> `ಕೃಷಿಗಾಗಿ ಮಂಡಿಸಿದ ವಿಶೇಷ ಕೃಷಿ ಬಜೆಟ್ ಕೇವಲ ತೋರಿಕೆಯಾಗಿದ್ದು, ಆಯಾಯ ವಲಯಗಳಿಗೆ ನಿಗದಿಯಾದ ಅನುದಾನವನ್ನು ಬಿಡುಗಡೆ ಮಾಡಲಾಗಿಲ್ಲ. ನಿರುದ್ಯೋಗಿ ಭತ್ಯೆ ವಿತರಿಸಲಾಗಿಲ್ಲ. ರಾಜ್ಯದಲ್ಲಿ ವಿದ್ಯುತ್ ಉತ್ಟಾದನಾ ಪ್ರಮಾಣವನ್ನು ಹೆಚ್ಚಿಸಲು ಕ್ರಮ ಕೈಗೊಂಡಿಲ್ಲ~ ಎಂದು ಅವರು ಆರೋಪಿಸಿದರು.<br /> `ಬಂಡವಾಳ ಹೂಡಿಕೆದಾರರ ಸಮಾವೇಶದಿಂದ ಪ್ರಯೋಜನವಾಗಿಲ್ಲ. <br /> <br /> ಉದ್ಯೋಗ ಸೃಷ್ಟಿಗೆ ವಿಶೇಷ ಪ್ರಯತ್ನ ನಡೆಯಲಿಲ್ಲ. ರಾಜ್ಯದ ಗಡಿ ಒತ್ತುವರಿ, ಕೆಐಡಿಬಿ, ಬಿಡಿಎ, ಬಿಬಿಎಂಪಿ ಗಳಂತಹ ಎಲ್ಲಾ ಸಂಸ್ಥೆಗಳಿಂದ ಭ್ರಷ್ಟಾಚಾರ ನಡೆಯುತ್ತಿದೆ. ರಸ್ತೆ, ರೈಲ್ವೆ ಮತ್ತಿತರ ಮೂಲಸೌಕರ್ಯಗಳಿಗೆ ಕೇಂದ್ರದ ಸಿಆರ್ಎಫ್ ಅನುದಾನ ಹೊರತುಪಡಿಸಿ ಇನ್ನಾವುದೇ ಅನುದಾನ ಬಳಕೆಯಾಗಿಲ್ಲ~ ಎಂದು ಅವರು ದೂರಿದರು.<br /> <br /> `ಲೋಕಾಯುಕ್ತ ಸಂಸ್ಥೆಗೆ ಪರಮಾಧಿಕಾರದ ಕನಸು ನನಸಾಗಿಲ್ಲ. ಗಣಿ ಅಕ್ರಮದ ತನಿಖೆಯನ್ನು ಸಂಪೂರ್ಣವಾಗಿ ಸಿಬಿಐಗೆ ಒಪ್ಪಿಸಬೇಕು~ ಎಂದು ಅವರು ಒತ್ತಾಯಿಸಿದರು.`ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು `ಇಟಾಸ್ಕಾ, ಬಳ್ಳಾರಿ ಗಣಿ ಅಕ್ರಮದ ಬಗ್ಗೆ ಬಯಲಿಗೆಳೆದು ಅಂತಿಮ ಘಟ್ಟಕ್ಕೆ ತರುವಲ್ಲಿ ಕಾಂಗ್ರೆಸ್ ಸಮರ್ಥವಾಗಿ ಪ್ರಾಮಾಣಿಕ ಕಾರ್ಯ ನಿರ್ವಹಿಸಿದೆ~ ಎಂದು ಅವರು ಸಮರ್ಥಿಸಿಕೊಂಡರು. <br /> <br /> ಕೊಪ್ಪಳ ಉಪಚುನಾವಣೆಯ ಫಲಿತಾಂಶವು ಆಡಳಿತದ ಅಳತೆ ಗೋಲು ಅಥವಾ ಅಭಿವೃದ್ಧಿಯ ಸಂಕೇತವಲ್ಲ. ಬಿಜೆಪಿ ಆಂತರಿಕ ಕಲಹ, ಭ್ರಷ್ಟಾಚಾರ, ಜನವಿರೋಧಿ ನೀತಿಯಿಂದ ಮುಂದಿನ ಸಾಮಾನ್ಯ ಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚುತ್ತದೆ~ ಎಂದು ಅವರು ಭವಿಷ್ಯ ನುಡಿದರು.ಪುರಸಭಾ ಸದಸ್ಯೆ ಅನುಸೂಯಮ್ಮ, ಸದಸ್ಯ ಎಂ.ಸತೀಶ್ಕುಮಾರ್, ಮಾಜಿ ಸದಸ್ಯ ಸಂಪತ್ಕುಮಾರ್, ಮುನಿಚಿನ್ನಪ್ಪ, ರವೀಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ: </strong>`ರಾಷ್ಟ್ರದಲ್ಲಿ ಕ್ಷುಲ್ಲಕ ರಾಜಕಾರಣ ಮಾಡುವವರಿಗಿಂತಲೂ ರಾಜನೀತಿ ನಿಪುಣರ ಅಗತ್ಯವಿದೆ. ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ರಾಷ್ಟ್ರ ಎಂಬ ಮನೋಭಾವನೆಯು ರಾಜಕೀಯ ವ್ಯಕ್ತಿಗಳಲ್ಲಿ ಬೆಳೆಯಬೇಕಿದೆ~ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಹೇಳಿದರು. <br /> <br /> ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.`ಗಣಿಗಾರಿಕೆ ಮತ್ತು ಅದಿರು ಸಾಗಣೆ ಸುಂಕ ವಸೂಲಿಯಲ್ಲಿ ಸುಮಾರು 20 ಸಾವಿರ ಕೋಟಿ ರೂ.ನಷ್ಟವಾಗಿದೆ. ಆ ಕುರಿತು ಸುಪ್ರೀಂಕೋರ್ಟ್ ಕೂಡ 5 ಪಟ್ಟು ಅಧಿಕ ದಂಡ ವಸೂಲಿ ಮಾಡಲು ಆದೇಶಿಸಿದೆ.<br /> <br /> ಅದರಂತೆ ಸುಮಾರು ಒಂದು ಲಕ್ಷ 20 ಸಾವಿರ ಕೋಟಿ ರೂ.ಗಳನ್ನು ರೆಡ್ಡಿ ಸಹೋದರರಿಂದ ವಸೂಲಿ ಮಾಡಬೇಕು. ರಾಜ್ಯ ಅಭಿವೃದ್ಧಿ ಕಾರ್ಯಗಳಿಗೆ ಆಹಣವನ್ನು ಬಳಸಬೇಕು~ ಎಂದು ಅವರು ಆಗ್ರಹಿಸಿದರು.<br /> <br /> `ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲು ಬದ್ಧತೆ ಇದ್ದತೆ ಬಿಜೆಪಿ ಸರ್ಕಾರವು ಲೋಕಾಯುಕ್ತ ವರದಿಯನ್ನು ಸಂಪೂರ್ಣ ಅಂಗೀಕರಿಸಿ, ಅಕ್ರಮದಲ್ಲಿ ಪಾಲ್ಗೊಂಡ ಎಲ್ಲರ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಬೇಕು~ ಎಂದು ಅವರು ಒತ್ತಾಯಿಸಿದರು.<br /> <br /> `ಕಳೆದ ಮೂರೂ ಕಾಲು ವರ್ಷಗಳ ಆಡಳಿತಾವಧಿಯಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿನ ಯಾವೊಂದೂ ಭರವಸೆಯನ್ನು ಈಡೇರಿಸಲಾಗಿಲ್ಲ. 2 ರೂ.ಗೆ ಅಕ್ಕಿ ವಿತರಣೆ, ರೈತರಿಗೆ ನಿರಂತರ ವಿದ್ಯುತ್, ಪ್ರತಿವರ್ಷಕ್ಕೆ 3 ಲಕ್ಷ ನಿವೇಶನದಂತೆ 15 ಲಕ್ಷ ನಿವೇಶನಗಳ ಹಂಚಿಕೆಯಂತಹ ಯಾವ ಯೋಜನೆಯೂ ಕಾರ್ಯರೂಪಕ್ಕೆ ಬಂದಿಲ್ಲ~ ಎಂದು ಅವರು ಛೇಡಿಸಿದರು.<br /> <br /> `ಕೃಷಿಗಾಗಿ ಮಂಡಿಸಿದ ವಿಶೇಷ ಕೃಷಿ ಬಜೆಟ್ ಕೇವಲ ತೋರಿಕೆಯಾಗಿದ್ದು, ಆಯಾಯ ವಲಯಗಳಿಗೆ ನಿಗದಿಯಾದ ಅನುದಾನವನ್ನು ಬಿಡುಗಡೆ ಮಾಡಲಾಗಿಲ್ಲ. ನಿರುದ್ಯೋಗಿ ಭತ್ಯೆ ವಿತರಿಸಲಾಗಿಲ್ಲ. ರಾಜ್ಯದಲ್ಲಿ ವಿದ್ಯುತ್ ಉತ್ಟಾದನಾ ಪ್ರಮಾಣವನ್ನು ಹೆಚ್ಚಿಸಲು ಕ್ರಮ ಕೈಗೊಂಡಿಲ್ಲ~ ಎಂದು ಅವರು ಆರೋಪಿಸಿದರು.<br /> `ಬಂಡವಾಳ ಹೂಡಿಕೆದಾರರ ಸಮಾವೇಶದಿಂದ ಪ್ರಯೋಜನವಾಗಿಲ್ಲ. <br /> <br /> ಉದ್ಯೋಗ ಸೃಷ್ಟಿಗೆ ವಿಶೇಷ ಪ್ರಯತ್ನ ನಡೆಯಲಿಲ್ಲ. ರಾಜ್ಯದ ಗಡಿ ಒತ್ತುವರಿ, ಕೆಐಡಿಬಿ, ಬಿಡಿಎ, ಬಿಬಿಎಂಪಿ ಗಳಂತಹ ಎಲ್ಲಾ ಸಂಸ್ಥೆಗಳಿಂದ ಭ್ರಷ್ಟಾಚಾರ ನಡೆಯುತ್ತಿದೆ. ರಸ್ತೆ, ರೈಲ್ವೆ ಮತ್ತಿತರ ಮೂಲಸೌಕರ್ಯಗಳಿಗೆ ಕೇಂದ್ರದ ಸಿಆರ್ಎಫ್ ಅನುದಾನ ಹೊರತುಪಡಿಸಿ ಇನ್ನಾವುದೇ ಅನುದಾನ ಬಳಕೆಯಾಗಿಲ್ಲ~ ಎಂದು ಅವರು ದೂರಿದರು.<br /> <br /> `ಲೋಕಾಯುಕ್ತ ಸಂಸ್ಥೆಗೆ ಪರಮಾಧಿಕಾರದ ಕನಸು ನನಸಾಗಿಲ್ಲ. ಗಣಿ ಅಕ್ರಮದ ತನಿಖೆಯನ್ನು ಸಂಪೂರ್ಣವಾಗಿ ಸಿಬಿಐಗೆ ಒಪ್ಪಿಸಬೇಕು~ ಎಂದು ಅವರು ಒತ್ತಾಯಿಸಿದರು.`ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು `ಇಟಾಸ್ಕಾ, ಬಳ್ಳಾರಿ ಗಣಿ ಅಕ್ರಮದ ಬಗ್ಗೆ ಬಯಲಿಗೆಳೆದು ಅಂತಿಮ ಘಟ್ಟಕ್ಕೆ ತರುವಲ್ಲಿ ಕಾಂಗ್ರೆಸ್ ಸಮರ್ಥವಾಗಿ ಪ್ರಾಮಾಣಿಕ ಕಾರ್ಯ ನಿರ್ವಹಿಸಿದೆ~ ಎಂದು ಅವರು ಸಮರ್ಥಿಸಿಕೊಂಡರು. <br /> <br /> ಕೊಪ್ಪಳ ಉಪಚುನಾವಣೆಯ ಫಲಿತಾಂಶವು ಆಡಳಿತದ ಅಳತೆ ಗೋಲು ಅಥವಾ ಅಭಿವೃದ್ಧಿಯ ಸಂಕೇತವಲ್ಲ. ಬಿಜೆಪಿ ಆಂತರಿಕ ಕಲಹ, ಭ್ರಷ್ಟಾಚಾರ, ಜನವಿರೋಧಿ ನೀತಿಯಿಂದ ಮುಂದಿನ ಸಾಮಾನ್ಯ ಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚುತ್ತದೆ~ ಎಂದು ಅವರು ಭವಿಷ್ಯ ನುಡಿದರು.ಪುರಸಭಾ ಸದಸ್ಯೆ ಅನುಸೂಯಮ್ಮ, ಸದಸ್ಯ ಎಂ.ಸತೀಶ್ಕುಮಾರ್, ಮಾಜಿ ಸದಸ್ಯ ಸಂಪತ್ಕುಮಾರ್, ಮುನಿಚಿನ್ನಪ್ಪ, ರವೀಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>